ಎಸ್ಎವಿ ೨೮ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್
ಭದ್ರಾವತಿ ನ್ಯೂಟೌನ್ ಎಸ್ಎವಿ ಶಾಲೆ ವಿದ್ಯಾರ್ಥಿ ಸೈಯದ್ ಗುಲಾಮ್ ಹುಸೈನಿ
ಭದ್ರಾವತಿ ನ್ಯೂಟೌನ್ ಎಸ್ಎವಿ ಶಾಲೆ ವಿದ್ಯಾರ್ಥಿನಿ ಯಶಸ್ವಿನಿ ಐ.ಕೆ
ಭದ್ರಾವತಿ, ಜು. ೧೪: ಕಾಗದ ನಗರದ ಎಂಪಿಎಂ ಕಾರ್ಖಾನೆ ಶಿಕ್ಷಣ ಮಂಡಳಿ ಅಧೀನದಲ್ಲಿರುವ ಎಂಪಿಎಂ ಸ್ವತಂತ್ರ ಪದವಿಪೂರ್ವ ಕಾಲೇಜು ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.೬೩.೭೭ ರಷ್ಟು ಫಲಿತಾಂಶ ಪಡೆದುಕೊಂಡಿದೆ.
ಕಾಲೇಜಿನ ವಾಣಿಜ್ಯ ವಿಭಾಗದ ೧೦೩ ವಿದ್ಯಾರ್ಥಿಗಳಲ್ಲಿ ೧೦೨ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ ೫೮ ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ. ವಿಜ್ಞಾನ ವಿಭಾಗ ೩೭ ವಿದ್ಯಾರ್ಥಿಗಳಲ್ಲಿ ೩೬ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ ೩೦ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ವಿದ್ಯಾರ್ಥಿಗಳಾದ ಮೌರ್ಯಸೆಲ್ಸ್ .ವಿ(೫೪೫), ಸಹನಾ .ಪಿ(೫೪೨), ಸ್ಮಿತಾ. ಬಿ.ಸಿ(೫೩೫), ಶ್ರೀನಿವಾಸ ಬಿ.ಆರ್(೫೨೩), ಕುಸುಮ .ಟಿ(೫೧೦) ಮತ್ತು ಲಿಖಿತ .ಎನ್(೫೧೦) ಅತಿ ಹೆಚ್ಚು ಅಂಕಗಳನ್ನು ಪಡೆದುಕೊಂಡಿರುವ ವಿದ್ಯಾರ್ಥಿಗಳಾಗಿದ್ದಾರೆಂದು ಕಾಲೇಜಿನ ಪ್ರಾಂಶುಪಾಲ ಲಕ್ಷ್ಮೀಕಾಂತ್ ತಿಳಿಸಿದ್ದಾರೆ.
ಎಸ್ಎವಿ ೨೮ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್:
ನ್ಯೂಟೌನ್ ಶ್ರೀ ಆದಿಚುಂಚನಗಿರಿ ವಿದ್ಯಾ ಸಂಸ್ಥೆಯ ೨೮ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದುಕೊಂಡಿದ್ದಾರೆ. ಈ ಪೈಕಿ ಸೈಯದ್ ಗುಲಾಮ್ ಹುಸೈನಿ(೫೮೬), ಯಶಸ್ವಿನಿ ಐ.ಕೆ(೫೮೩), ದೃವ ಎಸ್. ದಳವಾಯಿ(೫೮೦), ಮೈತ್ರಿ .ಆರ್(೫೬೫), ಭರತ್ .ಎಂ(೫೫೩), ಸಿಂಚನ ಎಸ್.ಎಲ್(೫೫೩) ಮತ್ತು ಸುಮಂತ್ .ಯು(೫೫೩) ಅತಿ ಹೆಚ್ಚು ಅಂಕಗಳನ್ನು ಪಡೆದುಕೊಂಡ ವಿದ್ಯಾರ್ಥಿಗಳಾಗಿದ್ದಾರೆ. ಗಣಿತದಲ್ಲಿ ೩ ವಿದ್ಯಾರ್ಥಿಗಳು, ಜೀವಶಾಸ್ತ್ರದಲ್ಲಿ ಇಬ್ಬರು ವಿದ್ಯಾರ್ಥಿಗಳು ಹಾಗೂ ಭೌತಶಾಸ್ತ್ರದಲ್ಲಿ ಓರ್ವ ವಿದ್ಯಾರ್ಥಿನಿ ಶೇ.೧೦೦ಕ್ಕೆ ೧೦೦ರಷ್ಟು ಅಂಕಗಳನ್ನು ಪಡೆದುಕೊಂಡಿದ್ದಾರೆ. ಉಳಿದಂತೆ ಪ್ರಥಮ ದರ್ಜೆಯಲ್ಲಿ ೬೧ ಹಾಗೂ ದ್ವಿತೀಯ ದರ್ಜೆಯಲ್ಲಿ ೧೨ ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆಂದು ಕಾಲೇಜಿನ ಪ್ರಾಂಶುಪಾಲರಾದ ಡಾ. ಹರಿಣಾಕ್ಷಿ ತಿಳಿಸಿದ್ದಾರೆ.
