ಗೌರಿ-ಗಣೇಶ ಹಬ್ಬ : ಬೆಲೆ ಏರಿಕೆ ನಡುವೆ ಖರೀದಿ ಭರಾಟೆ
ಗೌರಿ-ಗಣೇಶ ಹಬ್ಬ ಈ ಬಾರಿ ಒಟ್ಟಿಗೆ ಆಚರಿಸಲಾಗುತ್ತಿದ್ದು, ಭದ್ರಾವತಿ ನಗರದಲ್ಲಿ ಗೌರಿ-ಗಣೇಶ ಮೂರ್ತಿಗಳ ಖರೀದಿಯಲ್ಲಿ ಭಕ್ತರು ತೊಡಗಿರುವುದು. ಭದ್ರಾವತಿ : ನಗರದಲ್ಲಿ ಗೌರಿ-ಗಣೇಶ ಹಬ್ಬ ಈ ಬಾರಿ ಒಟ್ಟಿಗೆ ಆಚರಿಸುತ್ತಿರುವ ಹಿನ್ನಲೆಯಲ್ಲಿ ಶನಿವಾರ ಮತ್ತು ಭಾನುವಾರ ಖರೀದಿ ಭರಾಟೆ ಹೆಚ್ಚಾಗಿರುವುದು ಕಂಡು ಬಂದಿತು. ಪ್ರಮುಖ ರಸ್ತೆಗಳಲ್ಲಿ ಹಾಗು ವಾಣಿಜ್ಯ ಮಾರುಕಟ್ಟೆ ಬಳಿ ಜನ ಸಂದಣಿ ಅಧಿಕವಾಗಿದ್ದು, ಒಂದೆಡೆ ಹೂ-ಹಣ್ಣು, ತರಕಾರಿ ಮಾರುಕಟ್ಟೆ ಬಳಿ ಖರೀದಿ ಭರಾಟೆ ಕಂಡು ಬಂದರೇ, ಮತ್ತೊಂದೆಡೆ ದಿನಸಿ ಹಾಗು ಪೂಜಾ ಸಾಮಾಗ್ರಿ, ಹೊಸ ಹೊಸ ಬಟ್ಟೆಗಳ ಖರೀದಿಗಾಗಿ ದೊಡ್ಡ ದೊಡ್ಡ ಮಳಿಗೆ ಹಾಗು ಮಾಲ್ಗಳಲ್ಲಿ ಖರೀದಿ ಭರಾಟೆ ಹೆಚ್ಚಾಗಿರುವುದು ಕಂಡು ಬಂದಿತು. ಇನ್ನೊಂದೆಡೆ ಗೌರಿ-ಗಣೇಶ ಮೂರ್ತಿಗಳ ಖರೀದಿಯಲ್ಲಿ ತೊಡಗಿರುವುದು ಕಂಡು ಬಂದಿತು. ಪ್ರತಿ ವರ್ಷದಂತೆ ಈ ಬಾರಿ ಸಹ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಆದರೂ ಸಹ ಹಬ್ಬದ ಹಿನ್ನಲೆಯಲ್ಲಿ ವಿಧಿ ಇಲ್ಲದೆ ವ್ಯಾಪಾರಸ್ಥರು ಕೇಳಿದಷ್ಟು ನೀಡಿ ತಮಗೆ ಬೇಕಾದ ವಸ್ತುಗಳನ್ನು ಖರೀದಿಸುವುದು ಸಾಮಾನ್ಯವಾಗಿತ್ತು. ನಗರದ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಈ ಬಾರಿ ಸಹ ವಿಜೃಂಭಣೆಯಿಂದ ನಡೆಯುತ್ತಿದ್ದು, ಈಗಾಗಲೇ ಸಿದ್ದತೆಗಳು ಪೂರ್ಣಗೊಂಡಿವೆ. ಉಳಿದಂತೆ ...