![](https://blogger.googleusercontent.com/img/a/AVvXsEj3lRfUBP-Yi_M075JUQZfPZDm59R3zzxf1jQESGlZvUSBNvNmQVh47Et550vpU5yfyvjMUzD9A_LBDd8XJhwXF7I-wmCEB7Li-dDvm8EFkeq_3mMC_vgRfp7ok_e_LNL_nsVVFvOf6V9IoV5HIyV7IYfKQOrmtq-dzTqg_qJ--Sg3rUdg5IQGZW1HEVQ=w400-h288-rw)
ಮಂಗೋಟೆ ಮುರಿಗೆಪ್ಪ ಚಾರಿಟಬಲ್ ಟ್ರಸ್ಟ್ ವತಿಯಿಂದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ಭದ್ರಾವತಿ ಹೊಸಸೇತುವೆ ರಸ್ತೆಯಲ್ಲಿರುವ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ಭಾನುವಾರ ಆಯೋಜಿಸಲಾಗಿದ್ದ ಉದ್ಯೋಗ ಮೇಳಕ್ಕೆ ಸಂಸದ ಬಿ.ವೈ ರಾಘವೇಂದ್ರ ಚಾಲನೆ ನೀಡಿದರು.
ಭದ್ರಾವತಿ, ಜ. ೮: ಮಂಗೋಟೆ ಮುರಿಗೆಪ್ಪ ಚಾರಿಟಬಲ್ ಟ್ರಸ್ಟ್ ವತಿಯಿಂದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ನಗರದ ಹೊಸಸೇತುವೆ ರಸ್ತೆಯಲ್ಲಿರುವ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ಭಾನುವಾರ ಆಯೋಜಿಸಲಾಗಿದ್ದ ಉದ್ಯೋಗ ಮೇಳಕ್ಕೆ ಸಂಸದ ಬಿ.ವೈ ರಾಘವೇಂದ್ರ ಚಾಲನೆ ನೀಡಿದರು.
ಬಳ್ಳಾರಿ ಜೆಎಸ್ಡಬ್ಲ್ಯೂ ಸ್ಟೀಲ್ ಲಿ., ಕೊಪ್ಪಳ ಕಲ್ಯಾಣಿ ಸ್ಟೀಲ್ಸ್ ಲಿ. ಮತ್ತು ಕೊಪ್ಪಳ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿ. ಮತ್ತು ಮುಕುಂದ ಸುಮಿ ಸ್ಪೆಷಲ್ ಸ್ಟ್ರೀಲ್ ಲಿ. ಹಾಗು ಎಕ್ಸ್ಇಂಡಿಯಾ ಸ್ಟೀಲ್ ಲಿ., ಹಗರಿಬೊಮ್ಮನಹಳ್ಳಿ ಎಸ್ಎಲ್ಆರ್ ಮೆಟಾಲಿಕ್ಸ್ ಲಿ., ಹೊಸಪೇಟೆ ಸಂಡೂರು ಮ್ಯಾಗ್ನೆಸ್ ಅಂಡ್ ಐರನ್ ಓರ್ಸ್ ಲಿ. ಮತ್ತು ಬಿಎಂಎಂ ಇನ್ಸ್ಪಾಟ್ ಲಿ., ಮಾಚೇನಹಳ್ಳಿ ಶಾಂತಲ ಸ್ಪೆರೋಕ್ಯಾಸ್ಟ್ ಪ್ರೈ.ಲಿ., ಮಲ್ನಾಡ್ ಅಲಾಯ್ ಕ್ಯಾಸ್ಟಿಂಗ್ ಪ್ರೈ. ಲಿ., ವಿಜಯ್ ಟೆಕ್ನೋಕ್ರಾಟ್ಸ್ ಪ್ರೈ.ಲಿ., ಪ್ರಗತಿ ಸ್ಟೀಲ್ ಕ್ಯಾಸ್ಟಿಂಗ್ ಪ್ರೈ.