ಮಂಗಳವಾರ, ನವೆಂಬರ್ 11, 2025

ವಿಜೃಂಭಣೆಯಿಂದ ಜರುಗಿದ ಶ್ರೀ ಚಿದಂಬರ ಜಯಂತ್ಯುತ್ಸವ

ಭದ್ರಾವತಿ ಹಳೇನಗರದ ಶ್ರೀ ರಾಮೇಶ್ವರ ಮತ್ತು ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ ಶ್ರೀ ಚಿದಂಬರ ಸೇವಾ ಸಮಿತಿಯಿಂದ ೨೯ನೇ ವರ್ಷದ ಶ್ರೀ ಚಿದಂಬರ ಜಯಂತ್ಯುತ್ಸವ ವಿಜೃಂಭಣೆಯಿಂದ ಜರುಗಿತು. 
    ಭದ್ರಾವತಿ: ಹಳೇನಗರದ ಶ್ರೀ ರಾಮೇಶ್ವರ ಮತ್ತು ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ ಶ್ರೀ ಚಿದಂಬರ ಸೇವಾ ಸಮಿತಿಯಿಂದ ೨೯ನೇ ವರ್ಷದ ಶ್ರೀ ಚಿದಂಬರ ಜಯಂತ್ಯುತ್ಸವ ವಿಜೃಂಭಣೆಯಿಂದ ಜರುಗಿತು. 
    ಬೆಳಿಗ್ಗೆ ಕಾಕಡಾರತಿ, ಪಂಚಾಮೃತ ಅಭಿಷೇಕ, ಏಕಾದಶವಾರ, ರುದ್ರಾಭಿಷೇಕ, ಪಠನಪೂರ್ವಕ ಸಹಸ್ರನಾಮ ಹಾಗು ಶ್ರೀ ಶಿಚಚಿದಂಬರ ಮೂಲಮಂತ್ರದ ಹೋಮ ಮತ್ತು ಶ್ರೀ ಸತ್ಯಚಿದಂಬರ ವ್ರತ ಜರುಗಿದವು. ನಂತರ ರಾಜಬೀದಿ ಉತ್ಸವ, ಶ್ರೀ ಚಿದಂಬರರ ಬಗ್ಗೆ ಪ್ರವಚನ ಮತ್ತು ಚಿದಂಬರ ನಾಮಜಪ ನೆರವೇರಿದವು. 
    ಮಧ್ಯಾಹ್ನ ೧ ಗಂಟೆಗೆ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಿತು. ಸಂಜೆ ಶ್ರೀ ರಾಮೇಶ್ವರ ದೇವಸ್ಥಾನ ಶ್ರೀ ಲಲಿತಾ ಮಹಿಳಾ ಮಂಡಳಿಯಿಂದ ಭಜನೆ, ನಂತರ ದೀಪೋತ್ಸವ, ಮಹಾಮಂಗಳಾರತಿ ಹಾಗು ತೀರ್ಥಪ್ರಸಾದ ವಿನಿಯೋಗ ಜರುಗಿದವು. 
    ಸಮಿತಿ ಅಧ್ಯಕ್ಷ ಎಸ್.ಜಿ ದೇಶಪಾಂಡೆ, ಉಪಾಧ್ಯಕ್ಷ ಪಿ.ಕೆ ಮಂಜುನಾಥರಾವ್, ಕಾರ್ಯದರ್ಶಿ ಬಿ.ಆರ್ ಇಂದ್ರಸೇನರಾವ್ ಮತ್ತು ಖಜಾಂಚಿ ಬಾಲಚಂದ್ರಗುತ್ತಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಸಿದ್ದಾರೂಢನಗರ, ಕನಕನಗರ, ಹಳೇನಗರ, ಭೂತನಗುಡಿ, ಹೊಸಮನೆ ಸೇರಿದಂತೆ ನಗರದ ವಿವಿಧೆಡೆಗಳಿಂದ ಭಕ್ತರು ಪಾಲ್ಗೊಂಡಿದ್ದರು. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