Sunday, March 9, 2025

ಮಹಿಳೆಯರು ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಳ್ಳಲು ಯಾವುದೇ ಹಿಂಜರಿಕೆಯಿಲ್ಲದೆ ಮುಂದೆ ಬನ್ನಿ: ಮಂಜುಳ

ಭದ್ರಾವತಿ ನಗರದ ಮಿಲಿಟ್ರಿ ಕ್ಯಾಂಪ್ ನಲ್ಲಿರುವ ಲೋಕೋಪಯೋಗಿ ಇಲಾಖೆ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಮಹಿಳಾ ಘಟಕದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಯೋಜಿಸಲಾಗಿತ್ತು.
    ಭದ್ರಾವತಿ : ಮಹಿಳೆಯರು ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಳ್ಳಲು ಯಾವುದೇ ಹಿಂಜರಿಕೆಯಿಲ್ಲದೆ ಮುಂದೆ ಬರೆಬೇಕು. ಆ ಮೂಲಕ ಸೇವೆ, ಹೋರಾಟ, ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಮಂಜುಳ ಹೇಳಿದರು.
    ಅವರು ನಗರದ ಮಿಲಿಟ್ರಿ ಕ್ಯಾಂಪ್ ನಲ್ಲಿರುವ ಲೋಕೋಪಯೋಗಿ ಇಲಾಖೆ ಪ್ರವಾಸಿ ಮಂದಿರದಲ್ಲಿ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಧ್ಯಕ್ಷತೆವಹಿಸಿ ಮಾತನಾಡಿದರು.
    ಮಹಿಳೆಯರಲ್ಲಿ ಮುಖ್ಯ ವಾಹಿನಿಗೆ ಬರಲು ಭಯ, ಆತಂಕ, ಮುಜುಗರ ಸ್ವಭಾವ ಇರಬಾರದು. ಧೈರ್ಯವಾಗಿ ಮನೆಯಿಂದ ಹೊರ ಬಂದು ಇಂತಹ ಸಂಘಟನೆಗಳಲ್ಲಿ ತೊಡಗಿಸಿಕೊಳ್ಳಬೇಕು. ಮಹಿಳೆಯರು ತಮ್ಮ ಮನಸ್ಥಿತಿಗಳನ್ನು ಬದಲಿಸಿಕೊಳ್ಳಬೇಕು ಎಂದರು.
    ಯುವ ಮುಖಂಡ ಬಿ.ಎಸ್ ಗಣೇಶ್ ಮಾತನಾಡಿ, ಮಹಿಳೆಯರಿಗೆ ಇಂತಹ ಸಂಘಟನೆಗಳಲ್ಲಿ ತೊಡಗಿಸಿಕೊಂಡು ಸೇವೆ ಮಾಡುವ ಅವಕಾಶ ಸಿಕ್ಕಿರುವುದು ಹೆಮ್ಮೆಯ ವಿಚಾರವಾಗಿದೆ. ನೆಲ, ಜಲ, ಭಾಷೆ ಉಳಿವಿಗಾಗಿ ಹೋರಾಟ ಮುಂದುವರಿಸಬೇಕೆಂದರು.
    ವೇದಿಕೆ ಉಪಾಧ್ಯಕ್ಷೆ ಹೇಮಾವತಿ, ಕಾರ್ಯದರ್ಶಿ ನಾಗರತ್ನ, ಸಹ ಕಾರ್ಯದರ್ಶಿ ರುಕ್ಮಿಣಿ ಹಾಗೂ ಪೊಲೀಸ್ ಅಧಿಕಾರಿ ಚಂದ್ರಕಲಾ, ಹೊಸಮನೆ ಆಟೋ ಸಂಚಾಲಕಿ ನಾಗರತ್ನಮ್ಮ, ಸಮಾಜ ಸೇವಕಿ ಜಾನಕಿ ಅಚನೂರು ಸೇರಿದಂತೆ ಕರವೇ ಸದಸ್ಯರು ಭಾಗವಹಿಸಿದರು.

