ಶ್ರೀ ಛತ್ರಪತಿ ಶಿವಾಜಿ ಸೇವಾ ಸಂಘ ಸರ್ಕಾರಕ್ಕೆ ಆಗ್ರಹ
![](https://blogger.googleusercontent.com/img/a/AVvXsEg7ehC5wrJQ_GpAf5mgmF2NXjWmczGmV0Ikj_RjXjv8wO3xV3Zgbv0NpGncPNalaod9nb1JEKR5vWIDzYu_M7KMbGUPuTpe6ZCBnimtLa9CClFjYgbecJR1OmMfKphc6VqwCNOX1boI0GAybv_AEAWEZ5RPUwPYvgAYwMGHZeE_6ywi3W9pAAOCPX30JQ=s320-rw)
ಭದ್ರಾವತಿ ಶ್ರೀ ಛತ್ರಪತಿ ಶಿವಾಜಿ ಸೇವಾ ಸಂಘದ ಅಧ್ಯಕ್ಷ ಸಚಿನ್ ಎಸ್ ಸಿಂಧ್ಯಾ ಕಾಗವಾಡ ವಿಧಾಸಭಾ ಕ್ಷೇತ್ರದ ಶಾಸಕ ಶ್ರೀಮಂತ ಪಾಟೀಲ್ ಅವರನ್ನು ಭೇಟಿ ಮಾಡಿ ಸಚಿವ ಸ್ಥಾನ ನೀಡಲು ಸರ್ಕಾರಕ್ಕೆ ಆಗ್ರಹಿಸಿದರು.
ಭದ್ರಾವತಿ, ಸೆ. ೨೭ : ಕ್ಷತ್ರಿಯ ಮರಾಠ ಸಮುದಾಯದ ನಾಯಕರಲ್ಲಿ ಒಬ್ಬರಾಗಿರುವ ಕಾಗವಾಡ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀಮಂತ್ ಪಾಟೀಲ್ರವರಿಗೆ ಪುನಃ ಸಚಿವ ಸ್ಥಾನ ನೀಡಬೇಕೆಂದು ಶ್ರೀ ಛತ್ರಪತಿ ಶಿವಾಜಿ ಸೇವಾ ಸಂಘದ ಅಧ್ಯಕ್ಷ ಸಚಿನ್ ಎಸ್ ಸಿಂಧ್ಯಾ ಅಗ್ರಹಿಸಿದ್ದಾರೆ.
ಶ್ರೀಮಂತ್ ಪಾಟೀಲ್ರವರನ್ನು ಸಂಪುಟದಿಂದ ಕೈ ಬಿಡುವ ಮೂಲಕ ಮರಾಠ ಸಮುದಾಯವನ್ನು ಕಡೆಗಣಿಸಲಾಗಿದೆ. ತಕ್ಷಣ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಸೂಕ್ತ ಸ್ಥಾನಮಾನ ನೀಡಬೇಕು. ಮರಾಠ ಸಮುದಾಯದ ಏಳಿಗೆಗೆ ಮುಂದಾಗಬೇಕೆಂದು ಒತ್ತಾಯಿಸಲಾಗಿದೆ.
ಸಂಘದ ಮಾಜಿ ಅಧ್ಯಕ್ಷ ಯಸವಂತರಾವ್ ಘೋರ್ಪಡೆ, ಉಪಾಧ್ಯಕ್ಷ ವಿಶ್ವನಾಥ್ರಾವ್ ಸಿಂಧೆ, ಪ್ರಧಾನ ಕಾರ್ಯದರ್ಶಿ ವಿಶ್ವೇಶ್ವರ ರಾವ್ ಗಾಯಕ್ವಾಡ್, ಸಹ ಕಾರ್ಯದರ್ಶಿ ಮೋಹನ್ ರಾವ್, ಖಜಾಂಚಿ ರಮೇಶ್ ಪಟತಾರೆ, ನಿರ್ದೇಶಕರಾದ ಮಲ್ಲೇಶ್ ರಾವ್, ಪರಶುರಾಮ್ ರಾವ್, ಜಗನ್ನಾಥ ರಾವ್, ಕೃಷ್ಣೋಜಿರಾವ್, ರಾಮಚಂದ್ರ ರಾವ್, ಚಂದ್ರೋಜಿರಾವ್, ಶಂಕರ್ರಾವ್ ಸೇರಿದಂತೆ ಇನ್ನಿತರರು ಶ್ರೀಮಂತ್ ಪಾಟೀಲ್ ಅವರನ್ನು ಭೇಟಿ ಮಾಡಿ ಸರ್ಕಾರಕ್ಕೆ ಆಗ್ರಹಿಸಲಾಗಿದೆ.
ಅ.೧೧ರಂದು ವಾರ್ಷಿಕ ಮಹಾಸಭೆ:
ಶ್ರೀ ಛತ್ರಪತಿ ಶಿವಾಜಿ ಸೇವಾ ಸಂಘದ ವಾರ್ಷಿಕ ಮಹಾಸಭೆ ಅ.೧೧ರಂದು ಬೆಳಿಗ್ಗೆ ೧೧ ಗಂಟೆಗೆ ನಡೆಯಲಿದ್ದು, ಸದಸ್ಯರು ತಪ್ಪದೇ ಭಾಗವಹಿಸಿ ಯಶಸ್ವಿಗೊಳಿಸುವಂತೆ ಸಚಿನ್ ಎಸ್. ಸಿಂಧ್ಯಾ ಕೋರಿದ್ದಾರೆ.