Sunday, February 5, 2023

ಗೌರಮ್ಮ ನಿಧನ

ಗೌರಮ್ಮ 
    ಭದ್ರಾವತಿ, ಫೆ. ೫: ನಗರದ ಜಿಂಕ್‌ಲೈನ್ ೨ನೇ ರಸ್ತೆ ನಿವಾಸಿ, ಪತ್ರಿಕಾವಿತರಕ ಶಿವಮೂರ್ತಿಯವರ ತಾಯಿ ಗೌರಮ್ಮ(೬೮) ಭಾನುವಾರ ನಿಧನ ಹೊಂದಿದರು.
    ಗೌರಮ್ಮ ಪುತ್ರ ಶಿವಮೂರ್ತಿ ಹಾಗು ಪುತ್ರಿ ಮತ್ತು ಸೊಸೆ, ಮೊಕ್ಕಳನ್ನು ಹೊಂದಿದ್ದರು. ಇವರ ಅಂತ್ಯಕ್ರಿಯೆ ಸೋಮವಾರ ಮಧ್ಯಾಹ್ನ ಹುತ್ತಾಕಾಲೋನಿ ಹಿಂದೂ ರುದ್ರಭೂಮಿಯಲ್ಲಿ ನೆರವೇರಲಿದೆ. ಇವರ ನಿಧನಕ್ಕೆ ನಗರದ ಗಣ್ಯರು, ಪತ್ರಿಕಾವಿತರಕರು ಹಾಗು ಸ್ಥಳೀಯರು ಸಂತಾಪ ಸೂಚಿಸಿದ್ದಾರೆ.

ಭದ್ರಾವತಿಯಲ್ಲಿ ಈ ಬಾರಿ ಬಿಜೆಪಿ ಗೆಲುವು ಖಚಿತ : ನಳೀನ್‌ಕುಮಾರ್ ಕಟೀಲು

ಭದ್ರಾವತಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಘಟಕದ ಹಿಂಭಾಗ ನೂತನವಾಗಿ ನಿರ್ಮಿಸಲಾಗಿರುವ ಬಿಜೆಪಿ ಪಕ್ಷದ ಕಾರ್ಯಾಲಯ ಹಾಗು ಪೇಜ್ ಪ್ರಮುಖರ ಮತ್ತು ಹಿತೈಷಿಗಳ ಸಮಾವೇಶ ಪಕ್ಷದ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲು ಉದ್ಘಾಟಿಸಿದರು.
    ಭದ್ರಾವತಿ, ಫೆ. ೫ : ಈ ಬಾರಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಖಚಿತವಾಗಿದ್ದು, ಈ ನಿಟ್ಟಿನಲ್ಲಿ ಪಕ್ಷ ಕಾರ್ಯಪ್ರವೃತ್ತವಾಗಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲು ಹೇಳಿದರು.
    ಅವರು ಭಾನುವಾರ ನಗರದ ಕೆಎಸ್‌ಆರ್‌ಟಿಸಿ ಬಸ್ ಘಟಕದ ಹಿಂಭಾಗ ನೂತನವಾಗಿ ನಿರ್ಮಿಸಲಾಗಿರುವ ಪಕ್ಷದ ಕಾರ್ಯಾಲಯ ಹಾಗು ಪೇಜ್ ಪ್ರಮುಖರ ಮತ್ತು ಹಿತೈಷಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
    ಹಿಂದುತ್ವದ ಜೊತೆಗೆ ಪ್ರಧಾನಿ ನರೇಂದ್ರ ಮೋದಿಯವರ ಸಾಧನೆ, ಕೇಂದ್ರ ಸರ್ಕಾರದ ಜನಪರ ಯೋಜನೆಗಳು, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗು ಮುಖ್ಯಮಂತ್ರಿ  ಬಸವರಾಜ ಬೊಮ್ಮಾಯಿಯವರ ರಾಜ್ಯ ಸರ್ಕಾರದ ಯೋಜನೆಗಳು ಹಾಗು ಜಿಲ್ಲೆಯಲ್ಲಿ ಜಾತ್ಯಾತೀತ ಮನೋಭಾವದೊಂದಿಗೆ ಕ್ರಿಯಾಶೀಲರಾಗಿರುವ ಸಂಸದ ಬಿ.ವೈ ರಾಘವೇಂದ್ರರವರ ಅಭಿವೃದ್ಧಿ ಯೋಜನೆಗಳು ಈ ಬಾರಿ ಗೆಲುವಿಗೆ ಪೂರಕವಾಗಿ ಎಂದರು.
    ಈ ಬಾರಿ ಕ್ಷೇತ್ರದಲ್ಲಿ ಪಕ್ಷವನ್ನು ಹೆಚ್ಚಿನ ರೀತಿಯಲ್ಲಿ ಸಂಘಟಿಸಲಾಗುತ್ತಿದ್ದು, ಕ್ಷೇತ್ರದಲ್ಲಿ ಚುನಾವಣೆಯನ್ನು ಸಮರ್ಥ ಎದುರಿಸುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಪೂರಕ ಸಿದ್ದತೆಗಳನ್ನು ಕೈಗೊಳ್ಳಲಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಪಕ್ಷದ ಸೇವಾಕರ್ತರ ಕ್ರಿಯಾಶೀಲತೆ ಪರಿಣಾಮವಾಗಿ ಕೆಲವೇ ಕೆಲವು ದಿನಗಳಲ್ಲಿ ನೂತನ ಕಛೇರಿ ನಿರ್ಮಾಣಗೊಂಡಿದೆ ಎಂದರು.
    ಪಕ್ಷದ ಜಿಲ್ಲಾಧ್ಯಕ್ಷ ಟಿ.ಡಿ ಮೇಘರಾಜ್, ಸಂಸದ ಬಿ.ವೈ ರಾಘವೇಂದ್ರ, ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ, ಪವಿತ್ರ ರಾಮಯ್ಯ, ಎಂ.ಬಿ ಭಾನುಪ್ರಕಾಶ್, ಎಸ್. ದತ್ತಾತ್ರಿ, ಎಸ್.ಎಸ್ ಜ್ಯೋತಿಪ್ರಕಾಶ್, ಎ.ಎನ್ ನಟರಾಜ್, ಶಿವರಾಜ್, ಬಿ.ಕೆ ಶ್ರೀನಾಥ್, ಎನ್.ಡಿ ಸತೀಶ್, ಎಂ.ಬಿ ಹರಿಕೃಷ್ಣ, ಜಿ. ಧರ್ಮಪ್ರಸಾದ್, ಮಂಗೋಟೆ ರುದ್ರೇಶ್, ಜಿ. ಆನಂದಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

