ಮಕ್ಕಳು ಚೆಸ್ ಆಟದಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಲಿ : ಚನ್ನಪ್ಪ
ಭದ್ರಾವತಿ ಲಯನ್ಸ್ ಕ್ಲಬ್ ಶುಗರ್ ಟೌನ್ ಆವರಣದಲ್ಲಿ ಎನ್ ಚೆಸ್ ಸರ್ಕಲ್ ಸಂಯುಕ್ತಾಶ್ರಯದಲ್ಲಿ ದಿವಂಗತ ಸುಲೋಚನಮ್ಮ ಮತ್ತು ಫಿಲೋಮೀನರವರ ಸ್ಮರಣಾರ್ಥ ಆಯೋಜಿಸಲಾಗಿದ್ದ ಓಪನ್ ರ್ಯಾಪಿಡ್ ಚೆಸ್ ಪಂದ್ಯಾವಳಿಯನ್ನು ಪೊಲೀಸ್ ಉಪಾಧೀಕ್ಷಕ ಪ್ರಕಾಶ್ ರಾಥೋಡ್, ಚನ್ನಪ್ಪ, ಎಚ್.ಡಿ ಕೃಷ್ಣ, ಡಾ. ಸಿ.ಆರ್ ಗುರುರಾಜ ಹಾಗು ಆರ್. ಉಮೇಶ್ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು. ಭದ್ರಾವತಿ: ಚೆಸ್(ಚದುರಂಗ) ನಮ್ಮ ದೇಶದ ಕ್ರೀಡೆ. ಇದು ಒಂದು ಬುದ್ದಿವಂತರ ಆಟ. ಮಕ್ಕಳು ಚೆಸ್ ಆಟದಲ್ಲಿ ಹೆಚ್ಚು ಆಸಕ್ತಿ ಬೆಳೆಸಿಕೊಳ್ಳಬೇಕೆಂದು ಲಯನ್ಸ್ ಕ್ಲಬ್ ಶುಗರ್ ಟೌನ್ ಅಧ್ಯಕ್ಷ ಚನ್ನಪ್ಪ ಕರೆ ನೀಡಿದರು. ಅವರು ಕ್ಲಬ್ ಆವರಣದಲ್ಲಿ ಎನ್ ಚೆಸ್ ಸರ್ಕಲ್ ಸಂಯುಕ್ತಾಶ್ರಯದಲ್ಲಿ ದಿವಂಗತ ಸುಲೋಚನಮ್ಮ ಮತ್ತು ಫಿಲೋಮೀನರವರ ಸ್ಮರಣಾರ್ಥ ಆಯೋಜಿಸಲಾಗಿದ್ದ ಓಪನ್ ರ್ಯಾಪಿಡ್ ಚೆಸ್ ಪಂದ್ಯಾವಳಿ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು. ಪೊಲೀಸ್ ಉಪಾಧೀಕ್ಷಕ ಪ್ರಕಾಶ್ ರಾಥೋಡ್, ಕ್ಲಬ್ ಮಾಜಿ ಅಧ್ಯಕ್ಷ ಡಾ ಸಿ.ಆರ್ ಗುರುರಾಜು, ಕಾರ್ಯದರ್ಶಿ ಎಚ್.ಡಿ ಕೃಷ್ಣ, ಸೋಲಾರ್ ನಾಗರಾಜ್, ಆರ್. ಉಮೇಶ್, ಮದಿಯಳಗನ್ ಮತ್ತು ಯುವರಾಜ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಚ್ಛ ನ್ಯಾಯಾಲಯದ ನ್ಯಾಯವಾದಿ ಆರ್. ಲೋಕನಾಥ್ ಕಾರ್ಯಕ್ರಮ ನಿರೂಪಿಸಿ, ಪ...