ಏ.೨ ರಿಂದ 'ಸುಗಮ ಸಂಗೀತ ತರಬೇತಿ ಶಿಬಿರ'
ಭದ್ರಾವತಿ: ನಗರದ ಭದ್ರಾ ಸುಗಮ ಸಂಗೀತ ವೇದಿಕೆಯಿಂದ ಸಂಗೀತ ಆಸಕ್ತರಿಗಾಗಿ ಎರಡು ದಿನಗಳ ಕಾಲ 'ಸುಗಮ ಸಂಗೀತ ತರಬೇತಿ ಶಿಬಿರ' ಏ.೨ ಮತ್ತು ೩ ರಂದು ಆಯೋಜಿಸಲಾಗಿದೆ. ಹಳೇನಗರದ ಮಹಿಳಾ ಸೇವಾ ಸಮಾಜದಲ್ಲಿ ಶಿಬಿರ ನಡೆಯಲಿದ್ದು, ಪ್ರತಿದಿನ ಬೆಳಿಗ್ಗೆ ೯.೩೦ ರಿಂದ ಸಂಜೆ ೪.೩೦ರವರೆಗೆ ತರಬೇತಿ ನೀಡಲಾಗುತ್ತದೆ. ಚಲನಚಿತ್ರ ಹಿನ್ನೆಲೆ ಗಾಯಕರು ಹಾಗೂ ಸಂಗೀತ ಸಂಯೋಜಕರಾದ ಶಿವಮೊಗ್ಗದ ಪ್ರಹ್ಲಾದ್ ದೀಕ್ಷಿತ್ರವರು ಶಿಬಿರದ ಸಾರಥ್ಯ ವಹಿಸಲಿದ್ದಾರೆ. ಎಲ್ಲಾ ವಯೋಮಾನದ ತರಬೇತಿ ಪಡೆಯಲಿಚ್ಚಿಸುವವರು ಏ.೨ ರೊಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ವೇದಿಕೆ ಅಧ್ಯಕ್ಷರಾದ ಎಸ್. ಅಡವೀಶಯ್ಯ-೯೪೪೮೩ ೮೭೨೪೭ ಅಥವಾ ಕಾರ್ಯದರ್ಶಿ ಜ್ಯೋತಿ ರಾಜಶೇಖರ್-೯೪೮೧೬ ೫೫೧೯೪ ಅಥವಾ ಶೋಭ ಗಂಗರಾಜು-೯೪೪೯೯೪೨೯೩೨ ಅವರನ್ನು ಸಂಪರ್ಕಿಸಬಹುದಾಗಿದೆ.