Wednesday, December 27, 2023

ಬುದ್ಧ ವಿಹಾರದಲ್ಲಿ ಹುಣ್ಣಿಮೆ ಕಾರ್ಯಕ್ರಮ

ಭದ್ರಾವತಿ ನಗರದ ಸಂಬುದ್ಧ ದಮ್ಮಾಂಕುರ ಟ್ರಸ್ಟ್ ವತಿಯಿಂದ ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಬುದ್ಧ ಸ್ಮರಣೆಯೊಂದಿಗೆ ಹುಣ್ಣಿಮೆ ಕಾರ್ಯಕ್ರಮ ಆಚರಿಸಲಾಯಿತು.
ಭದ್ರಾವತಿ ; ನಗರದ ಸಂಬುದ್ಧ ದಮ್ಮಾಂಕುರ ಟ್ರಸ್ಟ್ ವತಿಯಿಂದ ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಬುದ್ಧ ಸ್ಮರಣೆಯೊಂದಿಗೆ ಹುಣ್ಣಿಮೆ ಕಾರ್ಯಕ್ರಮ ಆಚರಿಸಲಾಯಿತು.
ಹೊಸ ನಂಜಾಪುರದಲ್ಲಿರುವ ಬುದ್ಧ ವಿಹಾರದಲ್ಲಿ ಬುದ್ಧ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪ್ರಮುಖರಾದ ಪ್ರೊ. ರಾಚಪ್ಪ, ಶ್ರೀನಿವಾಸ್, ಡಿ. ನರಸಿಂಹಮೂರ್ತಿ, ಸಿ. ಜಯಪ್ಪ ಸೇರಿದಂತೆ ಕಾರ್ಯಕಾರಿ ಸಮಿತಿ ಸದಸ್ಯ ಪಾಲ್ಗೊಂಡಿದ್ದರು.

ಪರವಾನಗಿ ಇಲ್ಲದ ಆಟೋ ಚಾಲನೆ : ರು.೧೦,೫೦೦ ದಂಡ

ಭದ್ರಾವತಿ : ಪರವಾನಗಿ ಇಲ್ಲದ ಆಟೋ ಚಲಾಯಿಸಿದ ಚಾಲಕನಿಗೆ ನಗರದ ಸಿವಿಲ್ ಜಡ್ಜ್ ಅಂಡ್ ಜೆಎಂಎಫ್‌ಸಿ ನ್ಯಾಯಾಲಯ ರು.೧೦.೫೦೦ ದಂಡ ವಿಧಿಸಿರುವ ಘಟನೆ ನಡೆದಿದೆ. 
ಸಂಚಾರಿ ಪೊಲೀಸರು ನಗರದ ಮಾಧವಚಾರ್ ವೃತ್ತದಲ್ಲಿ ವಾಹನ ತಪಾಸಣೆ ವೇಳೆ ಪರವಾನಗಿ ಇಲ್ಲದ ಆಟೋ ಚಾಲನೆ ಮಾಡುತ್ತಿದ್ದ ಚಾಲಕ ಜಿಂದಲ್ ಖಾನ್ ವಿರುದ್ಧ ಪ್ರಕರಣ ದಾಖಲಿಸಿದ್ದರು. ಮಂಗಳವಾರ ನ್ಯಾಯಾಲಯದ ಆದೇಶದ ಮೇರೆಗೆ ಚಾಲಕನಿಂದ ದಂಡ ವಸೂಲಾತಿ ಮಾಡಲಾಗಿದೆ. ವಿಶೇಷವಾಗಿ ಈ ಪ್ರಕರಣದಲ್ಲಿ ಕಡಿಮೆ ದಂಡ ವಸೂಲಾತಿ ಮಾಡುತ್ತಿದ್ದು, ನ್ಯಾಯಾಲಯ ಹೆಚ್ಚಿನ ದಂಡ ವಿಧಿಸುವ ಮೂಲಕ ಎಚ್ಚರಿಕೆ ಗಂಟೆ ನೀಡಿದೆ. 
ಕಳೆದ ಸುಮಾರು ೧ ತಿಂಗಳಿನಿಂದ ಸಂಚಾರಿ ಪೊಲೀಸರು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜಾಗೃತಿ ಮೂಡಿಸುತ್ತಿದ್ದು, ಈ ನಡುವೆಯೂ ಸಂಚಾರಿ ನಿಯಮ ಉಲ್ಲಂಘನೆಗಳು ಕಂಡು ಬರುತ್ತಿವೆ. ಈಗಲಾದರೂ ಸಾರ್ವಜನಿಕರು ಎಚ್ಚೆದ್ದುಕೊಂಡು ರಸ್ತೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗಿದೆ.