ನ.೧೦ರೊಳಗೆ ವರದಿ ಸಲ್ಲಿಸುವಂತೆ ಅರಣ್ಯ ಇಲಾಖೆ ಜಾಗೃತ ದಳದ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಶಿವಮೊಗ್ಗ ಅರಣ್ಯ ಸಂಚಾರಿ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಆದೇಶಿಸಿರುವುದು.
ಭದ್ರಾವತಿ, ನ. ೪: ಶಿವಮೊಗ್ಗ ಸಾಮಾಜಿಕ ಅರಣ್ಯ ವಿಭಾಗದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಕಾನೂನು ಮೀರಿ ನಿಯಮ ೩೨ರ ಉಪ ವಲಯ ಅರಣ್ಯಾಧಿಕಾರಿಗೆ ವಲಯ ಅರಣ್ಯಾಧಿಕಾರಿಗಳ ಪ್ರಭಾರ ನೀಡಿ ಹಾಗು ಅರಣ್ಯ ರಕ್ಷಕರ ತರಬೇತಿ ಪಡೆಯದೆ ಸರ್ಕಾರಿ ಕಾಮಗಾರಿಗಳನ್ನು ನಿರ್ವಹಿಸಿರುವ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಿ ನ.೧೦ರೊಳಗೆ ವರದಿ ಸಲ್ಲಿಸುವಂತೆ ಅರಣ್ಯ ಇಲಾಖೆ ಜಾಗೃತ ದಳದ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಶಿವಮೊಗ್ಗ ಅರಣ್ಯ ಸಂಚಾರಿ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಆದೇಶಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲೂಕಿನ ಉಕ್ಕುಂದ ಗ್ರಾಮದ ನಿವಾಸಿ, ಸಾಮಾಜಿಕ ಹೋರಾಟಗಾರ ಶಿವಕುಮಾರ್ ಅ.೧೩ರಂದು ಅರಣ್ಯ ಇಲಾಖೆ ಜಾಗೃತ ದಳದ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೀಮಾಗರ್ಗ್ ಅವರಿಗೆ ಮನವಿ ಸಲ್ಲಿಸಿ, ಶಿವಮೊಗ್ಗ ಸಾಮಾಜಿಕ ಅರಣ್ಯ ವಿಭಾಗದ ಭದ್ರಾವತಿ-ಶಿವಮೊಗ್ಗ-ತೀರ್ಥಹಳ್ಳಿ ಒಳಗೊಂಡ ಶಿವಮೊಗ್ಗ ವಲಯಕ್ಕೆ ನಿಯಮ ೩೨ರ ಉಪ ವಲಯ ಅರಣ್ಯಾಧಿಕಾರಿ ಸಂತೋಷ್ ರಾಥೋಡ್ಗೆ ವಲಯ ಅರಣ್ಯಾಧಿಕಾರಿಯಾಗಿ ೩೧.೦೫.೨೦೧೮ರಲ್ಲಿ ಪ್ರಭಾರ ನೀಡಿ ಕೆ.ಸಿ.ಎಸ್.ಆರ್ ನಿಯಮಾವಳಿ ೧೯೫೭ರ ಉಲ್ಲಂಘನೆ ಮಾಡಿದ್ದು, ಒಬ್ಬ ಅರಣ್ಯ ರಕ್ಷಕನಿಗೆ ಡ್ರಾಯಿಂಗ್ ಆಫೀಸರ್ ಪ್ರಭಾರ ಹುದ್ದೆಯನ್ನು ನೀಡಿರುವುದು ಕಾನೂನು ಬಾಹಿರ ಹಾಗು ಯಾವುದೇ ಕಾರ್ಯನಿರ್ವಹಣೆಯ ತರಬೇತಿಯನ್ನು ಪಡೆಯದೆ ಕಾಮಗಾರಿಗಳ ಕೋಟ್ಯಾಂತರ ರು. ಬಿಲ್ಲು ಮಾಡುವಂತಹ ಹುದ್ದೆ ನೀಡಿರುವುದು ಶಿವಮೊಗ್ಗ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕರ್ತವ್ಯ ಲೋಪ ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಇದೆ ರೀತಿ ನೂತನ್ ಕುಮಾರ್ ಎಂಬುವರು ಅರಣ್ಯ ರಕ್ಷಕರ ತರಬೇತಿ ಪಡೆಯದೆ ಮುಂಬಡ್ತಿಯಾಗಿ ಉಪ ವಲಯ ಅರಣ್ಯಾಧಿಕಾರಿಯಾಗಿದ್ದು, ಇವರಿಗೂ ಸಹ ನಿಯಮ ಉಲ್ಲಂಘಿಸಿ ಸಾಗರ ಮತ್ತು ಹೊಸನಗರ ಒಳಗೊಂಡ ವಲಯ ಅರಣ್ಯಾಧಿಕಾರಿಗಳ ಪ್ರಭಾರ ನೀಡಿ, ಸರ್ಕಾರಿ ಕಾಮಗಾರಿಗಳ ನಿರ್ವಹಣೆ ವಹಿಸಲಾಗಿದೆ. ಇವರು ಸುಮಾರು ನಾಲ್ಕೂವರೆ ವರ್ಷಗಳಿಂದ ಈ ಹುದ್ದೆ ನಿರ್ವಹಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು.
ಸಾಮಾಜಿಕ ಹೋರಾಟಗಾರ ಶಿವಕುಮಾರ್