Tuesday, July 18, 2023

ವಿಐಎಸ್‌ಎಲ್‌ ಗಮನ ಸೆಳೆಯಲು ಬೃಹತ್‌ ಶತಮಾನೋತ್ಸವ ಆಚರಣೆಗೆ ಸಿದ್ದತೆ

ಶಾಸಕ ಬಿ.ಕೆ ಸಂಗಮೇಶ್ವರ್‌ ಆಹ್ವಾನಿಸಿದ ಹಿರಿಯ ಚಲನಚಿತ್ರ ನಟ ದೊಡ್ಡಣ್ಣ


    ಭದ್ರಾವತಿ, ಜು. ೧೮:  ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ನಿವೃತ್ತ ನೌಕರ, ಹಿರಿಯ ಚಲನಚಿತ್ರ ನಟ ದೊಡ್ಡಣ್ಣ ಅವರ ನೇತೃತ್ವದಲ್ಲಿ ವಿಐಎಸ್‌ಎಲ್‌ ಶತಮಾನೋತ್ಸವ ಸಂಭ್ರಮಾಚರಣೆಗೆ ಸಿದ್ದತೆಗಳು ನಡೆಯುತ್ತಿವೆ.  ಈ ನಡುವೆ ದೊಡ್ಡಣ್ಣ ಸಂಭ್ರಮಾಚರಣೆಗೆ ಗಣ್ಯರನ್ನು ಭೇಟಿಯಾಗಿ ಆಹ್ವಾನಿಸುತ್ತಿದ್ದು, ಕಳೆದ ೨ ದಿನಗಳ ಹಿಂದೆ ಬೆಂಗಳೂರಿನ ನಿವಾಸದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರನ್ನು ಭೇಟಿಯಾಗಿ ಆಹ್ವಾನಿಸಿದ್ದಾರೆ.
    ಕೇಂದ್ರ ಉಕ್ಕು ಪ್ರಾಧಿಕಾರ ಸುಮಾರು ೭ ತಿಂಗಳ ಹಿಂದೆ ವಿಐಎಸ್‌ಎಲ್‌ ಕಾರ್ಖಾನೆ ಮುಚ್ಚುವ  ತೀರ್ಮಾನ ಕೈಗೊಂಡು ಆದೇಶಿಸಿದ್ದು, ಇದರ ವಿರುದ್ಧ ಕಾರ್ಖಾನೆ ಮುಂಭಾಗ ಗುತ್ತಿಗೆ ಕಾರ್ಮಿಕರು ನಿರಂತರವಾಗಿ ಹೋರಾಟ ನಡೆಸುತ್ತಿದ್ದು, ವಿವಿಧ ರೀತಿಯ ಹೋರಾಟಗಳು ನಡೆದಿವೆ. ಬಹಿರಂಗಸಭೆ, ಪ್ರಧಾನ ಮಂತ್ರಿ, ಮುಖ್ಯಮಂತ್ರಿ ಹಾಗು ಕೇಂದ್ರ ಮತ್ತು ರಾಜ್ಯ ಸಚಿವರುಗಳಿಗೆ, ಸಂಸದರು, ಮಠಾಧೀಶರಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನಲೆಯಲ್ಲಿ ಕಾರ್ಖಾನೆ ನಿವೃತ್ತ ನೌಕರ, ಹಿರಿಯ ಚಲನಚಿತ್ರ ನಟ ದೊಡ್ಡಣ್ಣ ಇದೀಗ ಕಾರ್ಖಾನೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮತ್ತೊಂದು ರೀತಿಯ ಹೋರಾಟಕ್ಕೆ ಮುಂದಾಗಿದ್ದಾರೆ.


ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ನಿವೃತ್ತ ನೌಕರ, ಹಿರಿಯ ಚಲನಚಿತ್ರ ನಟ ದೊಡ್ಡಣ್ಣ ಅವರ ನೇತೃತ್ವದಲ್ಲಿ ವಿಐಎಸ್‌ಎಲ್‌ ಶತಮಾನೋತ್ಸವ ಸಂಭ್ರಮಾಚರಣೆಗೆ ಸಿದ್ದತೆಗಳು ನಡೆಯುತ್ತಿವೆ.  ಈ ನಡುವೆ ದೊಡ್ಡಣ್ಣ ಸಂಭ್ರಮಾಚರಣೆಗೆ ಗಣ್ಯರನ್ನು ಭೇಟಿಯಾಗಿ ಆಹ್ವಾನಿಸುತ್ತಿದ್ದು, ಕಳೆದ ೨ ದಿನಗಳ ಹಿಂದೆ ಬೆಂಗಳೂರಿನ ನಿವಾಸದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರನ್ನು ಭೇಟಿಯಾಗಿ ಆಹ್ವಾನಿಸಿದ್ದಾರೆ.
   ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಗಮನ ಸೆಳೆಯಲು ಕಾರ್ಖಾನೆಯ ಶತಮಾನೋತ್ಸವ ಸಂಭ್ರಮಾಚರಣೆ ಅದ್ದೂರಿಯಾಗಿ ಆಚರಿಸಲು ಮುಂದಾಗಿದ್ದಾರೆ. ಈಗಾಗಲೇ ಈ ಸಂಬಂಧ ಸಮಿತಿ ಸಹ ರಚನೆಯಾಗಿದ್ದು, ಸಂಭ್ರಮಾಚರಣೆಗೆ ದಿನಾಂಕ ಸಹ ನಿಗದಿಯಾಗಿದೆ. ಸಮಿತಿ ಗೌರವಾಧ್ಯಕ್ಷರಾಗಿ ಶಾಸಕ ಬಿ.ಕೆ ಸಂಗಮೇ‍ಶ್ವರ್‌ ಹಾಗು ಅಧ್ಯಕ್ಷರಾಗಿ ದೊಡ್ಡಣ್ಣ ಅವರನ್ನು ಆಯ್ಕೆ ಮಾಡಲಾಗಿದೆ.
    ಸಂಭ್ರಮಾಚರಣೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ಸಚಿವರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಸೇರಿದಂತೆ ರಾಜ್ಯ ಸಚಿವರು ಹಾಗು ವಿವಿಧ ಕ್ಷೇತ್ರಗಳ ಗಣ್ಯರು, ಹೋರಾಟಗಾರರು, ಉದ್ಯಮಿಗಳು ಸೇರಿದಂತೆ ಇನ್ನಿತರರನ್ನು ಆಹ್ವಾನಿಸಲಾಗುತ್ತಿದೆ.
    ದೊಡ್ಡಣ್ಣ ಸಮಿತಿ ಗೌರವಾಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇ‍ಶ್ವರನ್ನು ಬೆಂಗಳೂರಿನ ನಿವಾಸದಲ್ಲಿ ಭೇಟಿಯಾಗಿ ಆಹ್ವಾನಿಸಿದ್ದಾರೆ.

ಸರ್ಕಾರಿ ಶಾಲಾ ಮಕ್ಕಳಿಗೆ ಟೈ, ಬೆಲ್ಟ್‌, ನೋಟ್‌ಬುಕ್‌ವಿತರಣೆ

ಭದ್ರಾವತಿ  ನಗರಸಭೆ ವ್ಯಾಪ್ತಿ ಜಟ್‌ಪಟ್‌ನಗರ(ಆಶ್ರಯ ಬಡಾವಣೆ)ದಲ್ಲಿರುವ ಸರ್ಕಾರಿ ಶಾಲೆಯಲ್ಲಿ  ಮಂಗಳವಾರ ಭಾವಸಾರ ವಿಷನ್‌ಇಂಡಿಯಾ(ಬಿವಿಐ) ವತಿಯಿಂದ ಶಾಲಾ ಮಕ್ಕಳಿಗೆ ಟೈ ಹಾಗೂ ಬೆಲ್ಟ್ ವಿತರಿಸಲಾಯಿತು.
