Posts

ಹಿಂದೂ ಸಂಸ್ಕೃತಿ ಪಾಲಿಸಿದರೆ ಜಗತ್ತಿನಲ್ಲಿ ಶಾಂತಿ : ಯದುಕೃಷ್ಣ ಮತ್ತೂರು

Image
ಭದ್ರಾವತಿ ಹಳೇನಗರದ ಭೂತನಗುಡಿ ಶ್ರೀ ಕೃಷ್ಣರುಕ್ಮಿಣಿ ದೇವಸ್ಥಾನ ಮುಂಭಾಗ ಆಯೋಜಿಸಲಾಗಿದ್ದ ಛತ್ರಪತಿ ಶಿವಾಜಿ ಜಯಂತಿ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿ ಮಾತನಾಡಿದ ಆರ್‌ಎಸ್‌ಎಸ್ ಪ್ರಾಂತ ಸಹ ಸಂಪರ್ಕ ಪ್ರಮುಖ್ ಯದುಕೃಷ್ಣ ಮತ್ತೂರು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.      ಭದ್ರಾವತಿ: ಭಾರತದ ಸನಾತನ ಹಿಂದೂ ಸಂಸ್ಕೃತಿ ಜಗತ್ತಿನ ಎಲ್ಲಾ ಸಂಸ್ಕೃತಿಗಳ ತಾಯಿಯಾಗಿದೆ. ಈ ಸಂಸ್ಕೃತಿಯನ್ನು ಪಾಲಿಸಿದರೆ ಜಗತ್ತಿನಲ್ಲಿ ಶಾಂತಿ ನೆಲೆಸುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಆರ್‌ಎಸ್‌ಎಸ್ ಪ್ರಾಂತ ಸಹ ಸಂಪರ್ಕ ಪ್ರಮುಖ್ ಯದುಕೃಷ್ಣ ಮತ್ತೂರು ತಿಳಿಸಿದರು.      ಅವರು ಹಳೇನಗರದ ಭೂತನಗುಡಿ ಶ್ರೀ ಕೃಷ್ಣರುಕ್ಮಿಣಿ ದೇವಸ್ಥಾನ ಮುಂಭಾಗ ಆಯೋಜಿಸಲಾಗಿದ್ದ ಛತ್ರಪತಿ ಶಿವಾಜಿ ಜಯಂತಿ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿ ಮಾತನಾಡಿದರು.      ಹಿಂದೂ ಧರ್ಮದ ಆಚರಣೆ ಫಲವಾಗಿ ಇಂದು ಕೇವಲ ಭಾರತ ದೇಶದಲ್ಲಿ ಮಾತ್ರವಲ್ಲದೆ ಜಗತ್ತಿನ ೧೨ ದೇಶಗಳಲ್ಲಿ ದೀಪಾವಳಿ ಹಬ್ಬ ಆಚರಣೆ ಮಾಡಲಾಗುತ್ತಿದೆ. ಅಲ್ಲದೆ ಪ್ರಪಂಚದ ಇತರೆ ದೇಶಗಳಲ್ಲಿ ದೊಡ್ಡ ದೊಡ್ಡ ದೇವಾಲಯಗಳನ್ನು ನಿರ್ಮಾಣ ಮಾಡುವ ಮೂಲಕ ಹಿಂದೂ ಧರ್ಮದ ಆಚರಣೆಗಳನ್ನು ಪಾಲಿಸಲಾಗುತ್ತಿದೆ. ಇದು ೪೦೦ ವರ್ಷಗಳ ಹಿಂದೆ ಹಿಂದುತ್ವದ ನೆಲೆಯಲ್ಲಿ ಗುರುತಿಸಿಕೊಳ್ಳುವಂತಹ ವಾತಾವರಣ ನಿರ್ಮಾಣದ ಫಲವಾಗಿದೆ ಎಂದರು.      ...

ದಂಪತಿ ಆತ್ಮಹತ್ಯೆ ಪ್ರಕರಣ : ಅನಾಥರಾದ ಇಬ್ಬರು ಹೆಣ್ಣು ಮಕ್ಕಳು

Image
ಪೊಲೀಸ್ ಸಿಬ್ಬಂದಿಯೊಬ್ಬರ ವಿರುದ್ಧ ಅಪಪ್ರಚಾರ ಆರೋಪ  ಮನೆಯಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಭದ್ರಾವತಿ ಹೊಸಸಿದ್ದಾಪುರ ನಿವಾಸಿ ಸ್ವಾತಿ.       ಭದ್ರಾವತಿ : ದಂಪತಿ ಆತ್ಮಹತ್ಯೆಯಿಂದಾಗಿ ಮಕ್ಕಳು ಅನಾಥರಾಗಿರುವ ಹೃದಯ ವಿದ್ರಾವಕ ಘಟನೆ ನಡೆದಿದ್ದು, ಅಲ್ಲದೆ ಆತ್ಮಹತ್ಯೆ ಪ್ರಕರಣ ರೋಚಕ ತಿರುವುಗಳನ್ನು ಪಡೆದುಕೊಂಡಿದೆ.       ನಗರಸಭೆ ವ್ಯಾಪ್ತಿಯ ಹೊಸಸಿದ್ದಾಪುರದಲ್ಲಿ ಶಿವರಾತ್ರಿ ಹಬ್ಬದ ದಿನದದಂದು ಕೆಎಸ್‌ಐಎಫ್‌ಎಸ್ ಡಿ' ದರ್ಜೆ  ನೌಕರ ಜಗದೀಶ್ ಮನೆಯಲ್ಲೇ ನೇಣು ಬಿಗಿದು ಸಾವನ್ನಪ್ಪಿದ್ದರು. ಈ ಸಂಬಂಧ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಎಂದು ದೂರು ದಾಖಲಾಗಿತ್ತು.  ಈ ನಡುವೆ ಇವರ ಪತ್ನಿ ಸ್ವಾತಿ(೨೬) ಸಹ ಅವರ ಮನೆಯಲ್ಲೇ ಶುಕ್ರವಾರ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ.       ನೇಣು ಬಿಗಿದುಕೊಂದು ಆತ್ಮಹತ್ಯೆ ಮಾಡಿಕೊಂಡಿರುವ ಸ್ವಾತಿ, ಘಟನೆಗೂ ಮೊದಲು ತನ್ನ ತಾಯಿಗೆ ಕಳುಹಿಸಿದ ವಾಟ್ಸಪ್‌ನಲ್ಲಿ ಮೆಸೇಜ್ ಕಳುಹಿಸಿರುವುದು ಪ್ರಕರಣಕ್ಕೆ ತಿರುವು ನೀಡಿದೆ. ಮೆಸೇಜ್‌ನಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಇಲ್ಲಸಲ್ಲದ ಅಪಪ್ರಚಾರದಲ್ಲಿ ತೊಡಗಿದ್ದರು ಎಂದು ಸ್ವಾತಿ ಆರೋಪಿಸಿರುವುದಾಗಿ ತಿಳಿದು ಬಂದಿದೆ. ಈ ಸಂಬಂಧ ತನಿಖೆ ಮುಂದುವರೆದಿದೆ.  ದಂಪತಿ ಆತ್ಮಹತ್ಯೆಯಿಂದಾಗಿ ಇಬ್ಬರು ಚಿಕ್ಕ ಹೆಣ...

ಮೇಲ್ವರ್ಗದ ಜಾತಿಯವರಿಂದ ದಲಿತರ ಜಮೀನು ಕಬಳಿಕೆ ಆರೋಪ : ತಹಸೀಲ್ದಾರ್ ಕಛೇರಿ ಮುಂಭಾಗ ಪ್ರತಿಭಟನೆ

Image
ತಹಸೀಲ್ದಾರ್‌ರವರ ಆದೇಶ ರದ್ದು ಮಾಡಿ, ಇಲ್ಲವಾದಲ್ಲಿ ಅಹೋ ರಾತ್ರಿ ಧರಣಿ ಹೋರಾಟದ ಎಚ್ಚರಿಕೆ  ಭದ್ರಾವತಿ ತಾಲೂಕಿನ ಅರಹತೊಳಲು ಗ್ರಾಮದ ಸರ್ವೆ ನಂ. ೭ರಲ್ಲಿ ೪ ಎಕರೆ ೦೫ ಗುಂಟೆ ಜಮೀನು ಪರಿಶಿಷ್ಟ ಪಂಗಡ(ಎಸ್.ಟಿ) ದಲಿತ ಸಮುದಾಯಕ್ಕೆ ಸೇರಿದ ನಾಗಪ್ಪ ಬಿನ್ ಮರಿಯಣ್ಣನವರ ಹೆಸರಿಗೆ ಪ್ರಸ್ತುತ ಖಾತೆ ಪಹಣಿ ದಾಖಲಾತಿಗಳಿದ್ದು, ಅವರ ಮರಣ ನಂತರ ಕುಟುಂಬಸ್ಥರಿಗೆ ಪೌತಿ ಖಾತೆ ಮಾಡಲು ಕಾನೂನು ಬದ್ದವಾಗಿ ಅರ್ಜಿ ಸಲ್ಲಿಸಿದ್ದರೂ ಸಹ ತಹಸೀಲ್ದಾರ್‌ರವರು ದಲಿತ ವಿರೋಧಿ ನೀತಿ ಅನುಸರಿಸಿ ನ್ಯಾಯಲಯದ ಮೂಲಕ ಮೇಲ್ವರ್ಗದ ಜಾತಿಯವರಾದ ಪಾಲಾಕ್ಷಪ್ಪ ಗೌಡ ಜಿ.ಎಸ್ ಬಿನ್ ಸಂಗಪ್ಪಗೌಡರಿಗೆ ೨ ಎಕರೆ ೦.೩೯ ಗುಂಟೆ ಜಮೀನನ್ನು ಕಾನೂನು ಬಾಹಿರವಾಗಿ ಖಾತೆ ಪಹಣಿ ಮಾಡಲು ಆದೇಶ ಮಾಡಿರುವುದನ್ನು ರದ್ದು ಪಡಿಸಬೇಕೆಂದು. ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಶಾಖೆವತಿಯಿಂದ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿ ಮೂಲಕ ಕಂದಾಯ ಸಚಿವ ಕೃಷ್ಣ ಭೈರೇಗೌಡರಿಗೆ ಮನವಿ ಸಲ್ಲಿಸಲಾಯತು.       ಭದ್ರಾವತಿ:  ತಾಲೂಕಿನ ಅರಹತೊಳಲು ಗ್ರಾಮದ ಸರ್ವೆ ನಂ. ೭ರಲ್ಲಿ ೪ ಎಕರೆ ೦೫ ಗುಂಟೆ ಜಮೀನು ಪರಿಶಿಷ್ಟ ಪಂಗಡ(ಎಸ್.ಟಿ) ದಲಿತ ಸಮುದಾಯಕ್ಕೆ ಸೇರಿದ ನಾಗಪ್ಪ ಬಿನ್ ಮರಿಯಣ್ಣನವರ ಹೆಸರಿಗೆ ಪ್ರಸ್ತುತ ಖಾತೆ ಪಹಣಿ ದಾಖಲಾತಿಗಳಿದ್ದು, ಅವರ ಮರಣ ನಂತರ ಕುಟುಂಬಸ್ಥರಿಗೆ ಪೌತಿ ಖಾತೆ ಮಾಡಲು ಕಾನೂನು ಬದ್ದವಾಗಿ ಅರ್ಜಿ ಸಲ...

ಉಕ್ಕಿನ ನಗರಕ್ಕೆ ರಂಗಮಂದಿರ : ಫೆ.೨೧ರಂದು ಕಲಾವಿದರ ಸಭೆ

Image
     ಭದ್ರಾವತಿ: ಒಂದು ಕಾಲದಲ್ಲಿ ರಂಗಭೂಮಿ ಕಲಾವಿದರ ನೆಲೆಯಾಗಿದ್ದ, ಸಾವಿರಾರು ಕಲಾವಿದರು ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಳ್ಳಲು ಕಾರಣವಾಗಿರುವ ಉಕ್ಕಿನ ನಗರದಲ್ಲಿ ಇದುವರೆಗೂ ರಂಗಕಲಾವಿದರು ತಮ್ಮ ಚಟುವಟಿಕೆಗಳನ್ನು ನಡೆಸಲು ತಮ್ಮದೇ ಆದ ಸೂಕ್ತ ಸ್ಥಳವಾಗಲಿ, ರಂಗಮಂದಿರವಾಗಲಿ ಇಲ್ಲದಿರುವುದು ವಿಷಾದನೀಯ ಸಂಗತಿಯಾಗಿದೆ. ಇದೀಗ ರಂಗಮಂದಿರ ನಿರ್ಮಿಸುವಂತೆ ಒತ್ತಾಯಿಸುವ ಉದ್ದೇಶದಿಂದ ಸಮಾನ ಮನಸ್ಸಿನ ರಂಗಭೂಮಿ ಹಾಗು ಎಲ್ಲಾ ಪ್ರಕಾರಗಳ ಕಲಾವಿದರು ಒಗ್ಗಟ್ಟಾಗಿ ಅಭಿಯಾನ ನಡೆಸಲು ಮುಂದಾಗಿದ್ದಾರೆ. ಈ ಹಿನ್ನಲೆಯಲ್ಲಿ ಅಭಿಯಾನದ ಮೊದಲ ಸಭೆ ಫೆ.೨೧ರ ಶನಿವಾರ ಬೆಳಿಗ್ಗೆ ೧೦.೩೦ಕ್ಕೆ ನ್ಯೂಟೌನ್ ಮಹಾತ್ಮಗಾಂಧಿ ಉದ್ಯಾನವನದಲ್ಲಿ ಸಭೆ ಕರೆಯಲಾಗಿದೆ.      ಈ ಹಿಂದೆ ಸುಮಾರು ೫೦ ರಿಂದ ೬೦ ರಂಗ ತಂಡಗಳು ಹಾಗು ೫೦ಕ್ಕೂ ಹೆಚ್ಚು ಜಾನಪದ ಕಲಾ ತಂಡಗಳು ಸಕ್ರಿಯವಾಗಿದ್ದವು. ಆದರೆ ಕಾಲಾನಂತರದಲ್ಲಿ ಒಂದೊಂದೇ ಕಲಾ ತಂಡಗಳು ಕಣ್ಮರೆಯಾಗಿವೆ. ಇದಕ್ಕೆ ಪೂರಕವೆಂಬಂತೆ ರಂಗಮಂದಿರ ಇಲ್ಲದಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಜನರಲ್ಲಿ ಕಲೆಯಲ್ಲಿ ಆಸಕ್ತಿ ಇಲ್ಲದಿರುವುದು ವಿಷಾದನೀಯ ಸಂಗತಿಯಾಗಿದೆ. ಈ ನಡುವೆ ಇದೀಗ ಇಂದಿನ ತಲೆಮಾರಿಗೆ ರಂಗ ಚಟುವಟಿಕೆಗಳನ್ನು ಪರಿಚಯಿಸುವ ಹಾಗು ರಂಗಭೂಮಿ ತನ್ನ ಹಳೆಯ ವೈಭವ ಮರಳಿ ಪಡೆಯುವ ಉದ್ದೇಶದಿಂದ ಸುಸಜ್ಜಿತ ರಂಗಮಂದಿರ ನಿರ್ಮಾಣಕ್ಕೆ ಅಭಿಯಾನ ಆರಂಭಿಸಲಾಗಿದೆ.    ...

