ನಿರ್ವಹಣೆ ಇಲ್ಲದೆ ಹಾಳಾಗುತ್ತಿದೆ ಸುಸ್ಸಜ್ಜಿತ ಕಾರ್ಮಿಕರ ಸಮುದಾಯ ಭವನ
* ಅನಂತಕುಮಾರ್ ಭದ್ರಾವತಿ ಕಸಬಾ ಹೋಬಳಿ, ಉಜ್ಜಯಿನಿಪುರ ಗ್ರಾಮದ ಸರ್ವೇ ನಂ. ೨೦ರಲ್ಲಿ ನಿರ್ಮಿಸಲಾಗಿರುವ ಸುಸ್ಸಜಿತ ಕಾರ್ಮಿಕ ಸಮುದಾಯ ಭವನ. ಮುಖ್ಯಾಂಶಗಳು: - ಸುಮಾರು ೯.೫ ಕೋ.ರು. ವೆಚ್ಚದ ಸಮುದಾಯ ಭವನ. - ೧ ವರ್ಷದ ಹಿಂದೆ ಉದ್ಘಾಟನೆ. ಬಹುಬೇಡಿಕೆಯ ಸಮುದಾಯ ಭವನ - ಸಾಮಾನ್ಯ ಹಾಗು ಬಡ ಕಾರ್ಮಿಕರು ಸೇರಿದಂತೆ ಮಧ್ಯಮ ವರ್ಗಕ್ಕೆ ಹೆಚ್ಚಿನ ಅನುಕೂಲ. - ಎಲ್ಲಾ ಮೂಲ ಸೌಲಭ್ಯಗಳನ್ನು ಒಳಗೊಂಡಿರುವ ವಿಶಾಲ ಕಟ್ಟಡ - ಸೂಕ್ತ ನಿರ್ವಹಣೆ ಹಲವು ಸಮಸ್ಯೆಗಳು ಉಲ್ಬಣ. ಭದ್ರಾವತಿ : ಕಾರ್ಮಿಕರು ಹೆಚ್ಚಾಗಿರುವ ಕ್ಷೇತ್ರದಲ್ಲಿ ಬಹಳ ವರ್ಷಗಳ ಬೇಡಿಕೆಯಾಗಿದ್ದ ಕಾರ್ಮಿಕರ ಸಮುದಾಯ ಭವನ ನಿರ್ಮಾಣಗೊಂಡು ಕಳೆದ ೧ ವರ್ಷದ ಹಿಂದೆ ಉದ್ಘಾಟನೆಗೊಂಡಿದೆ. ಸುಮಾರು ೯.೫ ಕೋ.ರು ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸುಸಜ್ಜಿತ ಸಮುದಾಯ ಭವನ ಎಲ್ಲಾ ವರ್ಗದ ಕಾರ್ಮಿಕರು, ಮಧ್ಯಮ ಹಾಗು ಬಡ ವರ್ಗದವರಿಗೆ ಹೆಚ್ಚಿನ ಅನುಕೂಲವಾಗುತ್ತಿದೆ. ಈ ನಡುವೆ ಸಮರ್ಪಕವಾದ ನಿರ್ವಹಣೆ ಇಲ್ಲದೆ ಸಮುದಾಯ ಭವನ ಹಾಳಾಗುತ್ತಿದ್ದು, ತಕ್ಷಣ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ. ಕ್ಷೇತ್ರಕ್ಕೆ ಬೇರೆಡೆಯಿಂದ ಬರುವ ವಲಸೆ ಕಾರ್ಮಿಕರಿಗೆ ತಾತ್ಕಾಲಿಕ ಆಶ್ರಯ ಕಲ್ಪಿಸಿಕೊಡಲು, ಕಾರ್ಮಿಕ ವರ್ಗದವರು ಮತ್ತು ಸರ್ಕಾರದ ವಿವಿಧ ಇಲಾಖೆಗಳು, ಶಾಲಾ-ಕಾಲೇಜುಗಳು, ಸಭ...