ವೆಳಾoಗಣಿ ಆರೋಗ್ಯ ಮಾತೆ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಚಾಲನೆ
ಭದ್ರಾವತಿ ಹಳೇ ನಗರ ವ್ಯಾಪ್ತಿಯ ಗಾoಧಿನಗರದ ವೆಳಾoಗಣಿ ಆರೋಗ್ಯ ಮಾತೆ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಶನಿವಾರ ಚಿಕ್ಕಮಗಳೂರು ಧರ್ಮ ಕ್ಷೇತ್ರದ ಧರ್ಮಾಧ್ಯಕ್ಷರಾದ ಅಂತೋಣಿ ಸ್ವಾಮಿಯವರು ಧ್ವಜರೋಹಣ ನೆರವೇರಿಸುವುದರ ಮೂಲಕ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಭದ್ರಾವತಿ : ಹಳೇ ನಗರ ವ್ಯಾಪ್ತಿಯ ಗಾoಧಿನಗರದ ವೆಳಾoಗಣಿ ಆರೋಗ್ಯ ಮಾತೆ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಶನಿವಾರ ಚಿಕ್ಕಮಗಳೂರು ಧರ್ಮ ಕ್ಷೇತ್ರದ ಧರ್ಮಾಧ್ಯಕ್ಷರಾದ ಅಂತೋಣಿ ಸ್ವಾಮಿಯವರು ಧ್ವಜರೋಹಣ ನೆರವೇರಿಸುವುದರ ಮೂಲಕ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ವಾದ್ಯಮೇಳಗಳೊಂದಿಗೆ ಪುಣ್ಯಕ್ಷೇತ್ರದ ಮುಂಭಾಗ ಸ್ಥಾಪಿಸಿರುವ ಧ್ವಜ ಸ್ತoಭದಲ್ಲಿ ಪುಷ್ಪರ್ಚನೆ ಮಾಡುವುದರೊಂದಿಗೆ ಮಾತೆಯ ಧ್ವಜಾರೋಹಣ ನೆರವೇರಿಸಲಾಯಿತು. ನಂತರ ಧರ್ಮಾಧ್ಯಕ್ಷರಾದ ಅಂತೋಣಿ ಸ್ವಾಮಿಯವರು ಆವರಣದ ನೂತನ ರಸ್ತೆ ಉದ್ಘಾಟನೆ ಕಾರ್ಯ ನೆರೆವೇರಿಸಿದರು. ಹೂ, ತಳಿರುತೋರಣ ಹಾಗು ವಿದ್ಯುತ್ ದೀಪಾಲಂಕರಾದಿಂದ ವೆಳಾಂಗಣಿ ಆರೋಗ್ಯ ಮಾತೆ ಪುಣ್ಯಕ್ಷೇತ್ರ ಕಂಗೊಳಿಸುತ್ತಿತ್ತು. ವಿವಿಧ ಧರ್ಮಕೇಂದ್ರಗಳ ಗುರುಗಳಿಂದ ಪೂಜಾ ವಿಧಿ ವಿಧಾನಗಳು ನೆರೆವೇರಿದವು. ಧರ್ಮ ಕೇಂದ್ರದ ಗುರುಗಳಾದ ಫಾದರ್ ಸ್ಟೀವನ್ ಡೇಸಾ, ಧರ್ಮ ಭಗೀನಿಯರು, ಭಕ್ತಧಿಗಳು ಪಾಲ್ಗೊಂಡಿದ್ದರು.