ಶಿವಾಜಿ ಮಹಾರಾಜರ ಕುರಿತ ಪುಸ್ತಕಗಳನ್ನು ಮಕ್ಕಳಿಗೆ ನೀಡಿ : ಬಿ.ಕೆ ಮೋಹನ್

Image
ಭದ್ರಾವತಿಯಲ್ಲಿ ತಾಲೂಕು ಆಡಳಿತ ಹಾಗು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಗುರುವಾರ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ೩೯೬ನೇ ಜಯಂತಿ ಕಾರ್ಯಕ್ರಮ ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಉದ್ಘಾಟಿಸಿ ಮಾತನಾಡಿದರು.      ಭದ್ರಾವತಿ : ಶಿವಾಜಿ ಮಹಾರಾಜರ ತತ್ವ, ಚಿಂತನೆಗಳು ಹಾಗೂ ಅವರ ಪ್ರತಿ ಹೆಜ್ಜೆಯನ್ನು ಮುಂದಿನ ಪೀಳಿಗೆಗೆ ನಾವು ತಿಳಿಸಬೇಕಿದೆ. ಶಿವಾಜಿ ಮಹಾರಾಜರ ಕುರಿತ ಪುಸ್ತಕಗಳನ್ನು ಮಕ್ಕಳಿಗೆ ನೀಡಬೇಕೆಂದು ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಕರೆ ನೀಡಿದರು.      ತಾಲೂಕು ಆಡಳಿತ ಹಾಗು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಗುರುವಾರ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ೩೯೬ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.      ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾರಾಜಕುಮಾರ್, ಮರಾಠ ಸಮಾಜದ ಪ್ರಮುಖರಾದ ರೈತ ಮುಖಂಡ ಯಶವಂತರಾವ್ ಘೋರ್ಪಡೆ, ಮೈದೊಳಲು ಹಾಲೇಶ್ ರಾವ್, ಎಚ್.ಆರ್ ಲೋಕೇಶ್ವರ್ ರಾವ್, ಪ್ರಕಾಶ್‌ರಾವ್, ಕವಿತಾ ರಾವ್, ಸಚಿನ್ ಸಿಂಧ್ಯಾ ಸೇರಿದಂತೆ ಇನ್ನಿತರರು ಮಾತನಾಡಿ, ಭಾರತ ದೇಶದ ಅತ್ಯಂತ ಪ್ರಮುಖ ರಾಜರಲ್ಲಿ ಶಿವಾಜಿ ಮಹಾರಾಜರು ಒಬ್ಬರಾಗಿದ್ದು ಧೈರ್ಯ, ಶೌರ್ಯಕ್ಕೆ ಅವರು ಮಾದರಿಯಾಗಿದ್ದಾರೆ. ...

ಕೆ.ಎಚ್ ನಗರದಲ್ಲಿ ವಿಬಿ-ಜಿ ರಾಮ್ ಜಿ ಕುರಿತು ಜಾಗೃತಿ ಸಭೆ

Image
ಭದ್ರಾವತಿಯಲ್ಲಿ ಬಿಜೆಪಿ ಗ್ರಾಮಾಂತರ ಮಂಡಲ ವತಿಯಿಂದ ಕೇಂದ್ರ ಸರ್ಕಾರದ ಯೋಜನೆ ವಿಬಿ-ಜಿ ರಾಮ್ ಜಿ ಕುರಿತು ಜಾಗೃತಿ ಸಭೆ ತಾಲೂಕಿನ ಹಿರಿಯೂರು ಮಹಾ ಶಕ್ತಿ ಕೇಂದ್ರದ ಅಂತರಗಂಗೆ ಮತ್ತು ಎರೆಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆ.ಎಚ್ ನಗರದಲ್ಲಿ ಆಯೋಜಿಸಲಾಗಿತ್ತು.      ಭದ್ರಾವತಿ: ಬಿಜೆಪಿ ಗ್ರಾಮಾಂತರ ಮಂಡಲ ವತಿಯಿಂದ ಕೇಂದ್ರ ಸರ್ಕಾರದ ಯೋಜನೆ ವಿಬಿ-ಜಿ ರಾಮ್ ಜಿ ಕುರಿತು ಜಾಗೃತಿ ಸಭೆ ತಾಲೂಕಿನ ಹಿರಿಯೂರು ಮಹಾ ಶಕ್ತಿ ಕೇಂದ್ರದ ಅಂತರಗಂಗೆ ಮತ್ತು ಎರೆಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆ.ಎಚ್ ನಗರದಲ್ಲಿ ಆಯೋಜಿಸಲಾಗಿತ್ತು.      ಸಭೆಯಲ್ಲಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ ಹರಿಕೃಷ್ಣ  ಮಾತನಾಡಿ, ಗಾಂಧೀಜಿಯವರ ಗ್ರಾಮಾಭ್ಯುಯದ ಕನಸನ್ನು ನನಸು ಮಾಡಲು ಈ ಯೋಜನೆಯು ಸಹಕಾರಿಯಾಗಿದೆ.  ಈ ಮೊದಲು ಗ್ರಾಮದ ಕಾಮಗಾರಿಯನ್ನು ಜಿಲ್ಲಾ ಪಂಚಾಯತ್, ತಾಲೂಕ್ ಪಂಚಾಯತಿಯಲ್ಲಿ  ನಿರ್ಧರಿಸಲಾಗುತ್ತಿತ್ತು.  ಆದರೆ ಈಗ ನಮ್ಮೂರಿನ ಕೆಲಸವನ್ನು ಕೃಷಿ ಚಟುವಟಿಕೆಗಳಿಗೆ ಅಡ್ಡಿಯಾಗದಂತೆ ನಾವೇ ಗ್ರಾಮ ಪಂಚಾಯಿತಿಯಲ್ಲಿ ನಿರ್ಧರಿಸುವ ಅಧಿಕಾರವನ್ನು ನೀಡಲಾಗಿದೆ. ಆದರೆ ಈಗ ನಮ್ಮೂರಿನ ಕೆಲಸವನ್ನು ಕೃಷಿ ಚಟುವಟಿಕೆಗಳಿಗೆ ಅಡ್ಡಿಯಾಗದಂತೆ  ನಾವೇ ಗ್ರಾಮ ಪಂಚಾಯಿತಿಯಲ್ಲಿ ನಿರ್ಧರಿಸುವ ಅಧಿಕಾರವನ್ನು ನೀಡಿದೆ, ಮೊದಲು ೧೦೦ ದಿನ ಇದ್ದಂತಹ ಕೆಲಸ ಈಗ ೧೨೫ ದಿನಗಳಿಗೆ ವಿಸ್ತರಿಸಲಾ...

ಎ.ಎನ್ ನಾಗಭೂಷಣರಿಗೆ `ಸಾಧಕ ರತ್ನ' ಪ್ರಶಸ್ತಿ

Image
ಎ.ಎನ್ ನಾಗಭೂಷಣ       ಭದ್ರಾವತಿ: ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ನಿವೃತ್ತ ಅಧಿಕಾರಿ, ಸಮಾಜ ಸೇವಕ ಎ.ಎನ್ ನಾಗಭೂಷಣ(ಅಂಬಳೆ ನರಸಿಂಹಯ್ಯ ನಾಗಭೂಷಣ)ರಿಗೆ ಬೆಂಗಳೂರಿನ ಬಬ್ಬೂರು ಕಮ್ಮೆ ಸೇವಾ ಸಮಿತಿ ಇತ್ತೀಚೆಗೆ `ಸಾಧಕ ರತ್ನ' ಪ್ರಶಸ್ತಿ ನೀಡಿ ಗೌರವಿಸಿದೆ.       ನಾಗಭೂಷಣರವರು ೩೦ ಜನವರಿ .೧೯೪೪ರಲ್ಲಿ ಇಲ್ಲಿಯೇ ಜನಿಸಿದ್ದು, ಬಿ.ಎಸ್ಸಿ ಪದವಿಧರರಾಗಿದ್ದಾರೆ. ೧೯೬೯ ರಿಂದ ೨೦೦೧ರ ವಿಐಎಸ್‌ಎಲ್ ಕಾರ್ಖಾನೆಯ ಗುಣಮಟ್ಟ ನಿಯಂತ್ರಣ ವಿಭಾಗದಲ್ಲಿ ರಸಾಯನಶಾಸ್ತ್ರಜ್ಞ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು.       ನಗರದಲ್ಲಿ ೧೯೯೧-೯೨ರ ಅವಧಿಯಲ್ಲಿ  ಬಟ್ಟೂರು ಕಮ್ಮೆ ಸೇವಾ ಸಂಘ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಹಳೇನಗರದ ಮಾಡಲ್ ಹೌಸಿಂಗ್ ಕೋ-ಆಪರೇಟಿವ್ ಸೊಸೈಟಿ ನಿಯಮಿತದಲ್ಲಿ ಸುಮಾರು ೧೨ ವರ್ಷಗಳ ಕಾಲ ಕಾರ್ಯದರ್ಶಿಯಾಗಿ ಮತ್ತು ೨೦ ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಪ್ರತಿಷ್ಠಿತ ಬಡಾವಣೆಗಳನ್ನು ನಿರ್ಮಾಣ ಮಾಡಿದ್ದು, ರಾಜ್ಯದಲ್ಲಿ ಇಂದಿಗೂ ಪ್ರತಿಷ್ಠಿತ  ಗೃಹ ನಿರ್ಮಾಣ ಸಂಘಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಅಲ್ಲದೆ ೧೯೯೫-೯೬ರಲ್ಲಿ ಗಾಯತ್ರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಪ್ರಾರಂಭಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ೧೯೯೩-೯೪ರಲ್ಲಿ ಶ್ರೀ ವಿದ್ಯಾಶಂಕರ ಟ್ರಸ್ಟ್ ಪ್ರಾರಂಭಿಸಿ ಅದರ...

ಫೆ.೧೯ರಂದು ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಣೆ

Image
     ಭದ್ರಾವತಿ : ತಾಲೂಕು ಆಡಳಿತ ಹಾಗು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಫೆ.೧೯ರ ಗುರುವಾರ ಬೆಳಿಗ್ಗೆ ೧೦.೩೦ಕ್ಕೆ ಶ್ರೀ ಛತ್ರಪತಿ ಶಿವಾಜಿ ಜಯಂತಿ ಹಮ್ಮಿಕೊಳ್ಳಲಾಗಿದೆ.       ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆವಹಿಸಲಿದ್ದು, ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕಿ ಶಾರದ ಪೂರ್‍ಯಾನಾಯ್ಕ ಉದ್ಘಾಟಿಸಲಿದ್ದಾರೆ.       ಸಂಸದ ಬಿ.ವೈ ರಾಘವೇಂದ್ರ ಸೇರಿದಂತೆ ಈ ವ್ಯಾಪ್ತಿಯ ವಿಧಾನ ಪರಿಷತ್ ಸದಸ್ಯರು, ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾರಾಜಕುಮಾರ್, ಉಪಾಧ್ಯಕ್ಷ ಬಷೀರ್ ಅಹಮದ್, ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರೇಮಾ ಬದರಿನಾರಾಯಣ, ಸರ್ಕಾರದ ೫ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಸಮಿತಿ ಅಧ್ಯಕ್ಷ ಬಿ.ಎಸ್ ಗಣೇಶ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ. ಸಿದ್ದಬಸಪ್ಪ, ಮರಾಠ ಸಮಾಜದ ಅಧ್ಯಕ್ಷ ಎಚ್.ಎಲ್ ರಂಗನಾಥರಾವ್ ಚೌವ್ಹಾಣ್, ತಹಸೀಲ್ದಾರ್ ಪರುಸಪ್ಪ ಕುರುಬರ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಪೊಲೀಸ್ ಉಪಾಧೀಕ್ಷಕ ಪ್ರಕಾಶ್ ರಾಥೋಡ್, ನಗರಸಭೆ ಪೌರಾಯುಕ್ತ ಕೆ.ಎನ್ ಹೇಮಂತ್ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ. 

ಫೆ.೧೯ರಂದು ವಿದ್ಯುತ್ ವ್ಯತ್ಯಯ

Image
     ಭದ್ರಾವತಿ: ಮೆಸ್ಕಾಂ ಲಕ್ಕವಳ್ಳಿ ೬೬/೧೧ ಕೆವಿ ವಿದ್ಯುತ್ ವಿತರಣಾ ಕೇಂದ್ರದ ಹತ್ತಿರ ಪೈಪ್ ಲೈನ್ ಹಾಗು ಎಫ್-೧ ಐ.ಪಿ ಫೀಡರ್ ಸ್ಥಳಾಂತರ ಮತ್ತು ವಿದ್ಯುತ್ ವಿತರಣಾ ಕೇಂದ್ರ ನಿರ್ವಹಣಾ ಕಾರ್ಯ ಹಮ್ಮಿಕೊಂಡಿರುವುದರಿಂದ ಫೆ.೧೯ರಂದು ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೬.೩೦ರ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.       ತಾಲೂಕಿನ ವದಿಯೂರು, ಗ್ಯಾರೇಜ್ ಕ್ಯಾಂಪ್, ಸಿಂಗನಮನೆ, ಶಂಕರಘಟ್ಟ, ಕುವೆಂಪು ವಿಶ್ವ ವಿದ್ಯಾನಿಲಯ, ನಲ್ಲಿಸರ, ಮಾಳೇನಹಳ್ಳಿ, ಗೋಣಿಬೀಡು, ಶಾಂತಿನಗರ, ತಾವರಘಟ್ಟ, ಮಲ್ಲಿಗೇನಹಳ್ಳಿ, ತಮ್ಮಡಿಹಳ್ಳಿ, ಜಂಕ್ಷನ್, ರಂಗನಾಥಪುರ, ಗೌಳಿಗರ ಕ್ಯಾಂಪ್, ಹುಣಸೇಕಟ್ಟೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಉಂಟಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಗ್ರಾಮೀಣ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾರೆ. 

