ಬುಧವಾರ, ನವೆಂಬರ್ 5, 2025

ಶ್ರೀಉತ್ತರಾದಿಮಠದಿಂದ ಉಕ್ಕಿನ ನಗರದಲ್ಲಿ ನ.೯ರವರೆಗೆ ಶ್ರೀಮನ್ನ್ಯಾಯಸುಧಾಮಂಗಳ ಮಹೋತ್ಸವ

ಶ್ರೀ ೧೦೦೮ ಶ್ರೀ ಸತ್ಯಪ್ರಮೋದತೀರ್ಥ ಶ್ರೀಪಾದಂಗಳವರ ೨೮ನೇ ಪಾದುಕಾಮಹಾಸಮಾರಾಧನಾ ಮಹೋತ್ಸವ 
    ಭದ್ರಾವತಿ: ಅನೇಕ ಮಾಧ್ವಪೀಠಾಧಿಪತಿಗಳ ದಿವ್ಯ ಸಾನಿಧ್ಯದಲ್ಲಿ ಶ್ರೀ ೧೦೦೮ ಶ್ರೀ ಸತ್ಯಾತ್ಮತೀರ್ಥಶ್ರೀಪಾದಂಗಳವರಿಂದ ೧೩ನೇ ಶ್ರೀಮನ್ನ್ಯಾಯಸುಧಾಮಂಗಳಮಹೋತ್ಸವ ಹಾಗೂ ಸುಧಾಮಂಡನಾಚಾರ್ಯರಾದ ಶ್ರೀ ೧೦೦೮ ಶ್ರೀ ಸತ್ಯಪ್ರಮೋದತೀರ್ಥ ಶ್ರೀಪಾದಂಗಳವರ ೨೮ನೇ ಪಾದುಕಾಮಹಾಸಮಾರಾಧನಾ ಮಹೋತ್ಸವ ಜನ್ನಾಪುರ ಶ್ರೀಮಜ್ಜಯತೀರ್ಥ ಗುರುಸಾರ್ವಭೌಮರ ಹಾಗು ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠ ಮತ್ತು ಜಯಶ್ರೀ ವೃತ್ತದ ಮಹಿಳಾ ಸಮಾಜದ ಆವರಣದಲ್ಲಿ ನ.೯ರವರೆಗೆ ಒಟ್ಟು ೭ ದಿನಗಳ ಕಾಲ ಜಗದ್ಗುರು ಶ್ರೀಮನ್ಮದ್ವಾಚಾರ್ಯಮೂಲಮಹಾಸಂಸ್ಥಾನ ಶ್ರೀಉತ್ತರಾದಿಮಠದಿಂದ ಆಯೋಜಿಸಲಾಗಿದೆ. 
    ಪ್ರತಿದಿನ ಬೆಳಿಗ್ಗೆ ೬ ರಿಂದ ೮ರವರೆಗೆ ಶ್ರೀ ಮೂಲರಾಮದೇವರ ಸಂಸ್ಥಾನ ಪೂಜೆ ಹಾಗು ಉಪಸ್ಥಿತ ಪೀಠಾಧಿಪತಿಗಳಿಂದ ಸಂಸ್ಥಾನ ಪೂಜೆ, ೯ ರಿಂದ ಮಧ್ಯಾಹ್ನ ೧೨ರವರೆಗೆ ಪರೀಕ್ಷಾ ಹಾಗು ಅನುವಾದ, ೧೨.೩೦ ರಿಂದ ೨ರವರೆಗೆ ತೀರ್ಥಪ್ರಸಾದ ವಿನಿಯೋಗ, ೩ ರಿಂದ ರಾತ್ರಿ ೮ರವರೆಗೆ ಪರೀಕ್ಷಾ ಹಾಗು ಅನುವಾದ, ೮.೩೦ ರಿಂದ ೯ರವರೆಗೆ ಉಪಸ್ಥಿತ ಪೀಠಾಧಿಪತಿಗಳ ಅನುಗ್ರಹ ಸಂದೇಶಗಳು ಜರುಗಲಿವೆ. 
    ಅಲ್ಲದೆ ನ.೬ರಂದು ಪದ್ಯಮಾಲಾ ಮತ್ತು ೭ರಂದು ಸಂದ್ಯಾವಂದನೆ ಕಾರ್ಯಾಗಾರಗಳು ಹಾಗು ೬ರಂದು ಆಚಾರ್ಯರ ಗ್ರಂಥಗಳಿಗೆ ಶ್ರೀಟೀಕಾಚಾರ್ಯರ ಅಸಾಧಾರಣ ಕೊಡುಗೆ, ಮಾಧ್ವ ಸಮಾಜಕ್ಕೆ ಶ್ರೀಸತ್ಯಪ್ರಮೋದತೀರ್ಥರ ಕೊಡುಗೆ, ೭ ರಂದು ಶ್ರೀಸತ್ಯಪ್ರಮೋದತೀರ್ಥರು-ಜೀವನ ಮತ್ತು ಸಾಧನೆ, ಶ್ರೀಸತ್ಯಪ್ರಮೋದತೀರ್ಥರ ಶಿಷ್ಯವಾತ್ಸಲ್ಯ ಹಾಗು ೮ರಂದು ಪ್ರಮೋದವೈಭವ ವಿಶೇಷ ಉಪನ್ಯಾಸಗಳು ನಡೆಯಲಿವೆ. 
    ನ.೬ರಂದು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥರು, ೭ರಂದು ಶಿರೂರು ಮಠದ ಶ್ರೀ ವೇದವರ್ಧನತೀರ್ಥರು ಮತ್ತು ಭಂಡಾರಕೇರಿ ಮಠದ ಶ್ರೀವಿದ್ಯೇಶತೀರ್ಥರು ಹಾಗು ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥರು ಮತ್ತು ೯ರಂದು ಭೀಮನಕಟ್ಟೆ ಮಠದ ಶ್ರೀರಘುವರೇಂದ್ರತೀರ್ಥರು ದಿವ್ಯ ಸಾನಿಧ್ಯವಹಿಸಿ ಅನುಗ್ರಹ ನೀಡಲಿದ್ದಾರೆ. 
೭ರಂದು ಶ್ರೀ ಸತ್ಯಪ್ರಮೋದತೀರ್ಥರ ಪಾದುಕಾ ಮಹಾಸಮರಾಧನೆ ನಡೆಯಲಿದೆ. ಅಂದು ಸಂಜೆ ೪.೩೦ಕ್ಕೆ ಸುಧಾ-ಸರ್ವಮೂಲಗ್ರಂಥಗಳ ಭವ್ಯ ಶೋಭಾಯಾತ್ರೆ ಜರುಗಲಿದೆ. 


