ಶನಿವಾರ, ಅಕ್ಟೋಬರ್ 10, 2020

ಅಂಗಡಿ ಮುಂಗಟ್ಟು ಜಲಾವೃತ : ಸೂಕ್ತ ಕ್ರಮಕ್ಕೆ ಮನವಿ

ಭದ್ರಾವತಿನಗರಸಭೆ ವ್ಯಾಪ್ತಿಯ ಭೂತನಗುಡಿ ಮತ್ತು ಎನ್‌ಎಸ್‌ಟಿ ಭಾಗದ ರಸ್ತೆಗಳಚರಂಡಿಗಳಲ್ಲಿ ನೀರು ತುಂಬಿಕೊಂಡು ಮನೆಹಾಗು ಅಂಗಡಿ ಮುಂಗಟ್ಟುಗಳು ಸಹಜಲಾವೃತಗೊಳ್ಳುತ್ತಿದ್ದು, ತಕ್ಷಣ ಕ್ರಮ ಕೈಗೊಳ್ಳುವಂತೆಆಗ್ರಹಿಸಿ ರಾಮ್ ಸೇನಾ ಕರ್ನಾಟಕವತಿಯಿಂದ ಶುಕ್ರವಾರ ಪೌರಾಯುಕ್ತ ಮನೋಹರ್‌ಗೆ ಮನವಿಸಲ್ಲಿಸಲಾಯಿತು.
ಭದ್ರಾವತಿ: ಕಳೆದ ಕೆಲವುದಿನಗಳಿಂದ ಸಂಜೆ ವೇಳೆ ಸುರಿಯುತ್ತಿರುವಮಳೆಯಿಂದಾಗಿ ನಗರಸಭೆ ವ್ಯಾಪ್ತಿಯ ಭೂತನಗುಡಿಮತ್ತು ಎನ್‌ಎಸ್‌ಟಿಭಾಗದ ರಸ್ತೆಗಳ ಚರಂಡಿಗಳಲ್ಲಿ ನೀರುತುಂಬಿಕೊಂಡು ಮನೆ ಹಾಗು ಅಂಗಡಿಮುಂಗಟ್ಟುಗಳು ಸಹ ಜಲಾವೃತಗೊಳ್ಳುತ್ತಿದ್ದು, ತಕ್ಷಣ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ರಾಮ್ ಸೇನಾ ಕರ್ನಾಟಕವತಿಯಿಂದ ಶುಕ್ರವಾರ ಪೌರಾಯುಕ್ತ ಮನೋಹರ್‌ಗೆ ಮನವಿಸಲ್ಲಿಸಲಾಯಿತು.
   ಕಳೆದ ೩-೪ವರ್ಷಗಳಿಂದ ಇದೆ ರೀತಿ ಸಮಸ್ಯೆಎದುರಾಗುತ್ತಿದ್ದು, ಮಳೆಗಾಲದಲ್ಲಿ ನೀರು ಚರಂಡಿಗಳಲ್ಲಿ ಸರಾಗವಾಗಿಹರಿಯದೆ ನಿಂತುಕೊಳ್ಳುತ್ತಿದೆ. ಇದರಿಂದಾಗಿ ಮನೆಗಳು ಜಲಾವೃತ್ತಗೊಂಡು ನಿವಾಸಿಗಳುಸಂಕಷ್ಟ ಎದುರಿಸುವಂತಾಗಿದೆ. ಈ ಹಿನ್ನಲೆಯಲ್ಲಿ ರಾಮ್ಸೇನಾ ಕರ್ನಾಟಕ ವತಿಯಿಂದ ಸ್ಥಳಪರಿಶೀಲನೆ ನಡೆಸಿ ನಿವಾಸಿಗಳ ಸಮಸ್ಯೆಗಳನ್ನುಆಲಿಸುವ ಜೊತೆಗೆ ಸಹಿ ಸಂಗ್ರಹಿಸಲಾಗಿದೆ. ತಕ್ಷಣ ಸಮಸ್ಯೆ ಬಗೆಹರಿಸುವಂತೆ ಕೋರಲಾಗಿದೆ.
   ರಾಮ್ ಸೇನಾ ಕರ್ನಾಟಕಸಂಘಟನೆ ಜಿಲ್ಲಾಧ್ಯಕ್ಷ ಉಮೇಶ್, ತಾಲೂಕು ಅಧ್ಯಕ್ಷಎಂ. ಸಚಿನ್ ವರ್ಣೇಕರ್, ಎಸ್.ಎನ್ ಶ್ರೀನಿವಾಸ್, ರಾಜುಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