Saturday, June 28, 2025

ಯಶಸ್ಸಿಗೆ ಕನಸು ಕಂಡರೆ ಸಾಲದು ದೃಢ ಸಂಕಲ್ಪ ಮುಖ್ಯ : ಡಿ. ಪ್ರಭಾಕರ್ ಬೀರಯ್ಯ

ಭದ್ರಾವತಿ ದೈವಜ್ಞ ಕಲ್ಯಾಣ ಮಂದಿರದಲ್ಲಿ ಗಾಂಧಿನಗರದ ಸೇಂಟ್ ಜೋಸೆಫ್ ಪಿಯು ಕಾಲೇಜ್ ಆಫ್ ಎಕ್ಸಲೆನ್ಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಸ್ವಾಗತಿಸುವ ಹಾಗೂ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನ್ಯೂಟೌನ್ ಪ್ರಶಾಂತಿ ಸೇವಾ ಟ್ರಸ್ಟ್ ಅಧ್ಯಕ್ಷ, ಶ್ರೀ ಸತ್ಯಸಾಯಿ ಬಾಬಾ ಸೇವಾ ಸಂಸ್ಥೆಗಳ ರಾಜ್ಯ ಸಂಯೋಜಕ ಡಿ. ಪ್ರಭಾಕರ ಬೀರಯ್ಯ ಉದ್ಘಾಟಿಸಿ ಮಾತನಾಡಿದರು.
    ಭದ್ರಾವತಿ : ವಿದ್ಯಾರ್ಥಿಗಳು ಭವಿಷ್ಯದಲ್ಲಿ ಯಶಸ್ಸು ಕಾಣಲು ಕನಸು ಕಂಡರೆ ಸಾಲದು, ಛಲ ಹೊತ್ತು ದೃಢ ಸಂಕಲ್ಪದೊಂದಿಗೆ ಶ್ರಮವಹಿಸಿದಾಗ ಮಾತ್ರ ಕನಸು ನನಸಾಗಿಸಬಹುದೆಂದು ನಗರದ ನ್ಯೂಟೌನ್ ಪ್ರಶಾಂತಿ ಸೇವಾ ಟ್ರಸ್ಟ್ ಅಧ್ಯಕ್ಷ, ಶ್ರೀ ಸತ್ಯಸಾಯಿ ಬಾಬಾ ಸೇವಾ ಸಂಸ್ಥೆಗಳ ರಾಜ್ಯ ಸಂಯೋಜಕ ಡಿ. ಪ್ರಭಾಕರ ಬೀರಯ್ಯ ಹೇಳಿದರು.
     ಅವರು ಶನಿವಾರ ನಗರದ ದೈವಜ್ಞ ಕಲ್ಯಾಣ ಮಂದಿರದಲ್ಲಿ ಗಾಂಧಿನಗರದ ಸೇಂಟ್ ಜೋಸೆಫ್ ಪಿಯು ಕಾಲೇಜ್ ಆಫ್ ಎಕ್ಸಲೆನ್ಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಸ್ವಾಗತಿಸುವ ಹಾಗೂ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 
    ಮಹಾತ್ಮಗಾಂಧಿ, ಸಚಿನ್ ತೆಂಡೋಲ್ಕರ್, ವಿಶ್ವನಾಥ್‌ಆನಂದ್, ಸ್ವಾಮಿ ವಿವೇಕಾನಂದ ಸೇರಿದಂತೆ ಇನ್ನೂ ಮುಂತಾದವರು ಛಲ ಮತ್ತು ದೃಢ ಸಂಕಲ್ಪದ ಹಾದಿಯಲ್ಲಿ ಸಾಗಿ ಸಾಕರಾಗಿದ್ದಾರೆ. ಇನ್‌ಫೋಸಿಸ್ ನಾರಾಯಣಮೂರ್ತಿ, ಸುಧಾಮೂರ್ತಿ ಅವರಿಗೆ ಟಾಟಾ ಕೊಡುಗೆ ನೀಡಿದ ನೂರು ರು. ಗಳಿಂದ ಇಂದು ಲಕ್ಷ ಲಕ್ಷ ಕೋಟಿ ರು. ಒಡೆಯರಾಗಿರುವುದು ಅವರ ದೃಢತೆ, ಗುರಿ, ಸಾಧನೆಯಿಂದ ಜಗತ್ತಿಗೆ ಹೆಸರಾಗಿದ್ದಾರೆ. 
    ವಿದ್ಯಾರ್ಥಿಗಳಲ್ಲಿ ಅನೇಕ ಚಿಂತನೆಗಳನ್ನು ಹೊತ್ತ ಚಂಚಲತೆಯ ಮನಸ್ಸನ್ನು ನಿಗ್ರಹಿದರೆ ಮಾತ್ರ ನಿಮ್ಮ ಆಲೋಚನೆಗಳು ಉಪಯೋಗಕ್ಕೆ ಬರುತ್ತವೆ. ಸಮಯ ಪ್ರಜ್ಞೆ, ಸಮಯ ನಿಗದಿಯನ್ನು ಮರೆಯಬಾರದು. ೫ ವರ್ಷದ ಅವಧಿಯಲ್ಲಿ ಪದವಿ ಪಡೆಯಲು ನಿಗದಿಯಂತೆ ಭವಿಷ್ಯದಲ್ಲೂ ಸಂಕಲ್ಪದ ನಿಗದಿ ಪಡಿಸಿಕೊಳ್ಳಬೇಕು. ಆಸೆ, ಆಕಾಂಕ್ಷೆಗಳಿಗೆ ಅಡಿಪಾಯವಿಲ್ಲವಾಗಿದೆ. ಪೋಷಕರು ಮಕ್ಕಳಿಗೆ ಸಂಸ್ಕೃತಿ, ನೀತಿ ಮಾರ್ಗಗಳ ವಿವೇಚನೆ ತೋರಬೆಕು. ಸನ್ನಡತೆಯಲ್ಲಿ ಸಾಗುವಂತೆ ಪ್ರೇರೇಪಿಸಬೇಕೆಂದರು.
    ಜ್ಞಾನ ಜ್ಯೋತಿ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಸಂಧ್ಯಾಬಾಯಿ ಮಾತನಾಡಿ, ವಿದ್ಯಾರ್ಥಿಗಳಿಗೆ ಯಶಸ್ಸು ಸುಮ್ಮನೆ ಬರಲ್ಲ. ಅದನ್ನು ಹುಡುಕಿ ಹೋಗಬೇಕು. ಭಕ್ತಿಯಿಂದ ಗುರಿ ಮುಟ್ಟಬಹುದು. ಕಷ್ಟ ಪಟ್ಟು ಶ್ರದ್ದೆಯಿಂದ ಗುರಿ ಮುಟ್ಟಿದಾಗ ಮಾತ್ರ ಸುಖ ಲಭಿಸುತ್ತದೆ ಎಂದರು. 


