ಭದ್ರಾವತಿಯಲ್ಲಿ ಕೊರೋನಾ ಸೋಂಕಿನಿಂದ ಸೋಮವಾರ ಇಬ್ಬರು ಮುಸ್ಲಿಂ ಸಮುದಾಯವರು ಮೃತಪಟ್ಟಿದ್ದು, ಕೋವಿಡ್ ಮಾದರಿಯಂತೆ ಇವರ ಅಂತ್ಯಕ್ರಿಯೆ ನಡೆಸಲಾಯಿತು.
ಭದ್ರಾವತಿ, ಆ. ೧೭: ಕೊರೋನಾ ಸೋಂಕಿನಿಂದ ಸೋಮವಾರ ಇಬ್ಬರು ಮುಸ್ಲಿಂ ಸಮುದಾಯವರು ಮೃತಪಟ್ಟಿದ್ದು, ಕೋವಿಡ್ ಮಾದರಿಯಂತೆ ಇವರ ಅಂತ್ಯಕ್ರಿಯೆ ನಡೆಸಲಾಗಿದೆ.
ಓರ್ವ ವ್ಯಕ್ತಿಯ ಅಂತ್ಯಕ್ರಿಯೆ ತರೀಕೆರೆ ರಸ್ತೆಯಲ್ಲಿರುವ ಖಬರ್ಸ್ತಾನ್ನಲ್ಲಿ ಹಾಗು ಇನ್ನೊಬ್ಬ ವ್ಯಕ್ತಿಯ ಅಂತ್ಯಕ್ರಿಯೆಯನ್ನು ತಿಮ್ಲಾಪುರ ಖಬರ್ಸ್ತಾನ್ನಲ್ಲಿ ನಡೆಸಲಾಗಿದೆ.
ಅಂತ್ಯಕ್ರಿಯೆಯಲ್ಲಿ ಪೌರಾಯುಕ್ತ ಮನೋಹರ್, ಆರೋಗ್ಯ ಇಲಾಖೆ ಹಾಗು ನಗರಸಭೆ ಸಿಬ್ಬಂದಿಗಳು ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರು ಪಾಲ್ಗೊಂಡಿದ್ದರು.