ಸಂಚಾಲಕಾಗಿ ಅಬ್ದುಲ್ ಖದೀರ್ ನೇಮಕ
ಭದ್ರಾವತಿಯಲ್ಲಿ ಜರುಗಿದ ಆಮ್ ಆದ್ಮಿ ಪಾರ್ಟಿ ನಗರ ಕಾರ್ಯಕರ್ತರ ಸಭೆಯಲ್ಲಿ ನೂತನ ಸಂಘಟನಾ ಸಂಚಾಲಕ ಮನೋಹರ ಗೌಡ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಭದ್ರಾವತಿ, ಜ. ೪: ದೆಹಲಿ ಮೂಲಕ ಹಂತ ಹಂತವಾಗಿ ದೇಶದ ಇತರೆ ರಾಜ್ಯಗಳಿಗೂ ವಿಸ್ತರಿಸಿಕೊಳ್ಳುತ್ತಿರುವ ಆಮ್ ಆದ್ಮಿ ಪಾರ್ಟಿ ಇದೀಗ ತಾಲೂಕಿನಲ್ಲಿ ಪಕ್ಷವನ್ನು ಪುನರ್ ಸಂಘಟಿಸಲು ಮುಂದಾಗಿದ್ದು, ಪ್ರಸ್ತುತ ೫ ಜನರ ನೂತನ ಹಂಗಾಮಿ ಸಮಿತಿ ರಚಿಸಲಾಗಿದೆ.
ಜಿಲ್ಲಾ ಸಂಘಟನಾ ಸಂಚಾಲಕ ಮನೋಹರ ಗೌಡ ಅಧ್ಯಕ್ಷತೆಯಲ್ಲಿ ನಡೆದ ಪಕ್ಷದ ನಗರ ಕಾರ್ಯಕರ್ತರ ಸಭೆಯಲ್ಲಿ ಪಕ್ಷದ ಹಿರಿಯರಾದ ಪರಮೇಶ್ವರಚಾರ್, ಎಚ್. ರವಿಕುಮಾರ್, ಪೀಟರ್, ರೇಷ್ಮಬಾನು ಮತ್ತು ಅಬ್ದುಲ್ ಖದೀರ್ ಸೇರಿದಂತೆ ೫ ಜನರನ್ನೊಳಗೊಂಡ ಹಂಗಾಮಿ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಗೆ ಅಬ್ದುಲ್ ಖದೀರ್ ಅವರನ್ನು ತಾಲೂಕು ಸಂಚಾಲಕರಾಗಿ ನೇಮಕಗೊಳಿಸಲಾಗಿದೆ.
ಸಭೆಯಲ್ಲಿ ನೂತನ ಜಿಲ್ಲಾ ಸಂಘಟನಾ ಸಂಚಾಲಕ ಮನೋಹರ ಗೌಡ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಭೆಯಲ್ಲಿ ಸುರೇಶ ಕೋಟೆಕರ್, ಅರವಿಂದ್, ಕಿರಣ್, ಲಕ್ಷ್ಮೀಶ್, ಶಶಿಧರ್, ವಿನಯ್, ರಮೇಶ್, ಬಸವಕುಮಾರ್, ಮಹಮ್ಮದ್ ಪರ್ವೀಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.