Saturday, October 10, 2020

ಮಹಿಳೆಯರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಸಿ : ಎಂ.ಎಚ್ ಲಕ್ಷ್ಮಣ

ಭದ್ರಾವತಿ ತಾಲೂಕಿನ ಸಿಂಗನಮನೆ ಗ್ರಾಮ ಪಂಚಾಯಿತಿಯಲ್ಲಿ ಬೆಂಗಳೂರಿನ ದಿ ಹಂಗರ್ ಪ್ರಾಜೆಕ್ಟ್ ಸಹಕಾರದೊಂದಿಗೆ ವಿಕಸನ ಸಂಸ್ಥೆಯ ವತಿಯಿಂದ  'ಸಂಭಾವ್ಯ ನಾಯಕತ್ವ' ತರಬೇತಿ ಹಮ್ಮಿಕೊಳ್ಳಲಾಗಿತ್ತು.
ಭದ್ರಾವತಿ, ಅ. ೧೦: ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಸಬೇಕೆಂದು ವಿಕಸನ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಎಂ.ಎಚ್ ಲಕ್ಷ್ಮಣ ಕರೆ ನೀಡಿದರು.
     ಅವರು ತಾಲೂಕಿನ ಸಿಂಗನಮನೆ ಗ್ರಾಮ ಪಂಚಾಯಿತಿಯಲ್ಲಿ ಬೆಂಗಳೂರಿನ ದಿ ಹಂಗರ್ ಪ್ರಾಜೆಕ್ಟ್ ಸಹಕಾರದೊಂದಿಗೆ ವಿಕಸನ ಸಂಸ್ಥೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 'ಸಂಭಾವ್ಯ ನಾಯಕತ್ವ' ತರಬೇತಿಯಲ್ಲಿ ಪಾಲ್ಗೊಂಡು ಮಾತನಾಡಿದರು.
     ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಮಹಿಳೆಯರು ಹೆಚ್ಚಾಗಿ ಭಾಗವಹಿಸಬೇಕೆಂಬ ಉದ್ದೇಶದಿಂದ ಸರ್ಕಾರ ಶೇ.೫೦ರಷ್ಟು ಮೀಸಲಾತಿ ನೀಡಿದೆ. ಇದನ್ನು ಮಹಿಳೆಯರು ಸದ್ಬಳಕೆ ಮಾಡಿಕೊಳ್ಳಬೇಕು. ಚುನಾವಣೆಯಲ್ಲಿ ಸ್ಪರ್ಧಿಸುವ ಮಹಿಳೆಯರು ಗ್ರಾಮ ಪಂಚಾಯಿತಿ ಆಡಳಿತದ ಕಾರ್ಯ ವಿಧಾನಗಳ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿರಬೇಕು. ಇದರಿಂದ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮಹಿಳೆಯರು ತಮ್ಮ ಅಧಿಕಾರ ಸಮರ್ಥವಾಗಿ ನಿಭಾಯಿಸಲು ಸಾಧ್ಯವಾಗುತ್ತದೆ ಎಂದರು.
     ಸಭೆಯಲ್ಲಿ ಸಿಂಗನಮನೆ ಗ್ರಾಮದ ಮಹಿಳೆಯರು, ಪಂಚಾಯಿತಿ ಮಹಿಳಾ ಸದಸ್ಯರು ಭಾಗವಹಿಸಿದ್ದು, ಈ ಪೈಕಿ ೪ ಮಹಿಳಾ ಸದಸ್ಯರು ಮುಂಬರುವ ಚುನಾವಣೆಯಲ್ಲಿ ಪುನಃ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದರು. ವಿಕಸನ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳು ಉಪಸ್ಥಿತರಿದ್ದರು.