ಆರಾಧನಾ ಮಹೋತ್ಸವ : ಹನುಮಂತಮ್ಮ ಸ್ಮಾರಕ ಪ್ರಶಸ್ತಿ ಪ್ರದಾನ

ಭದ್ರಾವತಿ ಹಳೇನಗರದ ಬಸವೇಶ್ವರ ವೃತ್ತದ ಮಹಿಳಾ ಸೇವಾ ಸಮಾಜದಲ್ಲಿ ಪುರಂದರದಾಸರ, ತ್ಯಾಗರಾಜರ ಮತ್ತು ಕನಕದಾಸರ ಆರಾಧನಾ ಮಹೋತ್ಸವ ಆಚರಿಸಲಾಯಿತು. ಸಂಗೀತ, ವೀಣೆ ಹಾಗು ಭರತನಾಟ್ಯಪರೀಕ್ಷ್ಷೆಗಳಲ್ಲಿ ಪರೀಕ್ಷ್ಷೆಗಳಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಪ್ರಜ್ಞಾ ದೀಪ್ತಿ, ಅನಘ ಪಿ ರಾವ್, ಸಿ.ಲೇಖನ ಮತ್ತು ಬಿ.ಕೆ ನಿಖಿತ ಅವರಿಗೆ ಹನುಮಂತಮ್ಮ ಸ್ಮಾರಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
    ಭದ್ರಾವತಿ:  ಹಳೇನಗರದ ಬಸವೇಶ್ವರ ವೃತ್ತದ ಮಹಿಳಾ ಸೇವಾ ಸಮಾಜದಲ್ಲಿ ಪುರಂದರದಾಸರ, ತ್ಯಾಗರಾಜರ ಮತ್ತು ಕನಕದಾಸರ ಆರಾಧನಾ ಮಹೋತ್ಸವ ಆಚರಿಸಲಾಯಿತು.
    ಶೋಭಾ ಗಂಗರಾಜ್ ಪುರಂದರದಾಸರು, ಪ್ರಜ್ಞಾ ದೀಪ್ತಿ ತ್ಯಾಗರಾಜರು ಮತ್ತು ಪೂರ್ಣಿಮಾ ಕನಕದಾಸರ ಕುರಿತು ಮಾತನಾಡಿದರು. ಸಂಗೀತ, ವೀಣೆ ಹಾಗು ಭರತನಾಟ್ಯಪರೀಕ್ಷ್ಷೆಗಳಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಪ್ರಜ್ಞಾ ದೀಪ್ತಿ, ಅನಘ ಪಿ ರಾವ್, ಸಿ.ಲೇಖನ ಮತ್ತು ಬಿ.ಕೆ ನಿಖಿತ ಅವರಿಗೆ ಹನುಮಂತಮ್ಮ ಸ್ಮಾರಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
    ವಿದೂಷಿ ಪುಷ್ಪ ಸುಬ್ರಮಣ್ಯಂ, ವಿದ್ವಾನ್ ಸೋಮು, ಗೌರಮ್ಮ ಶಂಕರಯ್ಯ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಹಿಳಾ ಸೇವಾ ಸಮಾಜದ ಯಶೋಧ ವೀರಭದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. 
    ಕಲ್ಪನಾ ಮಂಜುನಾಥ ಸ್ವಾಗತಿಸಿದರು. ಶೋಭಾ ಗಂಗರಾಜ್ ಪ್ರಸ್ತಾವಿಕ ನುಡಿಗಳ್ನಾಡಿ, ಗೀತಾ ರಘುನಂದನ್, ವಾಣಿ ನಾಗರಾಜ್, ಶಾರದಾ ಶ್ರೀನಿವಾಸ್ ಅತಿಥಿಗಳ ಪರಿಚಯ ನಡೆಸಿಕೊಟ್ಟರು. ಶಾರದಾ ಶ್ರೀನಿವಾಸ್ ಕಾರ್ಯಕ್ರಮ ನಿರೂಪಿಸಿ, ಜಯಂತಿ ಶೇಟ್ ವಂದಿಸಿದರು. ಸಂಗೀತ ಶಾಲೆಯ ಮಕ್ಕಳು ಮತ್ತು ವಿವಿಧ ಭಜನಾ ಮಂಡಳಿಗಳಿಂದ ದೇವರನಾಮ ಮತ್ತು ಕೃತಿಗಳ ಗಾಯನ ನಡೆಯಿತು.