ಭದ್ರಾವತಿ, ಫೆ. 3: ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ತಾಲೂಕು ಸಮಿತಿಯಿಂದ ಕರ್ನಾಟಕ ಹೆಮ್ಮೆಯ ಉಕ್ಕು ಉದ್ಯಮ ವಿ.ಐ.ಎಸ್.ಪಿ ಮುಚ್ಚದಂತೆ ಶುಕ್ರವಾರ ತಹಸೀಲ್ದಾರ್ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು.
ನಂತರ ಪ್ರತಿಭಟನೆಯ ಸ್ಥಳಕ್ಕೆ ಆಗಮಿಸಿ ಬೆಂಬಲಿಸಿ ಮಾತನಾಡಿದ ಪ್ರಮುಖರು, ಕರ್ನಾಟಕ ಹೆಮ್ಮೆಯ ಉಕ್ಕು ಉದ್ಯಮ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಪ್ಲಾಂಟ್ ಭಾರತದ ಮೊಟ್ಟ ಮೊದಲ ಕೈಗಾರಿಕೆಯು ಕೂಡ ಆಗಿರುತ್ತದೆ. ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ನವರ ಪರಿಶ್ರಮದಿಂದ ನಿರ್ಮಣಗೊಂಡ ಈ ಕೈಗಾರಿಕೆಯು ರಾಜ್ಯದ ಹಾಗೂ ದೇಶದಲ್ಲಿನ ಆಣ್ಣೆಕಟ್ಟು, ಡ್ಯಾಂಗಳು, ರಕ್ಷಣಾ ವಲಯ, ರೈಲ್ವೆ ವಲಯ, ಬ್ರಿಡ್ಜ್ಗಳನ್ನು ಕಟ್ಟಲು ಈ ಕೈಗಾರಿಕೆಯ ಉತ್ತಮ ಕಬ್ಬಿಣದಿಂದ ನಿರ್ಮಾಣ ಮಾಡಲಾಗಿದೆ ಎಂದು ಹೇಳಲು ಹೆಮ್ಮೆಯಾಗುತ್ತಿದೆ ಎಂದರು.
ಹೀಗೆ ಬೃಹದಾಕಾರವಾಗಿ ಬೆಳೆದ VISP ಕೈಗಾರಿಯು 80ರ ಧಶಕದಿಂದ ಅಲ್ಪ ಪ್ರಮಾಣದ ನಷ್ಟದ ಹಾದಿ
ಹಿಡಿಯಿತು. ಹಳೇಯ ತಂತ್ರಜ್ಞಾನದಿಂದ ಪ್ರತಿವರ್ಷ ಇನ್ನಷ್ಟು ನಷ್ಟದ ಪ್ರಮಾಣ ಹೆಚ್ಚಾಗಿದ್ದರಿಂದ ಅಂದಿನ
