ಆ.೨ರಂದು `ಭೂಮಿಕಾ' ರಜತ ಮಹೋತ್ಸವ ಸಮಾರಂಭ : ಡಾ. ಕೃಷ್ಣ ಎಸ್. ಭಟ್
ಭದ್ರಾವತಿ: ಕನ್ನಡ ನಾಡು, ನುಡಿ, ಸಂಸ್ಕೃತಿಯ ಸೇವೆಗೆಂದು ಸಹಮನಸ್ಕರಿಂದ ೨೬ನೇ ಜನವರಿ ೨೦೦೨ ರಂದು ಪ್ರಾರಂಭವಾದ ಭೂಮಿಕಾ ವೇದಿಕೆ ಕಳೆದ ೨೫ ವರ್ಷಗಳಿಂದ ನಿರಂತರವಾಗಿ ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದ್ದು, ಆ.೨ರ ಭಾನುವಾರ ವೇದಿಕೆಯ ರಜತ ಮಹೋತ್ಸವ ನಗರದ ಬಿ.ಎಚ್ ರಸ್ತೆ, ಶ್ರೀ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆ ಅಧ್ಯಕ್ಷ ಡಾ. ಕೃಷ್ಣ ಎಸ್ ಭಟ್ ತಿಳಿಸಿದರು. ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವೇದಿಕೆ ೨೫ ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವುದು ಅವಿಸ್ಮರಣೀಯ ಬೆಳವಣಿಗೆಯಾಗಿದೆ. ಅರ್ಥಪೂರ್ಣ, ಸಾರ್ಥಕ ನಿರಂತರ ಕಾರ್ಯಕ್ರಮಗಳಿಂದಾಗಿ ೨೫ ವರ್ಷಗಳು ಕಳೆದು ಹೋಗಿರುವುದು ಅರಿವಿಗೆ ಬರುತ್ತಿಲ್ಲ. ಹೇಗೆ ಹಕ್ಕಿಯಂತೆ ಹಾರಿ ಹೋಯಿತು ಎಂಬುದು ತಿಳಿಯಲೇ ಇಲ್ಲ ಎಂದರು. ಕನ್ನಡ ಸಾಹಿತಿಗಳ ಸಂಸ್ಮರಣೆ, ರಸಪ್ರಶ್ನೆ, ಬೇಸಿಗೆ ಶಿಬಿರ, ದೇಶಭಕ್ತಿ ಗೀತೆ, ಕಾವ್ಯ ಗಾಯನ, ಮಹಿಳಾ ದಿನಾಚರಣೆ, ಶಿಕ್ಷಕರ ದಿನಾಚರಣೆ, ಪತ್ರಿಕಾ ದಿನಾಚರಣೆ, ಸಾಹಿತ್ಯ ಸಂಸ್ಕೃತಿ, ನೃತ್ಯ, ಜಾನಪದ, ಯಕ್ಷಗಾನ ಮುಂತಾದ ಸುಮಾರು ೧೫೦ ವಿಭಿನ್ನ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಲಾಗಿದೆ. ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸೇರಿದಂತೆ ವೇದಿಕೆ ಎಲ್ಲಾ ಸದಸ್ಯರ ಶ್ರಮ ಹೆಚ್...