ವರ್ಗಾವಣೆಗೊಂಡ ಅಗ್ನಿಶಾಮಕ ಸಿಬ್ಬಂದಿ ಬಾಬು ಎಸ್. ಗೌಡಗೆ ಬೀಳ್ಕೊಡುಗೆ

ಭದ್ರಾವತಿ ಅಗ್ನಿಶಾಮಕ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಬಾಬು ಎಸ್. ಗೌಡರವರು ಮುಂಬಡ್ತಿ ಹೊಂದಿ ಕಾರವಾರ ಹಳಿಯಾಳ ತಾಲೂಕಿಗೆ ವರ್ಗಾವಣೆ ಗೊಂಡ ಹಿನ್ನಲೆಯಲ್ಲಿ ಅವರನ್ನು ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಯಿತು
ಭದ್ರಾವತಿ, ಅ. ೧೦: ನಗರದ ಅಗ್ನಿಶಾಮಕ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಬಾಬು ಎಸ್. ಗೌಡರವರು ಮುಂಬಡ್ತಿ ಹೊಂದಿ ಕಾರವಾರ ಹಳಿಯಾಳ ತಾಲೂಕಿಗೆ ವರ್ಗಾವಣೆ ಗೊಂಡ ಹಿನ್ನಲೆಯಲ್ಲಿ ಅವರನ್ನು ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಯಿತು.
      ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಅಗ್ನಿಶಾಮಕ ಠಾಣಾಧಿಕಾರಿ ಎನ್. ವಸಂತಕುಮಾರ್,  ಬಾಬು ಎಸ್. ಗೌಡರವರು ಇಲಾಖೆಯಲ್ಲಿ ಇದುವರೆಗೂ ಉತ್ತಮವಾಗಿ ಸೇವೆ ಸಲ್ಲಿಸುವ ಜೊತೆಗೆ ಇಲಾಖೆಯ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಮುಂಬಡ್ತಿ ಹೊಂದಿರುವ ಇವರು ಇನ್ನೂ ಉತ್ತಮ ಸೇವೆ ಸಲ್ಲಿಸುವಂತಾಗಲಿ ಎಂದರು.
ಸನ್ಮಾನ ಸ್ವೀಕರಿಸಿದ ಬಾಬು ಎಸ್. ಗೌಡ ಮಾತನಾಡಿ, 'ಭೇಟಿ ಆಕಸ್ಮಿಕ, ಅಗಲಿಕೆ ಅನಿವಾರ್ಯ'.  ೧೦ ವರ್ಷದ ಸೇವಾ ಅವಧಿಯಲ್ಲಿ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
      ಸಿಬ್ಬಂದಿ ವಿನೂತನ್ ಮಾತನಾಡಿ, ಬಾಬುರವರು ಇಲಾಖೆಯಲ್ಲಿ ತಮ್ಮೊಂದಿಗೆ ೮ ವರ್ಷಗಳಿಂದ ಒಡನಾಡಿಯಾಗಿ ಉತ್ತಮ ಬಾಂಧವ್ಯ ಹೊಂದಿದ್ದರು ಎಂದರು.
        ಸಿಬ್ಬಂದಿ ಡಿ.ಎನ್. ಸುರೇಶ್ ಮಾತನಾಡಿ, ಬಾಬುರವರು ಎಲ್ಲಾ ಸಿಬ್ಬಂದಿಗಳನ್ನು ಸಮಾನವಾಗಿ ಕಾಣುವ ಮೂಲಕ ಸಿಬ್ಬಂದಿಗಳ ವಸತಿಗೃಹಗಳಿಗೆ ಸಂಬಂಧಪಟ್ಟ ಎಲ್ಲಾ ಕೆಲಸಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ ಎಂದರು.
      ಇದೇ ಸಂದರ್ಭದಲ್ಲಿ ಇಲಾಖೆಯಲ್ಲಿ ಸುಮಾರು ೩೦ ವರ್ಷಗಳಿಂದ ಸ್ವೀಪರ್ ಕೆಲಸ ಮಾಡಿ ನಿವೃತ್ತ ಹೊಂದಿರುವ ಮಹಿಮೂಮ(ಕಾಕಮ್ಮ) ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.  
   ವೇದಿಕೆಯಲ್ಲಿ ಉಪಸ್ಥಿತರಿದ್ದು ಪ್ರಮುಖ ಅಗ್ನಿಶಾಮಕ  ಕೆ.ಎಸ್. ರಮೇಶ್ ರವರು ಎಲ್ಲರನ್ನೂ ಸ್ವಾಗತಿಸಿದರು.  ಅ.ಶಾ. ವಿನೂತನ್.ಎಂ ಪ್ರಾರ್ಥಿಸಿ, ಕಾರ್ಯಕ್ರಮ ನಿರೂಪಿಸಿದರು.
      ಸಿಬ್ಬಂದಿಗಳಾದ ಹೆಚ್.ವಿ ಸುರೇಶಾಚಾರ್,  ಎಸ್.ಎಚ್ ಕುಮಾರ್, ಜಿ.ಟಿ ಶ್ರೀನಿವಾಸ್, ಆರ್. ಕರಿಯಣ್ಣ, ಎಂ.ಸಿ ಮಹೇಂದ್ರ, ಎಚ್.ಎಂ ಹರೀಶ್, ಕೆ.ಎಚ್ ರಾಜಾನಾಯ್ಕ್, ಗೃಹರಕ್ಷಕ ದಳ ಸಿಬ್ಬಂದಿಗಳಾದ ಪರಮೇಶ್ವರ ನಾಯ್ಕ, ಕೆ.ಆರ್ ಶಂಕರ್, ಜಿ ಸುರೇಶ್, ಡಿ.ಜಿ ಸುನಿಲ್, ಮುಬಾರಕ್ ಮತ್ತು ವೆಂಕಟೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕವಲಗುಂದಿ ತಗ್ಗು ಪ್ರದೇಶದ ನಿವಾಸಿಗಳಿಗೆ ದಿನಸಿ ಸಾಮಗ್ರಿ ವಿತರಣೆ