ಕರ್ನಾಟಕ ಸರ್ಕಾರವು ಭಾರತೀಯ ಉಕ್ಕು ಪ್ರಾಧಿಕಾರಕ್ಕೆ VISP ವಹಿಸಲು ತಿರ್ಮಾನಿಸಿ 1989ರಲ್ಲಿ ಕರ್ನಾಟಕ ಸರ್ಕಾರವು ಈ ಕೈಗಾರಿಕೆಯನ್ನು ಆಧುನಿಕರಿಸಿ ಅಭಿವೃದ್ಧಿ ಪಡಿಸುವಂತೆ ಕೋರಿ ಕೇಂದ್ರ ಸರ್ಕಾರದ ಅಧಿನದಲ್ಲಿರುವ SAIL ಗೆ ಹಸ್ತಾಂತರ ಮಾಡಲಾಯಿತು. ಆದರೆ ದುರಾದೃಷ್ಟವಶತ್ ಭಾರತೀಯ ಉಕ್ಕು ಪ್ರಾಧಿಕಾರ ಯಾವುದೇ ಬಂಡವಾಳವನ್ನು ತೊಡಗಿಸದೆ ಮಲತಾಯಿ ಧೋರಣೆಯನ್ನು ಅನುಸರಿಸಿತು ಎಂದು ದೂರಿದರು. ಇಂತಹ ಸಂದಿಗ್ಧದ ಪರಿಸ್ಥಿತಿಯಲ್ಲಿ 2015ರಲ್ಲಿ ಕೇಂದ್ರದ ಉಕ್ಕು ಮಂತ್ರಿ ನರೇಂದ್ರಸಿಂಗ್ ತೋಮರ್ ಕಾರ್ಖಾನೆಗೆ ಭೇಟಿ ನೀಡಿ ಈ ಕಾರ್ಖಾನೆಯನ್ನು ಅಭಿವೃದ್ಧಿಪಡಿಸಲು ಒಂದು ಸಾವಿರ ಕೋಟಿ ನೀಡುವುದಾಗಿ ತಿಳಿಸಿ ಪ್ರಮುಖವಾಗಿ ಈ ಕಾರ್ಖಾನೆಗೆ ಬೇಕಾಗಿರುವ ಕಬ್ಬಿಣದ ಅದಿರಿನ ಗಣಿಯನ್ನು ಕೊಡುವಂತೆ ತಿಳಿಸಿದ್ದರು. ಅದೇ ಪ್ರಕಾರವಾಗಿ ಕರ್ನಾಟಕ ಸರ್ಕಾರವು 2018ರ
ಬಳ್ಳಾರಿ ಜಿಲ್ಲೆ ಸಂಡೂರು ತಾಲ್ಲೂಕಿನ ರಮಣದುರ್ಗದಲ್ಲಿ 150 ಹೆಕ್ಟೇರ್ ಕಬ್ಬಿಣದ ಅದಿರನ ಗಣಿಯನ್ನು ಮಂಜೂರು ಮಾಡಿದೆ,ಆದರೆ 2018ರಲ್ಲಿ ಕೇಂದ್ರದ ಉಕ್ಕು ಮಂತ್ರಿ ಬಿರೇಂದ್ರಸಿಂಗ್ ಚೌದರಿ, ಈ
ಕಾರ್ಖಾನೆಗೆ ಭೇಟಿ ನೀಡಿ ಈ ಕಾರ್ಖಾನೆಯನ್ನು ಖಾಸಗಿ ಮಾಡದೆ ಉಕ್ಕು ಪ್ರಧಿಕಾರದಲ್ಲೇ ಉಳಿಸಿಕೊಂಡು 6 ಸಾವಿರ ಕೋಟಿ ಬಂಡವಾಳ ಹೂಡುವುದಾಗಿ ನೀಡಿದ ಭರವಸೆ ಹುಸಿಯಾಯಿತು. ಕೈಗಾರಿಕೆಯು ಇನ್ನಷ್ಟು
ನಷ್ಟಕ್ಕೆ ಸಿಲುಕಿತು ಎಂದು ಆರೋಪಿಸಿದರು. ಇಂತಹ ಪರಿಸ್ಥಿತಿಯನ್ನು ದೌರ್ಬಲ್ಯ ಮಾಡಿಕೊಂಡ ಭಾರತೀಯ ಉಕ್ಕು ಪ್ರಾಧಿಕಾರದ ಉನ್ನತ ಮಟ್ಟದ ಸಮಿತಿ ಜ. 16ರ ಸಭೆಯಲ್ಲಿ ವಿ.ಐ.ಎಸ್.ಪಿ. ಕಾರ್ಖಾನೆಯನ್ನು ಮುಚ್ಚಲು ತೀರ್ಮಾನಿಸಿರುತ್ತಾರೆ. 