Friday, June 30, 2023

ವಿಕಲಚೇತನ ಮಕ್ಕಳೊಂದಿಗೆ ಸಂಭ್ರಮಿಸಿದ ಶ್ರೀ ದತ್ತಾವಧೂತ ವಿನಯ್‌ಗುರೂಜಿ

ಚಿಕ್ಕಮಗಳೂರು ಸ್ವರ್ಣಪೀಠಿಕಾಪುರ ಗೌರಿಗದ್ದೆ ಹರಿಹರಪುರದ ಶ್ರೀ ದತ್ತಾವಧೂತ ವಿನಯ್ ಗುರೂಜಿಯವರು  ವಿಕಲಚೇತನ ಮಕ್ಕಳೊಂದಿಗೆ ಕೆಲ ಕ್ಷಣ ಬೆರೆತು ಅವರೊಂದಿಗೆ ಮಕ್ಕಳಂತೆ  ಸಂಭ್ರಮಿಸಿದ ಘಟನೆ ಭದ್ರಾವತಿ ನ್ಯೂಟೌನ್‌ತರಂಗ ಕಿವುಡು ಮಕ್ಕಳ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ನಡೆಯಿತು.
    ಭದ್ರಾವತಿ, ಜೂ. ೩೦:  ಚಿಕ್ಕಮಗಳೂರು ಸ್ವರ್ಣಪೀಠಿಕಾಪುರ ಗೌರಿಗದ್ದೆ ಹರಿಹರಪುರದ ಶ್ರೀ ದತ್ತಾವಧೂತ ವಿನಯ್ ಗುರೂಜಿಯವರು  ವಿಕಲಚೇತನ ಮಕ್ಕಳೊಂದಿಗೆ ಕೆಲ ಕ್ಷಣ ಬೆರೆತು ಅವರೊಂದಿಗೆ ಮಕ್ಕಳಂತೆ  ಸಂಭ್ರಮಿಸಿದ ಘಟನೆ ನಗರದ ನ್ಯೂಟೌನ್‌ತರಂಗ ಕಿವುಡು ಮಕ್ಕಳ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ನಡೆಯಿತು.
    ವಿಶೇಷ ಎಂಬಂತೆ ವಿನಯ್‌ಗುರೂಜಿಯವರು ಶಾಸಕ ಬಿ.ಕೆ ಸಂಗಮೇಶ್ವರ್‌ಜೊತೆಗೆ ಶಾಲೆಗೆ ಆಗಮಿಸಿ ವಿಕಲಚೇತನ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಶ್ರಮಿಸುತ್ತಿರುವ ಶಿವಭದ್ರ ಟ್ರಸ್ಟ್‌ಆಡಳಿತ ಮಂಡಳಿಯನ್ನು ಅಭಿನಂದಿಸಿದರು.
    ಅಲ್ಲದೆ ಶಾಲೆಯ ಪ್ರಗತಿಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡುವ ಮೂಲಕ ಒಂದು ತಿಂಗಳಿಗೆ ಅಗತ್ಯವಿರುವಷ್ಟು ದವಸ-ಧಾನ್ಯದ ಜೊತೆಗೆ ಶಾಲೆಯ ಬಣ್ಣ ಬಳಿಯುವ ಕಾರ್ಯಕ್ಕೆ ನೆರವು ನೀಡುವುದಾಗಿ ಭರವಸೆ ನೀಡಿದರು.
    ಗುರೂಜಿಯವರು ಮಕ್ಕಳಿಗೆ ಸಿಹಿ ಹಾಗು ಹಣ್ಣು ವಿತರಿಸುವ ಮೂಲಕ ಮಕ್ಕಳೊಂದಿಗೆ ಸಂಭ್ರಮ ಹಂಚಿಕೊಂಡರು.


    ಶಾಸಕ ಬಿ.ಕೆ ಸಂಗಮೇಶ್ವರ್‌ರವರು ಶಾಲೆಗೆ ೫ ಲಕ್ಷ ರು. ನೆರವು ನೀಡುವುದಾಗಿ ಹಾಗು ಪ್ರತಿ ತಿಂಗಳು ೫ ಸಾವಿರ ರು. ನಗದು ನೀಡುವುದಾಗಿ ಭರವಸೆ ನೀಡಿದರು.
    ಕೇಸರಿ ಪಡೆ ಅಧ್ಯಕ್ಷ ಕೆ.ಪಿ ಗಿರೀಶ್‌ರವರು ಸ್ಥಳದಲ್ಲಿಯೇ ೧೦ ಸಾವಿರ ರು. ನಗದು ಧನಸಹಾಯ ನೀಡುವ ಮೂಲಕ ಮಾನವೀಯತೆ ಮೆರೆದರು. ಇದೆ ರೀತಿ ಬಿ.ಎಚ್‌ರಸ್ತೆ ರೀಸೆಂಟ್‌ಟೈಲರ್‌ಅಶೋಕ್‌ರವರು ಪ್ರತಿ ತಿಂಗಳು ೨ ಸಾವಿರ ರು. ನೀಡುವುದಾಗಿ ಘೋಷಿಸಿದರು.
    ಟ್ರಸ್ಟ್‌ಪದಾಧಿಕಾರಿ, ನಿವೃತ್ತ ಪಶುವೈದ್ಯ ಡಾ. ಜಿ.ಎಂ ನಟರಾಜ್‌ಮತ್ತು ಮುಖ್ಯ ಶಿಕ್ಷಕಿ ತಾರಾಮಣಿಯವರು ಶಾಲೆಯ ಪ್ರಗತಿ ಕುರಿತು ಮಾಹಿತಿ ನೀಡಿದರು.
    ಈ ಶಾಲೆಯಲ್ಲಿಯೇ ವ್ಯಾಸಂಗ ಮಾಡಿ, ಇಲ್ಲಿಯೇ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕರಕುಶಲ ಶಿಕ್ಷಕಿ ಎಂ.ಸಿ ಗಾಯತ್ರಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಡಾ. ನರೇಂದ್ರಭಟ್‌, ವೃಂದಭಟ್‌, ಅನಂತಕೃಷ್ಣನಾಯಕ್‌, ಮದಿಅಲಗನ್‌, ಎಸ್.ಎನ್‌ಸುಭಾಷ್‌ಸೇರಿದಂತೆ ಟ್ರಸ್ಟ್‌ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  ಶಿಕ್ಷಕರಾದ ಎಂ.ಜಿ ಬಸವರಾಜ ಸ್ವಾಗತಿಸಿದರು. ಅರುಣ್‌ಕುಮಾರ್‌ವಂದಿಸಿದರು.

