ಭದ್ರಾವತಿ, ಸೆ. ೨೬: ಮನೆಯಲ್ಲಿ ಯಾರು ಇಲ್ಲದಿರುವಾಗ ಮನೆಯ ಬೀಗ ಮುರಿದು ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ಹೊಸ ಸೀಗೆಬಾಗಿಯಲ್ಲಿ ನಡೆದಿದೆ.
ಬೋರೇಗೌಡ ಎಂಬುವರ ಮನೆಯಲ್ಲಿ ಕಳವು ಪ್ರಕರಣ ನಡೆದಿದ್ದು, ಕುಟುಂಬ ಸಮೇತ ಸೆ.೧೯ರಂದು ಮನೆಗೆ ಬೀಗ ಹಾಕಿಕೊಂಡು ಕೆ.ಆರ್ ಪೇಟೆ ತಾಲೂಕಿನ ಇಕ್ಕೇರಿ, ದಬ್ಬಗಟ್ಟೆ ಗ್ರಾಮಕ್ಕೆ ತೆರಳಿದ್ದು, ಸುಮಾರು ೬ ದಿನಗಳ ನಂತರ ಸೆ.೨೪ರಂದು ಹಿಂದಿರುಗಿ ಬಂದಿದ್ದಾರೆ. ಈ ಸಂದರ್ಭದಲ್ಲಿ ಮನೆ ಬಾಗಿಲು ಬೀಗ ಮುರಿದಿರುವುದು ಕಂಡು ಬಂದಿದ್ದು, ಒಳ ಹೋಗಿ ಪರಿಶೀಲಿಸಿದಾಗ ಬೀರುವಿನಲ್ಲಿದ್ದ ೩ ಮತ್ತು ೪ ಗ್ರಾಂ. ತೂಕದ ತಲಾ ಎರಡು ಜೊತೆ ಕಿವಿಯೋಲೆ, ೬ ಗ್ರಾಂ. ತೂಕದ ಒಂದು ಜೊತೆ ಕಿವಿಯೋಲೆ, ೩ ಗ್ರಾಂ. ತೂಕದ ಒಂದು ಜೊತೆ ಕಿವಿಯ ಮಾಟಿ, ೬ ಗ್ರಾಂ. ತೂಕ ಕಿವಿ ಹ್ಯಾಂಗಿಂಗ್, ೫ ಗ್ರಾಂ. ತೂಕದ ಉಂಗುರ, ೩ ಗ್ರಾಂ. ತೂಕದ ಗುಂಡು ಡ್ರಾಪ್ಸ್ ಮತ್ತು ೩೫ ಗ್ರಾಂ. ತೂಕದ ಆಭರಣ ಸೇರಿದಂತೆ ಒಟ್ಟು ೧.೫೭ ಲಕ್ಷ ರು. ಮೌಲ್ಯದ ೭೧ ಗ್ರಾಂ. ತೂಕದ ಚಿನ್ನಾಭರಣಗಳನ್ನು ಹಾಗು ೧೫೦ ಗ್ರಾಂ. ತೂಕದ ೨ ಬೆಳ್ಳಿಯ ಲಕ್ಷ್ಮಿ ಮುಖವಾಡಗಳು, ೧೦೦ ಗ್ರಾಂ. ತೂಕ ಕಾಲುಚೈನ್, ೩೦ ಗ್ರಾಂ. ತೂಕದ ಒಂದು ಬೆಳ್ಳಿ ಕಡಗ ಮತ್ತು ೨೦ ಗ್ರಾಂ. ತೂಕದ ಬೆಳ್ಳಿಯ ಆಭರಣಗಳನ್ನು ಕಳವು ಮಾಡಲಾಗಿದೆ.
ಈ ಸಂಬಂಧ ಹಳೇನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
No comments:
Post a Comment