Sunday, April 16, 2023

ಹೋರಾಟಗಾರ ಬಿ.ಎನ್ ರಾಜು ಏ.೧೭ರಂದು ನಾಮಪತ್ರ ಸಲ್ಲಿಕೆ

ಬಿ.ಎನ್ ರಾಜು
    ಭದ್ರಾವತಿ, ಏ. ೧೬ : ನಗರದ ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ವಿಧಾನಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಮವಾರ ನಾಮಪತ್ರ ಸಲ್ಲಿಸಲಿದ್ದಾರೆ.
    ಸುಮಾರು ೫೦ ವರ್ಷ ವಯಸ್ಸಿನ ವೇಲೂರು ಶೆಡ್ ನಿವಾಸಿಯಾಗಿರುವ ಬಿ.ಎನ್ ರಾಜು ೨ನೇ ಬಾರಿ ವಿಧಾನಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಅನ್ಯಾಯದ ವಿರುದ್ಧ, ಶೋಷಿತರ ಪರವಾಗಿ ಸುಮಾರು ೩೦ ವರ್ಷಗಳಿಂದ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರುತ್ತಿದ್ದಾರೆ.
    ಕಳೆದ ಬಾರಿ ೨೦೧೮ರ ಚುನಾವಣೆಯಲ್ಲಿ ೧೨ನೇ ಸ್ಥಾನ ಕಾಯ್ದುಕೊಂಡಿದ್ದರು. ಇದೀಗ ೨ನೇ ಬಾರಿಗೆ ಸ್ಪರ್ಧಿಸುತ್ತಿದ್ದಾರೆ. ಮಿನಿವಿಧಾನಸೌಧ ತಾಲೂಕು ಕಛೇರಿ ಚುನಾವಣಾಧಿಕಾರಿಗಳ ಕಛೇರಿಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ.  

ತಾಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪ ಸಮಾರಂಭ

 ಭದ್ರಾವತಿ, ಏ. 16:  ತಾಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪ ಸಮಾರಂಭ ಭಾನುವಾರ ಸಂಜೆ  ನಡೆಯಿತು.
ಬೆಂಗಳೂರಿನ ಹಿರಿಯ ಕವಿ ಎಚ್. ದುಂಡಿರಾಜ್ ಸಮಾರೋಪ ನುಡಿಗಳನ್ನಾಡಿದರು.  ಕಸಾಪ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ಅಭಿನಂದನಾ ನುಡಿಗಳನ್ನಾಡಿದರು.   ಸಮ್ಮೇಳನಾಧ್ಯಕ್ಷ,  ಸಾಹಿತಿ, ಹೊಸಹಳ್ಳಿ ದಾಳೇಗೌಡ,   ಕಸಾಪ ತಾಲೂಕು ಅಧ್ಯಕ್ಷ ಕೋಡ್ಲು ಯಜ್ಞಯ್ಯ, ಮಾಜಿ ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ, ಕೂಡ್ಲಿಗೆರೆ ಹೋಬಳಿ ಘಟಕ ಅಧ್ಯಕ್ಷ ಕೆ.ಎಸ್. ರೇವಪ್ಪ ಮತ್ತು ನಿವೃತ್ತ ಮುಖ್ಯ ಶಿಕ್ಷಕ ಸಿ.ಜಯಪ್ಪ ಉಪಸ್ಥಿತರಿದ್ದರು.  
    ಅನ್ನಪೂರ್ಣ ಸತೀಶ್ ನಿರೂಪಿಸಿದರು.  ಜೆ.ಎನ್ ಬಸವರಾಜಪ್ಪ ವಂದಿಸಿದರು. ಸಮ್ಮೇಳನಾಧ್ಯಕ್ಷ,  ಸಾಹಿತಿ, ಹೊಸಹಳ್ಳಿ ದಾಳೇಗೌಡರನ್ನು ಸನ್ಮಾನಿಸಿ ಗೌರವಿಸಲಾಯಿತು.