Sunday, July 3, 2022

ದಕ್ಷಿಣ ಭಾರತ ಚಲನಚಿತ್ರ ನೌಕರರ ಫೆಡರೇಷನ್ ಅಧ್ಯಕ್ಷ ಆರ್.ಕೆ ಸೆಲ್ವಮಣಿ ಸೇರಿದಂತೆ ಗಣ್ಯರ ತಂಡ ಆಗಮನ : ಅದ್ದೂರಿ ಸ್ವಾಗತ

ದಕ್ಷಿಣ ಭಾರತ ಚಲನಚಿತ್ರ ನೌಕರರ ಫೆಡರೇಷನ್ ಅಧ್ಯಕ್ಷ ಆರ್.ಕೆ ಸೆಲ್ವಮಣಿ ಸೇರಿದಂತೆ ಅನೇಕ ಗಣ್ಯರು ಭಾನುವಾರ ಭದ್ರಾವತಿಯಲ್ಲಿ ಉದ್ಯಮಿ ಎ. ಮಾಧು ಅವರ ನಿವಾಸಕ್ಕೆ ಭೇಟಿ ನೀಡಿದರು.
    ಭದ್ರಾವತಿ, ಜು. ೩: ದಕ್ಷಿಣ ಭಾರತ ಚಲನಚಿತ್ರ ನೌಕರರ ಫೆಡರೇಷನ್ ಅಧ್ಯಕ್ಷ ಆರ್.ಕೆ ಸೆಲ್ವಮಣಿ ಸೇರಿದಂತೆ ಅನೇಕ ಗಣ್ಯರು ಭಾನುವಾರ ನಗರದ ಉದ್ಯಮಿ ಎ. ಮಾಧು ಅವರ ನಿವಾಸಕ್ಕೆ ಭೇಟಿ ನೀಡಿದರು.
      ಶಿವಮೊಗ್ಗದಲ್ಲಿ ರುದ್ರಾಕ್ಷ ಫೌಂಡೇಷನ್ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಚೆನ್ನೈನಿಂದ ಆಗಮಿಸಿದ ಸಂಗೀತ ನಿರ್ದೇಶಕ ಗಂಗೈ ಅಮರನ್, ಚಲನಚಿತ್ರ ನಿರ್ದೇಶಕ ಹಾಗು ದಕ್ಷಿಣ ಭಾರತ ಚಲನಚಿತ್ರ ನೌಕರರ ಫೆಡರೇಷನ್ ಅಧ್ಯಕ್ಷ ಆರ್. ಸೆಲ್ವಮಣಿ ಮತ್ತು ಚಲನಚಿತ್ರ ಹಾಗು ಟಿ.ವಿ ಕಲಾವಿದ ರಾಜ ಚೆಲ್ಲಪ್ಪ ಅವರನ್ನು ನಗರದ ಉಂಬ್ಳೆಬೈಲು ರಸ್ತೆ ಮೆಸ್ಕಾಂ ಕಛೇರಿ ಮುಂಭಾಗದಲ್ಲಿರುವ ಸಂಜಯ್ ಕಾಲೋನಿಯಲ್ಲಿ ಉದ್ಯಮಿಗಳಾದ ಎ. ಮಾಧು, ಸುರೇಶ್‌ಕುಮಾರ್, ಮೀನುಗಾರರ ಸಂಘದ ಅಧ್ಯಕ್ಷ ಮುರುಗನ್, ಎಂ. ಭೂಪಾಲ್, ಸುಂದರ್ ಬಾಬು ಸೇರಿದಂತೆ ಇನ್ನಿತರ ಪ್ರಮುಖರು ಅದ್ದೂರಿಯಾಗಿ ಸ್ವಾಗತಿಸಿ ಸನ್ಮಾನಿಸಿ ಗೌರವಿಸಿದರು.