    ಭದ್ರಾವತಿ, ಜು. ೧೮ : ನಗರಸಭೆ ವ್ಯಾಪ್ತಿ ಜಟ್‌ಪಟ್‌ನಗರ(ಆಶ್ರಯ ಬಡಾವಣೆ)ದಲ್ಲಿರುವ ಸರ್ಕಾರಿ ಶಾಲೆಯಲ್ಲಿ  ಮಂಗಳವಾರ ಭಾವಸಾರ ವಿಷನ್‌ಇಂಡಿಯಾ(ಬಿವಿಐ) ವತಿಯಿಂದ ಶಾಲಾ ಮಕ್ಕಳಿಗೆ ಟೈ ಹಾಗೂ ಬೆಲ್ಟ್ ವಿತರಿಸಲಾಯಿತು.
    ಬಿವಿಐ ಅಧ್ಯಕ್ಷ ಡಿ.ಎ ರಾಕೇಶ್ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಎಲೆಕ್ಟೆಡ್ ಪ್ರೆಸಿಡೆಂಟ್ ಅಮಿತ್ ಗುಜ್ಜರ್‌ರವರ ಪ್ರಾಯೋಜತ್ವದಲ್ಲಿ ಪ್ರತಿ ವರ್ಷ ಸರ್ಕಾರಿ ಶಾಲೆ ಮಕ್ಕಳಿಗೆ ಟೈ ಹಾಗೂ ಬೆಲ್ಟ್ ವಿತರಿಸಲಾಗುತ್ತಿದೆ. ಇದೆ ರೀತಿ ಚೈಲ್ಡ್‌ವೆಲ್ಪೇರ್‌ಡೈರೆಕ್ಟರ್‌ಅನಿತಾ ಪ್ರದೀಪ್‌ಗುಜ್ಜರ್‌ಪ್ರಾಯೋಜತ್ವದಲ್ಲಿ ನೋಟ್‌ಬುಕ್‌ಗಳನ್ನು ವಿತರಿಸಲಾಯಿತು. ಅಲ್ಲದೆ ಭಾನುವಾರ ಇವರ ಪ್ರಾಯೋಜತ್ವದಲ್ಲಿ ಸಿಂಪಲ್‌ಟೆಕ್ನಿಕ್ವೆ ಫಾರ್‌ಲರ್ನಿಂಗ್‌ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
    ಕಾರ್ಯಕ್ರಮದಲ್ಲಿ ರಾಮ ರಾವ್ , ಆನಂದ್ ಉತ್ತರಕರ, ಅನಿತಾ ಗುಜ್ಜರ್,  ರೇಖಾ ಹರೀಶ್ ಸೇರಿದಂತೆ ಬಿವಿಐ ಸದಸ್ಯರು ಉಪಸ್ಥಿತರಿದ್ದರು. ಶಾಲೆಯ ಶಿಕ್ಷಕ ಬಸವಂತ್ ರಾವ್ ದಾಳೆ ವಂದಿಸಿದರು.

ಯಾವುದೇ ವೃತ್ತಿಯಲ್ಲಿ ಪ್ರಾಮಾಣಿಕತೆ, ನಿಷ್ಠೆ, ಸಮರ್ಪಣಾ ಮನೋಭಾವ ಮುಖ್ಯ : ಚಲನಚಿತ್ರ ನಟ ಸುಂದರ್‌ ರಾಜ್‌

ಭದ್ರಾವತಿಯಲ್ಲಿಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಪ್ರಾಯೋಜಕತ್ವದಲ್ಲಿ  ಅಪೇಕ್ಷ ನೃತ್ಯ ಕಲಾ ವೃಂದದಿಂದ ಸಿದ್ದಾರೂಢ ನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ಏರ್ಪಡಿಸಿದ್ದ ಡಾ. ವಿಷ್ಣುವರ್ಧನ್ ಸಂಗೀತ, ನೃತ್ಯ ಸಂಭ್ರಮ ಕಾರ್ಯಕ್ರಮದಲ್ಲಿ  ಹಿರಿಯ ಚಲನಚಿತ್ರ ನಟ ಸುಂದರ್ ರಾಜ್ ಅವರಿಗೆ ಡಾ.ವಿಷ್ಣುವರ್ಧನ್ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
    ಭದ್ರಾವತಿ, ಜು. ೧೮ : ಯಾವುದೇ ವೃತ್ತಿಯಲ್ಲಿ ಪ್ರಾಮಾಣಿಕತೆ, ನಿಷ್ಠೆ, ಸಮರ್ಪಣಾ ಮನೋಭಾವದಿಂದ ಕಾರ್ಯ ನಿರ್ವಹಿಸಿದಾಗ ಯಶಸ್ಸು, ಪ್ರಶಸ್ತಿ, ಸನ್ಮಾನಗಳಿಗೆ ಪಾತ್ರರಾಗುತ್ತೇವೆ ಎಂದು ಹಿರಿಯ ಚಲನಚಿತ್ರ ನಟ ಸುಂದರ್ ರಾಜ್ ಹೇಳಿದರು.
