ಭದ್ರಾವತಿ, ಜ. ೨೧: ತಾಲೂಕಿನಾದ್ಯಂತ ಕೋವಿಡ್ ೩ನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಶುಕ್ರವಾರ ಒಂದೇ ದಿನ ೧೩೮ ಸೋಂಕು ದೃಡಪಟ್ಟಿವೆ. ಈ ನಡುವೆ ಸೋಂಕು ಕಾಣಿಸಿಕೊಂಡಿರುವ ವ್ಯಾಪ್ತಿಯಲ್ಲಿ ತಹಸೀಲ್ದಾರ್ ಆರ್. ಪ್ರದೀಪ್ ನಿಕ್ಕಮ್ ಕಂಟೈನ್ಮೆಂಟ್ ಜೋನ್ಗಳನ್ನು ಘೋಷಿಸಿ ಆದೇಶ ಹೊರಡಿಸಿದ್ದಾರೆ.
ಅಂತರಗಂಗೆ ಗ್ರಾಮದ ಕೆಪಿಎಸ್(ಕರ್ನಾಟಕ ಪಬ್ಲಿಕ್ ಸ್ಕೂಲ್) ಶಾಲೆಯ ವ್ಯಾಪ್ತಿಯನ್ನು ಕಂಟೈನ್ಮೆಂಟ್ ಜೋನ್ ಎಂದು ಘೋಷಿಸಲಾಗಿದೆ. ಈ ವ್ಯಾಪ್ತಿಯಲ್ಲಿ ೨೫ ವಾಸದ ಮನೆಗಳು, ೬ ಅಂಗಡಿ ಮುಂಗಟ್ಟು, ಕಛೇರಿಗಳಿದ್ದು, ಒಟ್ಟು ೧೩೫ ಜನಸಂಖ್ಯೆಯನ್ನು ಒಳಗೊಂಡಿದೆ. ಈ ಜೋನ್ ನಿರ್ವಹಣೆಗೆ ಅಂತರಗಂಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(ಪಿಡಿಓ)ಯನ್ನು ನೇಮಕಗೊಳಿಸಿದ್ದು, ಮೊ: ೯೪೦೮೭೬೨೦೨ಕ್ಕೆ ಕರೆ ಮಾಡಬಹುದಾಗಿದೆ.
ನಾಗತಿಬೆಳಗಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಳ್ಳಿಕಟ್ಟೆ ಗ್ರಾಮವನ್ನು ಕಂಟೈನ್ಮೆಂಟ್ ಜೋನ್ ಎಂದು ಘೋಷಿಸಲಾಗಿದೆ. ಈ ವ್ಯಾಪ್ತಿಯಲ್ಲಿ ೧೦ ವಾಸದ ಮನೆಗಳು, ೧ ಅಂಗಡಿ ಮುಂಗಟ್ಟು, ಕಛೇರಿ ಇದ್ದು, ಒಟ್ಟು ೫೫ ಜನಸಂಖ್ಯೆಯನ್ನು ಒಳಗೊಂಡಿದೆ. ಈ ಜೋನ್ ನಿರ್ವಹಣೆಗೆ ಹೊಳೆಹೊನ್ನೂರು ಆರೋಗ್ಯ ಸಹಾಯಕಿ ದೀಪಿಕ ಅವರನ್ನು ನೇಮಕಗೊಳಿಸಿದ್ದು, ಮೊ: ೯೯೭೨೦೩೪೩೭೩ ಸಂಖ್ಯೆಗೆ ಕರೆ ಮಾಡಬಹುದಾಗಿದೆ.
ಸಿಂಗನಮನೆ ಗ್ರಾಮ ಪಂಚಾಯಿತಿ ಶಾಂತಿನಗರ ನ್ಯಾಷನಲ್ ಫಸ್ಟ್ ಗ್ರೇಡ್ ಕಾಲೇಜ್ ವ್ಯಾಪ್ತಿಯನ್ನು ಕಂಟೈನ್ಮೆಂಟ್ ಜೋನ್ ಎಂದು ಘೋಷಿಸಲಾಗಿದೆ. ಈ ವ್ಯಾಪ್ತಿಯಲ್ಲಿ ೨೧೪ ವಾಸದ ಮನೆಗಳು, ೧೦ ಅಂಗಡಿ ಮುಂಗಟ್ಟು, ಕಛೇರಿಗಳಿದ್ದು, ಒಟ್ಟು ೨೩೨ ಜನಸಂಖ್ಯೆಯನ್ನು ಒಳಗೊಂಡಿದೆ. ಈ ಜೋನ್ ನಿರ್ವಹಣೆಗೆ ಅಂತರಗಂಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(ಪಿಡಿಓ)ಯನ್ನು ನೇಮಕಗೊಳಿಸಿದ್ದು, ಮೊ: ೯೪೮೦೮೭೬೨೩೧ ಸಂಖ್ಯೆಗೆ ಕರೆ ಮಾಡಬಹುದಾಗಿದೆ.