ಕಾರ್ಮಿಕರ ಸಹಾಯ ಕೇಂದ್ರ, ಆನ್ಲೈನ್ ಗೇಟ್ ಪ್ರವೇಶ ವ್ಯವಸ್ಥೆ ಉದ್ಘಾಟಿಸಿದ ಬಿ.ಎಲ್ ಚಂದ್ವಾನಿ

ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ ಗುತ್ತಿಗೆ ಕಾರ್ಮಿಕರ ಸಹಾಯ ಕೇಂದ್ರ ಮತ್ತು ಆನ್ಲೈನ್ ಗೇಟ್ ಪ್ರವೇಶ ವ್ಯವಸ್ಥೆ ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಂದ್ವಾನಿ ಉದ್ಘಾಟಿಸಿದರು.
ಭದ್ರಾವತಿ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ ಕಾರ್ಮಿಕರಿಗಾಗಿ ಸಾಕಷ್ಟು ವ್ಯವಸ್ಥೆ ಹಾಗು ಸುಧಾರಣೆಗಳನ್ನು ಜಾರಿಗೊಳಿಸಲಾಗಿದೆ. ಎಲ್ಲಾ ಹಂತಗಳಲ್ಲಿ ಕೆಲಸ ಮಾಡುವುದನ್ನು ಸುಲಭಗೊಳಿಸಲು ವ್ಯವಸ್ಥೆಗಳು ಮತ್ತು ಕಾರ್ಯವಿಧಾನಗಳನ್ನು ಸರಳೀಕರಿಸಲು ಇದು ಸಹಾಯ ಮಾಡುತ್ತದೆ ಎಂದು ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಂದ್ವಾನಿ ಹೇಳಿದರು.
ಅವರು ಕಾರ್ಖಾನೆಯಲ್ಲಿ ಗುತ್ತಿಗೆ ಕಾರ್ಮಿಕರ ಸಹಾಯ ಕೇಂದ್ರ ಮತ್ತು ಆನ್ಲೈನ್ ಗೇಟ್ ಪ್ರವೇಶ ವ್ಯವಸ್ಥೆ ಉದ್ಘಾಟಿಸಿ ಮಾತನಾಡಿದರು. ಗುತ್ತಿಗೆ ಕಾರ್ಮಿಕರ ಕುಂದು-ಕೊರತೆಗಳು, ಸಮಸ್ಯೆಗಳನ್ನು ಸಮಯಕ್ಕೆ ಅನುಗುಣವಾಗಿ ವ್ಯವಸ್ಥಿತ ರೀತಿಯಲ್ಲಿ ಪರಿಹರಿಸುವ ಗುರಿಯನ್ನು ಗುತ್ತಿಗೆ ಕಾರ್ಮಿಕರ ಸಹಾಯ ಕೇಂದ್ರ ಹೊಂದಿದೆ. ಈ ಕೇಂದ್ರದ ಮೇಲ್ವಿಚಾರಣೆಯನ್ನು ಮಾನವ ಸಂಪನ್ಮೂಲ ಇಲಾಖೆ ನಿರ್ವಹಿಸುತ್ತದೆ ಎಂದರು.
ಆನ್ಲೈನ್ ಗೇಟ್ ಪ್ರವೇಶ ವ್ಯವಸ್ಥೆಯಿಂದ ಕಾರ್ಮಿಕರಿಗೆ ಅನುಕೂಲವಾಗಲಿದ್ದು, ಅದರಲ್ಲೂ ಗುತ್ತಿಗೆ ಕಾರ್ಮಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಭದ್ರತಾ ಸಿಬ್ಬಂದಿಗಳಿಗೂ ಇದರಿಂದ ನೆರವಾಗಲಿದೆ ಎಂದರು.
ಮುಖ್ಯ ಮಹಾಪ್ರಬಂಧಕ(ಸ್ಥಾವರ) ಕೆ.ಎಸ್ ಸುರೇಶ್, ಮಹಾಪ್ರಬಂಧಕ(ಸುರಕ್ಷತೆ ಮತ್ತು ಅಗ್ನಿಶಾಮಕ ಸೇವೆ) ಹರಿಶಂಕರ್, ಮಹಾಪ್ರಬಂಧಕರು (ಸೇವೆಗಳು) ಟಿ. ರವಿಚಂದ್ರನ್, . ಮಹಾಪ್ರಬಂಧಕರು(ಹೆಚ್.ಆರ್ ಮತ್ತು ಸಾರ್ವಜನಿಕ ಸಂಪರ್ಕ) ಎಲ್. ಪ್ರವೀಣ್ ಕುಮಾರ್, ಸಹಾಯಕ ಮಹಾಪ್ರಬಂಧಕರು(ಕಂಪ್ಯೂಟರ್ ಮತ್ತು ಐಟಿ) ನಿತಿನ್ ಜೋಶ್, , ಸಹಾಯಕ ಮಹಾಪ್ರಬಂಧಕರು (ವಿಜಿಲೆನ್ಸ್) ಕುಥಲನಾಥನ್, ಉಪ ಪ್ರಬಂಧಕರು (ಹೆಚ್.ಆರ್) ಕೆ.ಎಸ್. ಶೋಭ, ಕಿರಿಯ ಪ್ರಬಂಧಕರು (ಹೆಚ್.ಆರ್ ಹೆಚ್.ಆರ್. ಎಲ್ & ಡಿ) ಎಮ್.ಎಲ್. ಯೋಗೀಶ್, ಇಂಜಿನಿಯರಿಂಗ್ ಅಸೋಸಿಯೇಟ್ಸ್(ಕಂಪ್ಯೂಟರ್ & ಐಟಿ) ಯಶವಂತಾಚಾರ್, ಭದ್ರತಾ ವಿಭಾಗದ ಅಸೋಸಿಯೇಟ್ಸ್ ರೇವಣಪ್ಪ ಮೂಡಿ, ಕಾರ್ಮಿಕರ ಸಂಘದ ಅಧ್ಯಕ್ಷ ಜೆ. ಜಗದೀಶ, ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ವಿಕಾಸ್ ಬಸೇರ್, ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಸುರೇಶ್, ಗುತ್ತಿಗೆದಾರರನ್ನು ಪ್ರತಿನಿಧಿಸುವ ಗಿರೀಶ್, ಕರಿಬಸಪ್ಪ, ಎಸ್. ವೆಂಕಟೇಶ್, ಎಸ್.ಎಸ್ ಜಾವೇದ್ ಹಾಗು ಭದ್ರತಾ ವಿಭಾಗದ ಇನ್ನಿತರರು ಉಪಸ್ಥಿತರಿದ್ದರು.