ಮಂಗಳವಾರ, ನವೆಂಬರ್ 11, 2025

ಶತಾಯುಷಿ ಕರಿಯಮ್ಮ ನಿಧನ

ಶತಾಯುಷಿ ಕರಿಯಮ್ಮ
    ಭದ್ರಾವತಿ: ಹಳೇನಗರ ಉಪ್ಪಾರ ಬೀದಿ ನಿವಾಸಿ ದಿವಂಗತ ದುರ್ಗಪ್ಪರವರ ಪತ್ನಿ ಶತಾಯುಷಿ ಕರಿಯಮ್ಮ(೧೦೭) ಭಾನುವಾರ ಸಂಜೆ ನಿಧನ ಹೊಂದಿದರು. 
    ಇವರಿಗೆ ಇಬ್ಬರು ಪುತ್ರರು, ನಾಲ್ವರು ಪುತ್ರಿಯರು, ೧೦ ಮೊಮ್ಮಕ್ಕಳು, ೧೧ ಮರಿಮೊಮ್ಮಕ್ಕಳು ಇದ್ದಾರೆ. ವಿವಿಧ ಸಂಘಸಂಸ್ಥೆಗಳ ಮುಖಂಡರು, ಸಮಾಜದ ಪ್ರಮುಖರು ಮೃತರ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದರು. ನಗರದ ಹಿಂದೂ ರುದ್ರಭೂಮಿಯಲ್ಲಿ ಇವರ ಅಂತ್ಯಕ್ರಿಯೆ ನೆರವೇರಿತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