ಸೋಮವಾರ, ಜುಲೈ 7, 2025

ಜು.೮ರಂದು `ಭಾರತಾಂಬೆಗೆ ಗೀತ ನಮನ'


   
ಭದ್ರಾವತಿ: ಪ್ರಸ್ತುತ ದೇಶದಲ್ಲಿ ನಡೆಯುತ್ತಿರುವ ಪ್ರಕೃತಿ ವಿಕೋಪಗಳು, ಸಾವು-ನೋವುಗಳು, ಮಿತಿ ಮೀರುತ್ತಿರುವ ದೇಶದ್ರೋಹಿ ಉಗ್ರಗಾಮಿ ಚಟುವಟಿಕೆಗಳಿಗೆ ಅಂತ್ಯ ಹಾಡಲು, ದೇಶವಾಸಿಗಳು ಶಾಂತಿ, ನೆಮ್ಮದಿಯಿಂದ ಜೀವಿಸಲು, ಭಾರತಾಂಬೆಗೆ ಪ್ರಾರ್ಥಿಸುವ ಹಾಗು ದೇಶದ ರಕ್ಷಣೆಯಲ್ಲಿ ಹಗಲಿರುಳು ಕಾರ್ಯ ನಿರ್ವಹಿಸುತ್ತಿರುವ ಯೋಧರ ಯೋಗಕ್ಷೇಮಕ್ಕಾಗಿ ದೇಶ ಭಕ್ತಿಗೀತೆಗಳ ವಿಶೇಷ ಕಾರ್ಯಕ್ರಮ ನಗರದ ಭಾವಸಾರ ಕ್ಷತ್ರೀಯ ಮಹಿಳಾ ಮಂಡಳಿ ವತಿಯಿಂದ ಪ್ರಪ್ರಥಮ ಬಾರಿಗೆ `ಭಾರತಾಂಬೆಗೆ ಗೀತ ನಮನ' ಎಂಬ ಹೆಸರಿನಲ್ಲಿ ಜು.೮ರ ಮಂಗಳವಾರ ಸಂಜೆ ೫ ಗಂಟೆಗೆ ಮಹಾತ್ಮ ಗಾಂಧಿ ರಸ್ತೆ (ಟಿ.ಕೆ ರಸ್ತೆ)ಯ ಶ್ರೀ ಪಾಂಡುರಂಗ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ.
    ದೇಶದ ಸಮಗ್ರತೆ, ಅಖಂಡತೆ, ಐಕ್ಯತೆಗಾಗಿ ಏರ್ಪಡಿಸಲಾಗಿರುವ ಈ ವಿಶೇಷ ಕಾರ್ಯಕ್ರಮಕ್ಕೆ ದೇಶಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಿ ಕೊಡಬೇಕಾಗಿ ಭಾವಸಾರ ಕ್ಷತ್ರೀಯ ಮಹಿಳಾ ಮಂಡಳಿ ಅಧ್ಯಕ್ಷೆ ಕಲ್ಪನಾ ಉಮೇಶ್ ಗುಜ್ಜಾರ್ ಹಾಗು ವಿಶ್ವ ಹಿಂದೂ ಪರಿಷತ್, ಮಾತೃ ಮಂಡಳಿ ಅಧ್ಯಕ್ಷೆ ಸ್ವಪ್ನ ಕುಮಾರ್ ತೇಲ್ಕರ್ ಮನವಿ ಮಾಡಿದ್ದಾರೆ.

ವೀರಶೈವ-ಲಿಂಗಾಯಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

ಕೆ.ಎಸ್ ವಿಜಯಕುಮಾರ್ 
  ಭದ್ರಾವತಿ: ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ 2024-25ನೇ ಸಾಲಿನ ಪರೀಕ್ಷೆಯಲ್ಲಿ ಅತಿ ಹೆಚ್ಚು ಶೇ.85ಕ್ಕೂ ಹೆಚ್ಚಿನ ಅಂಕ ಪಡೆದು ಉತ್ತೀರ್ಣರಾದ ತಾಲೂಕಿನ ವೀರಶೈವ-ಲಿಂಗಾಯತ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಶಾಖೆ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಗುವುದು ಎಂದು ಮಹಾಸಭಾ ತಾಲೂಕು ಅಧ್ಯಕ್ಷ ಕೆ.ಎಸ್ ವಿಜಯ ಕುಮಾರ್ ತಿಳಿಸಿದ್ದಾರೆ. 
     ಸಮಾಜದ ಪ್ರತಿಭಾವಂತ ಆಸಕ್ತ ವಿದ್ಯಾರ್ಥಿಗಳು ಜು. 18ರೊಳಗೆ ಅಂಕ ಪಟ್ಟಿ ಹಾಗು ಆಧಾರ್ ಕಾರ್ಡ್ ನಕಲು ಪ್ರತಿ ಮತ್ತು ಒಂದು ಪಾಸ್ ಪೋರ್ಟ್ ಅಳತೆಯ ಭಾವಚಿತ್ರದೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ. 
     ಹೆಚ್ಚಿನ ಮಾಹಿತಿಗೆ ಮಹಾಸಭಾ ಉಪಾಧ್ಯಕ್ಷೆ, ವಕೀಲರಾದ ಆರ್.ಎಸ್ ಶೋಭಾ, ಮೊ: 9902008155, ನಿರ್ದೇಶಕರಾದ ಎನ್.ಎಸ್ ಮಲ್ಲಿಕಾರ್ಜುನಯ್ಯ, ಮೊ: 9480138972, ಸಾಗರ್, ಮೊ: 8618479341 ಮತ್ತು ರಮೇಶ್, ಮೊ: 8073148673 ಸಂಖ್ಯೆಗಳಿಗೆ ಸಂಪರ್ಕಿಸಿ ಅರ್ಜಿ ಸಲ್ಲಿಸುವಂತೆ ಕೋರಿದ್ದಾರೆ.