ಭದ್ರಾವತಿ ನ್ಯೂಟೌನ್ ವಿಐಎಸ್ಎಲ್ ಆಸ್ಪತ್ರೆ ಸಮೀಪದಲ್ಲಿರುವ ಶ್ರೀ ಕರುಮಾರಿಯಮ್ಮ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವ ಪ್ರತಿ ವರ್ಷದಂತೆ ಈ ಬಾರಿ ನಡೆಯುತ್ತಿದ್ದು, ಶನಿವಾರ ಲೋಕ ಕಲ್ಯಾಣಾರ್ಥವಾಗಿ ದುರ್ಗಾ ಹೋಮ ನಡೆಯಿತು.
ಭದ್ರಾವತಿ, ಅ. ೨೪: ನಗರದ ನ್ಯೂಟೌನ್ ವಿಐಎಸ್ಎಲ್ ಆಸ್ಪತ್ರೆ ಸಮೀಪದಲ್ಲಿರುವ ಶ್ರೀ ಕರುಮಾರಿಯಮ್ಮ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವ ಪ್ರತಿ ವರ್ಷದಂತೆ ಈ ಬಾರಿ ನಡೆಯುತ್ತಿದ್ದು, ಶನಿವಾರ ಲೋಕ ಕಲ್ಯಾಣಾರ್ಥವಾಗಿ ದುರ್ಗಾ ಹೋಮ ನಡೆಯಿತು.
ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಬಿ. ಕುಪ್ಪಸ್ವಾಮಿ ಮತ್ತು ಪದಾಧಿಕಾರಿಗಳ ನೇತೃತ್ವದಲ್ಲಿ ಕಾರ್ಯಕ್ರಮಗಳು ನಡೆಯುತ್ತಿದ್ದು, ಅಮ್ಮನವರಿಗೆ ಮೊದಲನೇ ದಿನ ಕಾಮಾಕ್ಷಿ, ಎರಡನೇ ದಿನ ಮೀನಾಕ್ಷಿ, ಮೂರನೇ ದಿನ ವಿಶಾಲಾಕ್ಷಿ, ನಾಲ್ಕನೇ ದಿನ ಅನ್ನಪೂರ್ಣೇಶ್ವರಿ, ಐದನೇ ದಿನ ಸರಸ್ವತಿ, ಆರನೇ ದಿನ ಅಖಿಲಾಂಡೇಶ್ವರಿ, ಏಳನೇ ದಿನ ಲಕ್ಷ್ಮೀ ಮತ್ತು ಎಂಟನೇ ದಿನ ದುರ್ಗಾದೇವಿ ಅಲಂಕಾರ ಕೈಗೊಳ್ಳಲಾಗಿತ್ತು.
ದೇವಸ್ಥಾನದ ಪ್ರಧಾನ ಅರ್ಚಕ ಕಾಶಿನಾಥ್, ವಿಜಯ್ಕುಮಾರ್ ಹಾಗು ದೇವಸ್ಥಾನ ಸಮಿತಿ ಪದಾಧಿಕಾರಿಗಳು, ಸದಸ್ಯರು, ಭಕ್ತಾಧಿಗಳು ಪಾಲ್ಗೊಂಡಿದ್ದರು.