ಭದ್ರಾವತಿ, ಏ. ೩: ತಾಲೂಕಿನ ಕಾರೇಹಳ್ಳಿ ಬಿಜಿಎಸ್ ಕೇಂದ್ರೀಯ ಮಹಾವಿದ್ಯಾಲಯದ ವಿದ್ಯಾರ್ಥಿ ಸಮರ್ಥ ಎಂ. ಪಟೇಲ್ ದಿ ಅಸೋಸಿಯೇಷನ್ ಫಾರ್ ಟ್ರೆಡಿಷನಲ್ ಯೂತ್ ಗೇಮ್ಸ್ ಅಂಡ್ ಸ್ಪೋರ್ಟ್ಸ್ ಇಂಡಿಯಾ(ಟಿಎಎಫ್ಟಿವೈಜಿಎಎಸ್) ವತಿಯಿಂದ ಏ.೨೧ ರಿಂದ ೨೫ರವರೆಗೆ ನಡೆಯಲಿರುವ ೫ನೇ ಇಂಟರ್ನ್ಯಾಷನಲ್ ಯೂತ್ ಗೇಮ್ಸ್ ಪಂದ್ಯಾವಳಿಗೆ ಕಬಡ್ಡಿ ಆಟಗಾರನಾಗಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾನೆ.
ಪಂದ್ಯಾವಳಿ ನೇಪಾಳದ ಪೊಖಾರದಲ್ಲಿ ನಡೆಯಲಿದ್ದು, ಕಬಡ್ಡಿ ಕ್ರೀಡೆಯಲ್ಲಿ ಆಯ್ಕೆಯಾಗಿರುವ ಒಟ್ಟು ೪ ವಿದ್ಯಾರ್ಥಿಗಳ ಪೈಕಿ ಸಮರ್ಥ ಎಂ. ಪಟೇಲ್ ಸಹ ಒಬ್ಬನಾಗಿದ್ದು, ಈತ ಬಾರಂದೂರು ನಿವಾಸಿ ಎಚ್. ಮಂಜುನಾಥ್ರವರ ಪುತ್ರ. ಈ ವಿದ್ಯಾರ್ಥಿಯನ್ನು ಬಿಜಿಎಸ್ ಕೇಂದ್ರಿಯ ಮಹಾವಿದ್ಯಾಲಯದ ಆಡಳಿತ ಮಂಡಳಿ, ಪ್ರಾಂಶುಪಾಲರು, ಶಿಕ್ಷಕ ಹಾಗು ಸಿಬ್ಬಂದಿ ವೃಂದದವರು ಅಭಿನಂದಿಸಿದ್ದಾರೆ.