ಜಿ. ಧರ್ಮಪ್ರಸಾದ್
ಭದ್ರಾವತಿ: ಈ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಮಂಡಿಸಿರುವ ಬಜೆಟ್ ರಾಜ್ಯವನ್ನು ಸಾಲದ ಸುಳಿಗೆ ಕೊಂಡ್ಯೊಯುವ ಬಜೆಟ್ ಇದಾಗಿದೆ ಎಂದು ಮೂಲತಃ ಲೆಕ್ಕ ಪರಿಶೋಧಕರಾಗಿರುವ ಬಿಜೆಪಿ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬಜೆಟ್ ಕುರಿತು ತಮ್ಮ ಅನಿಸಿಕೆ ವ್ಯಕ್ತಪಡಿಸಿರುವ ಧರ್ಮಪ್ರಸಾದ್ರವರು ಶ್ರೀಲಂಕ, ಪಾಕಿಸ್ತಾನ ಸೇರಿದಂತೆ ಹಲವು ರಾಷ್ಟ್ರಗಳು ಆರ್ಥಿಕ ದಿವಾಳಿತನಕ್ಕೆ ಒಳಗಾಗಿರುವುದು ನಮ್ಮ ಕಣ್ಮುಂದೆ ಇದ್ದರೂ ಸಹ ನಾವು ಇನ್ನೂ ಪಾಠ ಕಲಿತಿಲ್ಲ ಎಂಬುದಕ್ಕೆ ಈ ಬಾರಿ ರಾಜ್ಯದ ಕಾಂಗ್ರೆಸ್ ಸರ್ಕಾರ ಮಂಡಿಸಿರುವ ಬಜೆಟ್ನಿಂದ ತಿಳಿದುಕೊಳ್ಳಬಹುದಾಗಿದೆ ಎಂದಿದ್ದಾರೆ.
ಯಾವುದೇ ಸರ್ಕಾರ ಶೇ.೨೫ಕ್ಕಿಂತ ಹೆಚ್ಚಿನ ಸಾಲದ ಬಜೆಟ್ ಮಂಡಿಸಿದ್ದಲ್ಲಿ ಆರ್ಥಿಕ ದಿವಾಳಿತನ ಎದುರಾಗುವುದು ಖಚಿತವಾಗಿದೆ. ಅದರಲ್ಲೂ ಆಂತರಿಕವಾಗಿ ಆದಾಯ ಹೆಚ್ಚಿಸಿಕೊಳ್ಳದೆ ಮತ ಬ್ಯಾಂಕ್ಗಾಗಿ ರೂಪಿಸಲಾಗಿರುವ ಗ್ಯಾರಂಟಿ ಯೋಜನೆಗಳಿಗೆ ಹಣ ವಿನಿಯೋಗಿಸುತ್ತಿರುವುದು ಸರಿಯಲ್ಲ. ಅದರಲ್ಲೂ ಉದ್ಯೋಗ ಸೃಷ್ಟಿಸುವ ಯೋಜನೆಗಳಾಗಲಿ ಅಥವಾ ಶೈಕ್ಷಣಿಕ ಕ್ಷೇತ್ರವನ್ನು ಬಲಪಡಿಸುವ ನಿಟ್ಟಿನಲ್ಲೂ ಯಾವುದೇ ಕ್ರಮ ಕೈಗೊಳ್ಳದಿರುವುದು ಬಜೆಟ್ನಲ್ಲಿ ಕಂಡು ಬರುತ್ತಿದೆ ಎಂದಿದ್ದಾರೆ.
ಬಂಡವಾಳ ಅಗತ್ಯವಿರುವ ಕ್ಷೇತ್ರಗಳಲ್ಲಿ ಬಂಡವಾಳ ವಿನಿಯೋಗಿಸದಿರುವುದು ಕಂಡು ಬರುತ್ತಿದ್ದು, ಒಟ್ಟಾರೆ ಈ ಬಜೆಟ್ ಮತ ಬ್ಯಾಂಕ್ಗಾಗಿ ರೂಪಿಸಲಾಗಿದೆ. ಈ ಬಜೆಟ್ನಿಂದ ಜನಸಾಮಾನ್ಯರು ಯಾವುದನ್ನು ನಿರೀಕ್ಷಿಸುವಂತಿಲ್ಲ ಎಂದಿದ್ದಾರೆ.