ವಿಜೃಂಭಣೆಯಿಂದ ಜರುಗಿದ ಶ್ರೀ ಹಳದಮ್ಮ ದೇವಿಯ `ಸಿಡಿ ಉತ್ಸವ'
ಸಂಸದ ರಾಘವೇಂದ್ರ, ಶಾರದ ಅಪ್ಪಾಜಿ ಇನ್ನಿತರರು ಉಪಸ್ಥಿತಿ ಭದ್ರಾವತಿ : ಹಳೇನಗರದ ಗ್ರಾಮ ದೇವತೆ ಶ್ರೀ ಹಳದಮ್ಮದೇವಿ ಜಾತ್ರಾ ಮಹೋತ್ಸವ `ಊರ ಹಬ್ಬ'ದ ಅಂಗವಾಗಿ ಗುರುವಾರ ಬೆಳಿಗ್ಗೆ `ದೇವರ ಸಿಡಿ ಉತ್ಸವ ಹಾಗು ಮಕ್ಕಳ ತೊಟ್ಟಿಲು ಸಿಡಿ ಉತ್ಸವ' ವಿಜೃಂಭಣೆಯಿಂದ ನಡೆಯಿತು. ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಇದು ಪ್ರಮುಖ ಆಕರ್ಷಣೆಯಾಗಿದ್ದು, `ದೇವರ ಸಿಡಿ ಉತ್ಸವ ಹಾಗು ಮಕ್ಕಳ ತೊಟ್ಟಿಲು ಸಿಡಿ ಉತ್ಸವ' ವೀಕ್ಷಿಸಲು ನಗರದ ವಿವಿಧೆಡೆಗಳಿಂದ ಭಕ್ತರು ಆಗಮಿಸಿದ್ದರು. ಈ ಹಿಂದಿನ ಸಿಡಿ ಮರ ಬದಲಿಸಿ ಇದೀಗ ಹೊಸ ಸಿಡಿ ಮರ ಪ್ರತಿಷ್ಠಾಪಿಸಲಾಗಿದ್ದು, ಯುವ ಮುಖಂಡ ಬಿ.ಎಸ್ ಬಸವೇಶ್ ಹಾಗು ಜಮೀನ್ದಾರ್ ತಾರಾಬಾಯಿ ದಿವಂಗತ ಶಿವಾಜಿರಾವ್ ಪವಾರ್ ಕುಟುಂಬಸ್ಥರು ಹೊಸ ಸಿಡಿ ಮರದ ದಾನಿಗಳಾಗಿದ್ದಾರೆ. ಬೆಳಿಗ್ಗೆ ಸಂಸದ ಬಿ.ವೈ ರಾಘವೇಂದ್ರ, , ದೇವಸ್ಥಾನ ಸಮಿತಿ ಗೌರವಾಧ್ಯಕ್ಷ ಸಮಾಜ ಸೇವಕ ಸಿ. ಮಹೇಶ್ ಕುಮಾರ್, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದ ಅಪ್ಪಾಜಿ, ಬಿಜೆಪಿ ಯುವ ಮುಖಂಡರಾದ ಮಂಗೋಟೆ ರುದ್ರೇಶ್, ಜಿ. ಆನಂದಕುಮಾರ್, ಶಿವಮೊಗ್ಗ ಮಹಾನಗರ ಪಾಲಿಕೆ ವಲಯ ಆಯುಕ್ತರಾದ ಸುನೀತಾ ಕುಮಾರಿ, ನಗರಸಭೆ ಸದಸ್ಯೆ ಅನುಪಮ ಚನ್ನೇಶ್, ನಗರ ಆಶ್ರಯ ಸಮಿತಿ ಅಧ್ಯಕ್ಷ ಬಿ.ಎಸ್ ಗೋಪಾಲ್, ಸೂಡಾ ಸದಸ್ಯೆ ಅರುಣ ಕೆ.ಪಿ ಗಿರೀಶ್, ಬಿಜೆಪಿ ಮಂಡಲ ಅಧ್ಯಕ್ಷರಾದ ಜಿ. ಧರ್ಮಪ್ರಸಾದ್, ಕೆ.ಎಚ್ ತೀರ್ಥಯ್ಯ ಹಾ...