    ಅವರು  ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಪ್ರಾಯೋಜಕತ್ವದಲ್ಲಿ ನಗರದ ಅಪೇಕ್ಷ ನೃತ್ಯ ಕಲಾ ವೃಂದದಿಂದ ಸಿದ್ದಾರೂಢ ನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ಏರ್ಪಡಿಸಿದ್ದ ಡಾ. ವಿಷ್ಣುವರ್ಧನ್ ಸಂಗೀತ, ನೃತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಡಾ.ವಿಷ್ಣುವರ್ಧನ್ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
    ಜೀವನದಲ್ಲಿ ತಂದೆ-ತಾಯಿ, ಗುರುಗಳು, ನೆರೆಹೊರೆಯವರ ಆಶೀರ್ವಾದೊಂದಿಗೆ ಮುನ್ನಡೆಯಬೇಕು. ಮನುಷ್ಯ ಮನುಷ್ಯರಲ್ಲಿ ಪ್ರೀತಿ ವಿಶ್ವಾಸ ಹಂಚಿ ಸಹಬಾಳ್ವೆ ಮೂಲಕ ರಾಗ ದ್ವೇಷ ಕಿತ್ತೊಗೆದಾಗ ಸಮಾಜದ ಅಭಿವೃಧ್ಧಿ ಆಗುತ್ತದೆ. ಧರ್ಮ ನಂಬಿ, ಜಾತಿ ನಂಬಬೇಡಿ. ಮನುಷ್ಯತ್ವ, ಮಾನವೀಯತೆಯ ಕಳಕಳಿ ಬೆಳೆಸಿಕೊಳ್ಳಿ ಎಂದರು.
    ಶಿವಮೊಗ್ಗ ಕರ್ನಾಟಕ ಸಂಘದ ಅಧ್ಯಕ್ಷ ಸುಂದರ್ ರಾಜ್  ಮಾತನಾಡಿ, ಮನುಷ್ಯ ಎಷ್ಟೇ ಐಶ್ವರ್ಯ, ಅಂತಸ್ತು, ಪ್ರಸಿದ್ದಿ, ಪ್ರಶಸ್ತಿ, ಸನ್ಮಾನಗಳು ಪಡೆದರೂ ಆತನಿಗೆ ಅಂತಿಮವಾಗಿ ಮನಸ್ಸಿಗೆ ಶಾಂತಿ ಸಿಗುವುದು ಆಧ್ಯಾತ್ಮ, ಗುರುವಿನ ಮಾರ್ಗದರ್ಶನದ ಸಾನಿಧ್ಯದಿಂದ ಮಾತ್ರ ಎಂದರು.
