Sunday, July 3, 2022

ಶ್ರೀ ನಾಗೇಂದ್ರಕುಮಾರ್ ಗುರುಗಳಿಂದ ವಿಶೇಷ ಸತ್ಸಂಗ

ಶ್ರೀ ನಾಗೇಂದ್ರಕುಮಾರ್ ಗುರುಗಳಿಂದ ಭದ್ರಾವತಿ ನ್ಯೂಟೌನ್ ಶ್ರೀ ದತ್ತಾಶ್ರಮದಲ್ಲಿ ಭಾನುವಾರ ವಿಶೇಷ ಸತ್ಸಂಗ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.
    ಭದ್ರವತಿ, ಜು. ೩: ಶ್ರೀ ನಾಗೇಂದ್ರಕುಮಾರ್ ಗುರುಗಳಿಂದ ನ್ಯೂಟೌನ್ ಶ್ರೀ ದತ್ತಾಶ್ರಮದಲ್ಲಿ ಭಾನುವಾರ ವಿಶೇಷ ಸತ್ಸಂಗ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.
      ಬೆಳಿಗ್ಗೆ ೯ ಗಂಟೆಯಿಂದ ಆರಂಭಗೊಂಡ ಸತ್ಸಂಗದಲ್ಲಿ ಗುರುಗಳಿಂದ ಪ್ರವಚನ, ಭಕ್ತರಿಂದ ಲಲಿತಾಸಹಸ್ರನಾಮದಿಂದ ಕುಂಕುಂಮಾರ್ಚನೆ, ಪಾದಪೂಜೆ, ಪುಷ್ಪಾಭಿಷೇಕ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು. ಇದಕ್ಕೂ ಮೊದಲು ಗುರುಗಳನ್ನು ಪೂರ್ಣಕುಂಭದಿಂದ ಅದ್ದೂರಿಯಾಗಿ ಸ್ವಾಗತಿಸಲಾಯಿತು.
      ನಗರದ ವಿವಿಧೆಡೆಗಳಿಂದ ಭಕ್ತಾಧಿಗಳು ಆಗಮಿಸಿ ಶ್ರೀಗಳ ದರ್ಶನ ಪಡೆದರು. ಮಧ್ಯಾಹ್ನ ಅನ್ನಸಂತರ್ಪಣೆ ನೆರವೇರಿತು. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಮೂಲತಃ ಭದ್ರಾವತಿಯವರಾದ ಸುಷ್ಮಯೋಗಾನಂದ ಕುಟುಂಬ ವರ್ಗದವರು ಕಾರ್ಯಕ್ರಮವನ್ನು ಆಯೋಜಿಸಿದ್ದರು.
       ಶನಿವಾರ ಸಂಜೆ ತಾಲೂಕು ಕಛೇರಿ ಮುಂಭಾಗದಲ್ಲಿರುವ ನೋಟರಿ ಆರ್.ಎಸ್ ಶೋಭಾ ಅವರ ನಿವಾಸದಲ್ಲಿ ಪ್ರವಚನ ನಡೆಯಿತು. ಮೈಸೂರಿನಿಂದ ಪುತ್ರಿ ಪ್ರತಿಭಾ ಅವರೊಂದಿಗೆ ಶ್ರೀ ನಾಗೇಂದ್ರಕುಮಾರ್ ಗುರುಗಳು ಕಳೆದ ೨ ದಿನಗಳಿಂದ ನಗರದಲ್ಲಿ ವಾಸ್ತವ್ಯ ಹೂಡಿದ್ದಾರೆ.
      

No comments:

Post a Comment