ಅಡುಗೆ ಅನಿಲ ಸಿಲಿಂಡರ್ ಸಮಸ್ಯೆ : ೨-೩ ದಿನಗಳಲ್ಲಿ ಹೋಟೆಲ್ಗಳು ಬಂದ್
ಪ್ರಸ್ತುತ ಗೋಡಂಬಿ ಬೀಜದ ಸಿಪ್ಪೆ ಅವಲಂಬಿಸಿ ಕಾರ್ಯಾಚರಣೆ ಭದ್ರಾವತಿ ಕಾಗದನಗರದ ಜನವಸತಿ ಪ್ರದೇಶದಲ್ಲಿ ಬುಧವಾರ ರಾತ್ರಿ ಕಂಡು ಬಂದ ಸಿಲಿಂಡರ್ ಸರಬರಾಜು ಮಾಡುವ ಲಾರಿ. ಭದ್ರಾವತಿ: ನಗರದಲ್ಲಿ ಅಡುಗೆ ಅನಿಲ ಸಿಲಿಂಡರ್ ಅವಲಂಬಿಸಿರುವ ಹೋಟೆಲ್ಗಳು ಮುಂದಿನ ೨-೩ ದಿನಗಳಲ್ಲಿ ಸಂಪೂರ್ಣವಾಗಿ ಬಂದ್ ಮಾಡುವ ಸ್ಥಿತಿ ಎದುರಾಗಿದ್ದು, ಈಗಾಗಲೇ ವಿತರಕರು ವಾಣಿಜ್ಯ ಬಳಕೆ ಸಿಲಿಂಡರ್ಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದ್ದಾರೆ. ಗೌರಿ ಗ್ಯಾಸ್ ವಿತರಕರಾದ ಸೆಲ್ವರಾಜ್ ಮಾತನಾಡಿ, ಈಗಾಗಲೇ ವಾಣಿಜ್ಯ ಬಳಕೆ ಸಿಲಿಂಡರ್ಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಗೃಹ ಬಳಕೆ ಸಿಲಿಂಡರ್ ತಿಂಗಳಿಗೆ ೧ ಸಿಲಿಂಡರ್ ಮಾತ್ರ ಸರಬರಾಜು ಮಾಡಲಾಗುವುದು. ಇರಾನ್ ಯುದ್ಧ ಮುಗಿದ ತಕ್ಷಣ ಸಮಸ್ಯೆ ಬಗೆಹರಿಯಲಿದೆ. ಈ ಹಿನ್ನಲೆಯಲ್ಲಿ ಗ್ರಾಹಕರು ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ. ಉಳಿದಂತೆ ರಂಗನಾಥ್ ಗ್ಯಾಸ್ ವಿತರಕರಾದ ಮನು ಮಾತನಾಡಿ, ಪ್ರಸ್ತುತ ಗೃಹಬಳಕೆ ಸಿಲಿಂಡರ್ಗಳಿಗೂ ಸಮಸ್ಯೆ ಎದುರಾಗುತ್ತಿದೆ. ಗ್ರಾಹಕರು ಬುಕಿಂಗ್ ಮಾಡಲು ತೊಂದರೆಯಾಗುತ್ತಿದ್ದು, ಏಕ ಬಳಕೆ ಸಿಲಿಂಡರ್ ಗ್ರಾಹಕರಿಗೆ ೨೧ ದಿನಗಳ ನಂತರ ಬುಕ್ ಮಾಡುವ ಹಾಗು ಎರಡು ಬಳಕೆ ಸಿಲಿಂಡರ್ ಗ್ರಾಹಕರಿಗೆ ೩೦ ದಿನಗಳ ನಂತರ ಬುಕ್ ಮಾಡುವ ಅವಕಾಶ ನೀಡಲಾಗಿದೆ. ಪರಿಸ್ಥಿತಿ ಇದೆ ರೀತಿ ಮ...