ಮುಂದಿನ ಒಂದು ತಿಂಗಳಲ್ಲಿ ಕಾಮ್ರೇಡ್ ಡಿ.ಸಿ ಮಾಯಣ್ಣ ವೃತ್ತ ನಾಮಕರಣ : ಬಿ.ಕೆ ಮೋಹನ್

Image
ಪ್ರಗತಿಪರ ಸಂಘಟನೆಗಳ ಒಕ್ಕೂಟ ವತಿಯಿಂದ ಭದ್ರಾವತಿ ನಗರದ ಬಿ.ಎಚ್ ರಸ್ತೆ ಶ್ರೀ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಇತ್ತೀಚೆಗೆ ನಿಧನರಾದ ಕಾಮ್ರೇಡ್ ಡಿ.ಸಿ ಮಾಯಣ್ಣರವರಿಗೆ ನುಡಿ ನಮನ ಕಾರ್ಯಕ್ರಮ ಆಯೋಜಿಸಲಾಗಿತ್ತು.       ಭದ್ರಾವತಿ : ಹಿರಿಯ ರಾಜಕೀಯ ಮುತ್ಸದ್ದಿ, ಹೋರಾಟಗಾರ ಕಾಮ್ರೇಡ್ ಡಿ.ಸಿ ಮಾಯಣ್ಣನವರ ಹೆಸರನ್ನು ನಗರದಲ್ಲಿನ ಯಾವುದಾದರೂ ಒಂದು ವೃತ್ತಕ್ಕೆ ಮುಂದಿನ ಒಂದು ತಿಂಗಳಲ್ಲಿ ನಗರಸಭೆ ವತಿಯಿಂದ ನಾಮಕರಣಗೊಳಿಸಲಾಗುವುದು ಎಂದು ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಹೇಳಿದರು.       ಅವರು ಮಂಗಳವಾರ ಪ್ರಗತಿಪರ ಸಂಘಟನೆಗಳ ಒಕ್ಕೂಟ ವತಿಯಿಂದ ನಗರದ ಬಿ.ಎಚ್ ರಸ್ತೆ ಶ್ರೀ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಇತ್ತೀಚೆಗೆ ನಿಧನರಾದ ಕಾಮ್ರೇಡ್ ಡಿ.ಸಿ ಮಾಯಣ್ಣರವರಿಗೆ ನುಡಿ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.      ಪ್ರಗತಿಪರ ಒಕ್ಕೂಟದ ಬೇಡಿಕೆಯಂತೆ, ಕ್ಷೇತ್ರದ ಪ್ರತಿಯೊಬ್ಬರ ಆಶಯದಂತೆ ನಗರದ ಯಾವುದಾದರೂ ಒಂದು ರಸ್ತೆ ಅಥವಾ ವೃತ್ತಕ್ಕೆ ಡಿ.ಸಿ ಮಾಯಣ್ಣನವರ ಹೆಸರು ನಾಮಕರಣಗೊಳಿಸಲಾಗುವುದು. ಈ ಸಂಬಂಧ ಒಂದು ತಿಂಗಳಲ್ಲಿ ಆದೇಶ ಪ್ರತಿ ನೀಡಲಾಗುವುದು. ಈ ಸಂಬಂಧ ಕಾರ್ಯಕ್ರಮ ಆಯೋಜಿಸಿ ಪ್ರಾಮಾಣಿಕವಾಗಿ ಅವರ ಹೆಸರನ್ನು ಶಾಶ್ವತವಾಗಿ ಉಳಿಸುವ ಮೂಲಕ ಅವರ ಆತ್ಮಕ್ಕೆ ಶಾಂತಿ ಸಿಗುವಂತೆ ನಾವೆಲ್ಲರೂ ಕೈಜೋಡಿಸಿ ಕೆಲಸ ...

ಶಿವ ಭಕ್ತರ ಮನಸೂರೆಗೊಳಿಸಿದ `ಸಂಸ್ಕೃತಿ ವೈಭವ'

Image
ಶಿವಮೊಗ್ಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಧನ ಸಹಾಯ ಯೋಜನೆಯಡಿಯಲ್ಲಿ ಅಪರಂಜಿ ಅಭಿನಯ ಶಾಲೆ ಆಶ್ರಯದಲ್ಲಿ ಶ್ರೀ ನಟರಾಜ ಕಲಾ ವೇದಿಕೆ ಕಲಾ ತಂಡದಿಂದ ಮಹಾಶಿವರಾತ್ರಿ ಹಬ್ಬದಂದು ಭದ್ರಾವತಿ ಜನ್ನಾಪುರದ ಶ್ರೀ ಮಲ್ಲೇಶ್ವರ ದೇವಾಲಯ ಆವರಣದಲ್ಲಿ `ಸಂಸ್ಕೃತಿ ವೈಭವ' ಆಯೋಜಿಸಲಾಗಿತ್ತು.       ಭದ್ರಾವತಿ : ಪ್ರತಿ ವರ್ಷ ಮಹಾಶಿವರಾತ್ರಿ ಹಬ್ಬದಂದು ಜನ್ನಾಪುರದ ಶ್ರೀ ಮಲ್ಲೇಶ್ವರ ದೇವಾಲಯ ಆವರಣದಲ್ಲಿ ವಿಶಿಷ್ಟ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದ್ದು, ಈ ಬಾರಿ ಸಹ `ಸಂಸ್ಕೃತಿ ವೈಭವ' ಶಿವ ಭಕ್ತರ ಮನ ಗೆದ್ದಿತು.       ಶಿವಮೊಗ್ಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಧನ ಸಹಾಯ ಯೋಜನೆಯಡಿಯಲ್ಲಿ ಅಪರಂಜಿ ಅಭಿನಯ ಶಾಲೆ ಆಶ್ರಯದಲ್ಲಿ ಶ್ರೀ ನಟರಾಜ ಕಲಾ ವೇದಿಕೆ ಕಲಾ ತಂಡದಿಂದ ಆಯೋಜಿಸಲಾಗಿದ್ದ `ಸಂಸ್ಕೃತಿ ವೈಭವ'ದಲ್ಲಿ ಕಲಾವಿದರಿಂದ `ಕ್ರಾಂತಿಯೋಗಿ ಬಸವಣ್ಣ' ನಾಟಕ ಪ್ರದರ್ಶನ ಹಾಗು ಮಕ್ಕಳಿಂದ ವೇಷ ಭೂಷಣ ಮತ್ತು ನೃತ್ಯ ಗಾಯನ ಭಕ್ತರ ಮನಸೂರೆಗೊಳಿಸಿತು.        ಅಪರಂಜಿ ಅಭಿನಯ ಶಾಲೆಯ ಕಿರುತೆರೆ ನಟ, ರಂಗಕರ್ಮಿ ಅಪರಂಜಿ ಶಿವರಾಜ್ ಹಾಗು ಜನ್ನಾಪುರ ದೇವಾಲಯಗಳ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.       ಹಿರಿಯ ಸಮಾಜ ಸೇವಕರಾದ ಎಚ್.ವಿ ಶಿವರುದ್ರಪ್ಪ ಅಧ್ಯಕ್ಷತೆವಹಿ...

ವಿಶೇಷ ಚೇತನ ಮಕ್ಕಳಿಗೆ ವಿಶಿಷ್ಟ ಶಕ್ತಿ : ಹಿರಿಯ ಪತ್ರಕರ್ತ ಕಣ್ಣಪ್ಪ

Image
ಭದ್ರಾವತಿಯಲ್ಲಿ ಅಖಿಲ ಕರ್ನಾಟಕ ಕಟ್ಟಡ ಹಾಗು ಅಸಂಘಟಿತ ಕಾರ್ಮಿಕರ ಒಕ್ಕೂಟ, ಸರ್.ಎಂ.ವಿ ದ್ವಿಚಕ್ರ ವಾಹನ ದುರಸ್ತಿದಾರರ ಸಂಘ ಹಾಗು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಮತ್ತು ಕ್ಷೇತ್ರ ಸಮನ್ವಯ ಸಂಪನ್ಮೂಲ ಶಿಕ್ಷಕರು ಹಾಗು ಕಾರ್ಮಿಕ ಇಲಾಖೆ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ವಿಶೇಷ ಚೇತನ ಮಕ್ಕಳಿಗೆ ಸ್ಕೂಲ್ ಬ್ಯಾಗ್,  ಬ್ಲಾಂಕೆಟ್ ವಿತರಣೆ ಹಾಗು ಕಾರ್ಮಿಕರಿಗೆ ಕ್ಯಾಲೆಂಡರ್ ವಿತರಣೆ ಕಾರ್ಯಕ್ರಮ ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ, ಹಿರಿಯ ಪತ್ರಕರ್ತ ಕಣ್ಣಪ್ಪ ಸೇರಿದಂತೆ  ಇನ್ನಿತರರು ಉದ್ಘಾಟಿಸಿದರು.      ಭದ್ರಾವತಿ : ವಿಶೇಷ ಚೇತನ ಮಕ್ಕಳಿಗೆ ಭಗವಂತ ವಿಶಿಷ್ಟ ಸಾಧನೆ ಮಾಡುವ ಶಕ್ತಿ ನೀಡಿರುತ್ತಾನೆ. ಸಮಾಜದ ಪ್ರತಿಯೊಬ್ಬರು ವಿಶೇಷ ಚೇತನ ಮಕ್ಕಳ ಬೆಳವಣಿಗೆಗೆ ಕೈಜೋಡಿಸಬೇಕೆಂದು ಹಳೇನಗರ ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ, ಹಿರಿಯ ಪತ್ರಕರ್ತ ಕಣ್ಣಪ್ಪ ಮನವಿ ಮಾಡಿದರು.       ಅವರು ಪತ್ರಿಕಾಭವನದಲ್ಲಿ ಮಂಗಳವಾರ ಅಖಿಲ ಕರ್ನಾಟಕ ಕಟ್ಟಡ ಹಾಗು ಅಸಂಘಟಿತ ಕಾರ್ಮಿಕರ ಒಕ್ಕೂಟ, ಸರ್.ಎಂ.ವಿ ದ್ವಿಚಕ್ರ ವಾಹನ ದುರಸ್ತಿದಾರರ ಸಂಘ ಹಾಗು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಮತ್ತು ಕ್ಷೇತ್ರ ಸಮನ್ವಯ ಸಂಪನ್ಮೂಲ ಶ...

ಮಹಾಶಿವರಾತ್ರಿ ಜಾಗರಣೆ ಪ್ರಯುಕ್ತ ಕೂಡ್ಲಿಗೆರೆಯಲ್ಲಿ ವಿಶಿಷ್ಟ ಸೇವಾ ಕಾರ್ಯ

Image
ವೇಗ ನಿಯಂತ್ರಕಕ್ಕೆ ಬಿಳಿ ಬಣ್ಣದ ರೇಖೆ ಬಳಿದು ವಾಹನ ಸವಾರರಿಗೆ ಎಚ್ಚರಿಕೆ  ಭದ್ರಾವತಿ ತಾಲೂಕಿನ ಲಯನ್ಸ್ ಕ್ಲಬ್ ಕೂಡ್ಲಿಗೆರೆ ವತಿಯಿಂದ ಮಹಾಶಿವರಾತ್ರಿ ಜಾಗರಣೆ ಪ್ರಯುಕ್ತ ವೇಗ ನಿಯಂತ್ರಕಕ್ಕೆ ಬಿಳಿ ಬಣ್ಣದ ರೇಖೆ ಬಳಿದು ವಾಹನ ಸವಾರರಿಗೆ ಎಚ್ಚರಿಕೆ ನೀಡುವ ವಿಭಿನ್ನ ರೀತಿಯ ಸೇವಾ ಚಟುವಟಿಕೆ ನಡೆಸುವ ಮೂಲಕ ಗಮನ ಸೆಳೆಯಲಾಯಿತು.       ಭದ್ರಾವತಿ :  ತಾಲೂಕಿನ ಲಯನ್ಸ್ ಕ್ಲಬ್ ಕೂಡ್ಲಿಗೆರೆ ವತಿಯಿಂದ ಮಹಾಶಿವರಾತ್ರಿ ಜಾಗರಣೆ ಪ್ರಯುಕ್ತ ವಿಭಿನ್ನ ರೀತಿಯ ಸೇವಾ ಚಟುವಟಿಕೆ ನಡೆಸುವ ಮೂಲಕ ಗಮನ ಸೆಳೆಯಲಾಯಿತು.       ಸಿ.ಎನ್ ರಸ್ತೆಯಲ್ಲಿ ಕೆಲವು ದಿನಗಳ ಹಿಂದೆ ವೇಗ ನಿಯಂತ್ರಕ(ರೋಡ್ ಹಂಪ್ಸ್) ಹಾಕಲಾಗಿದ್ದು, ಇದರಿಂದ ಪ್ರತಿದಿನ ಹಲವಾರು ಸವಾರರು ನಿಯಂತ್ರಣ ಕಳೆದುಕೊಂಡು ರಸ್ತೆಯಲ್ಲಿ ಬೀಳುವುದು ಸಾಮಾನ್ಯವಾಗಿತ್ತು. ಇದನ್ನು ಮನಗಂಡ ಲಯನ್ಸ್ ಕ್ಲಬ್ ಕೂಡ್ಲಿಗೆರೆ ವತಿಯಿಂದ ವಾಹನ ಸವಾರರನ್ನು ಎಚ್ಚರಿಸಲು ವೇಗ ನಿಯಂತ್ರಕಕ್ಕೆ ಬಿಳಿ ಬಣ್ಣದ ರೇಖೆಗಳನ್ನು ಬಳಿಯಲಾಗಿದೆ.  ವಾಹನ ಸವಾರರು ಇದರಿಂದ ನಿಧನವಾಗಿ ಸಂಚರಿಸಲು ಸಾಧ್ಯವಾಗಲಿದೆ.       ಈ ವಿಶಿಷ್ಟ ಸೇವಾ ಕಾರ್ಯದಲ್ಲಿ ಕ್ಲಬ್ ಅಧ್ಯಕ್ಷ ಆರ್.ಎನ್ ರುದ್ರೇಶ್, ಕಾರ್ಯದರ್ಶಿ ಎಂ.ಬಿ ಮೋಹನ್ ಕುಮಾರ್, ಸದಸ್ಯರಾದ ಪಿ.ಸಿ ಮಲ್ಲಿಕಾರ್ಜುನ, ಭವಾನಿ ಶಂಕರ್, ಎನ. ಕುಮಾರಸ್ವಾಮಿ, ಎಸ್. ಪ್ರಶಾಂತ್, ...

