ಸೆ.೧೭ರಂದು ಜ್ಞಾನಮಂದಿರ ಉದ್ಘಾಟನೆ
ಭದ್ರಾವತಿ: ನಗರದ ಸಿ.ಎನ್ ರಸ್ತೆ, ಪಿಎಲ್ಡಿ ಬ್ಯಾಂಕ್ ಸಮೀಪದ ಜ್ಞಾನವಳ್ಳಲ್ ಪರಂಜ್ಯೋತಿ ಮಹಾನ್ ಜ್ಞಾನಸಭಾ, ಪ್ರಪಂಚ ಶಾಂತಿ ನಿಲಯ, ಗುರುಪರಂಜ್ಯೋತಿ ಮಹಾನ್ ಎಜುಕೇಷನ್ ಟ್ರಸ್ಟ್ ವತಿಯಿಂದ ಜ್ಞಾನಮಂದಿರ ಉದ್ಘಾಟನೆ ಸೆ.೧೭ರ ಗುರುವಾರ ಬೆಳಿಗ್ಗೆ ೧೦.೩೦ಕ್ಕೆ ನಡೆಯಲಿದೆ. ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಜ್ಞಾನಮಂದಿರ ಉದ್ಘಾಟಿಸಲಿದ್ದು, ಸಿ.ಪಿ ಸೂರ್ಯಪ್ರಕಾಶ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಟ್ರಸ್ಟ್ ಅಧ್ಯಕ್ಷ ಕಣ್ಣಪ್ಪ ಅಧ್ಯಕ್ಷತೆ ವಹಿಸಲಿದ್ದು, ಬೆಂಗಳೂರು ಗುರುಕುಲ ಸೇವಾಸಂಸ್ಥೆ ದಿವಂಗತ ಬಿ.ಎಲ್ ಗುರುರಾಜ್ ಅವರ ಸ್ಮರಣಾರ್ಥ ನೂತನ ಕಟ್ಟಡ ನಿರ್ಮಿಸಲಾಗಿದೆ. ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಟ್ರಸ್ಟ್ ಅಧ್ಯಕ್ಷರು, ಪದಾಧಿಕಾರಿಗಳು ಕೋರಿದ್ದಾರೆ.