Sunday, October 8, 2023

ಛಾಯಾಗ್ರಾಹಕ ಜಾನ್ಸನ್ ನಿಧನ


ಜಾನ್ಸನ್

    ಭದ್ರಾವತಿ: ತಾಲೂಕು ಛಾಯಾಗ್ರಾಹಕರ ಸಂಘದ ನಿರ್ದೇಶಕ, ಕವಲಗುಂದಿ ನಿವಾಸಿ ಜಾನ್ಸನ್(ಕಿಚ್ಚ)(31) ನಿಧನ ಹೊಂದಿದರು.

    ತಾಯಿ, ಸಹೋದರ, ಸಹೋದರಿ ಇದ್ದರು. ಭಾನುವಾರ ಸಂಜೆ ಬೈಪಾಸ್ ರಸ್ತೆಯಲ್ಲಿರುವ ಕ್ರೈಸ್ತರ ಸಮಾದಿಯಲ್ಲಿ ಇವರ ಅಂತ್ಯಕ್ರಿಯೆ ನೆರವೇರಿತು.

    ತಾಲೂಕು ಛಾಯಾ ಗ್ರಾಹಕರ ಸಂಘ, ಛಾಯ ಗ್ರಾಹಕರ ಪತ್ತಿನ ಸಹಕಾರ ಸಂಘ ಸೇರಿದಂತೆ ಇನ್ನಿತರ ಸಂಘ-ಸಂಸ್ಥೆಗಳು, ಗಣ್ಯರು ಸಂತಾಪ ಸೂಚಿಸಿದ್ದಾರೆ.

ಶ್ರೀ ರಾಮ ಹಿಂದೂ ಸೇವಾ ಸಮಿತಿ ಗಣಪತಿ ವಿಸರ್ಜನೆ

ಭದ್ರಾವತಿ ಕೂಲಿಬ್ಲಾಕ್ ಶೆಡ್ ಶ್ರೀರಾಮ ದೇವಾಲಯ ಸಮೀಪ ಶ್ರೀ ರಾಮ ಹಿಂದೂ ಸೇವಾ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಶ್ರೀ ವಿನಾಯಕ ಮೂರ್ತಿ ವಿಸರ್ಜನೆ ಭಾನುವಾರ ನಡೆಯಿತು.
    ಭದ್ರಾವತಿ: ನಗರದ ಕೂಲಿಬ್ಲಾಕ್ ಶೆಡ್ ಶ್ರೀರಾಮ ದೇವಾಲಯ ಸಮೀಪ ಶ್ರೀ ರಾಮ ಹಿಂದೂ ಸೇವಾ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಶ್ರೀ ವಿನಾಯಕ ಮೂರ್ತಿ ವಿಸರ್ಜನೆ ಭಾನುವಾರ ನಡೆಯಿತು.
      ಪ್ರತಿವರ್ಷದಂತೆ ಈ ಬಾರಿ ಸಹ ಹೋಮ-ಹವನ, ವಿಶೇಷ ಪೂಜೆ, ಅನ್ನಸಂತರ್ಪಣೆ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು.
    ಸಂಜೆ ವಿಸರ್ಜನಾ ಪೂರ್ವ ರಾಜಬೀದಿ ಉತ್ಸವ ಮೆರವಣಿಗೆ ಪ್ರಮುಖ ರಸ್ತೆಗಳಲ್ಲಿ ಡೊಳ್ಳು ಕುಣಿತ ಸೇರಿದಂತೆ ಕಲಾತಂಡಗಳೊಂದಿಗೆ ನಡೆಯಿತು.

ಶ್ರೀ ಬೀರೇಶ್ವರ ಕೋ ಆಪ್ ಕ್ರೆಡಿಟ್ ಸೊಸೈಟಿ ಲಿ. ಯಕ್ಸಂಬಾ(ಮಲ್ಪಿ-ಸ್ಟೇಟ್) ೧೬೪ನೇ ಶಾಖೆ ಉದ್ಘಾಟನೆ


