ಭದ್ರಾವತಿ, ಜು. ೮ : ನಗರದ ಹೊಸಸೇತುವೆ ರಸ್ತೆ, ಕೆಎಸ್ಆರ್ಟಿಸಿ ಬಸ್ ಘಟಕದ ಸಮೀಪದಲ್ಲಿರುವ ಡಿ.ಕೆ ಶಿವಕುಮಾರ್ ಬಿ.ಇಡಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಆರ್. ಭವ್ಯರಿಗೆ ಪಿಎಚ್ಡಿ ಪದವಿ ಲಭಿಸಿದೆ.
ಭವ್ಯ ಅವರು ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿಭಾಗದ ಪ್ರಾಧ್ಯಾಪಕ ಡಾ. ಜಗನ್ನಾಥ ಕೆ. ಡಾಂಗೆ ಅವರ ಮಾರ್ಗದರ್ಶನದಲ್ಲಿ ʻರಿಲೇಷನ್ಶಿಪ್ ಆಫ್ ಹ್ಯಾಪಿ ಟೀಚಿಂಗ್ ಫ್ಯಾಕ್ಟರ್ಸ್ ವಿತ್ ಸ್ಟುಡೆಂಟ್ಸ್ ಪರ್ಸೆಪ್ಕ್ಷನ್ ಟುವರ್ಡ್ಸ್ ಹ್ಯಾಪಿ ಲರ್ನಿಂಗ್, ಅಟ್ಟಿಟ್ಯುಡ್, ಟುವರ್ಡ್ಸ್ ಲರ್ನಿಂಗ್ ಅಂಡ್ ಅಕಡೆಮಿಕ್ ಅಚೀವ್ಮೆಂಟ್ ಅಟ್ ಸೆಕೆಂಡರಿ ಸ್ಕೂಲ್ ಲೆವೆಲ್ (Relationship Of Happy Teaching Factors With Students' Perception Towards Happy Learning, Attitude Towards Learning And Academic Achievement At Secondary School Level) ಎಂಬ ವಿಷಯ ಕುರಿತು ಸಂಶೋಧನಾ ಮಹಾಪ್ರಬಂಧ ಮಂಡಿಸಿದ್ದರು. ಕುವೆಂಪು ವಿಶ್ವ ವಿದ್ಯಾಲಯ ಪಿಎಚ್ಡಿ ಪದವಿ ನೀಡಿದೆ. ಆರ್ . ಭವ್ಯರವರು ಬೊಮ್ಮನಕಟ್ಟೆ ಸರ್ಕಾರಿ ಶಾಲೆಯ ಶಿಕ್ಷಕ ಎ. ತಿಪ್ಪೇಸ್ವಾಮಿಯವರ ಪತ್ನಿಯಾಗಿದ್ದು, ಇವರನ್ನು ನಗರದ ಅನೇಕ ಗಣ್ಯರು ಅಭಿನಂದಿದ್ದಾರೆ.