Sunday, December 4, 2022

ರೋಟರಿ ಸಮುದಾಯದಿಂದ ಯಶಸ್ವಿಯಾಗಿ ಜರುಗಿದ ‘ತುಂಗಾಭದ್ರಾ ಕ್ರೀಡೋಲ್ಲಾಸ’

ಭದ್ರಾವತಿ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಭಾನುವಾರ ರೋಟರಿ ಕ್ಲಬ್ ಭದ್ರಾವತಿ ಮತ್ತು ರೋಟರಿ ಕ್ಲಬ್ ಶಿವಮೊಗ್ಗ ಜ್ಯೂಬ್ಲಿ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ರೋಟರಿ ಜಿಲ್ಲೆ ೩೧೮೨ರ ಜೋನ್ ೧೦ ಮತ್ತು ೧೧ರ ವ್ಯಾಪ್ತಿಯ ವಲಯ ಮಟ್ಟದ ಕ್ರೀಡಾಕೂಟ 'ತುಂಗಾಭದ್ರಾ ಕ್ರೀಡೋಲ್ಲಾಸ'ಕ್ಕೆ  ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಾಂದ್ವಾನಿ ಚಾಲನೆ ನೀಡಿದರು.
    ಭದ್ರಾವತಿ, ಡಿ. ೪ : ನಗರದ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಭಾನುವಾರ ರೋಟರಿ ಕ್ಲಬ್ ಭದ್ರಾವತಿ ಮತ್ತು ರೋಟರಿ ಕ್ಲಬ್ ಶಿವಮೊಗ್ಗ ಜ್ಯೂಬ್ಲಿ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ರೋಟರಿ ಜಿಲ್ಲೆ ೩೧೮೨ರ ಜೋನ್ ೧೦ ಮತ್ತು ೧೧ರ ವ್ಯಾಪ್ತಿಯ ವಲಯ ಮಟ್ಟದ ಕ್ರೀಡಾಕೂಟ 'ತುಂಗಾಭದ್ರಾ ಕ್ರೀಡೋಲ್ಲಾಸ'ಕ್ಕೆ  ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಾಂದ್ವಾನಿ ಚಾಲನೆ ನೀಡಿದರು.
    ರೋಟರಿ ಜೋನ್-೧೦ರ ಶಿವಮೊಗ್ಗ, ಭದ್ರಾವತಿ, ಶಿವಮೊಗ್ಗ ನಾರ್ತ್, ಶಿವಮೊಗ್ಗ ಮಿಡ್-ಟೌನ್, ಶಿವಮೊಗ್ಗ ರಿವರ್‌ಸೈಡ್, ಶಿವಮೊಗ್ಗ ಜ್ಯೂಬ್ಲಿ, ಕದಂಬ(ಶಿಕಾರಿಪುರ) ಮತ್ತು ಶಿವಮೊಗ್ಗ ಮಲೆನಾಡು ಹಾಗೂ ಜೋನ್-೧೧ರ ಶಿವಮೊಗ್ಗ ಈಸ್ಟ್, ಶಿವಮೊಗ್ಗ ಸೆಂಟ್ರಲ್, ತೀರ್ಥಹಳ್ಳಿ, ಸಾಗರ, ಕೋಣಂದೂರು, ರಿಪ್ಪನ್‌ಪೇಟೆ ಮತ್ತು ಸೊರಬ ಒಟ್ಟು ೧೬ ತಂಡಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದವು.


    ಭದ್ರಾವತಿ ರೋಟರಿ ಕ್ಲಬ್ ಅಧ್ಯಕ್ಷ ಅಡವೀಶಯ್ಯ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಪ್ರಮುಖರಾದ ಡಾ. ಗುಡದಪ್ಪ ಕಸಬಿ, ಸುನೀತ ಶ್ರೀಧರ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಕ್ರಿಕೆಟ್ ಆಟ ಆಡುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಬಿ.ಎಲ್ ಚಾಂದ್ವಾನಿಯವರು ರೋಟರಿ ಸಮುದಾಯ ಒಂದೆಡೆ ಸೇರಿ ಕ್ರೀಡಾಕೂಟ ಆಯೋಜಿಸಿರುವುದು ಒಳ್ಳೆಯ ಬೆಳವಣಿಯಾಗಿದ್ದು, ಕ್ರೀಡಾಕೂಟ ಯಶಸ್ವಿಯಾಗಲಿ ಶುಭ ಹಾರೈಸಿದರು.

No comments:

Post a Comment