1989ರಲ್ಲಿ ಕರ್ನಾಟಕ ಸರ್ಕಾರ ಈ ಕಾರ್ಖಾನೆಯನ್ನು ಆಧುನಿಕರಿಸಿ ಅಭಿವೃದ್ಧಿ ಪಡಿಸಿ ಮುನ್ನಡೆಸಲು ಕೇಂದ್ರ ಸರ್ಕಾರದ ಅಧೀನದಲ್ಲಿರುವ ಭಾರತೀಯ ಉಕ್ಕು ಪ್ರಾಧಿಕಾರಕ್ಕೆ ವಹಿಸಿತ್ತೆ ಹೊರತು ಖಾಸಗಿಯವರಿಗೆ ಮಾರಾಟ ಮಾಡಲು ಅಥವಾ ಈ ಕಾರ್ಖಾನೆಯನ್ನು ಮುಚ್ಚಲು ಕೊಟ್ಟಿಲ್ಲ. ಹಾಗಾಗಿ ಕರ್ನಾಟಕ ಸರ್ಕಾರ
ಕೊಟ್ಟಿರುವ ಕಬ್ಬಿಣದ ಅದಿರಿನ ಗಣಿಯಿಂದ ಗಣಿಗಾರಿಕೆ ಮಾಡಲು ಈಗಾಗಲೇ ಸಿದ್ಧತೆ ಮಾಡುತ್ತಿರುವಾಗಲೇ
ವಿ.ಐ.ಎಸ್.ಪಿ. ಕಾರ್ಖಾನೆ ಮುಚ್ಚುವ ಸುದ್ದಿ ಇಡಿ ಕಾರ್ಮಿಕ ವಲಯಕ್ಕೆ ಬರ ಸಿಡಿಲು ಬಡಿದಂತಾಗಿದೆ. ಈ
ಕಾರ್ಖಾನೆಯನ್ನು ನಂಬಿ ಸುಮಾರು 22 ವರ್ಷಗಳಿಂದ 1500 ಕ್ಕೂ ಹೆಚ್ಚು ಗತ್ತಿಗೆ ಕಾರ್ಮಿಕರು ಹಾಗೂ
ಇವರನ್ನು ಅವಲಂಬಿಸಿದಂತ ಭದ್ರಾವತಿಯ ವ್ಯಾಪಾರಸ್ಥರೂ ಕಂಗಾಲಾಗಿದ್ದಾರೆ. ಆದ್ದರಿಂದ ಕರ್ನಾಟಕ ಸರ್ಕಾರದ ಪರವಾಗಿ ತಾವುಗಳು ಸರ್.ಎಂ.ವಿಶ್ವೇಶ್ವರಯ್ಯನವರ ದೂರದೃಷ್ಟಿ, ಕಾರ್ಮಿಕರ ಬದುಕು, ಯುವ ಜನರಿಗೆ ಹೊಸ ಉದ್ಯೋಗ ಸೃಷ್ಟಿ ಇವೆಲ್ಲವನ್ನು ಪ್ರಧಾನ ಮಂತ್ರಿಗಳಿಗೆ ಮನವರಿಕೆ ಮಾಡಿ ಕರ್ನಾಟಕದ ಹೆಮ್ಮೆಯ ವಿ.ಐ.ಎಸ್.ಪಿ ಕೈಗಾರಿಕೆಯನ್ನು ಉಳಿಸಲು ಒತ್ತಾಯಿಸುತ್ತಿದ್ದೇವೆ ಎಂದರು.
ಸಂಘದ ಅಧ್ಯಕ್ಷೆ ಹನುಮಮ್ಮ, ಪ್ರಧಾನ ಕಾರ್ಯದರ್ಶಿ ಎಂ. ನಾರಾಯಣ, ಎಸ್. ಲೀಲಾವತಿ, ಮೀನಾ, ಸರಸ್ವತಿ, ಸಾಮೀನಾ, ರೂಪ, ನಾಗರತ್ನ, ಎಂ. ಅನಂತ ರಾಮು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment