ಭದ್ರಾವತಿ, ಮೇ. ೩ : ಕನ್ನಡ ಸಾಹಿತ್ಯ ಪರಿಷತ್ ೧೦೮ನೇ ಸಂಸ್ಥಾಪನಾ ದಿನಾಚರಣೆ ಮೇ.೫ರಂದು ಸಂಜೆ ೫.೩೦ಕ್ಕೆ ಪರಿಷತ್ ನ್ಯೂಟೌನ್ ಕಛೇರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಸ್ತ್ರೀ ರೋಗ ತಜ್ಞೆ, ಸಾಹಿತಿ ಡಾ. ವೀಣಾ ಎಸ್. ಭಟ್ ಉದ್ಘಾಟಿಸಲಿದ್ದು, ತಾಲೂಕು ಪರಿಷತ ಅಧ್ಯಕ್ಷ ಕೋಡ್ಲು ಯಜ್ಞಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ನಿವೃತ್ತ ಉಪನ್ಯಾಸಕ ಎಚ್.ಎಂ ರವಿಶಂಕರ್ ಉಪನ್ಯಾಸ ನೀಡಲಿದ್ದು, ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷೆ ಎಂ.ಎಸ್ ಸುಧಾಮಣಿ, ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಎಂ.ಆರ್ ರೇವಣಪ್ಪ ಉಪಸ್ಥಿತರಿರುವರು. ಹಿರಿಯ ಸಾಹಿತಿಗಳಾದ ಜೆ.ಎನ್ ಬಸವರಾಜಪ್ಪ ಮತ್ತು ಬಿ. ಕಾಂತಪ್ಪ ಕಥೆ ಹಾಗು ಸಿ.ಎಚ್ ನಾಗೇಂದ್ರ, ಬಿ.ಕೆ ನಿತೀನ್, ಎನ್.ಎಸ್ ನಿಹಾರಿಕಾ, ಪೂರ್ಣಿಮಾ ಉಡುಪ ಕವನ ವಾಚಿಸಲಿದ್ದು, ಹಳೇನಗರ ಮಹಿಳಾ ಸೇವಾ ಸಮಾಜ ತಂಡದವರಿಂದ, ಎಚ್.ಆರ್ ಶ್ರೀಧರೇಶ್ ಮತ್ತು ತಂಡದವರಿಂದ ಹಾಗು ಸುಮತಿ ಕಾರಂತ್ ಅವರಿಂದ ಹಾಡುಗಾರಿಕೆ ನಡೆಯಲಿದೆ.
No comments:
Post a Comment