Sunday, May 17, 2020

೪೩ ಪಂಚಾಬ್ ನಿವಾಸಿಗಳ ಗಂಟಲು ದ್ರವ ಪರೀಕ್ಷೆ


ಭದ್ರಾವತಿ ತಾಲೂಕಿನ ದೇವರನರಸೀಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ತೆರೆಯಲಾಗಿರುವ ಕ್ವಾರಂಟೈನ್ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಭಾನುವಾರ ಪಂಜಾಬ್ ನಿವಾಸಿಗಳ ಗಂಟಲು ದ್ರವ ಪರೀಕ್ಷೆ ನಡೆಸಲಾಯಿತು. 
ಭದ್ರಾವತಿ, ಮೇ. ೧೭: ತಾಲೂಕಿನ ದೇವರನರಸೀಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ತೆರೆಯಲಾಗಿರುವ ಕ್ವಾರಂಟೈನ್ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಭಾನುವಾರ ಪಂಜಾಬ್ ನಿವಾಸಿಗಳ ಗಂಟಲು ದ್ರವ ಪರೀಕ್ಷೆ ನಡೆಸಲಾಯಿತು.
ಮೂಲತಃ ಪಂಜಾಬ್‌ನ ೪೩ ಮಂದಿ ದೆಹಲಿಯಿಂದ ರೈಲಿನ ಮೂಲಕ ಹೊರಟು ಹುಬ್ಬಳ್ಳಿಯಲ್ಲಿ ಇಳಿದು ಅಲ್ಲಿಂದ ಬಸ್ ಮೂಲಕ ಶಿವಮೊಗ್ಗ ನಗರಕ್ಕೆ ಮೇ.೧೬ರ ಶನಿವಾರ ರಾತ್ರಿ ಆಗಮಿಸಿದ್ದು, ಅವರನ್ನು ದೇವರನರಸೀಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕ್ವಾರಂಟೈನ್‌ಗೆ ಕರೆತರಲಾಗಿತ್ತು.
ಭಾನುವಾರ ಆರ್‌ಸಿಎಚ್‌ಓ ಡಾ. ನಾಗರಾಜ್ ನಾಯ್ಕ ನೇತೃತ್ವದ ತಂಡ ಗಂಟಲು ದ್ರವ ಪರೀಕ್ಷೆ ನಡೆಸಿ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಕೊಟ್ಟಿದೆ.
ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಆರ್ ಗಾಯತ್ರಿ,  ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಓ. ಮಲ್ಲಪ್ಪ,  ಅಂತರಗಂಗೆ ವೈದ್ಯಾಧಿಕಾರಿ ಡಾ. ಗಿರೀಶ್, ವಸತಿ ಶಾಲೆ ಪ್ರಾಂಶುಪಾಲ ಬಸವರಾಜ್, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯ ಹಿರಿಯ ಆರೋಗ್ಯ ಸಹಾಯಕ ನಿಲೇಶ್‌ರಾಜ್, ಕವಿತಾರಾಣಿ, ನೆಲ್ಸನ್ ಕುಮಾರ್, ಸೋಮಶೇಖರ್  ಪ್ರದೀಪ್, ಚಾಲಕ ಅಮೀರ್ ಇನ್ನಿತರರು ತಂಡದಲ್ಲಿದ್ದರು. 

ಕೊರೋನಾ ಸೋಂಕಿತ ಪ್ರಕರಣ ಗಾಳಿ ಸುದ್ದಿ : ಭಯಭೀತಗೊಂಡ ನಾಗರಿಕರು

ಭದ್ರಾವತಿ : ನಗರದಲ್ಲಿ ಕೊರೋನಾ ಸೋಂಕಿತ ಪ್ರಕರಣ ಪತ್ತೆ ಎಂಬ ಸುದ್ದಿ ಭಾನುವಾರ ವ್ಯಾಪಕವಾಗಿ ಹಬ್ಬಿದ್ದು ಇದರಿಂದಾಗಿ ನಾಗರಿಕರು ಭಯ ಭೀತಿಗೊಂಡಿದ್ದಾರೆ.
      ಜಿಲ್ಲೆಯಲ್ಲಿ ಒಟ್ಟು ಎರಡು ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ ಒಂದು ಭದ್ರಾವತಿ ನಗರದಲ್ಲಿ ಕಂಡುಬಂದಿದೆ ಎಂಬ ಸುದ್ದಿ ಟಿವಿ ಮಾದ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
           ಆದರೆ  ಈ ಬಗ್ಗೆ  ಅಧಿಕೃತ ಮಾಹಿತಿ ಜಿಲ್ಲಾಡಾಳಿತ ಅಥವಾ ತಾಲೂಕು ಆಡಳಿತ ನೀಡಿಲ್ಲ .  ಮುಂಬೈ ನಗರದಿಂದ ಇತ್ತೀಚೆಗೆ  ಖಾಸಗಿ ವಾಹನದಲ್ಲಿ  ಬಂದ ಕ್ವಾರಂಟೈನಲ್ಲಿಡಲಾದ ಕುಟುಂಬವೊಂದರ ಸದಸ್ಯರಿಬ್ಬರಲ್ಲಿ ಕೊರೋನಾ ಪಾಸಿಟಿವ್ ಕಂಡುಬಂದಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ . ಆದರೆ ಎಲ್ಲೂ ಸಹ ಭದ್ರಾವತಿ ಹೆಸರು ಪ್ರಸ್ತಾಪವಾಗಿಲ್ಲ.

ಲಕ್ಷ್ಮಮ್ಮ ನಿಧನ

ಭದ್ರಾವತಿ : ಪತ್ರಕರ್ತ ಅನಂತಕುಮಾರ್ ರವರ ತಾಯಿ, ನ್ಯೂಟೌನ್ ನಿವಾಸಿ ಲಕ್ಮಮ್ಮ(೬೨) ಶನಿವಾರ ನಿಧನರಾದರು.
   ಪತಿ ಎಂಪಿಎಂ ನಿವೃತ್ತ ಉದ್ಯೋಗಿ ಮರಿಯಪ್ಪ,  ೪ ಜನ ಪುತ್ರರು, ಸೊಸೆ, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗ ಬಿಟ್ಟಗಲಿದ್ದಾರೆ.  ಮೃತರ ಅಂತ್ಯಕ್ರಿಯೆ  ಬುಳ್ಳಾಪುರ ಹಿಂದೂ ರುದ್ರ ಭೂಮಿಯಲ್ಲಿ  ನಡೆಯಿತು.
   ಸಂತಾಪ : ಬಿಳಿಕಿ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಶಾಸಕ ಬಿ.ಕೆ ಸಂಗಮೇಶ್ವರ, ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್,   ಪೌರಾಯುಕ್ತ ಮನೋಹರ್, ಮುಖಂಡರಾದ ಜಿ. ಆನಂದಕುಮಾರ್, ಮಂಗೋಟೆ ರುದ್ರೇಶ್,  ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಛಲವಾದಿ ಸಮಾಜ, ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಪತ್ರಿಕಾ ಭವನ ಟ್ರಸ್ಟ್  ಸೇರಿದಂತೆ ಇನ್ನಿತರೆ ಸಂಘ-ಸಂಸ್ಥೆಗಳ ಮುಖಂಡರು ಸಂತಾಪ ಸೂಚಿಸಿದ್ದಾರೆ.

ಲಕ್ಷ್ಮಮ್ಮ ನಿಧನ 16-05-2020

ಭದ್ರಾವತಿ ನಗರಸಭೆ ವಿಶೇಷ