ಭದ್ರಾವತಿ ನಗರಸಭೆ ಪೌರಕಾರ್ಮಿಕರು ಸೂಪರ್ವೈಸರ್ ಎನ್. ಗೋವಿಂದ ನೇತೃತ್ವದಲ್ಲಿ ಗುರುವಾರ ಉಜ್ಜನಿಪುರ ನಗರ ಆರೋಗ್ಯ ಕೇಂದ್ರದ ಬಳಿ ಸ್ವಚ್ಛತಾ ಕಾರ್ಯ ಕೈಗೊಂಡು ತ್ಯಾಜ್ಯ ಎಸೆಯದಂತೆ ಜಾಗೃತಿ ಮೂಡಿಸುವ ಜೊತೆಗೆ ಒಂದು ವೇಳೆ ತ್ಯಾಜ್ಯ ಎಸೆಯುವುದು ಮುಂದುವರೆಸಿದ್ದಲ್ಲಿ ೫೦೦ ರು. ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿ ಫಲಕ ಅಳವಡಿಸಿದರು.
ಭದ್ರಾವತಿ: ನಗರಸಭೆ ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ತ್ಯಾಜ್ಯ ಪ್ರಮಾಣ ಹೆಚ್ಚಳವಾಗುತ್ತಿದ್ದು, ಮನೆ ಮನೆ ಕಸ ಸಂಗ್ರಹಣೆ ನಡುವೆಯೂ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಕಂಡು ಬರುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ. ಈ ನಡುವೆ ನಗರಸಭೆ ಆಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದ್ದು, ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಎಸೆಯದಂತೆ ಎಚ್ಚರಿಕೆ ಫಲಕಗಳನ್ನು ಅಳವಡಿಸಿ ಜಾಗೃತಿ ಮೂಡಿಸಲಾಗುತ್ತಿದೆ.
ಉಜ್ಜನಿಪುರ ನಗರ ಆರೋಗ್ಯ ಕೇಂದ್ರದ ಬಳಿ ತ್ಯಾಜ್ಯ ಎಸೆಯದಂತೆ ಸ್ಥಳೀಯ ನಿವಾಸಿಗಳಿಗೆ ಹಲವಾರು ಬಾರಿ ತಿಳುವಳಿಕೆ ನೀಡಲಾಗಿದೆ. ಪ್ರತಿದಿನ ನೂರಾರು ಮಂದಿ ರೋಗಿಗಳು ಆಸ್ಪತ್ರೆಗೆ ಬಂದು ಹೋಗುತ್ತಿದ್ದಾರೆ. ಆಸ್ಪತ್ರೆ ಬಳಿ ಜನಸಂದಣಿ ಹೆಚ್ಚಾಗಿದ್ದು, ಇಂತಹ ಸ್ಥಳದಲ್ಲಿ ಪ್ರತಿದಿನ ತ್ಯಾಜ್ಯ ಕಂಡು ಬರುತ್ತಿದೆ.
ತ್ಯಾಜ್ಯ ಎಸೆಯದಂತೆ ಹಲವಾರು ಬಾರಿ ಸೂಚನೆ ನೀಡಲಾಗಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನಲೆಯಲ್ಲಿ ನಗರಸಭೆ ಪೌರಕಾರ್ಮಿಕರು ಸೂಪರ್ವೈಸರ್ ಎನ್. ಗೋವಿಂದ ನೇತೃತ್ವದಲ್ಲಿ ಗುರುವಾರ ನಗರ ಆರೋಗ್ಯ ಕೇಂದ್ರದ ಬಳಿ ಸ್ವಚ್ಛತಾ ಕಾರ್ಯ ಕೈಗೊಂಡು ತ್ಯಾಜ್ಯ ಎಸೆಯದಂತೆ ಜಾಗೃತಿ ಮೂಡಿಸುವ ಜೊತೆಗೆ ಒಂದು ವೇಳೆ ತ್ಯಾಜ್ಯ ಎಸೆಯುವುದು ಮುಂದುವರೆಸಿದ್ದಲ್ಲಿ ೫೦೦ ರು. ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿ ಫಲಕ ಅಳವಡಿಸಿದರು.
ಪೌರಕಾರ್ಮಿಕರಾದ ನಾಗಣ್ಣ, ಸುಶೀಲಮ್ಮ, ಸುಬ್ರಮಣಿ, ಮೋಹನ್, ಕುಮಾರಿಯಮ್ಮ, ಎಂ. ಮಂಜುನಾಥ್, ವಿಶ್ವನಾಥ್, ಹೇಮಂತ, ಮಂಜಾ, ಶಂಕರ, ಅಯ್ಯಪ್ಪ, ಜಯರಾಜ್ ಮತ್ತು ಕೃಷ್ಣ(ಡ್ರೈವರ್) ಸೇರಿದಂತೆ ಇನ್ನಿತರರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.