ಭದ್ರಾವತಿ ನಗರದಲ್ಲಿ ನೂತನವಾಗಿ ಆರಂಭಗೊಂಡ ಶ್ರೀ ಬೀರೇಶ್ವರ ಕೋ ಆಪ್ ಕ್ರೆಡಿಟ್ ಸೊಸೈಟಿ ಲಿ. ಯಕ್ಸಂಬಾ(ಮಲ್ಪಿ-ಸ್ಟೇಟ್) ೧೬೪ನೇ ಶಾಖೆಯನ್ನು ಆನಂದಪುರ ಬೆಕ್ಕಿನ ಕಲ್ಮಠದ ಶ್ರೀ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಉದ್ಘಾಟಿಸಿದರು.
    ಭದ್ರಾವತಿ: ನಗರದಲ್ಲಿ ನೂತನವಾಗಿ ಆರಂಭಗೊಂಡ ಶ್ರೀ ಬೀರೇಶ್ವರ ಕೋ ಆಪ್ ಕ್ರೆಡಿಟ್ ಸೊಸೈಟಿ ಲಿ. ಯಕ್ಸಂಬಾ(ಮಲ್ಪಿ-ಸ್ಟೇಟ್) ೧೬೪ನೇ ಶಾಖೆಯನ್ನು ಆನಂದಪುರ ಬೆಕ್ಕಿನ ಕಲ್ಮಠದ ಶ್ರೀ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಉದ್ಘಾಟಿಸಿದರು.
    ಸಂಸದ ಅಣ್ಣಾಸಾಹೇಬ್ ಶಂಕರ ಜೊಲ್ಲೆ ಸಂಸ್ಥಾಪಕ ಹಾಗು ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಸಹ ಸಂಸ್ಥಾಪಕರಾಗಿರುವ ಶ್ರೀ ಬೀರೇಶ್ವರ ಕೋ ಆಪ್ ಕ್ರೆಡಿಟ್ ಸೊಸೈಟಿ ವಿಸ್ತರಣೆಗೊಳ್ಳುತ್ತಿದ್ದು, ಪ್ರಸಕ್ತ ಸಾಲಿನ ಜುಲೈ ಅಂತ್ಯಕ್ಕೆ ಸುಮಾರು ೩.೫ ಲಕ್ಷಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದ್ದು, ಸುಮಾರು ೩೫ ಕೋ. ರು. ಲಾಭದಲ್ಲಿ ಮುನ್ನಡೆಯುತ್ತಿದೆ. ಇದೀಗ ನಗರದಲ್ಲಿ ನೂತನ ಶಾಖೆ ಆರಂಭಗೊಂಡಿದ್ದು, ಶ್ರೀ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಶುಭ ಕೋರಿದರು.
    ಬಿಜೆಪಿ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಸೊಸೈಟಿ ವ್ಯವಸ್ಥಾಪಕ ಸುರೇಶ್, ಎಸ್. ರಾಜಶೇಖರ್ ಉಪ್ಪಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ನ.೨, ೩ ಪುಟ್ಟಪರ್ತಿ ಯಾತ್ರೆ-ಪ್ರಶಾಂತಿ ನಿಲಯಕ್ಕೆ

ಪುಟ್ಟಪರ್ತಿ
    ಭದ್ರಾವತಿ: ನ್ಯೂಟೌನ್ ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆಗಳ ವತಿಯಿಂದ ಪ್ರೇಮ ಮತ್ತು ಸೇವೆಯ ಸಮರ್ಪಣೆ ಸುವರ್ಣ ಮಹೋತ್ಸವ ಸಂಭ್ರಮಾಚರಣೆ ಅಂಗವಾಗಿ ನ.೨ ಮತ್ತು ೩ ರಂದು 'ಪುಟ್ಟಪರ್ತಿ ಯಾತ್ರೆ-ಪ್ರಶಾಂತಿ ನಿಲಯಕ್ಕೆ' ಹಮ್ಮಿಕೊಳ್ಳಲಾಗಿದೆ.
    ಪುಟ್ಟಪರ್ತಿ, ಸಾಯಿ ಕುಲ್ವಂತ್ ಹಾಲ್, ಪ್ರಶಾಂತಿ ನಿಲಯದಲ್ಲಿ ಸುರ್ವಣ ಮಹೋತ್ಸವ ಸಂಭ್ರಮಾಚರಣೆ ನಡೆಯಲಿದೆ. ಯಾತ್ರೆಯಲ್ಲಿ ಶಿಕ್ಷಕರು, ಸಿಬ್ಬಂದಿ ವರ್ಗ, ಪೋಷಕರು, ಸಾಯಿ ಭಕ್ತರು ಹಾಗು ಸಾರ್ವಜನಿಕರು ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಈ ಸಂಬಂಧ ೩೦ ಬಸ್‌ಗಳನ್ನು ನಿಯೋಜಿಸಲಾಗಿದೆ.
    ಯಾತ್ರೆ ವೇಳಾಪಟ್ಟಿ: ನ.೧ರಂದು ರಾತ್ರಿ ೮ ಗಂಟೆಗೆ ಹೊರಡುವುದು. ಬೆಳಗಿನ ಜಾವ ೩ ಗಂಟೆಗೆ ಪುಟ್ಟಪರ್ತಿ ತಲುಪುವುದು. ನ.೩ರಂದು ಮಧ್ಯಾಹ್ನ ೧.೩೦ಕ್ಕೆ ಪುಟ್ಟಪರ್ತಿಯಿಂದ ಹೊರಟು ಸಂಜೆ ೭ ಗಂಟೆಗೆ ಭದ್ರಾವತಿ ತಲುಪುವುದು. ಒಬ್ಬರಿಗೆ ೧,೧೦೦ ರು. ವೆಚ್ಚವಾಗಲಿದೆ. ಆಸಕ್ತರು ವ್ಯವಸ್ಥಾಪಕರು, ಪ್ರಶಾಂತಿ ಸೇವಾ ಟ್ರಸ್ಟ್, ಶ್ರೀ ಸತ್ಯ ಸಾಯಿ ಸೇವಾ ಸಮಿತಿ, ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆ, ಮೊ: ೯೧೪೧೬೪೨೪೩೨ ಅಥವಾ ೭೩೫೩೨೯೨೩೩೯ ಸಂಖ್ಯೆಗೆ ಕರೆ ಮಾಡಬಹುದಾಗಿದೆ.