Saturday, July 8, 2023

ಆರ್.‌ ಭವ್ಯರಿಗೆ ಪಿಎಚ್‌ಡಿ ಪದವಿ

ಆರ್.‌ ಭವ್ಯ

    ಭದ್ರಾವತಿ, ಜು. : ನಗರದ ಹೊಸಸೇತುವೆ ರಸ್ತೆ, ಕೆಎಸ್ಆರ್ಟಿಸಿ ಬಸ್ಘಟಕದ ಸಮೀಪದಲ್ಲಿರುವ ಡಿ.ಕೆ ಶಿವಕುಮಾರ್ಬಿ.ಇಡಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಆರ್.‌ ಭವ್ಯರಿಗೆ  ಪಿಎಚ್ಡಿ ಪದವಿ ಲಭಿಸಿದೆ.

          ಭವ್ಯ ಅವರು ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿಭಾಗದ ಪ್ರಾಧ್ಯಾಪಕ ಡಾ. ಜಗನ್ನಾಥ ಕೆ. ಡಾಂಗೆ ಅವರ ಮಾರ್ಗದರ್ಶನದಲ್ಲಿ ʻರಿಲೇಷನ್ಶಿಪ್ಆಫ್ಹ್ಯಾಪಿ ಟೀಚಿಂಗ್ಫ್ಯಾಕ್ಟರ್ಸ್ವಿತ್ಸ್ಟುಡೆಂಟ್ಸ್ಪರ್ಸೆಪ್ಕ್ಷನ್ಟುವರ್ಡ್ಸ್ಹ್ಯಾಪಿ ಲರ್ನಿಂಗ್, ಅಟ್ಟಿಟ್ಯುಡ್, ಟುವರ್ಡ್ಸ್ಲರ್ನಿಂಗ್ಅಂಡ್ಅಕಡೆಮಿಕ್ಅಚೀವ್ಮೆಂಟ್ಅಟ್ಸೆಕೆಂಡರಿ ಸ್ಕೂಲ್ಲೆವೆಲ್(Relationship Of Happy Teaching  Factors With Students' Perception Towards Happy Learning, Attitude Towards Learning And Academic Achievement At Secondary School Level) ಎಂಬ ವಿಷಯ ಕುರಿತು ಸಂಶೋಧನಾ ಮಹಾಪ್ರಬಂಧ ಮಂಡಿಸಿದ್ದರು. ಕುವೆಂಪು ವಿಶ್ವ ವಿದ್ಯಾಲಯ ಪಿಎಚ್ಡಿ ಪದವಿ ನೀಡಿದೆ. ಆರ್. ಭವ್ಯರವರು ಬೊಮ್ಮನಕಟ್ಟೆ ಸರ್ಕಾರಿ ಶಾಲೆಯ ಶಿಕ್ಷಕ . ತಿಪ್ಪೇಸ್ವಾಮಿಯವರ ಪತ್ನಿಯಾಗಿದ್ದು, ಇವರನ್ನು ನಗರದ ಅನೇಕ ಗಣ್ಯರು ಅಭಿನಂದಿದ್ದಾರೆ.  

ನ್ಯೂಟೌನ್‌ ಪೊಲೀಸರ ಕಾರ್ಯಾಚರಣೆ : ಓರ್ವನ ಸೆರೆ

೪ ಪ್ರಕರಣ ದಾಖಲು : ೪ ದ್ವಿಚಕ್ರ ವಶ

ಭದ್ರಾವತಿ ನ್ಯೂಟೌನ್‌ ಠಾಣೆ ಪೊಲೀಸರು ದ್ವಿಚಕ್ರ ವಾಹನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
    ಭದ್ರಾವತಿ, ಜು. ೮: ನ್ಯೂಟೌನ್‌ ಠಾಣೆ ಪೊಲೀಸರು ದ್ವಿಚಕ್ರ ವಾಹನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
    ತಾಲೂಕಿನ ದಾನವಾಡಿ ಗ್ರಾಮದ ನಿವಾಸಿ ಉಮೇಶ್‌(೪೧) ಬಂಧಿತ ವ್ಯಕ್ತಿಯಾಗಿದ್ದು, ಈತನಿಂದ ಒಟ್ಟು ೧.೨೫ ಲಕ್ಷ ರು. ಮೌಲ್ಯದ ನಾಲ್ಕು ವಿವಿಧ ಕಂಪನಿಯ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.  ನ್ಯೂಟೌನ್‌ ಠಾಣೆಯಲ್ಲಿ ಒಟ್ಟು ೩ ಪ್ರಕರಣ ಹಾಗು ಚನ್ನಗಿರಿ ಪೊಲೀಸ್‌ ಠಾಣೆಯಲ್ಲಿ ಒಂದು ಕಳವು ಪ್ರಕರಣ ದಾಖಲಾಗಿತ್ತು.
   ಜಿಲ್ಲಾ ರಕ್ಷಣಾಧಿಕಾರಿ  ಜಿ.ಕೆ  ಮಿಥುನ್ ಕುಮಾರ್, ಹೆಚ್ಚುವರಿ  ರಕ್ಷಣಾಧಿಕಾರಿ  ಅನಿಲ್‌ಕುಮಾರ್‌ ಭೂಮಾರೆಡ್ಡಿ,   ಹಿರಿಯ ಸಹಾಯಕ ಪೊಲೀಸ್ ಅಧೀಕ್ಷಕ ಜಿತೇಂದ್ರ ಕುಮಾರ್ ದಯಾಮರವರ ಮಾರ್ಗದರ್ಶನದಲ್ಲಿ ಠಾಣಾಧಿಕಾರಿಗಳಾದ ಟಿ. ರಮೇಶ್  ಮತ್ತು  ಭಾರತಿ  ನೇತೃತ್ವದಲ್ಲಿ ಸಹಾಯಕ ಠಾಣಾಧಿಕಾರಿ ವೆಂಕಟೇಶ್ ಹಾಗು ಸಿಬ್ಬಂದಿಗಳಾದ ರಂಗನಾಥ್, ತೀರ್ಥಲಿಂಗಪ್ಪ ಮತ್ತು ಪ್ರವೀಣ್ ಕುಮಾರ್  ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಯಶಸ್ವಿಯಾಗಿದೆ.