    ವಿಷ್ಣು ಸೇನಾ ಸಮಿತಿ ಅಧ್ಯಕ್ಷ ರಾಜುಗೌಡ ಹಾಗು ಶ್ರೀಧರ್ ಮಾತನಾಡಿ, ವಿಷ್ಣುವರ್ಧನ್ ನಿಧನರಾಗಿ ಹಲವು ವರ್ಷಗಳು ಕಳೆದರೂ ಸಹ ಅವರ ಸ್ಮಾರಕ ಇನ್ನೂ ನಿರ್ಮಾಣ ಆಗಿಲ್ಲ.  ಇದರ ಬಗ್ಗೆ ಚಲನಚಿತ್ರ ವಾಣಿಜ್ಯ ಮಂಡಳಿ ಯಾವುದೇ ರೀತಿಯ ಅಗತ್ಯ ಕ್ರಮ ಕೈಗಳ್ಳುತ್ತಿಲ್ಲ. ಅಭಿಮಾನ್ ಸ್ಟುಡಿಯೋದವರು ಅವರ ಸಮಾಧಿ ಸ್ಥಳದಲ್ಲಿ ೧೦ ಗುಂಟೆ ಜಾಗ ನೀಡಿದ್ದರು. ಆದರೆ ನಂತರ ಇದರ ಬಗ್ಗೆ ವಾದ ವಿವಾದ ಉಂಟಾಗಿ, ಈಗ ವ್ಯಾಜ್ಯ ಹೈಕೋರ್ಟ್‌ನಲ್ಲಿದೆ. ಇದರ ಬಗ್ಗೆ ವಿಷ್ಣು ಸೇನಾ ಸಮಿತಿಯಿಂದ ನ್ಯಾಯಾಲಯದಲ್ಲಿ ಹೋರಾಟ ಮಾಡಲಾಗುತ್ತಿದೆ. ರಾಜ್ ಕಲಾ ಭವನ ಇದೆ, ಅಂಬರೀಷ್ ಕಲಾ ಭವನ ಇದೆ. ಆದರೆ ವಿಷ್ಣುವರ್ಧನ್ ಹೆಸರಿನಲ್ಲಿ ಕಲಾ ಭವನ ಇಲ್ಲ. ಸ್ಮಾರಕನೂ ಇಲ್ಲ. ಆದ್ದರಿಂದ ಇನ್ನಾದರೂ ಇದರ ಬಗ್ಗೆ ಕಾರ್ಯ ಪ್ರವೃತರಾಗ ಬೇಕು. ಇದರ ಬಗ್ಗೆ ಸರ್ಕಾರದ ಜೊತೆ ವ್ಯವಹರಿಸಲಾಗುತ್ತಿದೆ ಎಂದರು.
    ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್. ಉಮೇಶ್ ಸಮಾಜ ಸೇವಕ ಪಿ. ವೆಂಕಟರಮಣ ಶೇಟ್, ಗಾಯಕ ಸುಬ್ರಮಣ್ಯ ಕೆ. ಐಯ್ಯರ್, ಅರ್ಜುನ್, ರಾಧಾ ಗಂಗಾಧರ್, ಆನಂದ ರಾಜ್, ರಘು, ತುಳಸಿಕೃಷ್ಣ, ವಸಂತ ಆರ್ ಮಾಧವ, ಹರೀಶ್ ಗೌಡ, ಶರಾವತಿ, ಯದುನಂದನ್ ಗೌಡ, ಎಸ್. ಮಂಜುನಾಥ್‌ರವರುಗಳಿಗೆ ಅಪೇಕ್ಷ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
    ವೀರಕಪುತ್ರ ಶ್ರೀನಿವಾಸ್ ವಿಷ್ಣುವರ್ಧನ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಭಾರತಿ ಗೋವಿಂದ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಅಪೇಕ್ಷ ಮಂಜುನಾಥ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಎಸ್. ಮಣಿಶೇಖರ್, ಶ್ರೀಧರ್, ಎಂ. ಶ್ರೀನಿವಾಸ್, ಕೋಕಿಲ, ಬನಶಂಕರಿ, ರಾಧಾ, ವೈ.ಕೆ ಹನುಮಂತಯ್ಯ, ಕವಿತಾ ರಾವ್, ರವಿ, ನಟರಾಜ್‌, ನಾಗರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಚನ್ನಪ್ಪ ಸ್ವಾಗತಿಸಿ, ಅರಳಿಹಳ್ಳಿ ಅಣ್ಣಪ್ಪ ನಿರೂಪಿಸಿದರು.