ಶ್ರೀ ನಾಗೇಂದ್ರಕುಮಾರ್ ಗುರುಗಳಿಂದ ವಿಶೇಷ ಸತ್ಸಂಗ

ಶ್ರೀ ನಾಗೇಂದ್ರಕುಮಾರ್ ಗುರುಗಳಿಂದ ಭದ್ರಾವತಿ ನ್ಯೂಟೌನ್ ಶ್ರೀ ದತ್ತಾಶ್ರಮದಲ್ಲಿ ಭಾನುವಾರ ವಿಶೇಷ ಸತ್ಸಂಗ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.
    ಭದ್ರವತಿ, ಜು. ೩: ಶ್ರೀ ನಾಗೇಂದ್ರಕುಮಾರ್ ಗುರುಗಳಿಂದ ನ್ಯೂಟೌನ್ ಶ್ರೀ ದತ್ತಾಶ್ರಮದಲ್ಲಿ ಭಾನುವಾರ ವಿಶೇಷ ಸತ್ಸಂಗ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.
      ಬೆಳಿಗ್ಗೆ ೯ ಗಂಟೆಯಿಂದ ಆರಂಭಗೊಂಡ ಸತ್ಸಂಗದಲ್ಲಿ ಗುರುಗಳಿಂದ ಪ್ರವಚನ, ಭಕ್ತರಿಂದ ಲಲಿತಾಸಹಸ್ರನಾಮದಿಂದ ಕುಂಕುಂಮಾರ್ಚನೆ, ಪಾದಪೂಜೆ, ಪುಷ್ಪಾಭಿಷೇಕ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು. ಇದಕ್ಕೂ ಮೊದಲು ಗುರುಗಳನ್ನು ಪೂರ್ಣಕುಂಭದಿಂದ ಅದ್ದೂರಿಯಾಗಿ ಸ್ವಾಗತಿಸಲಾಯಿತು.
      ನಗರದ ವಿವಿಧೆಡೆಗಳಿಂದ ಭಕ್ತಾಧಿಗಳು ಆಗಮಿಸಿ ಶ್ರೀಗಳ ದರ್ಶನ ಪಡೆದರು. ಮಧ್ಯಾಹ್ನ ಅನ್ನಸಂತರ್ಪಣೆ ನೆರವೇರಿತು. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಮೂಲತಃ ಭದ್ರಾವತಿಯವರಾದ ಸುಷ್ಮಯೋಗಾನಂದ ಕುಟುಂಬ ವರ್ಗದವರು ಕಾರ್ಯಕ್ರಮವನ್ನು ಆಯೋಜಿಸಿದ್ದರು.
       ಶನಿವಾರ ಸಂಜೆ ತಾಲೂಕು ಕಛೇರಿ ಮುಂಭಾಗದಲ್ಲಿರುವ ನೋಟರಿ ಆರ್.ಎಸ್ ಶೋಭಾ ಅವರ ನಿವಾಸದಲ್ಲಿ ಪ್ರವಚನ ನಡೆಯಿತು. ಮೈಸೂರಿನಿಂದ ಪುತ್ರಿ ಪ್ರತಿಭಾ ಅವರೊಂದಿಗೆ ಶ್ರೀ ನಾಗೇಂದ್ರಕುಮಾರ್ ಗುರುಗಳು ಕಳೆದ ೨ ದಿನಗಳಿಂದ ನಗರದಲ್ಲಿ ವಾಸ್ತವ್ಯ ಹೂಡಿದ್ದಾರೆ.
      

