ಬೆಲ್ಲದ ಮೂಟೆ ಸಾಗಾಣಿಕೆ ಮಾಡುತ್ತಿದ್ದ ಸರಕು ವಾಹನ ಕಳವು
ಭದ್ರಾವತಿ : ಬೆಲ್ಲದ ಮೂಟೆಗಳನ್ನು ಬಾಡಿಗೆಗೆ ಪಡೆದು ಸಾಗಾಣಿಕೆ ಮಾಡುತ್ತಿದ್ದ ಅಶೋಕ್ ಲೇಲ್ಯಾಂಡ್ ಸರಕು ವಾಹನವನ್ನು ಕಳ್ಳತನ ಮಾಡಿರುವ ಘಟನೆ ಕಳೆದ ೪ ತಿಂಗಳ ಹಿಂದೆ ನಡೆದಿದ್ದು, ಈ ಸಂಬಂಧ ಇದೀಗ ವಿಳಂಬವಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಹೊಸಮನೆ ಸುಭಾಷ್ ನಗರ ನಿವಾಸಿ ಸಿದ್ದೇಶ್ ಎಂಬುವರಿಗೆ ಸೇರಿದ ಅಶೋಕ್ ಲೇಲ್ಯಾಂಡ್ ಸರಕು ವಾಹನವನ್ನು ಬಾಡಿಗೆ ಕೆಲಸ ಮುಗಿದ ನಂತರ ಖಲಂದರ್ ನಗರದ ೧೦ನೇ ಕ್ರಾಸ್ನಲ್ಲಿರುವ ಖಾಲಿ ಜಾಗದಲ್ಲಿ ನಿಲ್ಲಿಸಲಾಗುತ್ತಿತ್ತು. ಏ.೩ರಂದು ನಿಲ್ಲಿಸಲಾಗಿದ್ದ ವಾಹನವನ್ನು ಯಾರೋ ಕಳ್ಳತನ ಮಾಡಿದ್ದು, ವಾಹನವನ್ನು ಎಲ್ಲಾ ಕಡೆ ಹುಡುಕಿದರೂ ಎಲ್ಲೂ ಪತ್ತೆಯಾಗಿರಲಿಲ್ಲ. ಇದೀಗ ವಿಳಂಬವಾಗಿ ಹಳೇನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಸಿದ್ದೇಶ್ರವರು ೨೦೨೩ರಲ್ಲಿ ಕಬಲಿಕಟ್ಟೆ ಗ್ರಾಮದ ಶಶಿಕುಮಾರ್ ಎಂಬುವವರ ಬಳಿ ಈ ಸರಕು ವಾಹನ ಖರೀದಿದ್ದರು. ಈ ವಾಹನದಲ್ಲಿ ಬೆಲ್ಲದ ಮೂಟೆಗಳನ್ನು ಬಾಡಿಗೆಗೆ ಪಡೆದು ಸಾಗಾಣಿಕೆ ಮಾಡಿ ಜೀವನ ಸಾಗಿಸಲಾಗುತ್ತಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.