Tuesday, July 8, 2025

ರೋಟರಿ ಕ್ಲಬ್ ನೂತನ ಅಧ್ಯಕ್ಷರಾಗಿ ಕೆ.ಎಚ್ ಶಿವಕುಮಾರ್ ಅಧಿಕಾರ ಸ್ವೀಕಾರ

ಭದ್ರಾವತಿ ನಗರದ ಉಬ್ಳೆಬೈಲು ರಸ್ತೆ, ನ್ಯೂಟೌನ್, ರೋಟರಿ ಕ್ಲಬ್ ಸಭಾಂಗಣದಲ್ಲಿ ಸೋಮವಾರ ಸಂಜೆ ಏರ್ಪಡಿಸಲಾಗಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ರೋಟರಿ ಕ್ಲಬ್ ಪ್ರಸಕ್ತ ಸಾಲಿನ ನೂತನ ಅಧ್ಯಕ್ಷರಾಗಿ ಕೆ.ಎಚ್ ಶಿವಕುಮಾರ್ ಅಧಿಕಾರ ಸ್ವೀಕರಿಸಿದರು. 
    ಭದ್ರಾವತಿ ; ನಗರದ ಉಬ್ಳೆಬೈಲು ರಸ್ತೆ, ನ್ಯೂಟೌನ್, ರೋಟರಿ ಕ್ಲಬ್ ಸಭಾಂಗಣದಲ್ಲಿ ಸೋಮವಾರ ಸಂಜೆ ಏರ್ಪಡಿಸಲಾಗಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ರೋಟರಿ ಕ್ಲಬ್ ಪ್ರಸಕ್ತ ಸಾಲಿನ ನೂತನ ಅಧ್ಯಕ್ಷರಾಗಿ ಕೆ.ಎಚ್ ಶಿವಕುಮಾರ್ ಅಧಿಕಾರ ಸ್ವೀಕರಿಸಿದರು. 
    ಜಿಲ್ಲಾ ಕ್ಲಬ್ ೩೧೬೦ರ ಪಿಡಿಜಿ ಮತ್ತು ಆರ್.ಸಿ ಚಿತ್ರದುರ್ಗ ಕೆ. ಮಧುಪ್ರಸಾದ್ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ಬೋಧಿಸಿದರು. ನಂತರ ಮಾತನಾಡಿದ ಅವರು, ಉತ್ತಮ ಆಡಳಿತ ನಿರ್ವಹಣೆಯಿಂದ ಜಿಲ್ಲಾ ಕ್ಲಬ್ ವ್ಯಾಪ್ತಿಯಲ್ಲಿ ಹೆಚ್ಚಿನ ಗಮನ ಸೆಳೆದಿರುವ ಭದ್ರಾವತಿ ರೋಟರಿ ಕ್ಲಬ್ ಇನ್ನೂ ಹೆಚ್ಚಿನ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡು ವಿಸ್ತಾರಗೊಳ್ಳುವಂತಾಗಲಿ ಎಂದರು. 
    ನೂತನ ಕಾರ್ಯದರ್ಶಿಯಾಗಿ ಎಚ್. ಆರ್ ಕೇಶವಮೂರ್ತಿ ಹಾಗು ಆನ್ಸ್ ಕ್ಲಬ್ ಅಧ್ಯಕ್ಷರಾಗಿ ಸವಿತ ರಾಜೇಂದ್ರಕುಮಾರ್ ಲೋಧ ಮತ್ತು ಕಾರ್ಯದರ್ಶಿ ಸವಿತ ಶಾಂತಕುಮಾರ್ ತಂಡದವರು ಅಧಿಕಾರ ಸ್ವೀಕರಿಸಿದರು. ಕ್ಲಬ್ ಅಧ್ಯಕ್ಷ ರಾಘವೇಂದ್ರ ಉಪಾಧ್ಯಾಯ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿದರು. 
     ಜಿಲ್ಲಾ ಕ್ಲಬ್ ೩೧೮೨ರ ಎ.ಜಿ ಕೆ.ಪಿ ಶೆಟ್ಟಿ ಹಾಗೂ ಜಿಲ್ಲಾ ಕ್ಲಬ್ ೩೧೮೨ರ ಝಡ್.ಎಲ್ ಜಗದೀಶ್ ಸರ್ಜಾ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 
ನೂತನ ಪದಾಧಿಕಾರಿಗಳು: 
    ರೋಟರಿ ಕ್ಲಬ್ ಅಧ್ಯಕ್ಷ-ಕೆ.ಎಚ್ ಶಿವಕುಮಾರ್, ಉಪಾಧ್ಯಕ್ಷರು- ಪಿ. ಸುಧಾಕರ ಶೆಟ್ಟಿ, ರಾಜೇಂದ್ರಕುಮಾರ್ ಲೋಧ, ಕ್ಲಬ್ ಟ್ರೈನರ್-ಕೆ.ಎಸ್ ಶೈಲೇಂದ್ರ, ಕಾರ್ಯದರ್ಶಿ-ಎಚ್.ಆರ್ ಕೇಶವಮೂರ್ತಿ, ನಿರ್ಗಮಿತ ಅಧ್ಯಕ್ಷ ಜಿ. ರಾಘವೇಂದ್ರ ಉಪಾಧ್ಯಾಯ, ಸಹ ಕಾರ್ಯದರ್ಶಿ-ಎಚ್.ಎಸ್ ದಿನೇಶ್, ಬಿ.ಎಸ್ ಚಂದ್ರಶೇಖರ್, ಖಜಾಂಚಿ-ಟಿ.ಎಸ್ ದುಷ್ಯಂತ್ ರಾಜ್, ನಿರ್ದೇಶಕರು-ಇಳೆಯರಾಜ, ಶ್ರೀನಿವಾಸ್, ವಿ. ಉದಯಕುಮಾರ್, ಆರ್.ಸಿ ಬೆಂಗಳೂರಿ, ಎಂ.ಎನ್ ಗಿರೀಶ್, ಕೆ.ಎಚ್ ತೀರ್ಥಯ್ಯ, ಹಾಲೇಶ್ ಎಸ್. ಕೂಡ್ಲಿಗೆರೆ, ಶ್ವೇತ ಎಂ. ರಮೇಶ್, ಮಲ್ಲಿಕಾರ್ಜುನ ಜ್ಯೋತಿ, ಆರ್. ನವೀನ್ ಮತ್ತು ಡಾ. ಕೆ. ನಾಗರಾಜ್. 
 