ಕನ್ನಯ್ಯಾ ಲಾಲ್ ಟೈಲರ್ ಕಗ್ಗೊಲೆ ಖಂಡಿಸಿ ಬಜರಂಗದಳ ಪ್ರತಿಭಟನೆ

ಮುಕ್ತಾಯದ ವೇಳೆ ಎರಡು ಗುಂಪುಗಳ ನಡುವೆ ಗಲಾಟೆ : ಬಟ್ಟೆ ಅಂಗಡಿ ಗಾಜು ಪುಡಿ ಪುಡಿ

ರಾಜಸ್ತಾನದ ಉದಯಪುರದಲ್ಲಿ ನಡೆದ ಕನ್ನಯ್ಯಾ ಲಾಲ್ ಟೈಲರ್ ಕಗ್ಗೊಲೆ ಖಂಡಿಸಿ ಭಾನುವಾರ ಸಂಜೆ ಭದ್ರಾವತಿ ನಗರದ ರಂಗಪ್ಪ ವೃತ್ತದಲ್ಲಿ ಬಜರಂಗದಳ ವತಿಯಿಂದ ರಸ್ತೆ ತಡೆ ನಡೆಸಿ ಪ್ರತಿಭಟಿಸಲಾಯಿತು.
    ಭದ್ರಾವತಿ, ಜು. ೩ : ರಾಜಸ್ತಾನದ ಉದಯಪುರದಲ್ಲಿ ನಡೆದ ಕನ್ನಯ್ಯಾ ಲಾಲ್ ಟೈಲರ್ ಕಗ್ಗೊಲೆ ಖಂಡಿಸಿ ಭಾನುವಾರ ಸಂಜೆ ನಗರದ ರಂಗಪ್ಪ ವೃತ್ತದಲ್ಲಿ ಬಜರಂಗದಳ ವತಿಯಿಂದ ರಸ್ತೆ ತಡೆ ನಡೆಸಿ ಪ್ರತಿಭಟಿಸಲಾಯಿತು.
      ರಾಜಸ್ತಾನದ ಉದಯಪುರದಲ್ಲಿ ನೂಪುರ್ ಶರ್ಮಾ ಹೇಳಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಬೆಂಬಲಿಸಿ ಪೋಸ್ಟ್ ಮಾಡಿದ ಕಾರಣಕ್ಕೆ ಕನ್ನಯ್ಯಾ ಲಾಲ್ ಅವರನ್ನು ಹತ್ಯೆ ಮಾಡಿರುವುದು ಖಂಡನೀಯ, ದೇಶದಲ್ಲಿ ಹಿಂದುಗಳು ನೆಮ್ಮದಿಯಾಗಿ ಬದುಕಲು ಸಾಧ್ಯವಾಗುತ್ತಿಲ್ಲ. ಹತ್ಯೆಗೆ ಕಾರಣರಾದವರನ್ನು ತಕ್ಷಣ ಗಲ್ಲಿಗೇರಿಸಬೇಕೆಂದು ಆಗ್ರಹಿಸಿದರು.