ಭದ್ರಾವತಿ ಸ್ನೇಹ ಜೀವಿ ಬಳಗದ ವತಿಯಿಂದ ಸಮಾಜ ಸೇವಕ ಪೊಲೀಸ್ ಉಮೇಶ್ ಸಂಕಷ್ಟಕ್ಕೆ ಒಳಗಾಗಿರುವ ನಗರಸಭೆ ವಾರ್ಡ್ ನಂ.೨ರ ಕವಲಗುಂದಿ ಗ್ರಾಮದ ನಿವಾಸಿಗಳಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸಿದರು.
ಭದ್ರಾವತಿ, ಅ. ೧೦: ನಗರಸಭೆ ವ್ಯಾಪ್ತಿಯ ವಾರ್ಡ್ ನಂ.೨ರ ಕವಲಗುಂದಿ ತಗ್ಗು ಪ್ರದೇಶದ ಮನೆಗಳು  ಪ್ರತಿ ವರ್ಷ ಮಳೆಗಾಲದಲ್ಲಿ ಜಲಾವೃತಗೊಳ್ಳುತ್ತಿದ್ದು, ನಿವಾಸಿಗಳು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಸ್ನೇಹ ಜೀವಿ ಬಳಗದ ಸಮಾಜ ಸೇವಕ ಪೊಲೀಸ್ ಉಮೇಶ್ ನಿವಾಸಿಗಳ ಸಂಕಷ್ಟಕ್ಕೆ ಸ್ಪಂದಿಸಿದ್ದು, ಅಗತ್ಯ ದಿನಸಿ ಸಾಮ್ರಗಿಗಳನ್ನು ವಿತರಿಸಿದ್ದಾರೆ. 
     ನಿವಾಸಿಗಳನ್ನು ಬೇರೆಡೆಗೆ ಸ್ಥಳಾಂತರಗೊಳಿಸುವ ಅಗತ್ಯವಿದ್ದು, ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗು ನಗರಸಭೆ ಆಡಳಿತಗಳು ಬೇರೆಡೆ ಸ್ಥಳಾಂತರಗೊಳಿಸಲು ಕಳೆದ ಹಲವಾರು ವರ್ಷಗಳಿಂದ ಪ್ರಯತ್ನಿಸುತ್ತಿವೆ. ಆದರೆ ಇದುವರೆಗೂ ಯಶಸ್ವಿಯಾಗಿಲ್ಲ. ಈ ಬಾರಿ ಸಹ ಮಳೆಯಿಂದಾಗಿ ಸಂಕಷ್ಟಕ್ಕೆ ಒಳಗಾಗಿದ್ದಾರೆ.
    ಸುಮಾರು ೫೪ ಕುಟುಂಬಗಳಿಗೆ ದಿನಸಿ ಸಾಮಗ್ರಿಗಳನ್ನು ಉಮೇಶ್ ವಿತರಿಸುವ ಮೂಲಕ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
     ಸ್ನೇಹಜೀವಿ ಬಳಗದ ಮೇಘರಾಜ್, ಶ್ರೀಧರ್, ದೊರೆ, ಶಂಕರ್, ಧನಂಜಯ, ಅನಿಲ್, ಶ್ರೀನಿವಾಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಪೌರಕಾರ್ಮಿಕರ ಮಕ್ಕಳು ಶಿಕ್ಷಣವಂತರಾಗಲಿ : ಪೌರಾಯುಕ್ತ ಮನೋಹರ್