ವಿಐಎಸ್‌ಎಲ್ ಕಾರ್ಖಾನೆ ಸಮಸ್ಯೆ ಬಗೆಹರಿಸಲು ಫೆ.೮ರಂದು ಬೆಂಗಳೂರಿನಲ್ಲಿ ಸಭೆ : ಸಂಸದ ಬಿ.ವೈ ರಾಘವೇಂದ್ರ

ಕಾರ್ಖಾನೆ ಉಳಿವಿಗಾಗಿ ಸಹಿ ಅಭಿಯಾನ, ಕ್ರೈಸ್ತ ಸಮುದಾಯದಿಂದ ಪ್ರತಿಭಟನೆ, ಬೆಂಬಲ

ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಕಾರ್ಖಾನೆ ಮುಂಭಾಗದಲ್ಲಿ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ೧೮ನೇ ದಿನದ ಅನಿರ್ಧಿಷ್ಟಾವಧಿ ಹೋರಾಟ ಸ್ಥಳಕ್ಕೆ ಭಾನುವಾರ ಸಂಸದ ಬಿ.ವೈ ರಾಘವೇಂದ್ರ ಆಗಮಿಸಿ ಮಾತನಾಡಿದರು.
    ಭದ್ರಾವತಿ, ಫೆ. ೫ : ನಗರದ ವಿಐಎಸ್‌ಎಲ್ ಕಾರ್ಮಿಕರ ಸಮಸ್ಯೆ ಬಗೆಹರಿಸುವುದು ನನ್ನ ಮೊದಲ ಆದ್ಯತೆಯಾಗಿದ್ದು, ಈ ಹಿನ್ನಲೆಯಲ್ಲಿ ಒತ್ತಡಗಳ ನಡುವೆ ಮುಖ್ಯಮಂತ್ರಿಗಳ ಮನವೊಲಿಸಿ ಫೆ.೮ರಂದು ಸಭೆ ನಿಗದಿಪಡಿಸಲಾಗಿದೆ. ಈ ಸಭೆಯಲ್ಲಿ ಕಾಯಂ ಹಾಗು ಗುತ್ತಿಗೆ ಕಾರ್ಮಿಕರ ಸಂಘದ ಪದಾಧಿಕಾರಿಗಳು, ನಿವೃತ್ತ ಕಾರ್ಮಿಕರ ಸಂಘಟನೆಯ ಪ್ರಮುಖರು ಪಾಲ್ಗೊಳ್ಳುವಂತೆ ಸಂಸದ ಬಿ.ವೈ ರಾಘವೇಂದ್ರ ಮನವಿ ಮಾಡಿದರು.
    ಅವರು ಭಾನುವಾರ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಕಾರ್ಖಾನೆ ಮುಂಭಾಗದಲ್ಲಿ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ೧೮ನೇ ದಿನದ ಅನಿರ್ಧಿಷ್ಟಾವಧಿ ಹೋರಾಟ ಸ್ಥಳಕ್ಕೆ ಆಗಮಿಸಿ ಮಾತನಾಡಿದರು.
    ನಾನು ಒಬ್ಬ ಸಂಸದನಾಗಿದ್ದರೂ ಸಹ ಒಬ್ಬ ಕಾರ್ಮಿಕನಂತೆ ಕಾರ್ಖಾನೆ ಉಳಿವಿಗಾಗಿ ಸಾಕಷ್ಟು ಶ್ರಮಿಸಿದ್ದೇನೆ. ದೆಹಲಿಮಟ್ಟದಲ್ಲಿ ನೂರಾರು ಪತ್ರ ವ್ಯವಹಾರಗಳು ನಡೆದಿವೆ. ಸಂಬಂಧಿಸಿದ ಸಚಿವರು, ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಲಾಗಿದೆ. ಎಲ್ಲವೂ ಪಾರದರ್ಶಕವಾಗಿದ್ದು, ಎಲ್ಲೂ ಸಹ ಮುಚ್ಚುಮರೆ ನಡೆದಿಲ್ಲ. ಈಗಲೂ ಸಹ ನಾನು ಗುತ್ತಿಗೆ ಕಾರ್ಮಿಕರ ಪರವಾಗಿದ್ದು, ಮೊದಲ ಆದ್ಯತೆ ನೀಡುತ್ತಿದ್ದೇನೆ. ರಾಜ್ಯ ಸರ್ಕಾರ ಇನ್ನೇನು ಬಜೆಟ್ ಮಂಡನೆಗೆ ಮುಂದಾಗುತ್ತಿದ್ದು, ಇಂತಹ ಒತ್ತಡ ಪರಿಸ್ಥಿತಿಯಲ್ಲೂ ಸಭೆ ನಿಗದಿಪಡಿಸುವಲ್ಲಿ ಹೆಚ್ಚಿನ ಶ್ರಮ ವಹಿಸಿದ್ದೇನೆ ಎಂದರು.
    ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಗೃಹ ಕಛೇರಿ ಕೃಷ್ಣದಲ್ಲಿ ಫೆ.೮ರಂದು ಬೆಳಿಗ್ಗೆ ೯ ಗಂಟೆಗೆ ಬಿ.ಎಸ್ ಯಡಿಯೂರಪ್ಪ ಹಾಗು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಿಗದಿಪಡಿಸಲಾಗಿದೆ. ಈ ಸಭೆಯಲ್ಲಿ ಕಾಯಂ ಹಾಗು ಗುತ್ತಿಗೆ ಕಾರ್ಮಿಕರ ಸಂಘದ ಪದಾಧಿಕಾರಿಗಳು, ನಿವೃತ್ತ ಕಾರ್ಮಿಕರ ಸಂಘಟನೆಯ ಪ್ರಮುಖರು ಪಾಲ್ಗೊಳ್ಳುವಂತೆ ಕೋರಿದರು.
    ಈ ಸಭೆಯಲ್ಲಿ ಪ್ರಮುಖವಾಗಿ ೩ ವಿಚಾರಗಳ ಕುರಿತು ಚರ್ಚಿಸಲಾಗುವುದು. ಮೊದಲನೇಯದಾಗಿ ಕಾರ್ಖಾನೆಯಿಂದ ಬಂಡವಾಳ ಹಿಂಪಡೆಯುವುದನ್ನು ಕೈಬಿಡಬೇಕು. ಎರಡನೇಯದು ಕಾರ್ಖಾನೆಯನ್ನು ಮುನ್ನಡೆಸಿಕೊಂಡು ಹೋಗಲು ಬಂಡವಾಳಗಾರರನ್ನು ಪುನಃ ಆಹ್ವಾನಿಸುವುದು. ಪ್ರಸ್ತುತ ಕುದುರೆ ಮುಖದ ಕೆಓಸಿಎಲ್ ಕಂಪನಿ ಬಂಡವಾಳ ಹೂಡಲು ಆಸಕ್ತಿ ತೋರಿಸುತ್ತಿದೆ ಎಂಬ ವಿಷಯ ತಿಳಿದು ಬಂದಿದೆ.  ಈ ಹಿನ್ನಲೆಯಲ್ಲಿ ಈ ಕಾರ್ಖಾನೆಗೆ ವಹಿಸಿಕೊಡಲು ಕೇಂದ್ರ ಸರ್ಕಾರ ಹೆಚ್ಚಿನ ಆಸಕ್ತಿ ವಹಿಸುವುದು. ಮೂರನೇಯದಾಗಿ ಒಂದು ವೇಳೆ ಕಾರ್ಖಾನೆ ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗದಿದ್ದಲ್ಲಿ ನಾವು ನೀಡಿರುವ ಕಾರ್ಖಾನೆ ಹಾಗು ಸ್ವತ್ತನ್ನು ರಾಜ್ಯ ಸರ್ಕಾರಕ್ಕೆ ಮರಳಿಸುವುದು. ಈ ವಿಚಾರಗಳ ಚರ್ಚೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು.