ಕಾಂಗ್ರೆಸ್ ಸದಸ್ಯರ ಬೆಂಬಲದೊಂದಿಗೆ ಜೆಡಿಎಸ್ ಸದಸ್ಯೆ ಕೆ.ಪಿ ಪ್ರೇಮಾ ಸ್ಥಾಯಿ ಸಮಿತಿ ನೂತನ ಅಧ್ಯಕ್ಷೆ

Image
ಭದ್ರಾವತಿ ನಗರಸಭೆ ಉಳಿದ ಅವಧಿಗೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ೨೩ನೇ ವಾರ್ಡ್ ಸದಸ್ಯೆ ಕೆ.ಪಿ ಪ್ರೇಮಾ ಮಂಗಳವಾರ ಬೆಳಿಗ್ಗೆ ನಗರಸಭೆ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಿದರು.       ಭದ್ರಾವತಿ : ನಗರಸಭೆ ಉಳಿದ ಅವಧಿಗೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ೨೩ನೇ ವಾರ್ಡ್ ಸದಸ್ಯೆ ಕೆ.ಪಿ ಪ್ರೇಮಾ ಮಂಗಳವಾರ ಬೆಳಿಗ್ಗೆ ನಗರಸಭೆ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಿದರು.       ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಮೊದಲ ಬಾರಿಗೆ ನಗರಸಭೆ ಸದಸ್ಯೆಯಾಗಿ ಆಯ್ಕೆಯಾಗಿರುವ ಕೆ.ಪಿ ಪ್ರೇಮಾ ಮೊದಲ ಬಾರಿಗೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದಾರೆ. ೩೫ ಸದಸ್ಯ ಬಲ ಹೊಂದಿರುವ ನಗರಸಭೆಯಲ್ಲಿ ೧೯ ಕಾಂಗ್ರೆಸ್, ೧೧ ಜೆಡಿಎಸ್, ೪ ಬಿಜೆಪಿ ಮತ್ತು ೧ ಪಕ್ಷೇತರ ಸದಸ್ಯರಿದ್ದಾರೆ. ನಗರಸಭೆ ಆಡಳಿತ ಕಾಂಗ್ರೆಸ್ ಪಕ್ಷ ಚುಕ್ಕಾಣಿ ಹಿಡಿದಿದ್ದು, ಇನ್ನೇನು ಕೆಲವೇ ಕೆಲವು ತಿಂಗಳು ಬಾಕಿ ಉಳಿದಿವೆ. ಶಾಸಕ ಬಿ.ಕೆ ಸಂಗಮೇಶ್ವರ್ ತೀರ್ಮಾನದಂತೆ ಪ್ರೇಮಾ ಅವರನ್ನು ಸ್ಥಾಯಿ ಸಮಿತಿಗೆ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.       ಈ ಹಿಂದೆ ಇವರ ಪತಿ, ಛಲವಾದಿಗಳ ಸಮಾಜದ(ಪರಿಶಿಷ್ಟ ಜಾತಿ) ಮಾಜಿ ಅಧ್ಯಕ್ಷ ಬದರಿನಾರಾಯಣರವರು ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ೨ ಬಾರಿ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ಒಂದು ಬಾರಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಸೇ...

ಖಾಲಿ ಜಾಗ ಸರ್ಕಾರಿ ಶಾಲೆ ಅಭಿವೃದ್ಧಿಗೆ ಬಳಸಿಕೊಳ್ಳಿ, ಮಕ್ಕಳ ಸುರಕ್ಷತೆಗೆ ಗಮನ ಹರಿಸಿ

Image
ಮಾನವ ಹಕ್ಕುಗಳ ಹೋರಾಟ ಸಮಿತಿಯಿಂದ ಧರಣಿ ಸತ್ಯಾಗ್ರಹ : ಮನವಿ  ಭದ್ರಾವತಿ ಹಳೇನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪಕ್ಕದಲ್ಲಿ ಹಲವಾರು ವರ್ಷಗಳಿಂದ ಕಸದ ಕೊಂಪೆಯಂತಿರುವ ಖಾಲಿ ಜಾಗವನ್ನು ಸರ್ಕಾರಿ ಶಾಲೆಯ ಅಭಿವೃದ್ಧಿ ಕಾರ್ಯಗಳಿಗೆ ಮಾತ್ರ  ಬಳಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಖಾಸಗಿ ವ್ಯಕ್ತಿಗಳು ಕಬಳಿಸಲು ಅವಕಾಶ ನೀಡಬಾರದು ಹಾಗು ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳ ಸುರಕ್ಷತೆಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸೋಮವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮುಂಭಾಗ ಮಾನವ ಹಕ್ಕುಗಳ ಹೋರಾಟ ಸಮಿತಿಯಿಂದ ಪ್ರತಿಭಟನಾ ಧರಣಿ ಸತ್ಯಾಗ್ರಹ ಕೈಗೊಳ್ಳುವ ಮೂಲಕ ಮನವಿ ಸಲ್ಲಿಸಲಾಯಿತು.       ಭದ್ರಾವತಿ : ಹಳೇನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪಕ್ಕದಲ್ಲಿ ಹಲವಾರು ವರ್ಷಗಳಿಂದ ಕಸದ ಕೊಂಪೆಯಂತಿರುವ ಖಾಲಿ ಜಾಗವನ್ನು ಸರ್ಕಾರಿ ಶಾಲೆಯ ಅಭಿವೃದ್ಧಿ ಕಾರ್ಯಗಳಿಗೆ ಮಾತ್ರ  ಬಳಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಖಾಸಗಿ ವ್ಯಕ್ತಿಗಳು ಕಬಳಿಸಲು ಅವಕಾಶ ನೀಡಬಾರದು ಹಾಗು ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳ ಸುರಕ್ಷತೆಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸೋಮವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮುಂಭಾಗ ಮಾನವ ಹಕ್ಕುಗಳ ಹೋರಾಟ ಸಮಿತಿಯಿಂದ ಪ್ರತಿಭಟನಾ ಧರಣಿ ಸತ್ಯಾಗ್ರಹ ಕೈಗೊಳ್ಳುವ ಮೂಲಕ ಮನವಿ ಸಲ್ಲಿಸಲಾಯಿತು.       ಧರಣಿ ಸತ್ಯಾಗ್ರಹ ನಿರತರು ಮಾತನಾಡಿ, ಡ...

ಪತಿ ಆಯ್ತು ಈಗ ಹೆಂಡತಿಯೂ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ

Image
ಕೆ.ಪಿ ಪ್ರೇಮಾ       ಭದ್ರಾವತಿ : ನಗರಸಭೆ ಉಳಿದ ಅವಧಿಗೆ ೨೩ನೇ ವಾರ್ಡ್ ಸದಸ್ಯೆ ಕೆ.ಪಿ ಪ್ರೇಮಾ ಆಯ್ಕೆಯಾಗಿದ್ದು, ಫೆ.೧೭ರ ಮಂಗಳವಾರ ಬೆಳಿಗ್ಗೆ ಅಧಿಕಾರ ಸ್ವೀಕರಿಸಲಿದ್ದಾರೆ.       ಮೊದಲ ಬಾರಿಗೆ ನಗರಸಭೆ ಸದಸ್ಯೆಯಾಗಿ ಆಯ್ಕೆಯಾಗಿರುವ ಕೆ.ಪಿ ಪ್ರೇಮಾ ಮೊದಲ ಬಾರಿಗೆ ಸ್ಥಾಯಿ ಸಮಿತಿ ಅಧ್ಯಕ್ಷರಾಗುತ್ತಿದ್ದಾರೆ. ಈ ಹಿಂದೆ ಇವರ ಪತಿ, ಛಲವಾದಿಗಳ ಸಮಾಜದ(ಪರಿಶಿಷ್ಟ ಜಾತಿ) ಮಾಜಿ ಅಧ್ಯಕ್ಷ ಬದರಿನಾರಾಯಣರವರು ೨ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ಒಂದು ಬಾರಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಇದೀಗ ಇವರ ಪತ್ನಿ ಅಧ್ಯಕ್ಷರಾಗುತ್ತಿರುವುದು ವಿಶೇಷವಾಗಿದೆ.       ನಗರಸಭೆ ಆಡಳಿತ ಕಾಂಗ್ರೆಸ್ ಪಕ್ಷ ಚುಕ್ಕಾಣಿ ಹಿಡಿದಿದ್ದು, ಇನ್ನೇನು ಕೆಲವೇ ಕೆಲವು ತಿಂಗಳು ಬಾಕಿ ಉಳಿದಿವೆ. ಶಾಸಕ ಬಿ.ಕೆ ಸಂಗಮೇಶ್ವರ್ ತೀರ್ಮಾನದಂತೆ ಕೆ.ಪಿ ಪ್ರೇಮಾ ಅವರನ್ನು ಸ್ಥಾಯಿ ಸಮಿತಿಗೆ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಪ್ರಸ್ತುತ ಸೈಯದ್ ರಿಯಾಜ್ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.  

ಹೊಸ ಸೇತುವೆ ಮರು ನಿರ್ಮಾಣ ಕಾರ್ಯಕ್ಕೆ ಸಿದ್ದತೆ : ಅಧಿಕಾರಿಗಳಿಂದ ಶಾಸಕರಿಗೆ ವಿವರಣೆ

Image
ಭದ್ರಾವತಿ ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಸಮೀಪದ ಹೊಸ ಸೇತುವೆ ಮರು ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿರುವ ಹಿನ್ನಲೆಯಲ್ಲಿ ಇನ್ನೇನು ಕಾಮಗಾರಿ ಆರಂಭಗೊಳ್ಳಲಿದ್ದು, ಈ ಸಂಬಂಧ ಸ್ಥಳಕ್ಕೆ ಸೋಮಾರ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಅಧಿಕಾರಿಗಳು ಸೇತುವೆ ರೂಪುರೇಷೆ ಕುರಿತು ವಿವರಿಸಿದರು.       ಭದ್ರಾವತಿ: ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಸಮೀಪದ ಹೊಸ ಸೇತುವೆ ಮರು ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿರುವ ಹಿನ್ನಲೆಯಲ್ಲಿ ಇನ್ನೇನು ಕಾಮಗಾರಿ ಆರಂಭಗೊಳ್ಳಲಿದ್ದು, ಈ ಸಂಬಂಧ ಸ್ಥಳಕ್ಕೆ ಸೋಮಾರ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಅಧಿಕಾರಿಗಳು ಸೇತುವೆ ರೂಪುರೇಷೆ ಕುರಿತು ವಿವರಿಸಿದರು.       ಈಗಿರುವ ಹೊಸ ಸೇತುವೆ ಎತ್ತರ ಕಡಿಮೆ ಹೊಂದಿದ್ದು, ಇದರಿಂದಾಗಿ ಪ್ರತಿವರ್ಷ ಮಳೆಗಾಲದಲ್ಲಿ ಸೇತುವೆ ಮುಳುಗಡೆಗೊಂಡು ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿವೆ. ಭದ್ರಾ ಜಲಾಶಯದಿಂದ ನದಿಗೆ ನೀರು ಬಿಟ್ಟ ಸಂದರ್ಭದಲ್ಲಿ ಸಮೀಪದ ಮನೆಗಳಿಗೆ ನುಗ್ಗುತ್ತಿದ್ದು, ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವುದು ಸವಾಲಿನ ಕೆಲಸವಾಗುತ್ತಿದೆ. ಅಲ್ಲದೆ ಸೇತುವೆ ಮುಳುಗಡೆಗೊಂಡ ಸಂದರ್ಭದಲ್ಲಿ ಸೇತುವೆ ಮೇಲಿನ ಸಂಚಾರ ಸ್ಥಗತಗೊಳಿಸಲಾಗುತ್ತಿದೆ. ...

ಶತಾಯುಷಿ ಜವರಯ್ಯ ನಿಧನ

Image
ಜವರಯ್ಯ    ಭದ್ರಾವತಿ: ಕುಣಿಗಲ್ ತಾಲೂಕಿನ ಎಡೆಯೂರು ಗ್ರಾಮದ ನಿವಾಸಿ, ಶತಾಯುಷಿ ಜವರಯ್ಯ ಶನಿವಾರ ನಿಧನ ಹೊಂದಿದರು.    ಇಬ್ಬರು ಪುತ್ರರು, ಮೂವರು ಪುತ್ರಿಯರು ಇದ್ದಾರೆ. ಇವರ ಅಂತ್ಯಕ್ರಿಯೆ ಎಡೆಯೂರು ಗ್ರಾಮದ ಅವರ ಜಮೀನಿನಲ್ಲಿ ಭಾನುವಾರ ಮಧ್ಯಾಹ್ನ ನೆರವೇರಿತು.    ಜವರಯ್ಯ ನಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ, ಪತ್ರಕರ್ತ ಅನಂತಕುಮಾರ್ ರವರ ತಾತ. ಇವರ ನಿಧನಕ್ಕೆ ನಗರದ ಗಣ್ಯರು, ಎಡೆಯೂರಿನ ಪ್ರಮುಖರು ಸಂತಾಪ ಸೂಚಿಸಿದ್ದಾರೆ.

ಸರ್.ಎಂ.ವಿ ಕಾಲೇಜಿನಲ್ಲಿ “ಸುರಕ್ಷತಾ ಜಾಗೃತಿ, ಕಾನೂನು ಸಾಕ್ಷರತಾ ತರಬೇತಿ” ಕಾರ್ಯಕ್ರಮ

Image
ಭದ್ರಾವತಿ ನಗರದ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಮಹಿಳಾ ಲೈಂಗಿಕ ದೌರ್ಜನ್ಯ ನಿರ್ಮೂಲನಾ ಮತ್ತು ಸಾಂತ್ವನಾ ಕೋಶ ಮತ್ತು ಮಹಿಳೆಯರ ಲೈಂಗಿಕ ಕಿರುಕುಳ ತಡೆಗಟ್ಟುವಿಕೆ ಸಮಿತಿ ಅಡಿಯಲ್ಲಿ ಮಹಾಜ್ಞಾನ್ ಇಂಟಲೆಕ್ಚುವಲ್ಸ್ ಪ್ರೈವೆಟ್ ಲಿಮಿಟೆಡ್ ಇವರ ಸಹ ಯೋಗದೊಂದಿಗೆ "ಸುರಕ್ಷತಾ ಜಾಗೃತಿ ಮತ್ತು ಕಾನೂನು ಸಾಕ್ಷರತಾ ತರಬೇತಿ" ಕಾರ್ಯಕ್ರಮ ಕಾಲೇಜಿನ ಆಂತರಿಕ ಗುಣಮಟ್ಟ ಕೋಶ ವತಿಯಿಂದ ಆಯೋಜಿಸಲಾಗಿತ್ತು. ಭದ್ರಾವತಿ: ನಗರದ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಮಹಿಳಾ ಲೈಂಗಿಕ ದೌರ್ಜನ್ಯ ನಿರ್ಮೂಲನಾ ಮತ್ತು ಸಾಂತ್ವನಾ ಕೋಶ ಮತ್ತು ಮಹಿಳೆಯರ ಲೈಂಗಿಕ ಕಿರುಕುಳ ತಡೆಗಟ್ಟುವಿಕೆ (POSH) ಸಮಿತಿ ಅಡಿಯಲ್ಲಿ ಮಹಾಜ್ಞಾನ್ ಇಂಟಲೆಕ್ಚುವಲ್ಸ್ ಪ್ರೈವೆಟ್ ಲಿಮಿಟೆಡ್ ( Mahajnan intellectuals Private limited) ಇವರ ಸಹ ಯೋಗದೊಂದಿಗೆ "ಸುರಕ್ಷತಾ ಜಾಗೃತಿ ಮತ್ತು ಕಾನೂನು ಸಾಕ್ಷರತಾ ತರಬೇತಿ" ಕಾರ್ಯಕ್ರಮ ಕಾಲೇಜಿನ ಆಂತರಿಕ ಗುಣಮಟ್ಟ ಕೋಶ (IQAC) ವತಿಯಿಂದ ಆಯೋಜಿಸಲಾಗಿತ್ತು.      ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಕರ್ನಾಟಕ ಉಚ್ಛ ನ್ಯಾಯಾಲಯದ ವಕೀಲೆ ಹರ್ಷಿತಾ ರಾಣಿ ಮಹೇಂದ್ರಕ್ ವಿಶೇಷ ಉಪನ್ಯಾಸ ನೀಡಿ,ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮತ್ತು ವೃತ್ತಿಪರ ವಾತಾವರಣದಲ್ಲಿ ಕಾನೂನಿನ ಅರಿವು, ಹಕ್ಕುಗಳು, ನಾಗರೀಕ ಹಕ್ಕು, ಪೋಕ್ಸೋ (POCSO) ಕಾಯಿದೆ. ಮಹ...

ಮಕ್ಕಳಿಗೆ ವಿದ್ಯೆ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಿಗೂ ಆದ್ಯತೆ ನೀಡಿ : ಬಿ.ಕೆ ಸಂಗಮೇಶ್ವರ್

Image
ಭದ್ರಾವತಿ ಹೊಸ ಸೇತುವೆ ರಸ್ತೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆ ಆಶ್ರಿತದ ವಿಶ್ವೇಶ್ವರಾಯ ವಿದ್ಯಾಸಂಸ್ಥೆ ಶಾಲಾ ವಾರ್ಷಿಕೋತ್ಸವ ವಿಇಎಸ್ ಸಾಂಸ್ಕೃತಿಕ ಸಂಭ್ರಮ ಶನಿವಾರ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.       ಭದ್ರಾವತಿ: ಮಕ್ಕಳು ದುಶ್ಚಟಗಳಿಗೆ ಬಲಿಯಾಗದಂತೆ ತಡೆಯಲು ಅವರನ್ನು ವಿದ್ಯೆ ಜೊತೆಗೆ ಕ್ರೀಡೆ ಹಾಗು ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳುವಂತೆ ಮಾಡಬೇಕೆಂದು ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು.       ಅವರು ಶನಿವಾರ ಹೊಸ ಸೇತುವೆ ರಸ್ತೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆ ಆಶ್ರಿತದ ವಿಶ್ವೇಶ್ವರಾಯ ವಿದ್ಯಾಸಂಸ್ಥೆ ಶಾಲಾ ವಾರ್ಷಿಕೋತ್ಸವ ವಿಇಎಸ್ ಸಾಂಸ್ಕೃತಿಕ ಸಂಭ್ರಮ ಉದ್ಘಾಟಿಸಿ ಮಾತನಾಡಿದರು.       ಸಮಾಜದಲ್ಲಿ ಮಕ್ಕಳಿಗೆ ವಿದ್ಯೆ ಮತ್ತು ಜ್ಞಾನ ಅತ್ಯಂತ ಅವಶ್ಯಕವಾಗಿದೆ. ಮಕ್ಕಳು ಈ ಮೂಲಕ ತಮ್ಮ ಮುಂದಿನ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಪ್ರಪಂಚದಲ್ಲಿ ಎಲ್ಲಿ ಬೇಕಾದರೂ ಸ್ವತಂತ್ರ್ಯವಾಗಿ ಬದುಕಬಹುದು. ಈ ಹಿನ್ನಲೆಯಲ್ಲಿ ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ಗಮನ ಹರಿಸಬೇಕೆಂದರು.       ದೇಶದ ಇತರೆ ಯಾವ ರಾಜ್ಯದಲ್ಲೂ ಸಹ ಸರ್ಕಾರಿ ನೌಕರರು...

ಮಹಿಳೆಯರು ತಮ್ಮಲ್ಲಿನ ಶಕ್ತಿಯನ್ನು ಜಾಗೃತಿಗೊಳಿಸಿಗೊಳ್ಳಬೇಕಿದೆ : ಜ್ಯೋತಿ ಬಸವರಾಜ್

Image
ಭದ್ರಾವತಿ ಕೇಶವಪುರ ಬಡಾವಣೆ ತರುಣ ಭಾರತಿ ವಿದ್ಯಾಕೇಂದ್ರದಲ್ಲಿ ಶನಿವಾರ ಆಯೋಜಿಸಲಾಗಿದ್ದ ಸಪ್ತಶಕ್ತಿ ಸಂಗಮ `ಮಾತೆಯರ ಸಮಾವೇಶ'ದಲ್ಲಿ  ರಂಗಭೂಮಿ ಕ್ಷೇತ್ರದ ಸಾಧಕಿ ನಂದಿನಿ ಮಲ್ಲಿಕಾರ್ಜುನ, ನೃತ್ಯ ಕ್ಷೇತ್ರದ ಸಾಧಕಿ ಪುಷ್ಪ ಕೃಷ್ಣಮೂರ್ತಿ ಮತ್ತು ಸಂಗೀತ ಕ್ಷೇತ್ರದ ಸಾಧಕಿ ಡಿ.ಎಸ್ ಗಾಯಿತ್ರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.       ಭದ್ರಾವತಿ: ಮಹಿಳೆ ಇಲ್ಲದ ಸಮಾಜ, ಮನೆ ಕಲ್ಪಿಸಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ಮಹಳೆಯರಲ್ಲಿ ಅಪಾರವಾದ ಶಕ್ತಿಯಿದ್ದು, ಇದನ್ನು ಮಹಿಳೆಯರು ತಮ್ಮಲ್ಲಿ ಜಾಗೃತಿಗೊಳಿಸಿಗೊಳ್ಳಬೇಕಾಗಿದೆ ಎಂದು ಶಿವಮೊಗ್ಗ ಬಾಲಗೋಕುಲ ಸಂಯೋಜಕಿ ಜ್ಯೋತಿ ಬಸವರಾಜ್ ಹೇಳಿದರು.       ಅವರು ನಗರದ ಕೇಶವಪುರ ಬಡಾವಣೆ ತರುಣ ಭಾರತಿ ವಿದ್ಯಾಕೇಂದ್ರದಲ್ಲಿ ಶನಿವಾರ ಆಯೋಜಿಸಲಾಗಿದ್ದ ಸಪ್ತಶಕ್ತಿ ಸಂಗಮ `ಮಾತೆಯರ ಸಮಾವೇಶ'ದಲ್ಲಿ  ದಿಕ್ಸೂಚಿ ಭಾಷಣಕಾರರಾಗಿ ಆಗಮಿಸಿ ಮಾತನಾಡಿದರು.       ಮಹಿಳೆ ಮಾತೃ ಸ್ವರೂಪಿಯಾಗಿ, ಕುಟುಂಬದ ಆಧಾರಸ್ತಂಭವಾಗಿ ಮಾತ್ರವಲ್ಲದೆ ಉತ್ತಮ ಸಮಾಜ ನಿರ್ಮಾಣದ ಶಕ್ತಿಯಾಗಿ ತನ್ನನ್ನು ಸಮರ್ಪಿಸಿಕೊಳ್ಳುವಷ್ಟು ಅಪಾರವಾದ ಶಕ್ತಿ ಹೊಂದಿದ್ದಾರೆ. ಪ್ರಸ್ತುತ ಮಹಿಳೆಯರು ತಮ್ಮಲ್ಲಿನ ಶಕ್ತಿಯನ್ನು ಜಾಗೃತಿಗೊಳಿಸಿಕೊಳ್ಳಬೇಕಾಗಿದೆ ಎಂದರು.         ರಂಗಭೂಮಿ ಕ್ಷೇತ್ರದ ಸಾಧಕಿ ನಂದಿನಿ ಮ...

ಗಂಡನ ಮನೆಯವರ ಕಿರುಕುಳ ತಾಳಲಾರದೆ ಗೃಹಿಣಿ ಆತ್ಮಹತ್ಯೆ ಪ್ರಕರಣ

Image
೫ ಮಂದಿಗೆ ೩ ವರ್ಷ ಜೈಲು ಶಿಕ್ಷೆ, ೧.೫೦ ಲಕ್ಷ ರು. ದಂಡ  ಮಾನಸಿಕ ಹಾಗು ದೈಹಿಕ ಹಿಂಸೆಯಿಂದ ಗೃಹಿಣಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷೆಗೆ ಒಳಗಾಗಿರುವ ೫ ಮಂದಿ.       ಭದ್ರಾವತಿ : ಮಾನಸಿಕ ಹಾಗು ದೈಹಿಕ ಹಿಂಸೆಯಿಂದ ಗೃಹಿಣಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ೫ ಮಂದಿಗೆ ೩ ವರ್ಷ ಕಠಿಣ ಜೈಲು ಶಿಕ್ಷೆ ಹಾಗು ೧.೫೦ ಲಕ್ಷ ರು. ದಂಡವಿಧಿಸಿ ೪ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ಯ ನ್ಯಾಯಾಲಯ ತೀರ್ಪು ನೀಡಿದೆ.       ಪ್ರೇಮಾ ಎಂಬುವರು ತನ್ನ ಮಕ್ಕಳೊಂದಿಗೆ ತಾಲೂಕಿನ ಸಂಕ್ಲಿಪುರ ಗ್ರಾಮದ ಗಂಡನ ಮನೆಯಲ್ಲಿ ವಾಸವಿದ್ದರು. ಈಕೆಯಿಂದ ಮಕ್ಕಳನ್ನು ದೂರವಿಟ್ಟು ಗಂಡ ಹಾಗೂ ಗಂಡನ ಮನೆಯವರು ತವರು ಮನೆಗೆ ಹೋಗುವಂತೆ ಮಾನಸಿಕ ಹಾಗು ದೈಹಿಕ ಹಿಂಸೆ ನೀಡುತ್ತಿದ್ದರು. ಈ ಹಿನ್ನಲೆಯಲ್ಲಿ ತವರು ಮನೆಗೆ ಹೋಗಿದ್ದ ಪ್ರೇಮ ಮಾನಸಿಕವಾಗಿ ನೊಂದು ೨೬-೦೩-೨೦೧೭ ರಂದು ವಿಷ ಸೇವಿಸಿದ್ದು, ಈಕೆಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ೦೭/೦೪/೨೦೧೭ರಂದು ಮೃತಪಟ್ಟಿದ್ದರು.  ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.  ಪ್ರಕರಣದ ಆಗಿನ ತನಿಖಾಧಿಕಾರಿಯಾಗಿದ್ದ  ಸಹಾಯಕ ಠಾಣಾ ನಿರೀಕ್ಷಕ ನಿಜಾಮ್‌ರವರು ಪ್ರಕರಣದ ತನಿಖೆ ಪೂರೈಸಿ, ನ್ಯಾಯಾಲಯಕ್ಕೆ ದೋಷಾರೋಪ...

