ಎಸ್ಐಆರ್ ಶೇ.೭೩.೭೭ ರಷ್ಟು ಗಣತಿ ನಮೂನೆ ವಿತರಣೆ
ಭದ್ರಾವತಿ: ೧೧೨-ಭದ್ರಾವತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಎಸ್ಐಆರ್-ಮತದಾರರಪಟ್ಟಿ ಸಮಗ್ರ ಪರಿಷ್ಕರಣೆ ಕಾರ್ಯ ತ್ವರಿತಗತಿಯಲ್ಲಿ ಸಾಗುತ್ತಿದೆ. ಮತಗಟ್ಟೆ ಅಧಿಕಾರಿಗಳು ಪ್ರತಿ ಮನೆ ಮನೆಗೆ ತೆರಳಿ ಗಣತಿ ನಮೂನೆಗಳನ್ನು ವಿತರಿಸುತ್ತಿದ್ದು, ಸೋಮವಾರ ಸಂಜೆ ೬ರ ವೇಳೆಗೆ ಒಟ್ಟಾರೆ ಶೇ.೭೩.೭೭ರಷ್ಟು ಗುರಿ ಸಾಧಿಸಲಾಗಿದೆ. ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ೨೫೩ ಮತಗಟ್ಟೆಗಳಿದ್ದು, ಎಲ್ಲಾ ಮತಗಟ್ಟೆಗಳಿಗೂ ಮತಗಟ್ಟೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಒಟ್ಟು ೨,೧೪,೯೦೭ ಮತದಾರರಿದ್ದು, ಈ ಪೈಕಿ ೧,೫೮,೫೩೮ ಗಣತಿ ನಮೂನೆಗಳ ವಿತರಿಸಲಾಗಿದೆ. ೬,೭೮೬ ಗಣತಿ ನಮೂನೆಗಳನ್ನು ಗಣಕೀರಣಗೊಳಿಸಲಾಗಿದ್ದು, ಶೇ.೩.೧೬ರಷ್ಟು ಗುರಿಸಾಧಿಸಲಾಗಿದೆ. ಮತಗಟ್ಟೆ ಅಧಿಕಾರಿಗಳು ಪ್ರತಿ ಮನೆ ಮನೆಗೆ ತೆರಳಿ ಗಣತಿ ನಮೂನೆಗಳನ್ನು ವಿತರಿಸುವುದು ಕಡ್ಡಾಯವಾಗಿದ್ದು, ಪರಿಷ್ಕರಣೆ ಕಾರ್ಯ ತ್ವರಿತಗತಿಯಲ್ಲಿ ನಡೆಯಲಿದೆ. ವಿವಿಧ ರಾಜಕೀಯ ಪಕ್ಷಗಳು, ಮತದಾರರು ಈ ಕಾರ್ಯಕ್ಕೆ ಹೆಚ್ಚಿನ ಸಹಕಾರ ನೀಡಬೇಕೆಂದು ತಹಸೀಲ್ದಾರ್ ಪ್ರದೀಪ್ ದೇವಗಿರಿ ಕೋರಿದ್ದಾರೆ. ಡಿ೬-ಬಿಡಿವಿಟಿ೧ ಪ್ರದೀಪ್ ದೇವಗಿರಿ Ananthakumara, Reporter, Kannadaprabha, NDK/31A, Near, Sri Satyasayi Baba school, Newtown, Bhadravathi:-577301(Tq) Shimoga(Dis) Mob: 9738801478 : 9482007466