ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಭದ್ರಾವತಿ ಹೊಳೆಹೊನ್ನೂರು ವೃತ್ತ ಶಾಖೆ ಪ್ರಬಂಧಕರಾಗಿ ಸುಮಾರು ೩ ವರ್ಷ ಕರ್ತವ್ಯ ನಿರ್ವಹಿಸಿ ವರ್ಗಾವಣೆಗೊಂಡಿರುವ ಸಿ.ಡಿ ಮಂಜುನಾಥ್ ಅವರಿಗೆ ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಯಿತು.
ಭದ್ರಾವತಿ : ವೃತ್ತಿ ಬದುಕಿನ ಜೊತೆಗೆ ಉತ್ತಮ ಸೇವೆ ಸಲ್ಲಿಸಲು ಬ್ಯಾಂಕಿಂಗ್ ಕ್ಷೇತ್ರ ಸಹಕಾರಿಯಾಗಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಗರದ ಹೊಳೆಹೊನ್ನೂರು ವೃತ್ತ ಶಾಖೆಯ ಪ್ರಬಂಧಕ ಸಿ.ಡಿ. ಮಂಜುನಾಥ್ ಹೇಳಿದರು.
ವರ್ಗಾವಣೆ ಹಿನ್ನೆಲೆಯಲ್ಲಿ ಬ್ಯಾಂಕಿನಲ್ಲಿ ಏರ್ಪಡಿಸಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸಿಬ್ಬಂದಿ ಹಾಗೂ ಗ್ರಾಹಕರನ್ನುದ್ದೇಶಿಸಿ ಅವರು ಮಾತನಾಡಿದರು. ಸುಮಾರು ಮೂರು ವರ್ಷಗಳ ಕಾಲ ಇಲ್ಲಿ ಕರ್ತವ್ಯ ನಿರ್ವಹಿಸಿರುವುದು ಸಾಕಷ್ಟು ತೃಪ್ತಿ ತಂದಿದೆ. ಅನೇಕ ಅನುಭವಗಳನ್ನು ನೀಡಿದೆ. ರೈತರು, ವರ್ತಕರು, ಉದ್ಯಮಿಗಳು ಸೇರಿದಂತೆ ಎಲ್ಲಾ ವಲಯಗಳಿಗೆ ಉತ್ತಮ ಸೇವೆ ಸಲ್ಲಿಸಲು ಬ್ಯಾಂಕಿಂಗ್ ಕ್ಷೇತ್ರ ಸಹಕಾರಿಯಾಗಿದ್ದು, ಗ್ರಾಹಕರು ಸಾಲ-ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳುವ ಮೂಲಕ ಸ್ವಾವಲಂಬನೆ ಸಾಧಿಸುವಂತೆ ಕರೆ ನೀಡಿದರು.
ಸಿಬ್ಬಂದಿಗಳಾದ ರಮೇಶ್, ನಾಗರತ್ನ, ಲೋನಪ್ಪನ್, ದಶರಥ್, ರಾಜು ಹಾಗೂ ಗ್ರಾಹಕರು ಮಾತನಾಡಿ, ಸದಾಕಾಲ ಕ್ರಿಯಾಶೀಲತೆಯಿಂದ ಸಾಕಷ್ಟು ಒತ್ತಡಗಳ ನಡುವೆಯೂ ಗ್ರಾಹಕರೊಂದಿಗೆ ನಗುಮುಖದಿಂದ ಸ್ಪಂದಿಸುತ್ತಿದ್ದ ವ್ಯವಸ್ಥಾಪಕರ ಸೇವೆಯನ್ನು ಸ್ಮರಿಸಿದರು.
No comments:
Post a Comment