ಮಹಾಶಿವರಾತ್ರಿ : ಹೊಸಮನೆ ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು

Image
   ಭದ್ರಾವತಿ : ಹೊಸಮನೆ, ಎನ್.ಎಂ.ಸಿ ಎಡಭಾಗದ ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನದಲ್ಲಿ ಫೆ.೧೪ ರಿಂದ ಫೆ.೧೭ರವರೆಗೆ ಮಹಾಶಿವರಾತ್ರಿ ಹಬ್ಬದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.      ಶನಿವಾರ ಬೆಳಿಗ್ಗೆ ರುದ್ರಪಾರಾಯಣದೊಂದಿಗೆ ರುದ್ರಹೋಮ, ಮಧ್ಯಾಹ್ನ ಪೂರ್ಣಾಹುತಿಯೊಂದಿಗೆ ಮಹಾಮಂಗಳಾರತಿ ನಡೆಯಿತು. ಫೆ.೧೫ರ ರಾತ್ರಿ ಚಿಕ್ಕಮಗಳೂರು ಹಿಂದೂ ಸಾಮಾಜಿಕ ಕಾರ್ಯಕರ್ತ ಪುಣ್ಯಪಾಲ್ ಅವರಿಂದ ಮುಖ್ಯ ಭಾಷಣ ನಡೆಯಲಿದ್ದು, ನಂತರ ಕೇಶವಪುರ ಬಡಾವಣೆಯ ಕದಳಿ ವೇದಿಕೆ, ಶ್ರೀ ಕೃಷ್ಣ ಸತ್ಸಂಗ, ಜ್ಞಾನ ವಾಹಿನಿ, ಧರ್ಮಶಾಸ್ತ್ರ ಭಜನ ಮಂಡಳಿ ಹಾಗು ಶ್ರೀ ಮಲ್ಲಿಕಾರ್ಜುನ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ಹಾಗು ಶಿವಡ್ಯಾನ್ಸ್‌ರವರಿಂದ ನೃತ್ಯ ಹಾಗು ಶಿವಮೊಗ್ಗ `ಪ್ರೀತಮ್ ಮತ್ತು ತಂಡ'ದವರಿಂದ ಭಕ್ತಿಗೀತೆ ಕಾರ್ಯಕ್ರಮಗಳು ಜರುಗಲಿವೆ.      ಸಂಜೆ ೬.೧೫ ರಿಂದ ೯.೧೫ರವರೆಗೆ ಪ್ರಥಮಯಾಮ ಪೂಜೆ, ರುದ್ರಪಾರಾಯಣದೊಂದಿಗೆ ಹೂವಿನ ಅಲಂಕಾರ. ರಾತ್ರಿ ೯.೩೦ ರಿಂದ ೧೨.೩೦ರವರೆಗೆ ದ್ವಿತೀಯಯಾಮ ಪೂಜೆ, ಹಾಲಿನ ಅಭಿಷೇಕದೊಂದಿಗೆ ರುದ್ರಾಕ್ಷಿ ಅಲಂಕಾರ'. ರಾತ್ರಿ ೧೨.೪೫ ರಿಂದ ೩.೪೫ರವರೆಗೆ ತೃತೀಯಯಾಮ ಪೂಜೆ, ಗಂಧದ ಅಭಿಷೇಕದೊಂದಿಗೆ ರುದ್ರಾಕ್ಷಿ ಅಲಂಕಾರ ಹಾಗು ಬೆಳಿಗ್ಗೆ ೪ ರಿಂದ ೬ರವರೆಗೆ ಚತುರ್ಥಯಾಮ ಪೂಜೆ, ಎಳನೀರು ಅಭಿಷೇಕದೊಂದಿಗೆ ಪುಷ್ಪ ಅಲಂಕಾರ ನಡೆಯಲಿದೆ. ಫೆ.೧೬ರ ಮಧ್ಯಾಹ್ನ ೧೨...

ಮೂಲ ಸೌಕರ್ಯ ಕಲ್ಪಿಸಿ, ಹೊಸದಾಗಿ ೧೮ ಮಕ್ಕಳನ್ನು ದಾಖಲಿಸಿ ಸರ್ಕಾರಿ ಶಾಲೆ ಉಳಿಸಿಕೊಳ್ಳಲಾಯಿತು : ಸೈಯದ್ ಆಸಿಫ್

Image
ಭದ್ರಾವತಿ ಜಟ್‌ಪಟ್ ನಗರ ಆಶ್ರಯ ಬಡಾವಣೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಸೈಯದ್ ಆಸಿಫ್ ಮತ್ತು ಶಿಕ್ಷಕ ಜೆ. ಮಂಜುನಾಥ್ ಅವರಿಗೆ ಬೀಳ್ಕೊಡುಗೆ ನೀಡಲಾಯಿತು.       ಭದ್ರಾವತಿ : ಕೇವಲ ೬ ಮಕ್ಕಳ ದಾಖಲಾತಿ ಹೊಂದುವ ಮೂಲಕ ಮುಚ್ಚುವ ಸ್ಥಿತಿ ತಲುಪಿದ್ದ ಜಟ್‌ಪಟ್ ನಗರ ಆಶ್ರಯ ಬಡಾವಣೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಸಹಕಾರ ಹಾಗು ಪರಿಶ್ರಮದಿಂದ ಉಳಿಸಿಕೊಳ್ಳಲಾಯಿತು. ಭವಿಷ್ಯದಲ್ಲಿ ಈ ಶಾಲೆ ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಹೊಂದುವ ಮೂಲಕ ಮಾದರಿಯಾಗಬೇಕೆಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸೈಯದ್ ಆಸಿಫ್ ಹೇಳಿದರು.       ಅವರು ಶಾಲೆಯಲ್ಲಿ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿ,  ಈ ಶಾಲೆಯಲ್ಲಿ ೨೦೨೪-೨೫ರ ಸಾಲಿನಲ್ಲಿ ಕೇವಲ ೬ ಮಕ್ಕಳು ದಾಖಲಾಗಿದ್ದರು. ಈ ಸಂದರ್ಭದಲ್ಲಿ ಶಾಲೆಯನ್ನು ಮುಚ್ಚಲು ಆಶ್ರಯ ಬಡಾವಣೆಯಲ್ಲಿ ಗುಸು ಗುಸು ಚರ್ಚೆ ನಡೆಯುತ್ತಿತ್ತು. ಇಂತಹ ಸಂಕಷ್ಟದ ಸಮಯದಲ್ಲಿ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಶಾಲೆಗೆ ಅನುದಾನ ಬಿಡುಗಡೆಗೊಳಿಸಿದರು. ಅಲ್ಲದೆ ಈ ಭಾಗದ ನಗರಸಭಾ ಸದಸ್ಯ ಬಿ.ಎಂ ಮಂಜುನಾಥ್( ಟೀಕು) ಹೆಚ್ಚಿನ ಸಹಕಾರ ನೀಡಿದ ಹಿನ್ನಲೆಯಲ್ಲಿ ಶಾಲೆಯ ಮೂಲಬೋತ ಸೌಕರ್ಯಗಳಾದ ಕುಡಿಯುವ ನೀರು, ವ...

ಮತದಾರರಪಟ್ಟಿ ತೀವ್ರ ಪರಿಷ್ಕರಣೆ ಕಾರ್ಯದಲ್ಲಿ ಬಿಎಲ್‌ಎ-೨ ಪಾತ್ರ ಮುಖ್ಯ : ಎನ್.ಕೆ ಜಗದೀಶ್

Image
ಮತದಾರರಪಟ್ಟಿ ತೀವ್ರ ಪರಿಷ್ಕರಣೆ ಕಾರ್ಯ(ಎಸ್‌ಐಆರ್-ಸ್ಪೆಷಲ್ ಇಂಟೆನ್ಸಿವ್ ರಿವೈಸ್) ಕುರಿತು ಭದ್ರಾವತಿಯಲ್ಲಿ ಭಾರತೀಯ ಜನತಾ ಪಕ್ಷದ ನಗರ ಹಾಗೂ ಗ್ರಾಮಾಂತರ ಮಂಡಲ ವತಿಯಿಂದ ಪಕ್ಷದ ಕಛೇರಿಯಲ್ಲಿ ಆಯೋಜಿಸಲಾಗಿದ್ದ ಬಿಎಲ್‌ಎ-೨ ಕಾರ್ಯಗಾರದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಎನ್.ಕೆ ಜಗದೀಶ್ ಪಾಲ್ಗೊಂಡು ಮಾತನಾಡಿದರು.      ಭದ್ರಾವತಿ : ಮತದಾರರಪಟ್ಟಿ ತೀವ್ರ ಪರಿಷ್ಕರಣೆ ಕಾರ್ಯ(ಎಸ್‌ಐಆರ್-ಸ್ಪೆಷಲ್ ಇಂಟೆನ್ಸಿವ್ ರಿವೈಸ್)ದಲ್ಲಿ  ಬಿಎಲ್‌ಎ-೨ ಪಾತ್ರ ಮುಖ್ಯವಾಗಿದ್ದು, ಮತದಾರರಿಗೆ ಎಸ್‌ಐಆರ್ ಕುರಿತು ಜಾಗೃತಿ ಮೂಡಿಸಬೇಕೆಂದು ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷ ಎನ್.ಕೆ ಜಗದೀಶ್ ಕರೆ ನೀಡಿದರು.      ಅವರು ನಗರ ಹಾಗೂ ಗ್ರಾಮಾಂತರ ಮಂಡಲ ವತಿಯಿಂದ ಪಕ್ಷದ ಕಛೇರಿಯಲ್ಲಿ ಆಯೋಜಿಸಲಾಗಿದ್ದ ಬಿಎಲ್‌ಎ-೨ ಕಾರ್ಯಗಾರದಲ್ಲಿ ಪಾಲ್ಗೊಂಡು ಮಾತನಾಡಿದರು.  ಚುನಾವಣಾ ಆಯೋಗದ ಈ ಪ್ರಕ್ರಿಯೆಯನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ವಿರೋಧಿಸುತ್ತಿದೆ. ಮತದಾರರಪಟ್ಟಿ ಪರಿಷ್ಕರಣಿ ಹಕ್ಕನ್ನು ಸಂವಿಧಾನವೇ ಚುನಾವಣಾ ಆಯೋಗಕ್ಕೆ ನೀಡಿದ್ದು. ಇದನ್ನು ಯಾರು ಪ್ರಶ್ನಿಸುವಂತಿಲ್ಲ ಎಂಬುದಾಗಿ ನ್ಯಾಯಾಲಯ ಆದೇಶ ನೀಡಿದೆ ಎಂದರು.       ಮತ ಚಲಾಯಿಸುವುದು ಭಾರತೀಯ ನಾಗರೀಕರ ಹಕ್ಕು. ದೇಶದ ಭವಿಷ್ಯಕ್ಕಾಗಿ, ಮುಂದಿನ ಪೀಳಿಗೆ ಸುರಕ್ಷತೆಗಾಗಿ ಮತದಾನ ಅತ್ಯಂತ ಅವಶ್ಯಕ. ಇದರಿಂದ ಯಾರು ವಂಚಿತರಾ...

ಫೆ.೧೬ರಂದು ಬಿಇಓ ಕಛೇರಿ ಮುಂಭಾಗ ಧರಣಿ ಸತ್ಯಾಗ್ರಹ

Image
     ಭದ್ರಾವತಿ : ಹಳೇನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸಮೀಪದ ಹಲವಾರು ವರ್ಷಗಳಿಂದ ಕಸದ ಕೊಂಪೆಯಂತಿರುವ ಖಾಲಿ ಜಾಗದಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಉದ್ಯಾನವನ ನಿರ್ಮಿಸುವಂತೆ ಆಗ್ರಹಿಸಿ ಫೆ.೧೬ರಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮುಂಭಾಗ ಮಾನವ ಹಕ್ಕುಗಳ ಹೋರಾಟ ಸಮಿತಿಯಿಂದ ಪ್ರತಿಭಟನಾ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.       ಡಾ. ಬಿ.ಆರ್ ಅಂಬೇಡ್ಕರ್ ಭವನದ ಆವರಣದ ಪಕ್ಕದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಹಿಂಭಾಗ ಬಸವೇಶ್ವರ ವೃತ್ತಕ್ಕೆ ಸಂಪರ್ಕಗೊಂಡಿರುವ ಮುಖ್ಯ ರಸ್ತೆಯಲ್ಲಿ ಹಲವಾರು ವರ್ಷಗಳಿಂದ ಖಾಲಿ ಜಾಗವಿದ್ದು, ಈ ಜಾಗದಲ್ಲಿ ಗಿಡಗಂಟಿಗಳು ಬೆಳೆದಿವೆ. ಕಸಕಡ್ಡಿ, ತ್ಯಾಜದಿಂದ ಕೂಡಿರುವ ಜಾಗ ಸ್ಮಶಾನದಂತೆ ಗೋಚರಿಸುತ್ತಿದೆ. ಈ ಜಾಗವನ್ನು ಖಾಸಗಿ ವ್ಯಕ್ತಿಗಳು ಕಬಳಿಸಲು ಹುನ್ನಾರ ನಡೆಸುತ್ತಿದ್ದು, ಇದನ್ನು ಸಮಿತಿ ಖಂಡಿಸುತ್ತದೆ. ಯಾವುದೇ ಕಾರಣಕ್ಕೂ ಖಾಸಗಿ ವ್ಯಕ್ತಿಗಳಿಗೆ ಖಾಲಿ ಜಾಗ ನೀಡಬಾರದು. ಈ ಜಾಗದಲ್ಲಿ ಮಕ್ಕಳಿಗೆ ಉದ್ಯಾನವನ ನಿರ್ಮಿಸಬೇಕೆಂದು ಆಗ್ರಹಿಸಿ ಹೋರಾಟ ನಡೆಸಲಾಗುತ್ತಿದೆ.       ಫೆ.೧೬ರ ಬೆಳಿಗ್ಗೆ ೧೧ ಗಂಟೆಗೆ  ಸತ್ಯಾಗ್ರಹ ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸುವಂತೆ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಕೋರಿದ್ದಾರೆ. 