ಭದ್ರಾವತಿ ರಂಗಪ್ಪವೃತ್ತ ಜೈಭೀಮಾ ನಗರದಲ್ಲಿ ಶನಿವಾರ ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿರುವ ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್‌ರವರ ಜೀವನ ಆಧಾರಿತ ಮಹಾನಾಯಕ ಧಾರಾವಾಹಿ ಯಶಸ್ವಿಯಾಗಿ ಮುಂದುವರೆಯಬೇಕೆಂಬ ಆಶಯದೊಂದಿಗೆ ಧಾರಾವಾಹಿ ಸೃಷ್ಠಿಕರ್ತೆ ಹಾಗು ವಾಹಿನಿ ಮುಖ್ಯಸ್ಥರು ಮತ್ತು ಸಿಬ್ಬಂದಿಗಳಿಗೆ ದಲಿತ ಸಂಘರ್ಷ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಭಿನಂದನೆ ಕಾರ್ಯಕ್ರಮ ಪೌರಾಯುಕ್ತ ಮನೋಹರ್ ಉದ್ಘಾಟಿಸಿ ಮಾತನಾಡಿದರು.
ಭದ್ರಾವತಿ, ಅ. ೧೦: ದೇಶದಲ್ಲಿ ಎಲ್ಲರೂ ಶಿಕ್ಷಣವಂತರಾಗುವ ಜೊತೆಗೆ ತಾರತಮ್ಯ ನಿರ್ಮೂಲನೆಯಾಗಬೇಕೆಂಬುದು ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಆಶಯವಾಗಿದ್ದು, ಅದರಂತೆ ಪೌರಕಾರ್ಮಿಕರು ತಮ್ಮ ಮಕ್ಕಳನ್ನು ಶಿಕ್ಷಣವಂತರನ್ನಾಗಿಸಬೇಕೆಂದು ಪೌರಾಯುಕ್ತ ಮನೋಹರ್ ಕರೆ ನೀಡಿದರು.
       ಅವರು ಶನಿವಾರ ರಂಗಪ್ಪವೃತ್ತ ಜೈಭೀಮಾ ನಗರದಲ್ಲಿ ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿರುವ ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್‌ರವರ ಜೀವನ ಆಧಾರಿತ ಮಹಾನಾಯಕ ಧಾರಾವಾಹಿ ಯಶಸ್ವಿಯಾಗಿ ಮುಂದುವರೆಯಬೇಕೆಂಬ ಆಶಯದೊಂದಿಗೆ ಧಾರಾವಾಹಿ ಸೃಷ್ಠಿಕರ್ತೆ ಹಾಗು ವಾಹಿನಿ ಮುಖ್ಯಸ್ಥರು ಮತ್ತು ಸಿಬ್ಬಂದಿಗಳಿಗೆ ದಲಿತ ಸಂಘರ್ಷ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಭಿನಂದನೆ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು.
ಸಮಾಜದಲ್ಲಿ ಪೌರಕಾರ್ಮಿಕರ ಶ್ರಮ ಹೆಚ್ಚಿನದ್ದಾಗಿದ್ದು, ಪೌರಕಾರ್ಮಿಕರು ಅಂಬೇಡ್ಕರ್‌ರವರ ಆಶಯಗಳನ್ನು ಸರಿಯಾಗಿ ಅರಿತುಕೊಳ್ಳಬೇಕು. ಈ ರೀತಿಯ ಕಾರ್ಯಕ್ರಮಗಳು ಎಲ್ಲರಿಗೂ ಮಾರ್ಗದರ್ಶಕವಾಗಬೇಕೆಂದರು.
     ಪೊಲೀಸ್ ನಗರ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ ಮಾತನಾಡಿ, ದೀನ ದಲಿತರ ದ್ವನಿ, ಮಹಾನ್‌ಚೇತನ ಡಾ. ಬಿ.ಆರ್ ಅಂಬೇಡ್ಕರ್‌ರವರು ದೇಶಕ್ಕೆ ನೀಡಿರುವ ಸಂವಿಧಾನ ಎಲ್ಲರನ್ನು ಸರ್ವಸಮಾನತೆಯಿಂದ ಕಾಣುವಂತೆ ಮಾಡಿದೆ. ಅಂಬೇಡ್ಕರ್‌ರವರು ತಮ್ಮ ಬದುಕಿನ ಕೊನೆಯವರೆಗೂ ನೋವು, ಅವಮಾನ, ಸಂಕಷ್ಟಗಳನ್ನು ಎದುರಿಸಿ ಭವಿಷ್ಯದ ಸಮಾಜಕ್ಕೆ ಬೆಳಕಾಗಿ ನಿಂತವರು. ಇವರ ಆದರ್ಶತನ ಎಲ್ಲರೂ ಮೈಗೂಡಿಸಿಕೊಂಡು ಮುನ್ನಡೆಬೇಕೆಂದರು.
      ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ ಮಾತನಾಡಿದರು. ಡಿಎಸ್‌ಎಸ್ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ, ಜಿಲ್ಲಾ ಸಂಚಾಲಕ ಚಿನ್ನಯ್ಯ, ಡಿಎಸ್‌ಎಸ್ ಅಂಗವಿಕಲರ ವಿಭಾಗದ ಜಿಲ್ಲಾಧ್ಯಕ್ಷ ಕಾಣಿಕ್‌ರಾಜ್, ಜಿಂಕ್‌ಲೈನ್ ಮಣಿ, ರಂಗನಾಥ್, ಮಾರುತಿ ಮೆಡಿಕಲ್ ಆನಂದ್, ಈಶ್ವರಪ್ಪ, ಎ. ತಿಪ್ಪೇಸ್ವಾಮಿ, ಚುಂಜ್ಯಾನಾಯ್ಕ, ಹಿರಿಯ ಪತ್ರಕರ್ತ ಎನ್. ಬಾಬು, ಪರಮೇಶ್ವರಪ್ಪ(ಪರ್ಮಿ), ಎನ್. ಗೋವಿಂದ, ಕಾರ್ತಿಕ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಡಿಎಸ್ಎಸ್ ಕಾರ್ಯಕರ್ತ ನವೀನಕುಮಾರ್ ನೇತೃತ್ವದ ಹರೀಶ್, ಶಂಕರ್, ಮಂಜ, ಕಿರಣ, ಶಶಿ ಮತ್ತು ಸುಮನ್ ಸೇರಿದಂತೆ ಇನ್ನಿತರರನ್ನೊಳಗೊಂಡ ತಂಡ ಕಾರ್ಯಕ್ರಮ ಯಶಸ್ವಿಗೆ ಶ್ರಮಿಸಿತು.

