ಗಂಡನ ಮನೆಯವರ ಕಿರುಕುಳ ತಾಳಲಾರದೆ ಗೃಹಿಣಿ ಆತ್ಮಹತ್ಯೆ ಪ್ರಕರಣ
೫ ಮಂದಿಗೆ ೩ ವರ್ಷ ಜೈಲು ಶಿಕ್ಷೆ, ೧.೫೦ ಲಕ್ಷ ರು. ದಂಡ
ಮಾನಸಿಕ ಹಾಗು ದೈಹಿಕ ಹಿಂಸೆಯಿಂದ ಗೃಹಿಣಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷೆಗೆ ಒಳಗಾಗಿರುವ ೫ ಮಂದಿ.
ಭದ್ರಾವತಿ : ಮಾನಸಿಕ ಹಾಗು ದೈಹಿಕ ಹಿಂಸೆಯಿಂದ ಗೃಹಿಣಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ೫ ಮಂದಿಗೆ ೩ ವರ್ಷ ಕಠಿಣ ಜೈಲು ಶಿಕ್ಷೆ ಹಾಗು ೧.೫೦ ಲಕ್ಷ ರು. ದಂಡವಿಧಿಸಿ ೪ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ಯ ನ್ಯಾಯಾಲಯ ತೀರ್ಪು ನೀಡಿದೆ.
ಪ್ರೇಮಾ ಎಂಬುವರು ತನ್ನ ಮಕ್ಕಳೊಂದಿಗೆ ತಾಲೂಕಿನ ಸಂಕ್ಲಿಪುರ ಗ್ರಾಮದ ಗಂಡನ ಮನೆಯಲ್ಲಿ ವಾಸವಿದ್ದರು. ಈಕೆಯಿಂದ ಮಕ್ಕಳನ್ನು ದೂರವಿಟ್ಟು ಗಂಡ ಹಾಗೂ ಗಂಡನ ಮನೆಯವರು ತವರು ಮನೆಗೆ ಹೋಗುವಂತೆ ಮಾನಸಿಕ ಹಾಗು ದೈಹಿಕ ಹಿಂಸೆ ನೀಡುತ್ತಿದ್ದರು. ಈ ಹಿನ್ನಲೆಯಲ್ಲಿ ತವರು ಮನೆಗೆ ಹೋಗಿದ್ದ ಪ್ರೇಮ ಮಾನಸಿಕವಾಗಿ ನೊಂದು ೨೬-೦೩-೨೦೧೭ ರಂದು ವಿಷ ಸೇವಿಸಿದ್ದು, ಈಕೆಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ೦೭/೦೪/೨೦೧೭ರಂದು ಮೃತಪಟ್ಟಿದ್ದರು. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಆಗಿನ ತನಿಖಾಧಿಕಾರಿಯಾಗಿದ್ದ ಸಹಾಯಕ ಠಾಣಾ ನಿರೀಕ್ಷಕ ನಿಜಾಮ್ರವರು ಪ್ರಕರಣದ ತನಿಖೆ ಪೂರೈಸಿ, ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
೪ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿಚೆಟ್ಟಿಯಾರ್ರವರು ಪ್ರಕರಣದ ವಿಚಾರಣೆ ನಡೆಸಿದ್ದು, ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಆರ್. ಮೋಹನ್(೩೩), ಸರೋಜಮ್ಮ(೬೦), ರಂಗಪ್ಪ(೬೬), ಆರ್. ಶೇಖರ್(೪೪) ಮತ್ತು ಆರ್. ಮೂರ್ತಿ ಒಟ್ಟು ೫ ಮಂದಿಗೆ ಫೆ.೧೩ರಂದು ೩ ವರ್ಷ ಕಠಿಣ ಜೈಲು ಶಿಕ್ಷೆ ಮತ್ತು ೧.೫೦ ಲಕ್ಷ ರು. zಂಡ ವಿಧಿಸಿದ್ದು, ಅಲ್ಲದೆ ಮೃತ ಪ್ರೇಮಾರವರ ತಾಯಿ ಚಂದ್ರಮ್ಮರವರಿಗೆ ಪರಿಹಾರವಾಗಿ ೧ ರು. ಗಳನ್ನು ನೀಡಲು ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಪಿ. ರತ್ನಮ್ಮ ವಾದ ಮಂಡಿಸಿದ್ದರು.