ಭದ್ರಾವತಿ ನಗರದ ಬಿ.ಎಚ್ ರಸ್ತೆ ಲೋಯರ್ ಹುತ್ತಾದಲ್ಲಿರುವ ಶ್ರೀ ಚಂಡಿಕಾದುರ್ಗಾ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಉಪಾಸನಾ ಹಾಗು ನಾಮಸಾಧನಾ ಅಭ್ಯಾಸ ಶಿಬಿರದ ಸಮಾರಂಭದಲ್ಲಿ ಶ್ರೀ ಕ್ಷೇತ್ರ ಹೆಬ್ಬಳ್ಳಿ ಪ.ಪೂ ದತ್ತಾವಧೂತ ಮಹಾರಾಜರು ಆಶೀರ್ವಚನ ನೀಡಿದರು.
ಭದ್ರಾವತಿ, ಡಿ. ೪: ನಗರದ ಬಿ.ಎಚ್ ರಸ್ತೆ ಲೋಯರ್ ಹುತ್ತಾದಲ್ಲಿರುವ ಶ್ರೀ ಚಂಡಿಕಾದುರ್ಗಾ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಉಪಾಸನಾ ಹಾಗು ನಾಮಸಾಧನಾ ಅಭ್ಯಾಸ ಶಿಬಿರದ ಸಮಾರಂಭಕ್ಕೆ ಶನಿವಾರ ಸಂಜೆ ಆಗಮಿಸಿದ ಶ್ರೀ ಕ್ಷೇತ್ರ ಹೆಬ್ಬಳ್ಳಿ ಪ.ಪೂ ದತ್ತಾವಧೂತ ಮಹಾರಾಜರಿಗೆ ಭಕ್ತರಿಂದ ಅದ್ದೂರಿ ಸ್ವಾಗತ ಕೋರಲಾಯಿತು.
ಶ್ರೀ ಮಹಾರಾಜರ ದಿವ್ಯ ಪಾದುಕೆಗಳೊಂದಿಗೆ ಆಗಮಿಸಿದ ಪ.ಪೂ ದತ್ತಾವಧೂತ ಮಹಾರಾಜರು ಹಾಗು ಆಶ್ರಮ ವಾಸಿಗಳನ್ನು ಮಂಗಳವಾದ್ಯ, ನಾದಸ್ವರ ಹಾಗು ಪುಷ್ಪವೃಷ್ಟಿಯೊಂದಿಗೆ ಭಕ್ತರು ಅದ್ದೂರಿಯಾಗಿ ಸ್ವಾಗತಿಸಿದರು. ನಂತರ ಆರತಿ ಮಂತ್ರಪುಷ್ಪ, ಪ್ರಸಾದ ವಿನಿಯೋಗ ಜರುಗಿತು.
ಭಾನುವಾರ ಬೆಳಿಗ್ಗೆ ಕಾಕಡಾರತಿ ಹಾಗು ಪಂಚಪದಿ ಭಜನೆ, ಪ್ರಾತಃಕಾಲ ಪೂಜೆ, ಸಾಮೂಹಿಕ ಜಪ ಮತ್ತು ಶ್ರೀ ಹನುಮಾನ್ ಚಾಲೀಸ ಪಾಠ ಹಾಗು ಮಧ್ಯಾಹ್ನ ಆಶೀರ್ವಚನ ಹಾಗು ಮಾಹಾನೈವೇದ್ಯ, ಮಹಾಮಂಗಳಾರತಿ ಹಾಗು ಮಹಾಪ್ರಸಾದ ವಿನಿಯೋಗ ಜರುಗಿತು. ನಗರದ ವಿವಿಧೆಡೆಗಳಿಂದ ಭಕ್ತರು ಆಗಮಿಸಿ ಪ.ಪೂ ದತ್ತಾವಧೂತ ಮಹಾರಾಜರ ದರ್ಶನ ಪಡೆದರು.