ಭದ್ರಾವತಿ ಹೊಸಸೇತುವೆ ರಸ್ತೆಯಲ್ಲಿರುವ ಶ್ರೀ ಮಂಜುನಾಥಸ್ವಾಮಿ ಸಾಮಿಲ್ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಹಾನಿಯಾದ ವಾಣಿಜ್ಯ ಮಳಿಗೆಗಳ ಹಾಗು ಮನೆಗಳ ಮಾಲೀಕರಿಗೆ ಶುಕ್ರವಾರ ಶಾಸಕ ಬಿ.ಕೆ ಸಂಗಮೇಶ್ವರ್ ನೇತೃತ್ವದಲ್ಲಿ ಸಾಮಿಲ್ ಮಾಲೀಕ ನಾಗರಾಜ್ ಪರಿಹಾರದ ಚೆಕ್ ವಿತರಿಸಿದರು.
ಭದ್ರಾವತಿ, ಜ. ೭: ನಗರದ ಹೊಸಸೇತುವೆ ರಸ್ತೆಯಲ್ಲಿರುವ ಶ್ರೀ ಮಂಜುನಾಥಸ್ವಾಮಿ ಸಾಮಿಲ್ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಹಾನಿಯಾದ ವಾಣಿಜ್ಯ ಮಳಿಗೆಗಳ ಹಾಗು ಮನೆಗಳ ಮಾಲೀಕರಿಗೆ ಶುಕ್ರವಾರ ಶಾಸಕ ಬಿ.ಕೆ ಸಂಗಮೇಶ್ವರ್ ನೇತೃತ್ವದಲ್ಲಿ ಸಾಮಿಲ್ ಮಾಲೀಕ ನಾಗರಾಜ್ ಪರಿಹಾರದ ಚೆಕ್ ವಿತರಿಸಿದರು.
ಸಾಮಿಲ್ನಲ್ಲಿ ಬುಧವಾರ ರಾತ್ರಿ ಬೃಹತ್ ಪ್ರಮಾಣದ ಅಗ್ನಿ ಅವಘಡ ಸಂಭವಿಸಿದ ಪರಿಣಾಮ ಒಟ್ಟು ೫ ಮಳಿಗೆಗಳು ಹಾಗು ೩ ಮನೆಗಳು ಹಾನಿಯಾಗಿದ್ದವು. ಈ ಪೈಕಿ ಜಿ.ಎಸ್ ಆಟೋ ಮೊಬೈಲ್ಸ್ ಮತ್ತು ಸ್ಕಂದ ಸ್ಯಾನಿಟರ್ ಮಳಿಗೆಗಳು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದ್ದವು. ಈ ಎರಡು ಮಳಿಗೆಗಳ ಮಾಲೀಕರಿಗೆ ತಲಾ ರು. ೧೦ ಲಕ್ಷ, ಉಳಿದಂತೆ ಫ್ಲೆಕ್ಸ್ ಅಂಗಡಿ ಮಾಲೀಕರಿಗೆ ರು. ೧೦ ಲಕ್ಷ, ಪ್ಲೈವುಡ್ ಮತ್ತು ಬ್ಯಾಟರಿ ಅಂಗಡಿ ಮಾಲೀಕರಿಗೆ ತಲಾ ರು. ೩ ಲಕ್ಷ, ಕಟ್ಟಡ ಹಾನಿಯಾದ ಹಿನ್ನಲೆಯಲ್ಲಿ ಮಾಲೀಕರಿಗೆ ರು. ೨ ಲಕ್ಷ, ಒಂದು ಮನೆ ಮಾಲೀಕರಿಗೆ ರು. ೩ ಲಕ್ಷ, ಉಳಿದ ೨ ಮನೆಗಳ ಪೈಕಿ ಒಂದು ಮನೆ ಮಾಲೀಕರಲ್ಲಿ ರು.೨ ಲಕ್ಷ, ಇನ್ನೊಂದು ಮಾಲೀಕರಿಗೆ ರು. ೧ ಲಕ್ಷ ಪರಿಹಾರದ ಚೆಕ್ ವಿತರಿಸಲಾಯಿತು.
ಇದಕ್ಕೂ ಮೊದಲು ಶಾಸಕರ ನೇತೃತ್ವದಲ್ಲಿ ಪರಿಹಾರ ನೀಡುವ ಸಂಬಂಧ ಸಾಮಿಲ್ ಮಾಲೀಕರು ಹಾಗು ಹಾನಿಗೊಳಗಾದ ಮಳಿಗೆಗಳ ಹಾಗು ಮನೆಗಳ ಮಾಲೀಕರೊಂದಿಗೆ ಮಾತುಕತೆ ನಡೆಸಲಾಯಿತು.
ತಹಸೀಲ್ದಾರ್ ಆರ್. ಪ್ರದೀಪ್ ನಿಕ್ಕಮ್, ಮುಖಂಡರಾದ ಬಾಲಕೃಷ್ಣ, ಮೆಸ್ಕಾಂ ನಿವೃತ್ತ ಇಂಜಿನಿಯರ್ ಕೃಷ್ಣಮೂರ್ತಿ, ನಗರಸಭಾ ಸದಸ್ಯ ಆರ್. ಶ್ರೇಯಸ್(ಚಿಟ್ಟೆ), ಕಟ್ಟಡ ಕಾರ್ಮಿಕರ ಸಂಘದ ಕಾರ್ಯಾಧ್ಯಕ್ಷ ಅಭಿಲಾಷ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.