ಲಿ., ನೀಟೆಕ್ ಫೆರೋ ಕ್ಯಾಸ್ಟಿಂಗ್ ಪ್ರೈ.ಲಿ., ಭೈರವೇಶ್ವರ ಎಂಟರ್ಪ್ರೈಸಸ್ ಮತ್ತು ಮೆ|| ಪ್ರಾರ್ಥನ ಇಂಜಿನಿಯರಿಂಗ್ ಪ್ರೈ. ಲಿ., ಶಾಹಿ ಎಕ್ಸ್ಪೋರ್ಟ್ಸ್ ಪ್ರೈ.ಲಿ., ಬೆಂಗಳೂರಿನ ನಿಕೇತನ್ ಕನ್ಸಲ್ಟೆಂಟ್ಸ್, ಶಿವಮೊಗ್ಗದ ಟೆಕ್ನೋ ರಿಂಗ್ಸ್, ಪರ್ಫೆಕ್ಟ್ ಅಲಾಯ್ ಕಾಂಪೋನೆಂಟ್ಸ್ ಪ್ರೈ.ಲಿ., ನಂಜಪ್ಪ ಹಾಸ್ಪಿಟಲ್, ಸರ್ಜಿ ಹಾಸ್ಪಿಟಲ್, ಓಪನ್ ಅಮೈನ್ಸ್ ವರ್ಲ್ಡ್ ಸ್ಕೂಲ್ ಮತ್ತು ಸನ್ರೈಸ್ ಫ್ಯಾಸಿಲಿಟಿ ಸರ್ವಿಸ್ ಸೇರಿದಂತೆ ಸುಮಾರು ೨೫ಕ್ಕೂ ಹೆಚ್ಚು ಪ್ರತಿಷ್ಠಿತ ಖಾಸಗಿ ಕಂಪನಿಗಳು ಮೇಳದಲ್ಲಿ ಭಾಗವಹಿಸಿದ್ದರು.
ಬಹುತೇಕ ಕಂಪನಿಗಳು ಸ್ಥಳದಲ್ಲಿಯೇ ಸಂದರ್ಶನ ನಡೆಸಿ ಆಯ್ಕೆಯನ್ನು ಅಂತಿಮಗೊಳಿಸಿದವು. ಎಸ್ಎಸ್ಎಲ್ಸಿ, ಪಿಯುಸಿ, ಡಿಪ್ಲೊಮ, ನರ್ಸಿಂಗ್, ಲ್ಯಾಬ್ ಟೆಕ್ನಿಷಿಯನ್, ಬಿ.ಎ, ಬಿ.ಕಾಂ., ಬಿ.ಎಸ್ಸಿ., ಎಂ.ಎಸ್ಸಿ., ಬಿಬಿಎ/ಬಿಬಿಎಂ., ಬಿ.ಇ., ಸೇರಿದಂತೆ ಪದವಿ ಹಾಗೂ ಸ್ನಾತಕೋತ್ತರ ಪದವೀಧರ ನಿರುದ್ಯೋಗಿಗಳು ಮೇಳದಲ್ಲಿ ಪಾಲ್ಗೊಂಡು ಸದುಪಯೋಗಪಡೆದುಕೊಂಡರು. ಯುವ ಮುಖಂಡ ಮಂಗೋಟೆ ರುದ್ರೇಶ್ ಉದ್ಯೋಗ ಮೇಳದ ನೇತೃತ್ವ ವಹಿಸಿದ್ದರು.
ಸಮಾರಂಭದಲ್ಲಿ ವಿಧಾನಪರಿಷತ್ ಸದಸ್ಯ ಎಸ್. ರುದ್ರೇಗೌಡ, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್. ಗೋಪಿನಾಥ್, ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಬಿ. ಸಿದ್ದಬಸಪ್ಪ, ಶಿವಮೊಗ್ಗ ಎಪಿಎಂಸಿ ಮಾಜಿ ಅಧ್ಯಕ್ಷ ಎಸ್.ಎಸ್ ಜ್ಯೋತಿ ಪ್ರಕಾಶ್ ಸೇರಿದಂತೆ ಟ್ರಸ್ಟ್ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಮಂಗೋಟೆ ಮುರಿಗೆಪ್ಪ ಚಾರಿಟಬಲ್ ಟ್ರಸ್ಟ್ ವತಿಯಿಂದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ಭದ್ರಾವತಿ ಹೊಸಸೇತುವೆ ರಸ್ತೆಯಲ್ಲಿರುವ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ಭಾನುವಾರ ಆಯೋಜಿಸಲಾಗಿತ್ತು.