೨ ದಿನಗಳ ನಂತರ ಆಂಜನೇಯ ಅಗ್ರಹಾರದಲ್ಲಿ ಲಾರಿ ಗಾತ್ರದಷ್ಟು ಬೃಹತ್ ಗಣಪತಿ ಮೂರ್ತಿ ಪ್ರತಿಷ್ಠಾಪನೆ
ಭದ್ರಾವತಿ ನಗರಸಭೆ ವ್ಯಾಪ್ತಿಯ ಕೂಲಿ ಬ್ಲಾಕ್ ಶೆಡ್, ಆಂಜನೇಯ ಅಗ್ರಹಾರದ ಮುಖ್ಯ ರಸ್ತೆಯಲ್ಲಿ ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯದ ಸಮೀಪ ಎರಡು ದಿನಗಳ ನಂತರ ಬುಧವಾರ ಬೃಹತ್ ಗಾತ್ರದ ಗಣಪತಿ ಮೂರ್ತಿಯನ್ನು ಲಾರಿಯಲ್ಲಿ ಪ್ರತಿಷ್ಠಾಪನಾ ಸ್ಥಳಕ್ಕೆ ತರಲಾಯಿತು. ಭದ್ರಾವತಿ : ನಗರಸಭೆ ವ್ಯಾಪ್ತಿಯ ಕೂಲಿ ಬ್ಲಾಕ್ ಶೆಡ್, ಆಂಜನೇಯ ಅಗ್ರಹಾರದ ಮುಖ್ಯ ರಸ್ತೆಯಲ್ಲಿ ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯದ ಸಮೀಪ ಎರಡು ದಿನಗಳ ನಂತರ ಬೃಹತ್ ಗಾತ್ರದ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಆಂಧ್ರ ಪ್ರದೇಶದಿಂದ ಒಂದು ಲಾರಿ ಗಾತ್ರ(ಟ್ರಕ್)ದಷ್ಟು ಬೃಹತ್ ಮೂರ್ತಿಯನ್ನು ಬುಧವಾರ ರಾತ್ರಿ ಪ್ರತಿಷ್ಠಾಪನಾ ಸ್ಥಳಕ್ಕೆ ತರಲಾಗಿದೆ. ಭಗತ್ ಸಿಂಗ್ ಬಾಯ್ಸ್ ಸಂಘಟನೆಯಿಂದ ೨೦ನೇ ವರ್ಷದ ವಿನಾಯಕ ಮಹೋತ್ಸವದ ಅಂಗವಾಗಿ ಈ ಬೃಹತ್ ಗಾತ್ರದ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಮೂರ್ತಿ ಸುಮಾರು ೨೦ ಅಡಿ ಅಗಲ, ೨೩ ಅಡಿ ಎತ್ತರ ಹೊಂದಿದೆ ಎನ್ನಲಾಗಿದೆ. ಸಂಘಟನೆಯಿಂದ ಪ್ರತಿವರ್ಷ ವಿಭಿನ್ನ ರೀತಿಯ ಆಕರ್ಷಕ ಗಣಪತಿ ಮೂರ್ತಿ ಪ್ರತಿಷ್ಠಾಪಿಸಿಕೊಂಡು ಬರಲಾಗುತ್ತಿದೆ. ಹೋಮ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು, ಅನ್ನದಾನ ಸಹ ನೆರವೇರಿಸಿಕೊಂಡು ಬರಲಾಗುತ್ತಿದೆ. ಕಳೆದ ೫-೬ ವರ್ಷಗಳಿಂದ ಈ ಸಂಘಟನೆ ಎಲ್ಲರ ಗಮನ ಸೆಳೆಯುತ್ತಿದೆ. ಆಂಧ್ರ ಪ...