Sunday, May 17, 2020

ಕೊರೋನಾ ಸೋಂಕಿತ ಪ್ರಕರಣ ಗಾಳಿ ಸುದ್ದಿ : ಭಯಭೀತಗೊಂಡ ನಾಗರಿಕರು

ಭದ್ರಾವತಿ : ನಗರದಲ್ಲಿ ಕೊರೋನಾ ಸೋಂಕಿತ ಪ್ರಕರಣ ಪತ್ತೆ ಎಂಬ ಸುದ್ದಿ ಭಾನುವಾರ ವ್ಯಾಪಕವಾಗಿ ಹಬ್ಬಿದ್ದು ಇದರಿಂದಾಗಿ ನಾಗರಿಕರು ಭಯ ಭೀತಿಗೊಂಡಿದ್ದಾರೆ.
      ಜಿಲ್ಲೆಯಲ್ಲಿ ಒಟ್ಟು ಎರಡು ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ ಒಂದು ಭದ್ರಾವತಿ ನಗರದಲ್ಲಿ ಕಂಡುಬಂದಿದೆ ಎಂಬ ಸುದ್ದಿ ಟಿವಿ ಮಾದ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
           ಆದರೆ  ಈ ಬಗ್ಗೆ  ಅಧಿಕೃತ ಮಾಹಿತಿ ಜಿಲ್ಲಾಡಾಳಿತ ಅಥವಾ ತಾಲೂಕು ಆಡಳಿತ ನೀಡಿಲ್ಲ .  ಮುಂಬೈ ನಗರದಿಂದ ಇತ್ತೀಚೆಗೆ  ಖಾಸಗಿ ವಾಹನದಲ್ಲಿ  ಬಂದ ಕ್ವಾರಂಟೈನಲ್ಲಿಡಲಾದ ಕುಟುಂಬವೊಂದರ ಸದಸ್ಯರಿಬ್ಬರಲ್ಲಿ ಕೊರೋನಾ ಪಾಸಿಟಿವ್ ಕಂಡುಬಂದಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ . ಆದರೆ ಎಲ್ಲೂ ಸಹ ಭದ್ರಾವತಿ ಹೆಸರು ಪ್ರಸ್ತಾಪವಾಗಿಲ್ಲ.

No comments:

Post a Comment