ಫೆ.೧೪ರಂದು ವಿಇಎಸ್ ಸಾಂಸ್ಕೃತಿಕ ಸಂಭ್ರಮ

Image
   ಭದ್ರಾವತಿ : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ತಾಲೂಕು ಶಾಖೆ ಆಶ್ರಿತದ ನಗರದ ಹೊಸ ಸೇತುವೆ ರಸ್ತೆಯ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯ ವಿಇಎಸ್ ಸಾಂಸ್ಕೃತಿಕ ಸಂಭ್ರಮ ಫೆ.೧೪ರಂದು ಸಂಜೆ ೫ ಗಂಟೆಗೆ ನಡೆಯಲಿದೆ.     ವಿಶ್ವೇಶ್ವರಾಯ ಕನ್ನಡ ಮತ್ತು ಆಂಗ್ಲ ಪೂರ್ವ ಪ್ರಾಥಮಿಕ ಶಾಲೆ, ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗು ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜು ಮತ್ತು ವಿಶ್ವೇಶ್ವರಾಯ ಬಿ.ಇಡಿ ಕಾಲೇಜು ಸಹಯೋಗದೊಂದಿಗೆ ಸಾಂಸ್ಕೃತಿ ಸಂಭ್ರಮ ವಿಶ್ವೇಶ್ವರಾಯ ವಿದ್ಯಾಸಂಸ್ಥೆ ಅವರಣದಲ್ಲಿ ಹಮ್ಮಿಕೊಳ್ಳಲಾಗಿದೆ.     ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಲಿದ್ದು, ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕಿ ಶಾರದಪೂರ್‍ಯಾನಾಯ್ಕ, ವಿಧಾನ ಪರಿಷತ್ ಸದಸ್ಯೆ ಬಲ್ಕೀಷ್ ಬಾನು, ವಿದ್ಯಾಸಂಸ್ಥೆ ಮಹಾಪೋಷಕ ಸಿ.ಎಸ್ ಷಡಾಕ್ಷರಿ, ಜಿಲ್ಲಾಧಿಕಾರಿ ಪ್ರಭುಲಿಂಗ ಕವಲಿಕಟ್ಟೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್. ಹೇಮಂತ್, ನಗರಸಭೆ ಅಧ್ಯಕ್ಷೆ ಗೀತಾ ರಾಜಕುಮಾರ್, ಉಪಾಧ್ಯಕ್ಷ ಬಷೀರ್ ಅಹಮದ್, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ರಿಯಾಜ್, ನಗರ ಆಶ್ರಯ ಸಮಿತಿ ಅಧ್ಯಕ್ಷ ಬಿ.ಎಸ್ ಗೋಪಾಲ್, ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಮಿತಿ ತಾಲೂಕು ಅಧ್ಯಕ್ಷ ಬಿ.ಎಸ್ ಗಣೇಶ್, ಬಗರ...

ರೇಡಿಯೋ ಕಿಸಾನ್ ದಿವಸ್ ಹಿನ್ನಲೆಯಲ್ಲಿ ಪ್ರಗತಿಪರ ಕೃಷಿಕ ಭಂಡಾರಹಳ್ಳಿ ಶ್ರೀಧರ್‌ಗೆ ಸನ್ಮಾನ

Image
ಭದ್ರಾವತಿ ತಾಲೂಕಿನ ಹಳ್ಳಿಕೆರೆ ಜಿಲ್ಲಾ ಕೃಷಿ ತರಬೇತಿ ಕೇಂದ್ರ ಹಾಗು ಶಿವಮೊಗ್ಗ ಕೃಷಿ ತಂತ್ರಜ್ಞರ ಸಂಸ್ಥೆ ಸಹಯೋಗದೊಂದಿಗೆ ಭದ್ರಾವತಿ ಆಕಾಶವಾಣಿ ಕೇಂದ್ರದಿಂದ ಫೆ.೧೫ರಂದು ರೇಡಿಯೋ ಕಿಸಾನ್ ದಿವಸದ ಹಿನ್ನಲೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ತಾಲೂಕಿನ ಪ್ರಗತಿಪರ ಕೃಷಿಕ ಭಂಡಾರಹಳ್ಳಿ ಶ್ರೀಧರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.       ಭದ್ರಾವತಿ: ತಾಲೂಕಿನ ಹಳ್ಳಿಕೆರೆ ಜಿಲ್ಲಾ ಕೃಷಿ ತರಬೇತಿ ಕೇಂದ್ರ ಹಾಗು ಶಿವಮೊಗ್ಗ ಕೃಷಿ ತಂತ್ರಜ್ಞರ ಸಂಸ್ಥೆ ಸಹಯೋಗದೊಂದಿಗೆ ಭದ್ರಾವತಿ ಆಕಾಶವಾಣಿ ಕೇಂದ್ರದಿಂದ ಫೆ.೧೫ರಂದು ರೇಡಿಯೋ ಕಿಸಾನ್ ದಿವಸದ ಹಿನ್ನಲೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ತಾಲೂಕಿನ ಪ್ರಗತಿಪರ ಕೃಷಿಕ ಭಂಡಾರಹಳ್ಳಿ ಶ್ರೀಧರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.       ೨೦೦೪ರಲ್ಲಿ ದೇಶಾದ್ಯಂತ ಕಿಸಾನ್ ವಾಣಿ ಕಾರ್ಯಕ್ರಮ ಫೆ.೧೫ರಂದು ಪ್ರಾರಂಭಿಸಿದ ಸವಿನೆನಪಿಗಾಗಿ ಪ್ರತಿ ವರ್ಷ ಫೆ.೧೫ ರೇಡಿಯೋ ಕಿಸಾನ್ ದಿವಸ ಆಚರಿಸಿಕೊಂಡು ಬರಲಾಗುತ್ತಿದೆ. ಈ ಬಾರಿ ರೈತರ ಸಬಲೀಕರಣ, ಯುವ ರೈತರನ್ನು ಪ್ರೋತ್ಸಾಹಿಸಲು ಮತ್ತು ಆಧುನಿಕ ಕೃಷಿ ಪದ್ದತಿ ಪ್ರೋತ್ಸಾಹಿಸುವ ಧ್ಯೇಯವಾಕ್ಯ ಹೊಂದಲಾಗಿದೆ.       ಹಳ್ಳಿಕೆರೆ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು ಜಿಲ್ಲೆಯ ಸುಮಾರ...

ಭೂ ದಾಖಲೆಗಳನ್ನು ನೀಡುವ ಕಾರ್ಯದಲ್ಲಿ ವಿಳಂಬ : ಸಚಿವರಿಗೆ ಮನವಿ

Image
ಭೂ ದಾಖಲೆಗಳನ್ನು   ನೀಡುವ ಕಾರ್ಯದಲ್ಲಿ ವಿಳಂಬವಾಗುತ್ತಿದ್ದು ,   ಕಂದಾಯ ಇಲಾಖೆ   ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಬೇಕೆಂದು   ಭದ್ರಾವತಿ    ಪಿ . ಎಲ್ . ಡಿ   ಬ್ಯಾಂಕ್   ಅಧ್ಯಕ್ಷ ಬಿ . ಕೆ ಶಿವಕುಮಾರ್ ಕಂದಾಯ ಇಲಾಖೆ ಸಚಿವ ಕೃಷ್ಣ ಭೈರೇಗೌಡ   ಅವರಿಗೆ ಮನವಿ ಸಲ್ಲಿಸಿದ್ದಾರೆ .      ಭದ್ರಾವತಿ : ಭೂ ದಾಖಲೆಗಳನ್ನು ನೀಡುವ ಕಾರ್ಯದಲ್ಲಿ ವಿಳಂಬವಾಗುತ್ತಿದ್ದು , ಇದರಿಂದಾಗಿ  ರೈತರಿಗೆ ಸಾಕಷ್ಟು ಸಮಸ್ಯೆ ಉಂಟಾಗುತ್ತಿದೆ .  ಕಂದಾಯ ಇಲಾಖೆ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಬೇಕೆಂದು  ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್  ( ಪಿ . ಎಲ್ . ಡಿ ಬ್ಯಾಂಕ್ ) ಅಧ್ಯಕ್ಷ ಬಿ . ಕೆ ಶಿವಕುಮಾರ್ ಕಂದಾಯ ಇಲಾಖೆ ಸಚಿವ ಕೃಷ್ಣ ಭೈರೇಗೌಡ ಅವರಿಗೆ ಮನವಿ ಸಲ್ಲಿಸಿದ್ದಾರೆ .      ಸರ್ಕಾರದ ಅಧಿಕೃತ ಭೂಮಿ ತಂತ್ರಾಂಶದಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿದ್ದು , ಇದರಿಂದಾಗಿ   ರೈತರು ಖಾತೆ , ಪಹಣಿ ಸೇರಿದಂತೆ ಭೂ ದಾಖಲೆಗಳನ್ನು ಪಡೆಯಲು ತಾಲೂಕು ಕಚೇರಿ ಅಲೆದಾಡುವಂತಾಗಿದೆ . ರೈತರು ಸಾಲ ಸೌಲಭ್ಯ , ಬೆಳೆವಿಮೆ ಸೇರಿದಂತೆ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ . ತಕ್ಷಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಬೇಕು ಮನವಿ...

ಫೆ.೧೭ರಂದು ದಿವಂಗತ ಕಾಮ್ರೇಡ್ ಡಿ.ಸಿ ಮಾಯಣ್ಣರಿಗೆ ನುಡಿನಮನ

Image
ಡಿ.ಸಿ ಮಾಯಣ್ಣ    ಭದ್ರಾವತಿ : ಹಿರಿಯ ರಾಜಕೀಯ ಮುತ್ಸದಿ, ಕಾರ್ಮಿಕರ ಧ್ವನಿಯಾಗಿ ಅವರ ಹಕ್ಕುಗಳಿಗಾಗಿ, ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಜನ ವಿರೋಧಿ ನಿಲುವುಗಳ ವಿರುದ್ಧ ಮತ್ತು ಕೋಮು ಸಂಘರ್ಷಗಳ ವಿರುದ್ಧ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರುವ ಮೂಲಕ ಹೋರಾಟದ ಬಹು ದೊಡ್ಡ ಶಕ್ತಿಯಾಗಿದ್ದ ಕಾಮ್ರೇಡ್ ಡಿ.ಸಿ ಮಾಯಣ್ಣನವರಿಗೆ ಗೌರವ ಪೂರ್ವಕ ನುಡಿನಮನಗಳನ್ನು ಸಲ್ಲಿಸಲು ನಗರದ ಪ್ರಗತಿಪರ ಸಂಘಟನೆಗಳ ಒಕ್ಕೂಟ ಮುಂದಾಗಿದೆ.      ಸತತ ಸುಮಾರು ೬-೭ ದಶಕಗಳ ಕಾಲ ಹೋರಾಟ ಶಕ್ತಿಯಾಗಿದ್ದ ಡಿ.ಸಿ ಮಾಯಣ್ಣನವರು ಇತ್ತೀಚೆಗೆ ತಮ್ಮ ೯೩ನೇ ವಯಸ್ಸಿನಲ್ಲಿ ನಿಧನರಾಗಿದ್ದು, ಪ್ರಗತಿಪರ ಸಂಘಟನೆಗಳ ಒಕ್ಕೂಟ ಇವರ ನಿಧನಕ್ಕೆ ಶ್ರದ್ದಾಂಜಲಿ ಸಲ್ಲಿಸುವ ಮೂಲಕ ಫೆ. ೧೭ರಂದು ಬೆಳಿಗ್ಗೆ ೧೦ ಗಂಟೆಗೆ ನಗರದ ಬಿ.ಎಚ್ ರಸ್ತೆ, ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ `ನುಡಿ ನಮನ' ಕಾರ್ಯಕ್ರಮ ಆಯೋಜಿಸಿದೆ.     ಕಾರ್ಯಕ್ರಮವನ್ನು ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಲಿದ್ದು, ಒಕ್ಕೂಟದ ಅಧ್ಯಕ್ಷ ಪ್ರೊ. ಎಂ. ಚಂದ್ರಶೇಖರಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಬಿ.ವೈ ರಾಘವೇಂದ್ರ, ಸಾಮಾಜಿಕ ಚಿಂತಕ, ಅಂಕಣಕಾರ ಶಿವಸುಂದರ್. ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯಾಧ್ಯಕ್ಷ ಎಚ್.ಆರ್ ಬಸವರಾಜಪ್ಪ, ಚಲನಚಿತ್ರ ನಟ, ವಿಚಾರವಾದಿ ಚೇತನ್ ಅಹಿಂಸಾ, ಡಿಎಸ...

ಬಿ.ಎಚ್ ರಸ್ತೆ ರೈಲ್ವೆ ಅಂಡರ್‌ಬ್ರಿಡ್ಜ್ ಬಳಿ ಬೆಂಕಿ : ವಿಐಎಸ್‌ಎಲ್ ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ

Image
ಜನನಿಬಿಡ ಪ್ರದೇಶವಾದ ಭದ್ರಾವತಿ ನಗರದ ಬಿ.ಎಚ್ ರಸ್ತೆ, ರೈಲ್ವೆ ಅಂಡರ್ ಬ್ರಿಡ್ಜ್ ಬಳಿ ಬುಧವಾರ ಬೆಳಿಗ್ಗೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ವಿಐಎಸ್‌ಎಲ್ ಕಾರ್ಖಾನೆ ಅಗ್ನಿಶಾಮಕ ದಳ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.      ಭದ್ರಾವತಿ : ಜನನಿಬಿಡ ಪ್ರದೇಶವಾದ ನಗರದ ಬಿ.ಎಚ್ ರಸ್ತೆ, ರೈಲ್ವೆ ಅಂಡರ್ ಬ್ರಿಡ್ಜ್ ಬಳಿ ಬುಧವಾರ ಬೆಳಿಗ್ಗೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ವಿಐಎಸ್‌ಎಲ್ ಕಾರ್ಖಾನೆ ಅಗ್ನಿಶಾಮಕ ದಳ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.       ವಿಐಎಸ್‌ಎಲ್ ಕಾರ್ಖಾನೆ ಕಾಂಪೌಂಡ್‌ಗೆ ಹಾಗು ರೈಲ್ವೆ ಹಳಿಗೆ ಹೊಂದಿಕೊಂಡಿರುವ ಜಾಗದಲ್ಲಿ ಗಿಡಗಂಟಿಗಳು ಆಳೆತ್ತರಕ್ಕೆ ಬೆಳೆದು ಬಿಸಿಲಿನ ತಾಪಕ್ಕೆ ಒಣಗಿ ಹೋಗಿವೆ. ಈ ಸ್ಥಳದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಈ ಸ್ಥಳದಲ್ಲಿಯೇ ರಸ್ತೆ ಬದಿ ವ್ಯಾಪಾರಿಗಳು ಪೆಟ್ಟಿಗೆ ಅಂಗಡಿ ಜೊತೆಗೆ ಟೆಂಟ್‌ಗಳನ್ನು ನಿರ್ಮಿಸಿಕೊಂಡು ವ್ಯಾಪಾರ ನಡೆಸುತ್ತಿದ್ದಾರೆ. ಅಲ್ಲದೆ ಮತ್ತೊಂದು ಸಮೀಪದಲ್ಲಿ ಆಟೋ ನಿಲ್ದಾಣವಿದೆ. ಇಂತಹ ಸ್ಥಳದಲ್ಲಿ ಬೆಂಕಿ ಕಾಣಿಸಿಕೊಂಡು ಕೆಲ ಆತಂಕ ಉಂಟು ಮಾಡಿದೆ.      ಬೆಂಕಿ ಕಾಣಿಸಿಕೊಂಡ ತಕ್ಷಣ ಅಗ್ನಿಶಾಮಕ ದಳದ  ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ ಪರಿಣಾಮ...

