ಗುಡುಗು ಮುಂಚಿನ ಅಕಾಲಿಕ ಮಳೆ : ಹಳ್ಳಕೊಳ್ಳಗಳು ಭರ್ತಿ
ಭದ್ರಾವತಿಯಲ್ಲಿ ಸೋಮವಾರ ಮಧ್ಯಾಹ್ನ ೩.೩೦ರ ಸಮಯದಲ್ಲಿ ಏಕಾಏಕಿ ನಗರದ ಕೆಲವೆಡೆ ಗುಡುಗು ಮಿಂಚಿನ ಜೊತೆಗೆ ಧಾರಕಾರವಾಗಿ ಗಾಳಿ ಮಳೆಯಾಗಿದೆ. ಭದ್ರಾವತಿ : ನಗರದಲ್ಲಿ ಅಕಾಲಿಕ ಮಳೆ ಆರ್ಭಟ ಹೆಚ್ಚಾಗಿದ್ದು, ಕಳೆದ ಕೆಲವು ದಿನಗಳಿಂದ ಅಕಾಲಿಕ ಮಳೆಯಾಗುತ್ತಿದೆ. ಇದರಿಂದಾಗಿ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿವೆ. ಸೋಮವಾರ ಮಧ್ಯಾಹ್ನ ೩.೩೦ರ ಸಮಯದಲ್ಲಿ ಏಕಾಏಕಿ ನಗರದ ಕೆಲವೆಡೆ ಗುಡುಗು ಮಿಂಚಿನ ಜೊತೆಗೆ ಧಾರಕಾರವಾಗಿ ಗಾಳಿ ಮಳೆಯಾಗಿದ್ದು, ಗಾಳಿಯ ಆರ್ಭಟಕ್ಕೆ ಕೆಲವೆಡೆ ರಸ್ತೆಗಳಲ್ಲಿ ಮರಗಳು ಧರೆಗುರುಳಿವೆ. ಇನ್ನೂ ಕೆಲವೆಡೆ ಮರಗಳಲ್ಲಿ ಒಣಗಿದ ರೆಂಬೆ ಕೊಂಬೆಗಳು ಮುರಿದು ಬಿದ್ದಿವೆ. ಕೆಲವೆಡೆ ಮನೆಯ ತಗಡಿನ ಮೇಲ್ಚಾವಣಿ ಗಾಳಿ ಮಳೆಗೆ ಹಾರಿ ಹೋಗಿರುವ ಘಟನೆ ನಡೆದಿವೆ. ಸುಮಾರು ೩ ಗಂಟೆಗಳ ಸಮಯ ಸುರಿದ ಮಳೆಯಿಂದಾಗಿ ಹಳ್ಳಕೊಳ್ಳಗಳು ತುಂಬಿಕೊಂಡು ರಸ್ತೆಗಳ ಮೇಲೆ ನೀರು ಹರಿಯುತ್ತಿರುವುದು ಕಂಡು ಬಂದಿತು. ಅಕಾಲಿಕ ಮಳೆಯಿಂದಾಗಿ ರೈತರು ಬೆಳೆದ ಬೆಳಿಗಳಿಗೆ ಹಾನಿಯಾಗಿದ್ದು, ಕೃಷಿ ಇಲಾಖೆ ಅಧಿಕಾರಿಗಳು ಈ ಸಂಬಂಧ ಗಮನ ಹರಿಸಬೇಕಾಗಿದೆ. ಬೆಳೆ ಹಾನಿ ಸಂಬಂಧ ಸರ್ಕಾರಕ್ಕೆ ವರದಿ ಸಲ್ಲಿಸಿ ಬಡ ರೈತರ ಹಿತ ಕಾಪಾಡಬೇಕಾಗಿದೆ. ರಸ್ತೆ ಮಧ್ಯೆ ಕೆಟ್ಟುನಿಂತ ಬಸ್: ಗುಡುಗು ಮಿಂಚಿನ ಧಾರಾಕಾರ ಮಳೆ...