ಭದ್ರಾವತಿ : ವಾರಸುದಾರರಿಲ್ಲದ ವ್ಯಕ್ತಿಯೊಬ್ಬರು ಅತಿಯಾದ ಮದ್ಯ ಸೇವನೆಯಿಂದ ಮೃತಪಟ್ಟಿರುವ ಘಟನೆ ನಡೆದಿದ್ದು, ಈ ಸಂಬಂಧ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೊಸಮನೆ ನಿವಾಸಿ ಜಗನ್ನಾಥರಾವ್ ಎಂಬುವರಿಗೆ ಸೇರಿದ ಕೊಠಡಿಯಲ್ಲಿ ಸುಮಾರು 4 ವರ್ಷದಿಂದ ಬಾಡಿಗೆಗೆ ವಾಸವಿದ್ದ ಹಿಟ್ಟಿನ ಗಿರಣಿ ರಿಪೇರಿ ಕೆಲಸ ಮಾಡುವ ಹನುಮಂತಪ್ಪ(48) ಎಂಬುವರು ಮೃತಪಟ್ಟಿದ್ದು, 5.6 ಅಡಿ ಎತ್ತರ, ಕೋಲು ಮುಖ, ಕಪ್ಪು-ಬಿಳಿ ಮಿಶ್ರಿತ ತಲೆ ಕೂದಲು ಇದ್ದು, ತಲೆಯ ಮುಂಭಾಗ ಬೋಳಾಗಿರುತ್ತದೆ. ಬಿಳಿ ಬಣ್ಣದ ಚೆಕ್ಸ್ ತುಂಬು ತೋಳಿನ ಶರ್ಟ್ ಧರಿಸಿದ್ದಾರೆ. ಇವರ ಮೃತದೇಹ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆ ಶವಗಾರದಲ್ಲಿದ್ದು, ವಾರಸುದಾರರು ಇದ್ದಲ್ಲಿ ಸಂಪರ್ಕಿಸುವಂತೆ ಪೊಲೀಸರು ಕೋರಿದ್ದಾರೆ.
No comments:
Post a Comment