      ರಸ್ತೆ ತಡೆ ನಡೆಸಿ ಪ್ರತಿಭಟಿಸುವ ಮೂಲಕ ಹತ್ಯೆಗೆ ಕಾರಣರಾದವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು. ಪ್ರಮುಖರಾದ ದುರ್ಗಾವಾಹಿನಿ ಸಂಘಟನೆಯ ಶೈಲ, ಬಜರಂಗದಳ ಜಿಲ್ಲಾ ಸಹ ಸಂಚಾಲಕ ರಾಘವನ್ ವಡೀವೇಲು ಸೇರಿದಂತೆ ಇನ್ನಿತರರು ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು. ಪ್ರಮುಖರಾದ ಕೃಷ್ಣ, ಚಂದ್ರು, ಶ್ರೀಕಾಂತ, ಕಿರಣ, ರಮೇಶ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
     ಅವಾಚ್ಯ ಶಬ್ದಗಳಿಂದ ನಿಂದನೆ : ಎರಡು ಗುಂಪುಗಳ ನಡುವೆ ಗಲಾಟೆ:
      ಪ್ರತಿಭಟನೆ ಮುಕ್ತಾಯಗೊಳಿಸಿ ತೆರಳುವಾಗ ರಂಗಪ್ಪ ವೃತ್ತದಲ್ಲಿ ಮುಸ್ಲಿಂ ಸಮುದಾಯದ ಯುವಕರ ಗುಂಪೊಂದು ಅವಾಚ್ಯ ಶಬ್ದಗಳಿಂದ ಪ್ರತಿಭಟನಾಕಾರರನ್ನು ನಿಂದಿಸಿದ್ದು, ಇದರಿಂದಾಗಿ ಮಾತಿನ ಚಕಮಕಿ ನಡೆದು ಗಲಾಟೆ ನಡೆದಿದೆ ಎಂದು ಬಜರಂಗದಳ ಜಿಲ್ಲಾ ಸಹ ಸಂಚಾಲಕ ರಾಘವನ್ ವಡೀವೇಲು ಪತ್ರಿಕೆಗೆ ಸ್ಪಷ್ಟಪಡಿಸಿದ್ದಾರೆ. ಇದುವರೆಗೂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಲ್ಲ. ಒಂದು ವೇಳೆ ದೂರು ದಾಖಲು ಮಾಡಿದ್ದಲ್ಲಿ ನಾವು ಸಹ ಪ್ರತಿ ದೂರು ನೀಡುವುದಾಗಿ ತಿಳಿಸಿದ್ದಾರೆ.
      ಗಲಾಟೆ ಸಂದರ್ಭದಲ್ಲಿ ಸ್ವಾಗ್ ಮೆನ್ಸ್ ಫ್ಯಾಷನ್ ಬಟ್ಟೆ ಅಂಗಡಿಯ ಗಾಜು ಪುಡಿ ಪುಡಿಯಾಗಿದೆ. ತಕ್ಷಣ ಎಚ್ಚೆತ್ತುಕೊಂಡ ಪೊಲೀಸರು ಎರಡು ಕಡೆಯವರನ್ನು ಸಮಾಧಾನಗೊಳಿಸಿ ತೆರವುಗೊಳಿಸಿದ್ದಾರೆ ಎನ್ನಲಾಗಿದೆ.


