ಶನಿವಾರ, ನವೆಂಬರ್ 8, 2025

ಎನ್.ವಿಜಯ್-ಡಿ. ದೀಕ್ಷಾ ವಿವಾಹ ಮಹೋತ್ಸವ

ಭದ್ರಾವತಿ ಹೊಸಮನೆ ನಿವಾಸಿ ಎನ್. ವಿಜಯ್-ಮಂಡ್ಯ ನಿವಾಸಿ ಡಿ.ದೀಕ್ಷಾ ಶುಭಾ ವಿವಾಹ ನೆರವೇರಿತು. 
    ಭದ್ರಾವತಿ : ನಗರದ ಹೊಸಮನೆ ನಿವಾಸಿ, ಮೆಸ್ಕಾಂ ಉದ್ಯೋಗಿ ಕೀರ್ತಿಲಕ್ಷ್ಮೀಯವರ ಸಹೋದರ, ದಿವಂಗತ ನೀಲಾಮಣಿ-ದಿವಂಗತ ಎಸ್. ನಾಗರಾಜ್‌ರವರ ಪುತ್ರ ಎನ್. ವಿಜಯ್‌ರವರ ವಿವಾಹ ಮಂಡ್ಯ ನಿವಾಸಿ ಅನಸೂಯ-ದಿವಂಗತ ದಾಸಯ್ಯರವರ ಪುತ್ರಿ ಡಿ. ದೀಕ್ಷಾರವರ ಜೊತೆ ಮಂಡ್ಯ ಕ್ಯಾತಂಗೆರೆ ಬನ್ನೂರು ಮುಖ್ಯರಸ್ತೆ ಶ್ರೀ ಗೌರಿಶಂಕರ ಕಲ್ಯಾಣ ಮಂಟದಲ್ಲಿ ನೆರವೇರಿತು. 
    ಕೀರ್ತಿಲಕ್ಷ್ಮೀ ಬಿಜೆಪಿ ಮುಖಂಡ ಛಲವಾದಿ ಕೃಷ್ಣರವರ ಪತ್ನಿಯಾಗಿದ್ದಾರೆ. ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಸುರೇಶ್, ಧರ್ಮರಾಜ್, ಮಹೇಶ್(ಜೆಪಿಎಸ್) ಹಾಗು ಸ್ಥಳೀಯ ಬಿಜೆಪಿ ಮುಖಂಡರು, ಮೆಸ್ಕಾಂ ನೌಕರರು, ಸಿಬ್ಬಂದಿಗಳು ವಿವಾಹ ಸಮಾರಂಭದಲ್ಲಿ ಪಾಲ್ಗೊಂಡು ನೂತನ ದಂಪತಿಗೆ ಶುಭ ಹಾರೈಸಿದ್ದಾರೆ. 

1 ಕಾಮೆಂಟ್‌: