ಪ್ರಗತಿಪರ ಚಿಂತಕ, ಹೋರಾಟಗಾರ ಡಿ.ಸಿ ಮಾಯಣ್ಣ ಹೆಸರು ಚಿರಸ್ಥಾಯಿಯಾಗಿ ಉಳಿಯಲಿ : ಬಿ.ಕೆ ಮೋಹನ್
"ಐ ಲವ್ ಯೂ ನಮ್ಮ ಭದ್ರಾವತಿ" ನಾಮಫಲಕ ಶಾಸಕ ಸಂಗಮೇಶ್ವರ್ ಅನಾವರಣ ಭದ್ರಾವತಿಯಲ್ಲಿ ಅಪ್ಪರ್ಹುತ್ತಾ ವೃತ್ತಕ್ಕೆ ``ಕಾಮ್ರೇಡ್ ಮಾಯಣ್ಣ ವೃತ್ತ'' ಹೆಸರು ನಾಮಕರಣ ಹಾಗೂ "ಐ ಲವ್ ಯೂ ನಮ್ಮ ಭದ್ರಾವತಿ" ಶಾಸಕ ಬಿ.ಕೆ.ಸಂಗಮೇಶ್ವರ್ ಉದ್ಘಾಟಿದರು. ಭದ್ರಾವತಿ; ನಗರದಲ್ಲಿ ಕಾರ್ಮಿಕ ಮುಖಂಡ, ಪ್ರಗತಿಪರ ಚಿಂತಕ ಡಿ.ಸಿ ಮಾಯಣ್ಣರವರು ಸ್ವಾಭಿಮಾನದ ಬದುಕು ನಡೆಸುವ ಮೂಲಕ ಕಾರ್ಮಿಕರ ಅನೇಕ ಸಮಸ್ಯೆಗಳಿಗೆ ಹೋರಾಟದ ಮೂಲಕ ನ್ಯಾಯ ದೊರಕಿಸಿಕೊಟ್ಟಿದ್ದರು ಎಂದು ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಹೇಳಿದರು. ನಗರದ ವಾರ್ಡ್ ನಂ.೨ರ ವ್ಯಾಪ್ತಿಯ ಅಪ್ಪರ್ಹುತ್ತಾ ವೃತ್ತಕ್ಕೆ "ಕಾಮ್ರೇಡ್ ಮಾಯಣ್ಣ ವೃತ್ತ" ಹೆಸರು ನಾಮಕರಣ ಹಾಗೂ ``ಐ ಲವ್ ಯೂ ನಮ್ಮ ಭದ್ರಾವತಿ" ನಾಮಫಲಕ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಡಿ.ಸಿ ಮಾಯಣ್ಣನವರು ಕಾರ್ಮಿಕ ವರ್ಗಕ್ಕೆ ಮಾತ್ರವಲ್ಲ ಕ್ಷೇತ್ರದ ಶಾಸಕರು ಸೇರಿದಂತೆ ಪ್ರತಿಯೊಬ್ಬರಿಗೂ ಮಾರ್ಗದರ್ಶಕರಾಗಿದ್ದರು. ನಗರದಲ್ಲಿ ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯಲೆಂದು ಅಪ್ಪರ್ಹುತ್ತಾ ವೃತ್ತಕ್ಕೆ ``ಕಾಮ್ರೇಡ್ ಮಾಯಣ್ಣ ವೃತ್ತ'' ಹೆಸರು ನಾಮಕರಣ ಮಾಡಲಾಗಿದೆ ಎಂದರು ಸಹೋದರ ಬಿ.ಕೆ ಸಂಗಮೇಶ್ವರ್ ೩ ಬಾರಿ ಶಾಸಕರಾಗಿ ಆಯ್ಕೆಯಾದರೂ ಸರ್ಕಾರ ನಮ್ಮದಾಗಿರದ ಕಾರಣ ಕ್ಷೇತ್ರದ ಅಭಿವೃದ್ದಿ ಸಾಧ್ಯವಾ...