ಭದ್ರಾವತಿ ನಗರದ ಉಬ್ಳೆಬೈಲು ರಸ್ತೆ, ನ್ಯೂಟೌನ್, ರೋಟರಿ ಕ್ಲಬ್ ಸಭಾಂಗಣದಲ್ಲಿ ಸೋಮವಾರ ಸಂಜೆ ಏರ್ಪಡಿಸಲಾಗಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ರೋಟರಿ ಕ್ಲಬ್ ಪ್ರಸಕ್ತ ಸಾಲಿನ ನೂತನ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು. 

ಸೇವೆ ಸಲ್ಲಿಸಲು ಬ್ಯಾಂಕಿಂಗ್ ಕ್ಷೇತ್ರ ಸಹಕಾರಿ : ಸಿ.ಡಿ ಮಂಜುನಾಥ್

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಭದ್ರಾವತಿ ಹೊಳೆಹೊನ್ನೂರು ವೃತ್ತ ಶಾಖೆ ಪ್ರಬಂಧಕರಾಗಿ ಸುಮಾರು ೩ ವರ್ಷ ಕರ್ತವ್ಯ ನಿರ್ವಹಿಸಿ ವರ್ಗಾವಣೆಗೊಂಡಿರುವ ಸಿ.ಡಿ ಮಂಜುನಾಥ್ ಅವರಿಗೆ ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಯಿತು. 
    ಭದ್ರಾವತಿ : ವೃತ್ತಿ ಬದುಕಿನ ಜೊತೆಗೆ ಉತ್ತಮ ಸೇವೆ ಸಲ್ಲಿಸಲು ಬ್ಯಾಂಕಿಂಗ್ ಕ್ಷೇತ್ರ ಸಹಕಾರಿಯಾಗಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಗರದ ಹೊಳೆಹೊನ್ನೂರು ವೃತ್ತ ಶಾಖೆಯ ಪ್ರಬಂಧಕ ಸಿ.ಡಿ. ಮಂಜುನಾಥ್ ಹೇಳಿದರು. 
    ವರ್ಗಾವಣೆ ಹಿನ್ನೆಲೆಯಲ್ಲಿ ಬ್ಯಾಂಕಿನಲ್ಲಿ ಏರ್ಪಡಿಸಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸಿಬ್ಬಂದಿ ಹಾಗೂ ಗ್ರಾಹಕರನ್ನುದ್ದೇಶಿಸಿ ಅವರು ಮಾತನಾಡಿದರು. ಸುಮಾರು ಮೂರು ವರ್ಷಗಳ ಕಾಲ ಇಲ್ಲಿ ಕರ್ತವ್ಯ ನಿರ್ವಹಿಸಿರುವುದು ಸಾಕಷ್ಟು ತೃಪ್ತಿ ತಂದಿದೆ. ಅನೇಕ ಅನುಭವಗಳನ್ನು ನೀಡಿದೆ. ರೈತರು, ವರ್ತಕರು, ಉದ್ಯಮಿಗಳು ಸೇರಿದಂತೆ ಎಲ್ಲಾ ವಲಯಗಳಿಗೆ ಉತ್ತಮ ಸೇವೆ ಸಲ್ಲಿಸಲು ಬ್ಯಾಂಕಿಂಗ್ ಕ್ಷೇತ್ರ ಸಹಕಾರಿಯಾಗಿದ್ದು, ಗ್ರಾಹಕರು ಸಾಲ-ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳುವ ಮೂಲಕ ಸ್ವಾವಲಂಬನೆ ಸಾಧಿಸುವಂತೆ ಕರೆ ನೀಡಿದರು.
    ಸಿಬ್ಬಂದಿಗಳಾದ ರಮೇಶ್, ನಾಗರತ್ನ, ಲೋನಪ್ಪನ್, ದಶರಥ್, ರಾಜು ಹಾಗೂ ಗ್ರಾಹಕರು ಮಾತನಾಡಿ, ಸದಾಕಾಲ ಕ್ರಿಯಾಶೀಲತೆಯಿಂದ ಸಾಕಷ್ಟು ಒತ್ತಡಗಳ ನಡುವೆಯೂ ಗ್ರಾಹಕರೊಂದಿಗೆ ನಗುಮುಖದಿಂದ ಸ್ಪಂದಿಸುತ್ತಿದ್ದ ವ್ಯವಸ್ಥಾಪಕರ ಸೇವೆಯನ್ನು ಸ್ಮರಿಸಿದರು.