Sunday, March 7, 2021

ಜಾನಕಮ್ಮ ನಿಧನ


ಜಾನಕಮ್ಮ
   ಭದ್ರಾವತಿ, ಮಾ. ೭: ನಗರದ ಹಿರಿಯ ಪತ್ರಕರ್ತ ರವೀಂದ್ರನಾಥ್(ಬ್ರದರ್‍ಸ್)ರವರ ತಾಯಿ ಜಾನಕಮ್ಮ(೯೩) ಭಾನುವಾರ ನಿಧನ ಹೊಂದಿದರು.
    ಜಾನಕಮ್ಮ ಜನ್ನಾಪುರ ಕುರುಬರ ಬೀದಿ ನಿವಾಸಿವಾಗಿದ್ದು, ೫ ಗಂಡು, ೨ ಹೆಣ್ಣು ಮಕ್ಕಳನ್ನು ಬಿಟ್ಟಗಲಿದ್ದಾರೆ. ಇವರ ಅಂತ್ಯಕ್ರಿಯೆ ಸೋಮವಾರ ಬೆಳಗ್ಗೆ ೧೧ ಗಂಟೆಗೆ ಹುತ್ತಾಕಾಲೋನಿ ಹಿಂದೂ ರುದ್ರಭೂಮಿಯಲ್ಲಿ ನೆರವೇರಲಿದೆ. ಮೃತರ ನಿಧನಕ್ಕೆ ವಿವಿಧ ಸಂಘ-ಸಂಸ್ಥೆಗಳು, ಗಣ್ಯರು ಸಂತಾಪ ಸೂಚಿಸಿದ್ದಾರೆ.  

ವೈ. ಲೋಹಿತ್‌ಗೆ ಡಾಕ್ಟರೇಟ್ ಪದವಿ

ವೈ. ಲೋಹಿತ್
   ಭದ್ರಾವತಿ, ಮಾ. ೭: ನ್ಯೂಟೌನ್ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ವೈ. ಲೋಹಿತ್ ಕುವೆಂಪು ವಿಶ್ವವಿದ್ಯಾಲನಿಲಯದ ಡಾಕ್ಟರೇಟ್ ಪದವಿ ಪಡೆದುಕೊಂಡಿದ್ದಾರೆ.
   ಕುವೆಂಪು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಎಸ್.ಎಂ ಪ್ರಕಾಶ್ ಮಾರ್ಗದರ್ಶನಲ್ಲಿ ದೈಹಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ 'ಎಫಿಕೆಸಿ ಆಫ್ ಫ್ಲೈಮೆಟ್ರಿಕ್ ಟ್ರೈನಿಂಗ್ ಆನ್ ಆಕ್ವ, ಲ್ಯಾಂಡ್ ಅಂಡ್ ಸ್ಯಾಂಡ್ ಸರ್ಫೇಸಸ್' (Efficacy of Plyometric Training on Aqua, Land and Sand Surfaces)  ಪ್ರಬಂಧ ಮಂಡಿಸಿ ಡಾಕ್ಟರೇಟ್ ಪದವಿ ಪಡೆದುಕೊಂಡಿದ್ದಾರೆ.
   ಲೋಹಿತ್ ನಗರದ ಗಣೇಶ್ ಕಾಲೋನಿ ನಿವಾಸಿ, ವಿಐಎಸ್‌ಎಲ್ ನಿವೃತ್ತ ಕಾರ್ಮಿಕ, ಕಬಡ್ಡಿ ಕ್ರೀಡಾಪಟು ಯಲ್ಲೋಜಿ-ಅಂಬುಜಾ ಬಾಯಿ ದಂಪತಿ ಪುತ್ರರಾಗಿದ್ದಾರೆ. ಲೋಹಿತ್ ಸಹ ಅತ್ಯುತ್ತಮ ವಾಲಿಬಾಲ್ ಕ್ರೀಡಾಪುಟ ಆಗಿದ್ದು, ಕುವೆಂಪು ವಿ.ವಿ ಕ್ರೀಡಾಕೂಟ ಹಾಗು ರಾಜ್ಯಮಟ್ಟದ ಪಂದ್ಯಾವಳಿಗಳನ್ನು ಪ್ರತಿನಿಧಿಸಿದ್ದಾರೆ.


