Sunday, November 29, 2020

ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಸ್ಮರಣಾರ್ಥ ಉಚಿತ ರಕ್ತದಾನ ಶಿಬಿರ

ಭದ್ರಾವತಿ ನಗರಸಭೆ ವಾರ್ಡ್ ನಂ.೨೨ರ ಉಜ್ಜನೀಪುರದಲ್ಲಿ ಭಾನುವಾರ ಮಾಜಿ ಶಾಸಕ ಎಂ ಜೆ ಅಪ್ಪಾಜಿ ಹಾಗೂ ಮುಖಂಡ ಪೆರುಮಾಳ್ ಸ್ಮರಣಾರ್ಥ ಉಚಿತ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ಭದ್ರಾವತಿ, ನ. ೨೯ : ನಗರಸಭೆ ವಾರ್ಡ್ ನಂ.೨೨ರ ಉಜ್ಜನೀಪುರದಲ್ಲಿ ಭಾನುವಾರ ಮಾಜಿ ಶಾಸಕ ಎಂ ಜೆ ಅಪ್ಪಾಜಿ ಹಾಗೂ ಮುಖಂಡ ಪೆರುಮಾಳ್ ಸ್ಮರಣಾರ್ಥ ಉಚಿತ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ಶಿವಮೊಗ್ಗ ಸುಬ್ಬಯ್ಯ ಆಸ್ಪತ್ರೆ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಶಿಬಿರದ ನೇತೃತ್ವ ನಗರಸಭಾ ಸದಸ್ಯ ಬದರಿನಾರಾಯಣ ವಹಿಸಿದ್ದರು. ಮುಖಂಡರಾದ ಆರ್ ಕರುಣಾಮೂರ್ತಿ, ಎಂ ಎ ಅಜಿತ್, ಬಸವರಾಜ ಆನೆಕೊಪ್ಪ, ಗುಣಶೇಖರ,  ಜೆಡಿಎಸ್ ಕಾರ್ಯಕರ್ತರು, ಎಂ ಜೆ ಅಪ್ಪಾಜಿ ಅಭಿಮಾನಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.