ಸುಲಲಿತವಾಗಿ ಮಾತನಾಡುವವರು ಕನ್ನಡ ಪರೀಕ್ಷೆಗಳಲ್ಲಿ ಅನುತ್ತೀರ್ಣ : ಡಿ. ಮಂಜುನಾಥ್ ವಿಷಾದ
'ತಾಯಿ ನುಡಿ' ಕವನ ಸಂಕಲನ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ಭದ್ರಾವತಿ ಜನ್ನಾಪುರದ ಶ್ರೀ ಬಸವೇಶ್ವರ ಶಾಲೆ ಸಭಾಂಗಣದಲ್ಲಿ ಶಿಕ್ಷಕ ಮಂಜಾನಾಯ್ಕ ಬಿ.ಆರ್ ಬಳೂರು ರಚಿಸಿರುವ 'ತಾಯಿ ನುಡಿ' ಕವನ ಸಂಕಲನ ಪುಸ್ತಕವನ್ನು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ಲೋಕಾರ್ಪಣೆಗೊಳಿಸಿದರು. ಭದ್ರಾವತಿ: ಕನ್ನಡ ಭಾಷೆಯನ್ನು ಸುಲಲಿತವಾಗಿ ಮಾತನಾಡುವ ನಮ್ಮ ಮಕ್ಕಳು ಕನ್ನಡ ವಿಷಯದ ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗುತ್ತಿರುವುದು ನೋವಿನ ಸಂಗತಿಯಾಗಿದೆ ಕನ್ನಡ ಸಾಹಿತ್ಯ ಪರಿಷತ್ಎಂ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ವಿಷಾದ ವ್ಯಕ್ತಪಡಿಸಿದರು. ಜನ್ನಾಪುರದ ಶ್ರೀ ಬಸವೇಶ್ವರ ಶಾಲೆ ಸಭಾಂಗಣದಲ್ಲಿ ಶಿಕ್ಷಕ ಮಂಜಾನಾಯ್ಕ ಬಿ.ಆರ್ ಬಳೂರು ರಚಿಸಿರುವ 'ತಾಯಿ ನುಡಿ' ಕವನ ಸಂಕಲನ ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಕನ್ನಡ ಭಾಷೆ ಅರ್ಥಮಾಡಿಕೊಳ್ಳುವ, ಸ್ಪಷ್ಟವಾಗಿ ಓದುವ ಹಾಗು ಬರೆಯುವ ಪ್ರಕ್ರಿಯೆ ನಿರಂತರವಾಗಿ ನಡೆಯಬೇಕು. ಭಾಷೆಯ ಮೇಲಿನ ಹಿಡಿತ ಕಾಯ್ದುಕೊಳ್ಳಬೇಕೆಂದರು. ಎಸ್.ಬಿ.ವಿ.ಎಸ್ ಅಧ್ಯಕ್ಷ, ವಕೀಲಲೆಚ್.ಬಿ.ಸಿದ್ದೇಶ್ ಅಧ್ಯಕ್ಷತೆವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಸಿ. ಸುರೇಶ್ ರವರು ಸಮಾರಂಭ ಉದ್ಘಾಟಿಸಿ ಮಾತನಾಡಿದರು. ...