![](https://blogger.googleusercontent.com/img/a/AVvXsEiGncbyL0Tfffeo-ew9oHw6jWVdr1upvzHqSSIh9unrPBoYQok7ABN0wHvBplypukKYl29dFMY-5yuTIAy2tMlaYAXYpk_lB4uHui_AbI_t_ivkywJ71zEnlamohJ1wThvsFhOXG2l8eryNRZqeeLpc2tiZkCb0AMCRN5S7cZ_9fWXT1tjFkB6wSbZ7zn8q=w400-h400-rw)
ಶ್ರೀ ಉದ್ದಾಮ ಕ್ಷೇತ್ರ, ಶ್ರೀ ಉದ್ದಾಂಜನೇಯ ಸ್ವಾಮಿ
ಭದ್ರಾವತಿ: ತಾಲೂಕಿನ ಗಂಗೂರಿನ ಪುರಾಣ ಪ್ರಸಿದ್ದ ಶ್ರೀ ಉದ್ದಾಮ ಕ್ಷೇತ್ರ, ಶ್ರೀ ಉದ್ದಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಡಿ.೧೦ ಮತ್ತು ೧೧ರಂದು ಲೋಕ ಕಲ್ಯಾಣಾರ್ಥವಾಗಿ ಶ್ರೀ ಸೀತಾರಾಮ ಕಲ್ಯಾಣ ಮಹೋತ್ಸವ ಆಯೋಜಿಸಲಾಗಿದೆ.
೧೦ರಂದು ಬೆಳಿಗ್ಗೆ ಶ್ರೀ ಸ್ವಾಮಿಗೆ ಫಲಪಂಚಾಮೃತ ಅಭಿಷೇಕ, ಕಂಕಣಧಾರಣೆ, ಧ್ವಜಾರೋಹಣ, ಬೆಳಿಗ್ಗೆ ೧೧ ಗಂಟೆಗೆ ಸುಹಾಸಿನಿಯರಿಂದ ಗಂಗಾಪೂಜೆ, ಸಮಜೆ ೬ಕ್ಕೆ ಕಳಸಾರಾಧನೆ, ಗಣಪತಿ ಹೋಮ, ನವಗ್ರಹ ಹೋಮ, ಶ್ರೀ ಲಕ್ಷ್ಮೀ ನಾರಾಯಣ ಸಹಿತ ಶ್ರೀ ಲಕ್ಷ್ಮೀನರಸಿಂಹ, ಶ್ರೀ ವೈಜಯಂತಿ ಮಹಾಸುದರ್ಶನ ಹೋಮ, ಪೂರ್ಣಾಹುತಿ, ಅಷ್ಟಾವದಾನ ಸೇವೆ, ಮಹಾಮಂಗಳಾರತಿ ನಂತರ ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ.
೧೧ರಂದು ಪ್ರಾಥಃಕಾಲ, ಸುಪ್ರಭಾತ ಸೇವೆ, ವೇದಪಾರಾಯಣ, ಶ್ರೀರಾಮ-ಸೀತಾದೇವರ ಫಲಪಂಚಾಮೃತ ಅಭಿಷೇಕ, ೯.೪೦ ರಿಂದ ೧೦.೨೫ರ ವರೆಗೆ ಶ್ರೀ ಸೀತಾ-ರಾಮದೇವರ ಮಾಂಗಲ್ಯಧಾರಣ ಕಲ್ಯಾಣ ಮಹೋತ್ಸವ, ಮಹಾಮಂಗಳಾರತಿ, ಶಾತುಮೊರೈ, ಅಷ್ಟಾವಧಾನ ಸೇವೆ ನಂತರ ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ.
ಅವಧೂತ ಶ್ರೀ ಸದ್ಗರು ಶ್ರೀ ಬಿಂಧುಮಾಧವ ಶರ್ಮ ಗುರುಗಳ ದಿವ್ಯ ಸಾನಿಧ್ಯದಲ್ಲಿ ಬೆಲಗೂರು ಶ್ರೀ ವೀರಪ್ರತಾಪ ಆಂಜನೇಯ ಸ್ವಾಮಿ, ಶ್ರೀ ಮಾರುತಿ ಪೀಠ ಪೀಠಾಧ್ಯಕ್ಷರಾದ ಶ್ರೀ ವಿಜಯ ಮಾರುತಿ ಶರ್ಮ ಅವರ ಮಾರ್ಗದರ್ಶನದಲ್ಲಿ ಹಿರೇಮಗಳೂರು ಶ್ರೀ ಕೋದಂಡಸ್ವಾಮಿ ದೇವಸ್ಥಾನದ ವೇದಬ್ರಹ್ಮ ಶ್ರೀ ವೈಷ್ಣವ ಸಿಂಹ ಹಾಗು ದೇವರನರಸೀಪುರ ಶ್ರೀ ರಂಗನಾಥಸ್ವಾಮಿ ದೇವಸ್ಥಾನದ ಪ್ರಧನ ಅರ್ಚಕ ವೇದಬ್ರಹ್ಮ ಶ್ರೀ ಜಗನ್ನಾಥ್ ಭಟ್ ಧಾರ್ಮಿಕ ಆಚರಣೆಗಳನ್ನು ನೆರವೇರಿಸಲಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊ: ೮೨೧೭೭೯೭೩೫೬ ಅಥವಾ ೬೩೬೧೧೫೯೧೬೨ ಸಂಖ್ಯೆಗೆ ಕರೆ ಮಾಡಬಹುದಾಗಿದೆ.