ಜು.೨ರಂದು ಬಿ.ಕೃಷ್ಣಪ್ಪ ೮೬ನೇ ಜನ್ಮದಿನಾಚರಣೆ

ಪ್ರೊ. ಬಿ. ಕೃಷ್ಣಪ್ಪ 
    ಭದ್ರಾವತಿ, ಜೂ. ೩೦ : ಕರ್ನಾಟಕ ದಲಿತ ನೌಕರರ ಒಕ್ಕೂಟ ತಾಲೂಕು ಶಾಖೆ ವತಿಯಿಂದ ಪ್ರೊ. ಬಿ. ಕೃಷ್ಣಪ್ಪನವರ ೮೬ನೇ ಜನ್ಮದಿನಾಚರಣೆ ಜು.೨ರ ಭಾನುವಾರ ಬೆಳಿಗ್ಗೆ ೧೧ ಗಂಟೆಗೆ ಜೆಟಿಎಸ್‌ಶಾಲೆ ಸಮೀಪದಲ್ಲಿರುವ ಶುಗರ್‌ಟೌನ್‌ಲಯನ್ಸ್‌ಕ್ಲಬ್‌ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
    ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ ಉದ್ಘಾಟಿಸಲಿದ್ದು, ಒಕ್ಕೂಟದ ತಾಲೂಕು ಅಧ್ಯಕ್ಷೆ ಎಸ್.‌ ಉಮಾ ಅಧ್ಯಕ್ಷತೆ ವಹಿಸಲಿದ್ದಾರೆ.
    ಶಾಸಕ ಬಿ.ಕೆ ಸಂಗಮೇಶ್ವರ್‌ಪ್ರೊ. ಬಿ. ಕೃಷ್ಣಪ್ಪನವರ ಪ್ರಶಸ್ತಿ ಪ್ರದಾನ ಮಾಡಲಿದ್ದು, ತಹಸೀಲ್ದಾರ್‌ಟಿ.ಜಿ ಸುರೇಶ್‌ಆಚಾರ್‌,  ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ರಮೇಶ್‌ಮತ್ತು ನೌಕರರ ಒಕ್ಕೂಟದ ಪ್ರಭಾರ ಜಿಲ್ಲಾಧ್ಯಕ್ಷ ಸಿ.ಕೆ ಗಂಗಾಧರಮೂರ್ತಿ ಪ್ರತಿಭಾ ಪುರಸ್ಕಾರ ನೆರವೇರಿಸಲಿದ್ದಾರೆ.
    ನೌಕರರ ಒಕ್ಕೂಟದ ಗೌರವ ಸಲಹೆಗಾರ ಸಿ. ಜಯಪ್ಪ ಹೆಬ್ಬಳಗೆರೆ, ಪೌರಾಯುಕ್ತ ಮನುಕುಮಾರ್‌, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎನ್.‌ ಗೋಪಾಲಪ್ಪ, ಇಂದಿರಾ ಪ್ರೊ. ಕೃಷ್ಣಪ್ಪ, ನಗರಸಭೆ ಉಪಾಧ್ಯಕ್ಷ ಸರ್ವಮಂಗಳ ಭೈರಪ್ಪ, ಡಿಎಸ್‌ಎಸ್‌ಜಿಲ್ಲಾ ಸಂಚಾಲಕ ಚಿನ್ನಯ್ಯ, ಬಿ. ಸಿದ್ದಬಸಪ್ಪ, ಪಿ. ಸುರೇಶ್‌, ಎನ್.‌ ಉಮೇಶ್‌, ಕೆ.ಬಿ ಜುಂಜಾನಾಯ್ಕ್‌, ಕೆ.ಎನ್‌ಶ್ರೀಹರ್ಷ, ಡಾ. ವರ್ಷ ಮತ್ತು ರಂಗನಾಥ್‌ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.