ಪಾಸ್ವಾನ್ನಿಧನಕ್ಕೆ ಕಾರ್ಮಿಕ ಸಂಘ ಸಂತಾಪ

ಭದ್ರಾವತಿ, ಅ. ೯: ಕೇಂದ್ರ ಸಚಿವರಾಮ್ ವಿಲಾಸ್ ಪಾಸ್ವಾನ್‌ರವರನಿಧನ ದೇಶಕ್ಕೆ ತುಂಬಲಾರದ ನಷ್ಟವನ್ನುಂಟುಮಾಡಿದೆ ಎಂದು ವಿಐಎಸ್‌ಎಲ್ಕಾರ್ಮಿಕ ಸಂಘ ಸಂತಾಪ ಸೂಚಿಸಿದೆ.
     ಯುಪಿಎ ಸರ್ಕಾರದ ಅವಧಿಯಲ್ಲಿಉಕ್ಕು ಸಚಿವರಾಗಿದ್ದ ಪಾಸ್ವಾನ್‌ರವರು ವಿಐಎಸ್‌ಎಲ್ಕಾರ್ಖಾನೆ ಅಭಿವೃದ್ಧಿಗೆ ಪೂರಕವಾಗಿ ಸ್ಪಂದಿಸಿದ್ದರು. ಅವರ ನಿಧನಕ್ಕೆ ಕಾರ್ಮಿಕವರ್ಗ ಸಂತಾಪ ಸೂಚಿಸುತ್ತದೆ ಎಂದುಸಂಘದ ಅಧ್ಯಕ್ಷ ಜೆ. ಜಗದೀಶ್ತಿಳಿಸಿದ್ದಾರೆ.

ಬಜರಂಗದಳಸಂಸ್ಥಾಪನ ದಿನ : ಒಳರೋಗಿಗಳಿಗೆ ಹಣ್ಣುವಿತರಣೆ

ವಿಶ್ವ ಹಿಂದೂ ಪರಿಷತ್ ಬಜರಂಗದಳದಸಂಸ್ಥಾಪನ ದಿನದ ಅಂಗವಾಗಿ ಭದ್ರಾವತಿಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಗಳಿಗೆಹಣ್ಣು ವಿತರಿಸಲಾಯಿತು.
ಭದ್ರಾವತಿ, ಅ. ೯: ವಿಶ್ವ ಹಿಂದೂಪರಿಷತ್ ಬಜರಂಗದಳದ ಸಂಸ್ಥಾಪನ ದಿನದ ಅಂಗವಾಗಿ ನಗರದಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಗಳಿಗೆಹಣ್ಣು ವಿತರಿಸಲಾಯಿತು.
    ಬಜರಂಗದಳ ಜಿಲ್ಲಾ ಸಂಚಾಲಕಸುನಿಲ್ ಕುಮಾರ್, ತಾಲೂಕು ಸಂಚಾಲಕವಡಿವೇಲು, ಗ್ರಾಮಾಂತರ ಸಂಚಾಲಕ ವಾಗೀಶ್, ನಗರಸಹ ಸಂಯೋಜಕ ರಂಗಣ್ಣ, ನಗರಸಂಯೋಜಕರಾದ ಕೃಷ್ಣ, ಕಿರಣ್ ಸೇರಿದಂತೆಇನ್ನಿತರರು ಪಾಲ್ಗೊಂಡಿದ್ದರು.