ತಾಯಿಯ ಅಂತ್ಯಕ್ರಿಯೆಗೆ ತೆರಳಿದ್ದ ಮಗಳ ಮನೆಯಲ್ಲಿ ಸುಮಾರು ೭.೪೪ ಲಕ್ಷ ರು. ಚಿನ್ನಾಭರಣ, ನಗದು ಕಳ್ಳತನ

Image
     ಭದ್ರಾವತಿ : ಅನಾರೋಗ್ಯದಿಂದ ಮೃತಪಟ್ಟಿದ್ದ ತಾಯಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ತೆರಳಿದ್ದ ಮಗಳ ಮನೆಯಲ್ಲಿ ಲಕ್ಷಾಂತರ ರು. ಚಿನ್ನಾಭರಣ ಹಾಗು ನಗದು ಕಳ್ಳತನ ಮಾಡಿರುವ ಘಟನೆ ನಗರಸಭೆ ವ್ಯಾಪ್ತಿಯ ಹೊಸ ಸಿದ್ದಾಪುರ ಎನ್‌ಟಿಬಿ ಬಡಾವಣೆಯಲ್ಲಿ ನಡೆದಿದೆ.       ಎನ್‌ಟಿಬಿ ಬಡಾವಣೆ ನಿವಾಸಿ ಎಸ್. ಸರೋಜ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಕಾಗದನಗರದಲ್ಲಿ ವಾಸವಾಗಿರುವ ಸರೋಜರವರ ತಾಯಿ ಲಕ್ಷ್ಮಮ್ಮ ಅನಾರೋಗ್ಯದಿಂದ ನಿಧನ ಹೊಂದಿದ್ದರು. ಈ ಹಿನ್ನಲೆಯಲ್ಲಿ ಫೆ.೯ರಂದು ಬೆಳಿಗ್ಗೆ ಮನೆಗೆ ಬೀಗ ಹಾಕಿಕೊಂಡು ಮಗ ಪ್ರೇಮ್ ಕುಮಾರ್ ಜೊತೆ ದ್ವಿಚಕ್ರ ವಾಹನದಲ್ಲಿ ಸರೋಜರವರು ಕಾಗದನಗರಕ್ಕೆ ಬಂದಿದ್ದು, ಅಂತ್ಯಕ್ರಿಯೆ ಮುಗಿಸಿಕೊಂಡು ಪ್ರೇಮ್‌ಕುಮಾರ್ ರಾತ್ರಿ ಮನೆಗೆ ಹಿಂದಿರುಗಿದಾಗ ಮನೆಯ ಬಾಗಿಲಿನ ಬೀಗ ಮುರಿದಿರುವುದು ಕಂಡು ಬಂದಿದೆ. ತಕ್ಷಣ ಮಾಹಿತಿಯನ್ನು ತಾಯಿ ಸರೋಜರಿಗೆ ಮೊಬೈಲ್ ಕರೆ ಮಾಡಿ ತಿಳಿಸಿದ್ದು, ಮತ್ತೊಬ್ಬ ಮಗ ಹರೀಶ್ ಜೊತೆ ದ್ವಿಚಕ್ರವಾಹನದಲ್ಲಿ ಮನೆಗೆ ಮರಳಿದ ಸರೋಜರವರು ಒಳಗೆ ಹೋಗಿ ಪರಿಶೀಲಿಸಿದಾಗ ಬೀರುವಿನಲ್ಲಿ ಇಡಲಾಗಿದ್ದ ಚಿನ್ನಾಭರಣ, ನಗದು ಕಳ್ಳತನ ಮಾಡಿರುವುದು ತಿಳಿದು ಬಂದಿದೆ.       ೪೦ ಗ್ರಾಂ. ತೂಕದ ಸುಮಾರು ೨ ಲಕ್ಷ ರು. ಮೌಲ್ಯದ ಚಿನ್ನದ ಸರ, ೧೯ ಗ್ರಾಂ. ತೂಕದ  ಸುಮಾರು ೯೫ ಸಾವಿರ ರು. ಮೌಲ್ಯದ ಚಿನ್ನದ ಸರ,  ೪೦ ಗ್ರಾಂ. ...

ಫೆ.೧೪ರಂದು ಸಪ್ತಶಕ್ತಿ ಸಂಗಮ `ಮಾತೆಯರ ಸಮಾವೇಶ'

Image
     ಭದ್ರಾವತಿ: ನಗರದ ಕೇಶವಪುರ ಬಡಾವಣೆ ತರುಣ ಭಾರತಿ ವಿದ್ಯಾಕೇಂದ್ರದಲ್ಲಿ ಫೆ.೧೪ರಂದು ಸಪ್ತಶಕ್ತಿ ಸಂಗಮ `ಮಾತೆಯರ ಸಮಾವೇಶ' ಮಧ್ಯಾಹ್ನ ೧.೪೫ಕ್ಕೆ ಹಮ್ಮಿಕೊಳ್ಳಲಾಗಿದೆ.       ನಗರಸಭೆ ಸದಸ್ಯೆ ಅನುಪಮ ಚನ್ನೇಶ್ ಅಧ್ಯಕ್ಷತೆವಹಿಸಲಿದ್ದು, ಶಿವಮೊಗ್ಗ ಬಾಲಗೋಕುಲ ಸಂಯೋಜಕಿ ಜ್ಯೋತಿ ಬಸವರಾಜ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ರಂಗಭೂಮಿ ಕ್ಷೇತ್ರದ ಸಾಧಕಿ ನಂದಿನಿ ಮಲ್ಲಿಕಾರ್ಜುನ, ನೃತ್ಯ ಕ್ಷೇತ್ರದ ಸಾಧಕಿ ಪುಷ್ಪ ಕೃಷ್ಣಮೂರ್ತಿ ಮತ್ತು ಸಂಗೀತ ಕ್ಷೇತ್ರದ ಸಾಧಕಿ ಡಿ.ಎಸ್ ಗಾಯಿತ್ರಿ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು. ತರುಣ ಭಾರತಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯಿನಿ ಡಿ. ಸವಿತ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು. 

ಸುರಗಿತೋಪು ಶ್ರೀ ಚೌಡೇಶ್ವರಿ ದೇವಿ ಜಾತ್ರಾ ಮಹೋತ್ಸವ ಸಂಪನ್ನ

Image
ಭದ್ರಾವತಿ ನಗರಸಭೆ ವ್ಯಾಪ್ತಿಯ ವಿಐಎಸ್‌ಎಲ್-ಎಂಪಿಎಂ ಕಾರ್ಖಾನೆ ರಸ್ತೆಯ ಸುರಗಿತೋಪಿನ ಶ್ರೀ ಚೌಡೇಶ್ವರಿ ದೇವಿ ಹಾಗು ಮುನೇಶ್ವರಸ್ವಾಮಿಯ ೫೦ನೇ ವರ್ಷದ ಜಾತ್ರಾ ಮಹೋತ್ಸವ ಎರಡು ದಿನಗಳ ಕಾಲ ಯಶಸ್ವಿಯಾಗಿ ಜರುಗಿತು. ಶ್ರೀ ಚೌಡೇಶ್ವರಿ ಉತ್ಸವ ಮೂರ್ತಿಗೆ ವಿಶೇಷ ಅಲಂಕಾರ ಕೈಗೊಳ್ಳಲಾಗಿತ್ತು.       ಭದ್ರಾವತಿ : ನಗರಸಭೆ ವ್ಯಾಪ್ತಿಯ ವಿಐಎಸ್‌ಎಲ್-ಎಂಪಿಎಂ ಕಾರ್ಖಾನೆ ರಸ್ತೆಯ ಸುರಗಿತೋಪಿನ ಶ್ರೀ ಚೌಡೇಶ್ವರಿ ದೇವಿ ಹಾಗು ಮುನೇಶ್ವರಸ್ವಾಮಿಯ ೫೦ನೇ ವರ್ಷದ ಜಾತ್ರಾ ಮಹೋತ್ಸವ ಎರಡು ದಿನಗಳ ಕಾಲ ಯಶಸ್ವಿಯಾಗಿ ಜರುಗುವ ಮೂಲಕ ಸಂಪನ್ನಗೊಂಡಿತು.       ಸೋಮವಾರ ಬೆಳಿಗ್ಗೆ ಕಾಗದನಗರ ಎಂಪಿಎಂ ಸೊಸೈಟಿ ಮುಂಭಾಗದ ನಾಗರಕಟ್ಟೆಯಿಂದ ದೇವಸ್ಥಾನಕ್ಕೆ ಗಂಗೆ ತರುವ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಮಂಗಳವಾರ ಬೆಳಿಗ್ಗೆ ಚೌಡೇಶ್ವರಿ ದೇವಿಗೆ ಮತ್ತು ಮುನೇಶ್ವರಸ್ವಾಮಿಗೆ ಮಹಾಭಿಷೇಕ ನೆರವೇರಿತು. ನಂತರ ಚೌಡೇಶ್ವರಿ ದೇವಿಯ ಉತ್ಸವ ಮೂರ್ತಿ ಮೆರವಣಿಗೆಗೆ ಚಾಲನೆ ನೀಡಲಾಯಿತು.  ಶ್ರೀ ಚೌಡೇಶ್ವರಿ ದೇವಿಗೆ ಮತ್ತು ಮುನೇಶ್ವರ ಸ್ವಮಿಗೆ ಮಹಾಮಂಗಳಾರತಿ ನೆರವೇರಿತು.  ಭದ್ರಾವತಿ ನಗರಸಭೆ ವ್ಯಾಪ್ತಿಯ ವಿಐಎಸ್‌ಎಲ್-ಎಂಪಿಎಂ ಕಾರ್ಖಾನೆ ರಸ್ತೆಯ ಸುರಗಿತೋಪಿನ ಶ್ರೀ ಚೌಡೇಶ್ವರಿ ದೇವಿ ಹಾಗು ಮುನೇಶ್ವರಸ್ವಾಮಿಯ ೫೦ನೇ ವರ್ಷದ ಜಾತ್ರಾ ಮಹೋತ್ಸವ ಎರಡು ದಿನಗಳ ಕಾಲ ಯಶಸ್ವಿಯಾ...

ಕ್ಷೇತ್ರದ ಬಹುತೇಕ ವ್ಯಾಪ್ತಿಯಲ್ಲಿ ಫೆ.೧೨ರಂದು ವಿದ್ಯುತ್ ವ್ಯತ್ಯಯ

Image
     ಭದ್ರಾವತಿ: ಶಿವಮೊಗ್ಗ ಎಮ್.ಆರ್.ಎಸ್ ೨೨೦ ಕೆವಿ ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯ ಹಮ್ಮಿಕೊಂಡಿರುವುದರಿಂದ ಮಾರ್ಗ ಮುಕ್ತತೆ ಪಡೆಯಲು ನಗರದ ಜೆ.ಪಿ.ಎಸ್ ಕಾಲೋನಿಯಲ್ಲಿರುವ ೧೧೦/೩೩/೧೧ ಕೆವಿ ಹಾಗೂ ಮಾಚೇನಹಳ್ಳಿ ೧೧೦/೧೧ ಕೆವಿ ವಿದ್ಯುತ್ ವಿತರಣಾ ಕೇಂದ್ರಗಳ ವ್ಯಾಪ್ತಿಗೆ ಒಳಪಡುವ ಪ್ರದೇಶಗಳಲ್ಲಿ ಫೆ. ೧೨ರ ಗುರುವಾರ ಬೆಳಗ್ಗೆ ೯.೩೦ ರಿಂದ ಸಂಜೆ ೬ ಗಂಟೆವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.       ನ್ಯೂಟೌನ್, ನ್ಯೂ ಕಾಲೋನಿ, ವಿದ್ಯಾಮಂದಿರ, ಆಂಜನೇಯ ಅಗ್ರಹಾರ, ಆಕಾಶವಾಣಿ, ಕಾಗದನಗರ, ಸುರಗಿತೋಪು, ಅನೆಕೊಪ್ಪ, ಉಜ್ಜನೀಪುರ, ಬುಳ್ಳಾಪುರ, ಹುಡ್ಕೋ ಕಾಲೋನಿ, ಬೊಮ್ಮನಕಟ್ಟೆ, ಹೊಸಸಿದ್ದಾಪುರ, ಸಂಪಿಗೆ ಶೆಟ್ಟಿ ಬಡಾವಣೆ, ಎನ್.ಟಿ.ಬಿ ಬಡಾವಣೆ, ಸರ್.ಎಂ.ವಿ ಬಡಾವಣೆ, ಹಳೇಸಿದ್ದಾಪುರ, ಹೊಸೂರು, ತಾಂಡ್ಯ, ಸಂಕ್ಲೀಪುರ, ಹುತ್ತಾಕಾಲೋನಿ, ಐ.ಟಿ.ಐ, ಜನ್ನಾಪುರ, ಬಿ.ಎಚ್ ರಸ್ತೆ, ಅಪ್ಪರ್ ಹುತ್ತಾ, ಲೋಯರ್ ಹುತ್ತಾ, ಜಿಂಕ್‌ಲೈನ್, ತರೀಕೆರೆ ರಸ್ತೆ, ಸಾದತ್ ಕಾಲೋನಿ, ನೆಹರು ನಗರ, ಸುಣ್ಣದಹಳ್ಳಿ, ಬಸವನಗುಡಿ, ಶಿವನಿ ವೃತ್ತ, ಹಿರಿಯೂರು, ಹೊಸ ನಂಜಾಪುರ, ಸಿದ್ದರಹಳ್ಳಿ, ಗೊಂದಿ, ತಾರೀಕಟ್ಟೆ, ಬಿಳಿಕಿ, ಬಿಳಕಿ ತಾಂಡ್ಯ, ಹೊಳೆ ಗಂಗೂರು, ಲಕ್ಷ್ಮಿಸಾಗರ (ರಬ್ಬರ್ ಕಾಡು), ಸುಲ್ತಾನಮಟ್ಟಿ, ಕಾರೇಹಳ್ಳಿ, ಬಾಳೆಮಾರನಹಳ್ಳಿ, ಕಂಬದಾಳ್ ಹೊಸೂರು, ಹೊನ್ನಹಟ್ಟಿ ಹೊಸೂರು, ...