ಜನಪದ ಹುಟ್ಟಿದ್ದು ಹೆಣ್ಣಿಂದ : ಡಾ. ಸಾಸ್ವೆಹಳ್ಳಿ ಸತೀಶ್
ಎರಡು ದಿನಗಳ ಜನಪದ ಗೀತೆಗಳ ಕಲಿಕಾ ಶಿಬಿರ ಭದ್ರಾವತಿ ತಾಲೂಕಿನ ಅಂತರಗಂಗೆ ಸಮುದಾಯ ಭವನದಲ್ಲಿ ಗ್ರಾಮೀಣ ಮಹಿಳೆಯರಿಗಾಗಿ ನಗರಸಭೆ ವ್ಯಾಪ್ತಿಯ ಜನ್ನಾಪುರ ಡಾ.ಬಿ.ಆರ್ ಅಂಬೇಡ್ಕರ್ ಜಾನಪದ ಕಲಾಸಂಘದಿಂದ ಶಿವಮೊಗ್ಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ವಿಶೇಷ ಘಟಕ ಧನ ಸಹಾಯ ಯೋಜನೆಯಡಿ ಎರಡು ದಿನಗಳ ಜನಪದ ಗೀತೆಗಳ ಕಲಿಕಾ ಶಿಬಿರ ಆಯೋಜಿಸಲಾಗಿತ್ತು. ಭದ್ರಾವತಿ : ಜನಪದ ಹುಟ್ಟಿದ್ದೇ ಹೆಣ್ಣು ಮಕ್ಕಳಿಂದ. ಜನಪದ ನಮ್ಮ ಬದುಕು, ನಮ್ಮ ಸಂಪ್ರದಾಯ, ನಮ್ಮ ಸಂಸ್ಕಾರ, ನಮ್ಮ ಸಂಸ್ಕೃತಿಯಾಗಿದೆ ಎಂದು ತಾಲೂಕಿನ ಅಂತರಗಂಗೆ ಕೆಪಿಎಸ್ ಪದವಿ ಪೂರ್ವ ಕಾಲೇಜಿನ ಪ್ರಭಾರ ಪ್ರಾಚಾರ್ಯ ಡಾ. ಸಾಸ್ವೆಹಳ್ಳಿ ಸತೀಶ್ ಹೇಳಿದರು. ಅವರು ಅಂತರಗಂಗೆ ಸಮುದಾಯ ಭವನದಲ್ಲಿ ಗ್ರಾಮೀಣ ಮಹಿಳೆಯರಿಗಾಗಿ ನಗರಸಭೆ ವ್ಯಾಪ್ತಿಯ ಜನ್ನಾಪುರ ಡಾ.ಬಿ.ಆರ್ ಅಂಬೇಡ್ಕರ್ ಜಾನಪದ ಕಲಾಸಂಘದಿಂದ ಶಿವಮೊಗ್ಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ವಿಶೇಷ ಘಟಕ ಧನ ಸಹಾಯ ಯೋಜನೆಯಡಿ ಆಯೋಜಿಸಲಾಗಿದ್ದ ಎರಡು ದಿನ ಜನಪದ ಗೀತೆಗಳ ಕಲಿಕಾ ಶಿಬಿರ ಉದ್ಘಾಟಿಸಿ ಮಾತನಾಡಿದರು. . ಗ್ರಾಮೀಣ ಪ್ರದೇಶಗಳಲ್ಲಿ ಹೆಣ್ಣು ತನ್ನ ನೋವಿಗಾಗಿ ಹಾಡಿದ ಪದಗಳು, ತನ್ನ ಸಂತೋಷಕ್ಕಾಗಿ ಹಾಡಿದ ಪದಗಳು, ವ್ಯವಸಾಯ ಹಾಗೂ ಗದ್ದೆ ಕೆಲಸ ಮಾಡುವಾಗ ಹಾಡಿದ ಹಾಡುಗಳೇ ಜನಪದ ಹಾಡುಗಳು. ಈ ಹಿನ್ನಲೆಯಲ್ಲಿ ಜನಪದ ಹುಟ್...