ಕೆಪಿಸಿ ನೌಕರರ ಒಕ್ಕೂಟದ ಕೇಂದ್ರ ಸಮಿತಿ ಅಧ್ಯಕ್ಷ ಕೆ. ವೀರೇಂದ್ರ ಭದ್ರಾ ಯೋಜನೆ ಪ್ರದೇಶಕ್ಕೆ ಭೇಟಿ
ಬಿಆರ್ಪಿ ರಂಗಮಂದಿರದಲ್ಲಿ ಅಧಿಕಾರಿಗಳು, ನೌಕರರು, ಗುತ್ತಿಗೆದಾರರಿಂದ ಸನ್ಮಾನ ಕೆಪಿಸಿ ನೌಕರರ ಒಕ್ಕೂಟದ ಕೇಂದ್ರ ಸಮಿತಿ ಅಧ್ಯಕ್ಷ ಕೆ. ವೀರೇಂದ್ರ ಭದ್ರಾವತಿ ತಾಲೂಕಿನ ಭದ್ರಾ ಯೋಜನೆ ಪ್ರದೇಶಕ್ಕೆ ಬುಧವಾರ ಭೇಟಿ ಪರಿಶೀಲಿಸಿದರು. ಬಿಆರ್ಪಿ ರಂಗಮಂದಿರದಲ್ಲಿ ಇವರನ್ನು ಅಧಿಕಾರಿಗಳು, ನೌಕರರು, ಗುತ್ತಿಗೆದಾರರಿಂದ ಸನ್ಮಾನಿಸಿ ಗೌರವಿಸಿದರು. ಭದ್ರಾವತಿ: ಕರ್ನಾಟಕ ವಿದ್ಯುತ್ ನಿಗಮ ನಿರ್ದೇಶಕರ ಮಂಡಳಿಗೆ ಸರ್ಕಾರದಿಂದ ನೂತನ ನಿರ್ದೇಶಕರಾಗಿ ನಾಮನಿರ್ದೇಶನಗೊಂಡಿರುವ ಕೆಪಿಸಿ ನೌಕರರ ಒಕ್ಕೂಟದ ಕೇಂದ್ರ ಸಮಿತಿ ಅಧ್ಯಕ್ಷರಾದ ಕೆ. ವೀರೇಂದ್ರ ಅವರು ಬುಧವಾರ ಭದ್ರಾ ಯೋಜನೆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಿಆರ್ಪಿ ರಂಗಮಂದಿರದಲ್ಲಿ ನೌಕರರ ಸಮಸ್ಯೆಗಳನ್ನು ವೀರೇಂದ್ರರವರು ಆಲಿಸಿದರು. ಭದ್ರಾ ಕೆಪಿಸಿ ನೌಕರರ ಸಂಘ, ಕರ್ನಾಟಕ ವಿದ್ಯುತ್ ನಿಗಮ ಪದವೀಧರ ಇಂಜಿನಿಯರ್ಸ್ ಅಸೋಸಿಯೇಷನ್, ಡಿಪ್ಲೋಮಾ ಇಂಜಿನಿಯರ್ಸ್ ಅಸೋಸಿಯೇಷನ್, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನೌಕರರ ಸಂಘ ಹಾಗು ಭದ್ರಾ ವಿದ್ಯುತ್ ಹೊರ ಗುತ್ತಿಗೆ ನೌಕರರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ವೀರೇಂದ್ರರವರನ್ನು ಸನ್ಮಾನಿಸಿ ಗೌರವಿಸುವ ಮೂಲಕ ನೌಕರರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಹೆಚ್ಚಿನ ಆದ್ಯತೆ ನೀಡುವಂತೆ ಮನವಿ ಮಾಡಿದರು. ...