Sunday, January 8, 2023

ಪ್ರತಿಭಾ ಕಾರಂಜಿ-ಕಲೋತ್ಸವದಲ್ಲಿ ಎರಡು ಶಾಲೆಗಳಿಗೆ ಪ್ರಶಸ್ತಿ


    ಭದ್ರಾವತಿ, ಜ. ೮: ಶಿವಮೊಗ್ಗದಲ್ಲಿ ನಡೆದ ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದಲ್ಲಿ ತಾಲೂಕಿನ ಎರಡು ಶಾಲೆಗಳ ಮಕ್ಕಳು ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
    ಹಳೇನಗರದ ಸಂಚಿಹೊನ್ನಮ್ಮ ಪ್ರೌಢಶಾಲೆಯ ವಿದ್ಯಾರ್ಥಿನಿ ನೇಹಾ ತಮಿಳು ಭಾಷಣ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದುಕೊಂಡಿದ್ದು, ಕವ್ವಾಲಿಯಲ್ಲಿ ಸರ್ಕಾರಿ ಉರ್ದು ಶಾಲೆಯ ನಶ್ರಾ, ಅಮೀನಾ ಖಾನಂ, ಆಫೀಪಾ ಕೌನಯನ್, ಶರ್‌ಪುನ್ನಿಸಾ, ಸೈಯದ್ ಸಾದಿಕ್ ಮತ್ತು ಫಾತೀಮಾ ಬಾಯಿ ಅವರನ್ನೊಳಗೊಂಡ ತಂಡ ದ್ವಿತೀಯ ಬಹುಮಾನ ಪಡೆದುಕೊಂಡಿದೆ.
    ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕರು ವಿಜೇತರ ಪಟ್ಟಿ ಬಿಡುಗಡೆಗೊಳಿಸಿದ್ದು, ಈ ಎರಡು ಶಾಲೆಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಅಭಿನಂದಿಸಿದ್ದಾರೆ.

No comments:

Post a Comment