ಯೋಗ ಗುರು ಡಿ. ನಾಗರಾಜ್‌ಗೆ ೩ ಚಿನ್ನ, ೧ ಕಂಚಿನ ಪದಕ

ಯೋಗ ಭಂಗಿಯಲ್ಲಿ ಡಿ. ನಾಗರಾಜ್ 
ಭದ್ರಾವತಿ: ನಗರದ ವಿವೇಕಾನಂದಯೋಗ ಶಿಕ್ಷಣ ಟ್ರಸ್ಟ್‌ನಮುಖ್ಯಸ್ಥ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಪುರಸ್ಕೃತ ಡಿ. ನಾಗರಾಜ್‌ರವರುವಿವಿಧೆಡೆ ಆಯೋಜಿಸಲಾಗಿದ್ದ ಆನ್‌ಲೈನ್ ನೇರಪ್ರಸಾರದ ಅಂತರಾಷ್ಟ್ರೀಯ ಯೋಗ ಸ್ಪರ್ಧೆಗಳಲ್ಲಿ ಭಾಗವಹಿಸಿ೩ ಚಿನ್ನ ಹಾಗು೧ ಕಂಚಿನ ಪದಕಪಡೆದುಕೊಂಡಿದ್ದಾರೆ.
    ಬೆಂಗಳೂರಿನ ಯೋಗ ಗಂಗೋತ್ರಿ ವತಿಯಿಂದ೩ ದಿನಗಳ ಕಾಲಆಯೋಜಿಸಲಾಗಿದ್ದ ಸ್ಪರ್ಧೆಯ ೫೧ ರಿಂದ ೬೦ವರ್ಷ ವಯೋಮಾನದ ವಿಭಾಗದಲ್ಲಿ ಚಿನ್ನದಪದಕ ಪಡೆದುಕೊಂಡಿದ್ದು, ಇಂಟರ್ ನ್ಯಾಷನಲ್ ಯೂತ್ಯೋಗ ಫೆಡರೇಷನ್ ಮಲೇಷಿಯಾ ವತಿಯಿಂದ ಆಯೋಜಿಸಲಾಗಿದ್ದಸ್ಪರ್ಧೆಯ ೫೦ ರಿಂದ ೬೦ವರ್ಷ ವಯೋಮಾನದ ವಿಭಾಗದಲ್ಲಿ ಹಾಗುಶ್ರೀಲಂಕ ಯೂತ್ ಯೋಗ ಫೆಡರೇಷನ್ಹಾಗು ಯೋಗ ಕಲ್ಚರಲ್ ಸೊಸೈಟಿವತಿಯಿಂದ ಆಯೋಜಿಸಲಾಗಿದ್ದ ಫಸ್ಟ್ ಇಂಡೋ-ಶ್ರೀಲಂಕಾಆನ್‌ಲೈನ್ ಯೋಗ ಚಾಂಪಿಯನ್‌ಶಿಪ್‌ನಲ್ಲಿ ೫೧ರಿಂದ ೬೦ ವರ್ಷ ವಯೋಮಾನದವಿಭಾಗದಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ.
   ಇದೆ ರೀತಿ ಗುಜರಾತ್ಸೂರತ್‌ನ ಪ್ರಸನ್ ಯೋಗಪೀಠಚಾರಿಟಬಲ್ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದಫಸ್ಟ್ ಗ್ಲೋಬಲ್ ಆನ್‌ಲೈನ್ವಿಡಿಯೋ ಯೋಗಾಸನ ಸ್ಪೋರ್ಟ್ಸ್ ಚಾಂಪಿಯನ್‌ಶಿಪ್‌ನಲ್ಲಿ ೩೫ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಕಂಚಿನ ಪದಕ ಪಡೆದುಕೊಂಡಿದ್ದಾರೆ.
    ನಾಗರಾಜ್‌ರವರು ಕಳೆದ೩೫ ವರ್ಷಗಳಿಂದ ನಿರಂತರವಾಗಿ ಯೋಗ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ಸುಮಾರು ೩೦೦ಕ್ಕೂ ಹೆಚ್ಚು ಪದಕಗಳನ್ನುಪಡೆದುಕೊಂಡಿದ್ದಾರೆ.

ಅಂಗಡಿ ಮುಂಗಟ್ಟು ಜಲಾವೃತ : ಸೂಕ್ತ ಕ್ರಮಕ್ಕೆ ಮನವಿ

ಭದ್ರಾವತಿನಗರಸಭೆ ವ್ಯಾಪ್ತಿಯ ಭೂತನಗುಡಿ ಮತ್ತು ಎನ್‌ಎಸ್‌ಟಿ ಭಾಗದ ರಸ್ತೆಗಳಚರಂಡಿಗಳಲ್ಲಿ ನೀರು ತುಂಬಿಕೊಂಡು ಮನೆಹಾಗು ಅಂಗಡಿ ಮುಂಗಟ್ಟುಗಳು ಸಹಜಲಾವೃತಗೊಳ್ಳುತ್ತಿದ್ದು, ತಕ್ಷಣ ಕ್ರಮ ಕೈಗೊಳ್ಳುವಂತೆಆಗ್ರಹಿಸಿ ರಾಮ್ ಸೇನಾ ಕರ್ನಾಟಕವತಿಯಿಂದ ಶುಕ್ರವಾರ ಪೌರಾಯುಕ್ತ ಮನೋಹರ್‌ಗೆ ಮನವಿಸಲ್ಲಿಸಲಾಯಿತು.
ಭದ್ರಾವತಿ: ಕಳೆದ ಕೆಲವುದಿನಗಳಿಂದ ಸಂಜೆ ವೇಳೆ ಸುರಿಯುತ್ತಿರುವಮಳೆಯಿಂದಾಗಿ ನಗರಸಭೆ ವ್ಯಾಪ್ತಿಯ ಭೂತನಗುಡಿಮತ್ತು ಎನ್‌ಎಸ್‌ಟಿಭಾಗದ ರಸ್ತೆಗಳ ಚರಂಡಿಗಳಲ್ಲಿ ನೀರುತುಂಬಿಕೊಂಡು ಮನೆ ಹಾಗು ಅಂಗಡಿಮುಂಗಟ್ಟುಗಳು ಸಹ ಜಲಾವೃತಗೊಳ್ಳುತ್ತಿದ್ದು, ತಕ್ಷಣ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ರಾಮ್ ಸೇನಾ ಕರ್ನಾಟಕವತಿಯಿಂದ ಶುಕ್ರವಾರ ಪೌರಾಯುಕ್ತ ಮನೋಹರ್‌ಗೆ ಮನವಿಸಲ್ಲಿಸಲಾಯಿತು.
   ಕಳೆದ ೩-೪ವರ್ಷಗಳಿಂದ ಇದೆ ರೀತಿ ಸಮಸ್ಯೆಎದುರಾಗುತ್ತಿದ್ದು, ಮಳೆಗಾಲದಲ್ಲಿ ನೀರು ಚರಂಡಿಗಳಲ್ಲಿ ಸರಾಗವಾಗಿಹರಿಯದೆ ನಿಂತುಕೊಳ್ಳುತ್ತಿದೆ. ಇದರಿಂದಾಗಿ ಮನೆಗಳು ಜಲಾವೃತ್ತಗೊಂಡು ನಿವಾಸಿಗಳುಸಂಕಷ್ಟ ಎದುರಿಸುವಂತಾಗಿದೆ. ಈ ಹಿನ್ನಲೆಯಲ್ಲಿ ರಾಮ್ಸೇನಾ ಕರ್ನಾಟಕ ವತಿಯಿಂದ ಸ್ಥಳಪರಿಶೀಲನೆ ನಡೆಸಿ ನಿವಾಸಿಗಳ ಸಮಸ್ಯೆಗಳನ್ನುಆಲಿಸುವ ಜೊತೆಗೆ ಸಹಿ ಸಂಗ್ರಹಿಸಲಾಗಿದೆ. ತಕ್ಷಣ ಸಮಸ್ಯೆ ಬಗೆಹರಿಸುವಂತೆ ಕೋರಲಾಗಿದೆ.
   ರಾಮ್ ಸೇನಾ ಕರ್ನಾಟಕಸಂಘಟನೆ ಜಿಲ್ಲಾಧ್ಯಕ್ಷ ಉಮೇಶ್, ತಾಲೂಕು ಅಧ್ಯಕ್ಷಎಂ. ಸಚಿನ್ ವರ್ಣೇಕರ್, ಎಸ್.ಎನ್ ಶ್ರೀನಿವಾಸ್, ರಾಜುಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಛಾಯಾಗ್ರಾಹಕರಿಂದ ಮನವಿ


ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಭದ್ರಾವತಿ ತಾಲೂಕು ಛಾಯಾಗ್ರಾಹಕರ ಸಂಘದವತಿಯಿಂದ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
ಭದ್ರಾವತಿ: ವಿವಿಧ ಬೇಡಿಕೆಗಳನ್ನುಈಡೇರಿಸುವಂತೆ ಆಗ್ರಹಿಸಿ ತಾಲೂಕು ಛಾಯಾಗ್ರಾಹಕರ ಸಂಘದವತಿಯಿಂದ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
      ಕೋವಿಡ್-೧೯ರ ಹಿನ್ನಲೆಯಲ್ಲಿಸಂಕಷ್ಟಕ್ಕೆ ಒಳಗಾಗಿರುವ ವೃತ್ತಿ ಬಾಂಧವರಿಗೆ ವಿಶೇಷಪ್ಯಾಕೇಜ್ ಘೋಷಿಸಬೇಕು. ಕಾರ್ಮಿಕ ಇಲಾಖೆಯ ವಿವಿಧಯೋಜನೆಗಳ ಸೌಲಭ್ಯಗಳನ್ನು ಕಲ್ಪಿಸುವ ಜೊತೆಗೆ ಸ್ಮಾರ್ಟ್‌ಕಾರ್ಡ್ನೀಡುವುದು. ಛಾಯಾಗ್ರಾಹಕರ ಆಕಾಡೆಮಿ ಸ್ಥಾಪಿಸುವುದು. ಕೆ.ಪಿ.ಎ ಛಾಯಾಭವನಕ್ಕೆ ನಿವೇಶನ ಒದಗಿಸುವುದು. ಸರ್ಕಾರದವಿವಿಧ ಇಲಾಖೆಗಳಲ್ಲಿ ಸರ್ಕಾರಿ ಅಧಿಕಾರಿಗಳೇ ಛಾಯಾಚಿತ್ರತೆಗೆಯುವುದನ್ನು ತಕ್ಷಣ ನಿಷೇಧಿಸುವುದು. ವೃತ್ತಿಭದ್ರತೆ, ಜೀವನ ಭದ್ರತೆ ಒದಗಿಸುವುದುಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆಮನವಿಯಲ್ಲಿ ಒತ್ತಾಯಿಸಲಾಗಿದೆ.
   ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆಒತ್ತಾಯಿಸಿ ಅ.೩೧ರಂದು ರಾಜ್ಯಾದ್ಯಂತಕೇಂದ್ರ ಹಾಗು ರಾಜ್ಯ ಸರ್ಕಾರದವಿರುದ್ಧ ಬೆಂಗಳೂರು ಚಲೋ ಬೃಹತ್ ಪ್ರತಿಭಟನೆಯನ್ನುಬೆಂಗಳೂರಿನ ಫ್ರೀಡಂ ಪಾರ್ಕ್ ಉದ್ಯಾನವನದಲ್ಲಿಹಮ್ಮಿಕೊಳ್ಳಲಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
  ಸಂಘದ ಅಧ್ಯಕ್ಷ ಎಚ್. ರಾಮೃಕೃಷ್ಣ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ಉಪಾಧ್ಯಕ್ಷಎಸ್.ಡಿ ಪ್ರಕಾಶ್, ಕಾರ್ಯದರ್ಶಿಎಸ್.ಜಿ ಸಿದ್ದಪ್ಪ, ಖಜಾಂಚಿರೇಣುಕಯ್ಯ, ನಿರ್ದೇಶಕರಾದ ಜೆ. ಕುಮಾರ್, ಎಚ್.ಆರ್ ಸುರೇಶ್, ವಡಿವೇಲು, ಪಾಪಣ್ಣ, ಶಿವಾನಂದ ಸೇರಿದಂತೆ ಇನ್ನಿತರರುಉಪಸ್ಥಿತರಿದ್ದರು.