ಯಶಸ್ವಿಯಾಗಿ ಮುಕ್ತಾಯಗೊಂಡ ೩ನೇ ವರ್ಷದ ಜನೌಷಧ ದಿವಸ್

ಭದ್ರಾವತಿ ಜನ್ನಾಪುರದ ಜನೌಷಧಿ ಕೇಂದ್ರ ಹಾಗು ಸ್ಕಂದ ಟ್ರಸ್ಟ್ ವತಿಯಿಂದ ಭಾನುವಾರ ನ್ಯೂಟೌನ್ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ೩ನೇ ವರ್ಷದ ಜನೌಷಧ ದಿವಸ್ ಆಚರಿಸಲಾಯಿತು. ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ಧರ್ಮಪ್ರಸಾದ್ ಬಹುಮಾನ ವಿತರಿಸಿದರು.
   ಭದ್ರಾವತಿ, ಮಾ. ೭: ನಗರದ ಜನ್ನಾಪುರದ ಜನೌಷಧಿ ಕೇಂದ್ರ ಹಾಗು ಸ್ಕಂದ ಟ್ರಸ್ಟ್ ವತಿಯಿಂದ ಭಾನುವಾರ ನ್ಯೂಟೌನ್ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ೩ನೇ ವರ್ಷದ ಜನೌಷಧ ದಿವಸ್ ಆಚರಿಸಲಾಯಿತು.
     ಕಾರ್ಯಕ್ರಮವನ್ನು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ಧರ್ಮಪ್ರಸಾದ್ ಉದ್ಘಾಟಿಸಿ ಕೇಂದ್ರ ಸರ್ಕಾರ ಜನೌಷಧ ಯೋಜನೆ ಜಾರಿಗೆ ತಂದಿರುವ ಉದ್ದೇಶಗಳನ್ನು ವಿವರಿಸಿದರು. ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಅಲ್ಲದೆ ಪ್ರಧಾನಿ ನರೇಂದ್ರ ಮೋದಿಯವರು ಜನೌಷಧ ಫಲಾನುಭವಿಗಳೊಂದಿಗೆ ನಡೆಸಿದ ನೇರ ಸಂವಾದ ಕಾರ್ಯಕ್ರಮ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸಲಾಗಿತ್ತು.  
   ಜನೌಷಧ ದಿನಾಚರಣೆ ಅಂಗವಾಗಿ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ಉಚಿತ ಸ್ಯಾನಿಟರಿ ಪ್ಯಾಡ್ ವಿತರಣೆ, ಆನೇಕೊಪ್ಪ ಎಂಪಿಎಂ ಬಡಾವಣೆಯಲ್ಲಿರುವ ಸಂಜೀವಿನಿ ಹಿರಿಯ ನಾಗರೀಕರ ಆರೈಕೆ ಕೇಂದ್ರದಲ್ಲಿ ಉಚಿತ ಆರೋಗ್ಯ ತಪಾಸಣೆ, ಔಷಧಿ ವಿತರಣೆ, ಅಂಬೇಡ್ಕರ್ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಹಾಗು ಅರಿವು ಕಾರ್ಯಕ್ರಮ ಹಾಗು ಲಯನ್ಸ್‌ಕ್ಲಬ್‌ನಲ್ಲಿ ಹಿರಿಯ ವೈದ್ಯ ಡಾ. ಎಂ. ರವೀಂದ್ರನಾಥ ಕೋಠಿ ನೇತೃತ್ವದಲ್ಲಿ ಉಚಿತ ರಕ್ತದೊತ್ತಡ ಮತ್ತು ಮಧುಮೇಹ ತಪಾಸಣೆ ಒಟ್ಟು ೭ ದಿನಗಳ ಕಾಲ ಜನಸೇವಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
    ಕಾರ್ಯಕ್ರಮದಲ್ಲಿ ಸ್ಕಂದ ಟ್ರಸ್ಟ್‌ನ ಬಿ. ಶ್ರೀಧರ, ನಾರಾಯಣ, ಜನ್ನಾಪುರ ಜನೌಷಧ ಕೇಂದ್ರದ ಜಿ.ಕೆ ಮಧುಸೂದನ್, ಸುನಿಲ್‌ಗಾಯಕ್ವಾಡ್   ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.