ಪ್ರತಿಭಟನೆ ಮುಕ್ತಾಯಗೊಳಿಸಿ ತೆರಳುವಾಗ ರಂಗಪ್ಪ ವೃತ್ತದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದು ಬಟ್ಟೆ ಅಂಗಡಿಯೊಂದರ ಗಾಜು ಪುಡಿ ಪುಡಿಯಾಗಿರುವುದು.


ಭೈರವಿ ಒಕ್ಕಲಿಗ ಮಹಿಳಾ ವೇದಿಕೆ ಅಸ್ತಿತ್ವಕ್ಕೆ : ಅಧ್ಯಕ್ಷರಾಗಿ ಲತಾ ಚಂದ್ರಶೇಖರ್

ಭದ್ರಾವತಿಯಲ್ಲಿ ಭಾನುವಾರ ಭೈರವಿ ಒಕ್ಕಲಿಗ ಮಹಿಳಾ ವೇದಿಕೆ ಅಸ್ತಿತ್ವಕ್ಕೆ ಬಂದಿದ್ದು, ನೂತನ ಪದಾಧಿಕಾರಿಗಳು ಆಯ್ಕೆಯಾದರು.
    ಭದ್ರಾವತಿ, ಜು. ೩ : ಜನಪರ ಕಾಳಜಿಯೊಂದಿಗೆ ಹಲವಾರು ಸಾಮಾಜಿಕ ಸೇವಾ ಕಾರ್ಯಗಳನ್ನು ಕೈಗೊಳ್ಳಬೇಕೆಂಬ ಆಶಯದೊಂದಿಗೆ ನೂತನವಾಗಿ ಭೈರವಿ ಒಕ್ಕಲಿಗ ಮಹಿಳಾ ವೇದಿಕೆ ಅಸ್ತಿತ್ವಕ್ಕೆ ಬಂದಿದೆ ಎಂದು ನಗರಸಭಾ ಸದಸ್ಯೆ, ವೇದಿಕೆ ಅಧ್ಯಕ್ಷೆ ಲತಾ ಚಂದ್ರಶೇಖರ್ ಹೇಳಿದರು.
      ಅವರು ಭಾನುವಾರ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ಒಕ್ಕಲಿಗ ಸಮುದಾಯದ ಮಹಿಳೆಯರು ಒಗ್ಗೂಡಿ ಈ ವೇದಿಕೆಯನ್ನು ರಚಿಸಿದ್ದು, ಸಮಾಜದಲ್ಲಿ ಒಕ್ಕಲಿಗ ಸಮುದಾಯದ ಮಹಿಳೆಯರ ಹಿತ ರಕ್ಷಣೆ ಜೊತೆಗೆ ಬಡ ಮಕ್ಕಳ ಶಿಕ್ಷಣಕ್ಕಾಗಿ, ಅಂಗವಿಕಲರು ಹಾಗು ಅಸಕ್ತರ ನೆರವಿಗಾಗಿ ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳಬೇಕೆಂಬ ಆಶಯ ಹೊಂದಲಾಗಿದೆ. ಯಾವುದೇ ರಾಜಕೀಯ ಹಿತಾಸಕ್ತಿ  ಅಥವಾ ದುರುದ್ದೇಶ ವೇದಿಕೆ ಹೊಂದಿಲ್ಲ ಎಂದರು.
      ನೂತನ ಪದಾಧಿಕಾರಿಗಳು :
      ವೇದಿಕೆ ನೂತನ ಪದಾಧಿಕಾರಿಗಳಾಗಿ ಅಧ್ಯಕ್ಷರಾಗಿ ಲತಾ ಚಂದ್ರಶೇಖರ್, ಗೌರವಾಧ್ಯಕ್ಷರಾಗಿ ಲಕ್ಷ್ಮಿರಾಜು, ನೇತ್ರಾವತಿ, ಉಪಾಧ್ಯಕ್ಷರಾಗಿ ಭಾಗ್ಯ ಈಶ್ವರ್,  ಕಾರ್ಯದರ್ಶಿಯಾಗಿ ಶಾಲಿನಿ, ಸಹಕಾರ್ಯದರ್ಶಿಯಾಗಿ ಅಂಬಿಕಾ, ಖಜಾಂಚಿಯಾಗಿ ಯಮುನಾ ಹಾಗು ನಿರ್ದೇಶಕರಾಗಿ ಹೇಮಾವತಿ ಸುರೇಶ್, ಸಾವಿತ್ರಮ್ಮ ವೆಂಕಟೇಶ್, ಶೋಭಾ ಲಕ್ಷ್ಮಣ್, ಪ್ರೇಮ ಪ್ರಕಾಶ್, ಶೃತಿ ನವೀನ್, ಲೀಲಾ ರವಿಕುಮಾರ್, ಪದ್ಮಿನಿ ವಿಠ್ಠಲ್, ಮಂಜುಳ ಆನಂದ್, ಮಾಲಾ ರಾಮಣ್ಣ, ಪ್ರೇಮ ಶ್ರೀನಿವಾಸ್, ಗೀತಾ ಮಹೇಶ್, ವಿಜಯ ಚಂದ್ರಶೇಖರ್, ಜಯಲಕ್ಷ್ಮೀ ಕುಮಾರ್, ಶ್ಯಾಮಲ ರಾಜು, ಗೀತಾ ಗಿರೀಶ್, ರೂಪ  ಮತ್ತು ದೇವಿಕಾ ನಾಗರಾಜ್ ಸೇರಿದಂತೆ ಒಟ್ಟು ೨೦ ನಿರ್ದೇಶಕರು ಆಯ್ಕೆಯಾಗಿದ್ದಾರೆ.
      ತಾಲೂಕು ಸುಗ್ರಾಮ ಗ್ರಾಮ ಪಂಚಾಯಿತಿ ಮಹಿಳಾ ಸದಸ್ಯರ ಒಕ್ಕೂಟದ ಅಧ್ಯಕ್ಷ ಗೌರಮ್ಮ ಮಹಾದೇವ ಉಪಸ್ಥಿತರಿದ್ದರು. ಶಾಲಿನಿ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.