ನಗರಸಭೆಯಿಂದ ೮೦ನೇ ಸ್ವಾತಂತ್ರ್ಯ ದಿನಾಚರಣೆ : ವಿವಿಧ ಕಾಮಗಾರಿಗಳ ಉದ್ಘಾಟನೆ
ಭದ್ರಾವತಿ ನಗರಸಭೆಯಿಂದ ನೂತನವಾಗಿ ರಂಗಪ್ಪ ವೃತ್ತದಲ್ಲಿ ನಿರ್ಮಿಸಲಾಗಿರುವ ಸ್ಪೈರಲ್ ಮಾರ್ಡನ್ ಆರ್ಟ್ ಸ್ಟ್ರಕ್ಚರಲ್ ಕಲಾಕೃತಿ ಅಕರ್ಷಿಸುತ್ತಿದೆ. ಭದ್ರಾವತಿ : ನಗರಸಭೆ ವತಿಯಿಂದ ಆ.೧೫ರಂದು ೮೦ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಈ ಬಾರಿ ವಿಶೇಷವಾಗಿ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ ೭.೩೦ಕ್ಕೆ ನಗರಸಭೆ ಕಛೇರಿ ಸಭಾಂಗಣದಲ್ಲಿ ಅಧ್ಯಕ್ಷೆ ಜೆ.ಸಿ ಗೀತಾರಾಜಕುಮಾರ್ ಧ್ವಜಾರೋಹಣ ನೆರವೇರಿಸಲಿದ್ದಾರೆ. ನಗರಸಭೆ ಉಪಾಧ್ಯಕ್ಷ ಬಷೀರ್ ಅಹಮದ್, ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರೇಮಾ ಬದರಿನಾರಾಯಣ ಸೇರಿದಂತೆ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿಗಳು, ಪೌರ ಕಾರ್ಮಿಕರು ಪಾಲ್ಗೊಳ್ಳಲಿದ್ದಾರೆ. ಬೆಳಿಗ್ಗೆ ೧೧ ಗಂಟೆಗೆ ಡಾ. ಬಿ.ಆರ್ ಅಂಬೇಡ್ಕರ್ ವೃತ್ತದ ಬಳಿ ಇಂಡಿಯಾ ಗೇಟ್ ಮತ್ತು ವೀರ ಯೋಧರ ಪ್ರತಿಮೆ ಕಲಾಕೃತಿಗಳ ಅನಾವರಣ, ಹಾಲಪ್ಪ ವೃತ್ತದಲ್ಲಿ ೧೧.೩೦ಕ್ಕೆ ಸ್ಪೈರಲ್ ಮಾರ್ಡನ್ ಆರ್ಟ್ ಸ್ಟ್ರಕ್ಚರಲ್ ಅನಾವರಣ, ರೈಲ್ವೆ ನಿಲ್ದಾಣ ಮುಂಭಾಗ, ನಗರಸಭೆ ವಾಣಿಜ್ಯ ಮಾರುಕಟ್ಟೆ ಬಳಿ ಮಧ್ಯಾಹ್ನ ೧೨ ಗಂಟೆಗೆ ನವೀಕರಣಗೊಂಡ ಭಾರತರತ್ನ, ಸರ್.ಎಂ ವಿಶ್ವೇಶ್ವರಾಯ ಪುತ್ಥಳಿ ಹಾಗು ಪರ್ಗೋಲಾ ಅನಾವರಣ ಮತ್ತು ೧೨.೩೦ಕ್ಕೆ ಅಮರಶಿಲ್ಪಿ ಜಕಣಾಚಾರಿ ಸೇತುವೆಯಿಂದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದವರೆಗೆ ನೂತನವಾಗಿ ನಿರ್ಮಿಸಿರುವ ಡಿವೈಡರ್ ಹಾಗು ಅಲಂಕೃತ ಬೀದಿ ದೀಪಗಳ ಉದ್ಘಾಟನೆ ನಡೆಯಲಿದೆ. ...