ಸುಧಾ-ಸರ್ವಮೂಲಗ್ರಂಥಗಳ ಭವ್ಯ ಶೋಭಾಯಾತ್ರೆ
    ೯ರಂದು ಶ್ರೀಮನ್ನ್ಯಾಯಸುಧಾಮಂಗಳ ಮಹೋತ್ಸವ ಜರುಗಲಿದೆ. ಅಂದು ಬೆಳಿಗ್ಗೆ ೬ರಿಂದ ೮ರವರೆಗೆ ಶ್ರೀ ಮೂಲರಾಮದೇವರ ಸಂಸ್ಥಾನ ಪೂಜೆ, ೯ರಿಂದ ಶ್ರೀಗಳಿಂದ ಶ್ರೀಮನ್ನ್ಯಾಯಸುಧಾಮಂಗಳಾನುವಾದ ನಡೆಯಲಿದೆ. 
    ಮಹಾ ಸಮಾರಾಧನಾ ಸಂಪೂರ್ಣ ಸೇವೆ, ಉದಯಾಸ್ತಮಾನ ಸೇವೆ, ವಿಶೇಷ ಅನ್ನದಾನ ಸೇವೆ, ಸಾಮೂಹಿಕ ಬಿಕ್ಷಾ ಸೇವೆ, ಋಗ್ವದ ಸಂಹಿತ ಯಾಗ ಸೇವೆ, ಸಾಮೂಹಿಕ ಅನ್ನದಾನ ಸೇವೆ, ಸಾಮೂಹಿಕ ತೊಟ್ಟಿಲ ಪೂಜೆ  ಮತ್ತು ಶ್ರೀ ಗುರುಪಾದುಕಾ ಪೂಜೆ ಸೇರಿದಂತೆ ವಿವಿಧ ಸೇವೆಗಳು ಜರುಗಲಿವೆ. 
    ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಶ್ರೀಮನ್ನ್ಯಾಯಸುಧಾ ಮಂಗಳ ಮಹೋತ್ಸವ ಹಾಗೂ ಶ್ರೀ ೧೦೦೮ ಶ್ರೀ ಸತ್ಯಪ್ರಮೋದತೀರ್ಥ ಶ್ರೀಪಾದಂಗಳವರ ೨೮ನೇ ಪಾದುಕಾ ಮಹಾಸಮಾರಾಧನಾ ಸಮಿತಿ ಕೋರಿದೆ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