ಜಾವಳ್ಳಿ ಶ್ರೀ ಅರೋಬಿಂದೋ ಕಾಲೇಜಿನ ವಿದ್ಯಾರ್ಥಿನಿ ಅಫೀಪಾ ತಸ್ಕೀನ್
ಜಾವಳ್ಳಿ ಶ್ರೀ ಅರೋಬಿಂದೋ ಕಾಲೇಜಿನ ವಿದ್ಯಾರ್ಥಿ ಕೆ. ರಾಜಶೇಖರ್
ಜಾವಳ್ಳಿ ಶ್ರೀ ಅರೋಬಿಂದೋ ಕಾಲೇಜಿಗೆ ೧೩೧ ಡಿಸ್ಟಿಂಕ್ಷನ್:
ಇಲ್ಲಿಗೆ ಸಮೀಪದ ಜಾವಳ್ಳಿ ಶ್ರೀ ಅರೋಬಿಂದೋ ಕಾಲೇಜು ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.೯೬.೦೫ ಫಲಿತಾಂಶ ಪಡೆದುಕೊಂಡಿದೆ.
ಒಟ್ಟು ಪರೀಕ್ಷೆ ಬರೆದ ೩೨೯ ವಿದ್ಯಾರ್ಥಿಗಳ ಪೈಕಿ ೧೩೧ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, ೧೭೨ ವಿದ್ಯಾರ್ಥಿಗಳು ಪ್ರಥಮ ದರ್ಜೆ ಹಾಗೂ ೧೩ ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ರಸಾಯನ ಶಾಸ್ತ್ರ ೨, ಭೌತಶಾಸ್ತ್ರ ೫, ಗಣಿತ ೨೩, ಜೀವಶಾಸ್ತ್ರ ೪, ಸಂಖ್ಯಾ ಶಾಸ್ತ್ರ ೩, ಕನ್ನಡ ೧ ಮತ್ತು ಸಂಸ್ಕೃತ ೪ ವಿದ್ಯಾರ್ಥಿಗಳು ಶೇ.೧೦೦ಕ್ಕೆ ೧೦೦ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ.
ಅಫೀಪಾ ತಸ್ಕೀನ್(೫೮೭), ರಾಜಶೇಖರ್ ಕೆ(೫೮೬), ಮಾಯ ಎಸ್ ರಾವ್(೫೮೬), ಪ್ರಗತಿ ಎಂ.ಆರ್(೫೮೫), ಶ್ರೇಯ ಉಡುಪ ಕೆ.ಎಸ್(೫೮೨), ಪೂರ್ವಿಕ ಎಸ್.ಎಲ್(೫೮೨), ರಕ್ಷಾ ಎ.ಆರ್(೫೮೧), ಮನು ಎಸ್ ರಾವ್(೫೮೧), ಖಾಜಿ ಮೊಹಮ್ಮದ್ ಸಾವೂದ್(೫೮೦) ಮತ್ತು ಸಚಿನ್ ಎಚ್.ಪಿ(೫೮೦) ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಾಗಿದ್ದಾರೆಂದು ಪ್ರಾಂಶುಪಾಲ ಡಾ. ಕೆ. ನಾಗರಾಜ್ ತಿಳಿಸಿದ್ದಾರೆ.