ಚಿನ್ನರಾಜು
ಭದ್ರಾವತಿ, ಸೆ. ೨೧: ನಗರದ ಬುಳ್ಳಾಪುರ ನಿವಾಸಿ, ಕಬಡ್ಡಿ ತರಬೇತಿದಾರ ಚಿನ್ನರಾಜು(೫೫) ಹೃದಯಾಘಾತದಿಂದ ಮಂಗಳವಾರ ನಿಧನ ಹೊಂದಿದರು.
ಪತ್ನಿ, ಇಬ್ಬರು ಹೆಣ್ಣು ಮಕ್ಕಳನ್ನು ಹೊಂದಿದ್ದರು. ಫೆ.೨೭ ಮತ್ತು ೨೮ರಂದು ಹಳೇನಗರದ ಕನಕಮಂಟಪ ಮೈದಾನದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಹೊನಲು ಬೆಳಕಿನ ಪ್ರೊ. ಕಬಡ್ಡಿ(ಮಾಟ್) ಪಂದ್ಯಾವಳಿಯಲ್ಲಿ ಸ್ನೇಹಜೀವಿ ಬಳಗದ ತಂಡ ಮೊದಲ ಬಹುಮಾನ ಪಡೆದುಕೊಳ್ಳಲು ಕಾರಣಕರ್ತರಾಗಿದ್ದರು.
ಇವರ ನಿಧನಕ್ಕೆ ಸ್ನೇಹ ಬಳಗದ ಪೊಲೀಸ್ ಉಮೇಶ್, ಕರ್ನಾಟಕ ರಾಜ್ಯ ಅಮೆಚೂರ್ ಅಸೋಸಿಯೇಷನ್ ಹಾಗು ಕಬಡ್ಡಿ ಕ್ರೀಡಾಪಟುಗಳು ಮತ್ತು ಇನ್ನಿತರ ಗಣ್ಯರು ಸಂತಾಪ ಸೂಚಿಸಿದ್ದಾರೆ.
No comments:
Post a Comment