 ಪತ್ರಕರ್ತ ಅನಂತಕುಮಾರ್ ತಮ್ಮ ಹುಟ್ಟುಹಬ್ಬದ ಅಂಗವಾಗಿ ವಿಐಎಸ್‌ಎಲ್ ಕಾರ್ಖಾನೆ ಉಳಿವಿಗಾಗಿ ಭದ್ರಾವತಿ ಪೀಪಲ್ ಲಿಬರೇಷನ್ ಸಂಘ ಮತ್ತು ಪ್ರತಿಕ್ಷಣ ಚಾರಿಟಬಲ್ ಟ್ರಸ್ಟ್ ವತಿಯಿಂದ ಬೃಹತ್ ಸಹಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಸಹಿ ಅಭಿಯಾನಕ್ಕೆ ಹಿರಿಯ ಕಾರ್ಮಿಕ ಮುಖಂಡ ಡಿ.ಸಿ ಮಾಯಣ್ಣ ಚಾಲನೆ ನೀಡಿದರು. 

ಕಾರ್ಖಾನೆ ಉಳಿವಿಗಾಗಿ ಬೃಹತ್ ಸಹಿ ಅಭಿಯಾನ :
    ನಗರದ ಪತ್ರಕರ್ತ ಅನಂತಕುಮಾರ್ ತಮ್ಮ ಹುಟ್ಟುಹಬ್ಬದ ಅಂಗವಾಗಿ ಕಾರ್ಖಾನೆ ಉಳಿವಿಗಾಗಿ ಭದ್ರಾವತಿ ಪೀಪಲ್ ಲಿಬರೇಷನ್ ಸಂಘ ಮತ್ತು ಪ್ರತಿಕ್ಷಣ ಚಾರಿಟಬಲ್ ಟ್ರಸ್ಟ್ ವತಿಯಿಂದ ಬೃಹತ್ ಸಹಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
ಸಹಿ ಅಭಿಯಾನಕ್ಕೆ ಹಿರಿಯ ಕಾರ್ಮಿಕ ಮುಖಂಡ ಡಿ.ಸಿ ಮಾಯಣ್ಣ ಚಾಲನೆ ನೀಡಿ ಮಾತನಾಡಿ, ವಿಐಎಸ್‌ಎಲ್ ಆರಂಭ ಹಾಗು ಬೆಳವಣಿಗೆಗಳು ಮತ್ತು ಕಾರ್ಮಿಕ ಹೋರಾಟಗಳ ಬಗ್ಗೆ ಸ್ವವಿವರವಾದ ಮಾಹಿತಿ ನೀಡಿದರು. ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಸುರೇಶ್ ಹಾಗು ಪದಾಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದರು. ಸಂಜೆ ವೇಳೆಗೆ ಸುಮಾರು ೪೦೦ಕ್ಕೂ ಮಂದಿ ಸಹಿ ಮಾಡುವ ಮೂಲಕ ಅಭಿಯಾನ ಯಶಸ್ವಿಗೆ ಸಹಕರಿಸಿದರು.


ಚರ್ಚ್ ಆಫ್ ಸೌತ್ ಇಂಡಿಯಾ ಸಂಘಟನೆ ನೇತೃತ್ವದಲ್ಲಿ ಭದ್ರಾವತಿ ನಗರದ ಸಿಎಸ್‌ಐ ವೇನ್ಸ್ ಸ್ಮಾರಕ ದೇವಾಲಯ, ಸಿಎಸ್‌ಐ ತೆಲುಗು ಬ್ಯೂಬಿಲಿ ದೇವಾಲಯ ಮತ್ತು ಸಿಎಸ್‌ಐ ಸಂತ ಪ್ರಾನ್ಸಿಸ್ ದೇವಾಲಯದ ಕ್ರೈಸ್ತ ಸಮುದಾಯದವರು ಧರ್ಮಗುರು ನೇತೃತ್ವದಲ್ಲಿ ಪ್ರತಿಭಟನೆ ನಡೆಸುವ ಮೂಲಕ ಕಾರ್ಖಾನೆ ಮುಚ್ಚುವ ಆದೇಶವನ್ನು ಖಂಡಿಸಿದರು.

    ಕ್ರೈಸ್ತ ಸಮುದಾಯದವರಿಂದ ವಿಐಎಸ್‌ಎಲ್ ಉಳಿವಿಗಾಗಿ ಪ್ರತಿಭಟನೆ :
ಚರ್ಚ್ ಆಫ್ ಸೌತ್ ಇಂಡಿಯಾ ಸಂಘಟನೆ ನೇತೃತ್ವದಲ್ಲಿ ನಗರದ ಸಿಎಸ್‌ಐ ವೇನ್ಸ್ ಸ್ಮಾರಕ ದೇವಾಲಯ, ಸಿಎಸ್‌ಐ ತೆಲುಗು ಬ್ಯೂಬಿಲಿ ದೇವಾಲಯ ಮತ್ತು ಸಿಎಸ್‌ಐ ಸಂತ ಪ್ರಾನ್ಸಿಸ್ ದೇವಾಲಯದ ಕ್ರೈಸ್ತ ಸಮುದಾಯದವರು ಧರ್ಮಗುರು ನೇತೃತ್ವದಲ್ಲಿ ಪ್ರತಿಭಟನೆ ನಡೆಸುವ ಮೂಲಕ ಕಾರ್ಖಾನೆ ಮುಚ್ಚುವ ಆದೇಶವನ್ನು ಖಂಡಿಸಿದರು.
    ಸಿಎಸ್‌ಐ ಕರ್ನಾಟಕ ಉತ್ತರ ಸಭಾ ಪ್ರಾಂತ್ಯಾದ ಧರ್ಮಾಧ್ಯಕ್ಷರಾದ ರೈಟ್, ರೆವರೆಂಡ್ ಡಾ. ಮಾರ್ಟಿನ್ ಸಿ. ಬೊರ್ಗಾಯಿ ಮತ್ತು ಕಾರ್ಯದರ್ಶಿ ವಿಜಯ್‌ಕುಮಾರ್ ವಸಂತ್ ದಂಡಿನ್‌ರವರ ಮಾರ್ಗದರ್ಶನದಲ್ಲಿ ೩ ಚರ್ಚ್‌ಗಳ ಸಭಾಪಾಲಕರಾದ ರೆವರೆಂಡ್ ಸ್ಟ್ಯಾನ್ಲಿ ಗಾಂಟ, ರೆವರೆಂಡ್  ಎಸ್ತಾರ್ ಅಬ್ರಾಹಂ, ರೆವರೆಂಡ್ ಅಬ್ರಾಹಂ ಸಂಕೇಶ್ವರ್ ಮತ್ತು ರೆವರೆಂಡ್ ಬಾಬಿರಾಜ್ ಹಾಗು ಪ್ರಮುಖರಾದ ಇಟ್ಟೆ ಸಂತೋಷ್‌ಕುಮಾರ್, ಮೋಸಸ್ ರೋಸಯ್ಯ, ಸ್ಪೀಫನ್, ವಿಜಯ್, ದಿವಾಕರ್, ಸೋನಿ ದೀಪು, ಪಿಲ್ಲಿ ಇಸ್ರಾಯೆಲ್, ಡ್ಯಾನಿಯಲ್, ಜಾನಿ, ಅನು ಜೀವನ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.