Sunday, April 16, 2023

ಹೋರಾಟಗಾರ ಬಿ.ಎನ್ ರಾಜು ಏ.೧೭ರಂದು ನಾಮಪತ್ರ ಸಲ್ಲಿಕೆ

ಬಿ.ಎನ್ ರಾಜು
    ಭದ್ರಾವತಿ, ಏ. ೧೬ : ನಗರದ ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ವಿಧಾನಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಮವಾರ ನಾಮಪತ್ರ ಸಲ್ಲಿಸಲಿದ್ದಾರೆ.
    ಸುಮಾರು ೫೦ ವರ್ಷ ವಯಸ್ಸಿನ ವೇಲೂರು ಶೆಡ್ ನಿವಾಸಿಯಾಗಿರುವ ಬಿ.ಎನ್ ರಾಜು ೨ನೇ ಬಾರಿ ವಿಧಾನಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಅನ್ಯಾಯದ ವಿರುದ್ಧ, ಶೋಷಿತರ ಪರವಾಗಿ ಸುಮಾರು ೩೦ ವರ್ಷಗಳಿಂದ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರುತ್ತಿದ್ದಾರೆ.
    ಕಳೆದ ಬಾರಿ ೨೦೧೮ರ ಚುನಾವಣೆಯಲ್ಲಿ ೧೨ನೇ ಸ್ಥಾನ ಕಾಯ್ದುಕೊಂಡಿದ್ದರು. ಇದೀಗ ೨ನೇ ಬಾರಿಗೆ ಸ್ಪರ್ಧಿಸುತ್ತಿದ್ದಾರೆ. ಮಿನಿವಿಧಾನಸೌಧ ತಾಲೂಕು ಕಛೇರಿ ಚುನಾವಣಾಧಿಕಾರಿಗಳ ಕಛೇರಿಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ.  

No comments:

Post a Comment