![](https://blogger.googleusercontent.com/img/b/R29vZ2xl/AVvXsEgjMka5F8OQkUaGGqzE2ETk9TouhZwmnOM4hxr5j3UzIpPTQ3I5ectnxD-N9CzP0s7ZJm5g8U6RcLzE_SUGuphmWXEiupC8RWAmwf1A-GYN5WDNa9JtxZtoGeM2MccttPOiq0i_NfVc4_AS/w400-h174-rw/D13-BDVT1-785054.jpg)
ಕಾರ್ಮಿಕ ಇಲಾಖೆಯಿಂದ ಅಸಂಘಟಿತ ಕಾರ್ಮಿಕರಿಗೆ ನೀಡಲಾಗುವ ಸುರಕ್ಷಾ ಮತ್ತು ಪ್ರತಿರೋಧಕ ಕಿಟ್ಗಳನ್ನು ಕರ್ನಾಟಕ ಸ್ಟೇಟ್ ಕನ್ಸ್ಟ್ರಕ್ಷನ್ ವರ್ಕರ್ಸ್ ಸೆಂಟ್ರಲ್ ಯೂನಿಯನ್ ಗ್ರಾಮಾಂತರ ಶಾಖೆ ವತಿಯಿಂದ ಭದ್ರಾವತಿ ತಾಲೂಕಿನ ದೊಡ್ಡೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಸೋಮವಾರ ವಿತರಿಸಲಾಯಿತು.
ಭದ್ರಾವತಿ, ಡಿ. ೧೩: ಕಾರ್ಮಿಕ ಇಲಾಖೆಯಿಂದ ಅಸಂಘಟಿತ ಕಾರ್ಮಿಕರಿಗೆ ನೀಡಲಾಗುವ ಸುರಕ್ಷಾ ಮತ್ತು ಪ್ರತಿರೋಧಕ ಕಿಟ್ಗಳನ್ನು ಕರ್ನಾಟಕ ಸ್ಟೇಟ್ ಕನ್ಸ್ಟ್ರಕ್ಷನ್ ವರ್ಕರ್ಸ್ ಸೆಂಟ್ರಲ್ ಯೂನಿಯನ್ ಗ್ರಾಮಾಂತರ ಶಾಖೆ ವತಿಯಿಂದ ತಾಲೂಕಿನ ದೊಡ್ಡೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಸೋಮವಾರ ವಿತರಿಸಲಾಯಿತು.
ದೊಡ್ಡೇರಿ, ಎಮ್ಮೆದೊಡ್ಡಿ, ಗಂಗೂರು, ಬದನೇಹಾಳ್, ಬಂಡಿಗುಡ್ಡ, ಸಿಕಂದರ್ ಕ್ಯಾಂಪ್, ಬಾಳೆಕಟ್ಟೆ ಮತ್ತು ಬಿಸಿಲು ಮನೆ ಇನ್ನಿತರ ಗ್ರಾಮಗಳಲ್ಲಿ ಕಟ್ಟಡ ಕಾರ್ಮಿಕರಿಗೆ ಯುವ ಮುಖಂಡ ಬಿ.ಎಸ್ ಗಣೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಷರೀಫ್ ಮತ್ತು ಉಪಾಧ್ಯಕ್ಷೆ ಹೇಮಾವತಿ ಶ್ರೀನಿವಾಸ್ ನೇತೃತ್ವದಲ್ಲಿ ಕಿಟ್ಗಳನ್ನು ವಿತರಿಸಿದರು.
ಕರ್ನಾಟಕ ಸ್ಟೇಟ್ ಕನ್ಸ್ಟ್ರಕ್ಷನ್ ವರ್ಕರ್ಸ್ ಸೆಂಟ್ರಲ್ ಯೂನಿಯನ್ ಜಿಲ್ಲಾ ಕಾರ್ಯಾಧ್ಯಕ್ಷ ಸುಂದರ್ಬಾಬು, ತಾಲೂಕು ಅಧ್ಯಕ್ಷ ಚಂದ್ರಶೇಖರ್, ತಾಲ್ಲೂಕು ಕಾರ್ಯಾಧ್ಯಕ್ಷ ಅಭಿಲಾಷ್, ಗೌರವ ಸಲಹೆಗಾರ ಶಿವಣ್ಣಗೌಡ, ಪಿಡಿಒ ಶಿವಶಂಕರ್, ಧನಂಜಯ, ಕೃಷ್ಣಮೂರ್ತಿ, ಹರಿಯಪ್ಪ ಸೇರಿದಂತೆ ಗ್ರಾಮಾಂತರ ಶಾಖೆಯ ಪದಾಧಿಕಾರಿಗಳು, ಗ್ರಾಮದ ಮುಖಂಡರು, ಕಾರ್ಮಿಕರು ಉಪಸ್ಥಿತರಿದ್ದರು.