ದಲಿತ ಯುವತಿ ಮೇಲೆ ಅತ್ಯಾಚಾರಘಟನೆ : ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆಗೆ ಆಗ್ರಹ


ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ೧೯ ವರ್ಷದ ದಲಿತ ಯುವತಿಮೇಲೆ ನಡೆದಿರುವ ಸಾಮೂಹಿಕ ಅತ್ಯಾಚಾರ ಘಟನೆಯನ್ನುಖಂಡಿಸಿ ಕರ್ನಾಟಕ ದಲಿತ ಸಂಘರ್ಷಸಮಿತಿ ವತಿಯಿಂದ ರಾಜ್ಯ ಸಂಚಾಲಕಎಂ. ಗುರುಮೂರ್ತಿ ನೇತೃತ್ವದಲ್ಲಿ ಶುಕ್ರವಾರ ಭದ್ರಾವತಿ ತಾಲೂಕು ಕಛೇರಿ ಮುಂಭಾಗಪ್ರತಿಭಟನೆ ನಡೆಸಲಾಯಿತು.
ಭದ್ರಾವತಿ: ಉತ್ತರ ಪ್ರದೇಶದಹತ್ರಾಸ್‌ನಲ್ಲಿ ೧೯ ವರ್ಷದದಲಿತ ಯುವತಿ ಮೇಲೆ ನಡೆದಿರುವಸಾಮೂಹಿಕ ಅತ್ಯಾಚಾರ ಘಟನೆಯನ್ನು ಖಂಡಿಸಿ ಕರ್ನಾಟಕ ದಲಿತಸಂಘರ್ಷ ಸಮಿತಿ ವತಿಯಿಂದ ರಾಜ್ಯಸಂಚಾಲಕ ಎಂ. ಗುರುಮೂರ್ತಿ ನೇತೃತ್ವದಲ್ಲಿಶುಕ್ರವಾರ ತಾಲೂಕು ಕಛೇರಿ ಮುಂಭಾಗಪ್ರತಿಭಟನೆ ನಡೆಸಲಾಯಿತು.
       ಎಂ. ಗುರುಮೂರ್ತಿ ಮಾತನಾಡಿ, ದೇಶದಲ್ಲಿ ಮೇಲ್ವರ್ಗದವರ ದಬ್ಬಾಳಿಕೆ, ದೌರ್ಜನ್ಯ ಹೆಚ್ಚಾಗುತ್ತಿದೆ. ಅದರಲ್ಲೂ ದಲಿತರನ್ನು ಶೋಷಿಸಲಾಗುತ್ತಿದ್ದು, ದಲಿತ ಮಹಿಳೆಯರ ಮೇಲಿನ ಅತ್ಯಾಚಾರಪ್ರಕರಣಗಳು ಹೆಚ್ಚಾಗುತ್ತಿವೆ. ಉತ್ತರ ಪ್ರದೇಶದಲ್ಲಿ ದಲಿತರುಅತಿ ಹೆಚ್ಚು ಶೋಷಣೆಗೆ ಒಳಾಗುತ್ತಿದ್ದು, ಯುವತಿಯ ಮೇಲೆ ನಡೆದಿರುವ ಅತ್ಯಾಚಾರಘಟನೆಯನ್ನು ತೀವ್ರವಾಗಿ ಖಂಡಿಸುವ ಜೊತೆಗೆ ತಕ್ಷಣತಪ್ಪಿತಸ್ಥ ಅತ್ಯಾಚಾರಿಗಳ ನಾಲಿಗೆ ಕತ್ತರಿಸಿ ಮತ್ತುಬೆನ್ನುಮೂಳೆ ಮುರಿದು ಗಲ್ಲು ಶಿಕ್ಷೆವಿಧಿಸಬೇಕೆಂದು ಆಗ್ರಹಿಸಲಾಯಿತು.
         ಪ್ರತಿಭಟನೆಯಲ್ಲಿ ನೌಕರರ ಒಕ್ಕೂಟದ ಜಿಲ್ಲಾಧ್ಯಕ್ಷಶಿವಬಸಪ್ಪ, ಡಿಎಸ್‌ಎಸ್ ತಾಲೂಕುಸಂಚಾಲಕ ವಿ. ವಿನೋದ್, ಜಿಲ್ಲಾಸಂಚಾಲಕರಾದ ಎ. ಅರ್ಜಿನ್, ಎಂ. ಏಳುಕೋಟಿ, ಏಳುಮಲೈ, ಸುವರ್ಣಮ್ಮ, ಬಿ. ಕೃಷ್ಣಪ್ಪ, ಯು. ಮಹಾದೇವಪ್ಪ, ಸಿ. ಚನ್ನಪ್ಪ, ಆರ್. ತಮ್ಮಯ್ಯ ಸೇರಿದಂತೆಇನ್ನಿತರರು ಪಾಲ್ಗೊಂಡಿದ್ದರು.