ಭದ್ರಾವತಿ ದ್ವಿತೀಯ ಪಿಯು ಫಲಿತಾಂಶದಲ್ಲಿ ರಾಜ್ಯ ಮಟ್ಟದಲ್ಲಿ ರ್‍ಯಾಂಕ್ ಗಳಿಸಿ ಕೀರ್ತಿ ತಂದ ಹೆಚ್.ವಾಣಿ ಮತ್ತು ಪೋಷಕರನ್ನು ಸನ್ಮಾನಿಸಿ ೫೦ ಸಾವಿರ ನಗದು ಬೆಳ್ಳಿ ನಾಣ್ಯ ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು.      
    ಕಾಲೇಜಿನ ಪ್ರಾಂಶುಪಾಲರಾದ ಲತಾ ರಾಬರ್ಟ್ ಪ್ರಾಸ್ತಾವಿಕ ನುಡಿಗಳನ್ನಾಡಿ, ಮಕ್ಕಳಲ್ಲಿ ಸಂಸ್ಕಾರ, ವಿವೇಚನೆ, ಶ್ರದ್ದೆ, ನಯ-ವಿನಯ, ಹಿರಿಯರಿಗೆ ಗೌರವಿಸುವ ಅನೇಕ ಉತ್ತಮ ಮೌಲ್ಯಗಳನ್ನು ತಿಳಿಸಿಕೊಡುವ ವಿದ್ಯಾಸಂಸ್ಥೆ ನಮ್ಮದಾಗಿದೆ. ಇಂತಹ ವಿದ್ಯಾಸಂಸ್ಥೆಯಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳೇ ಧನ್ಯರು ಎಂದರು. 
    ಜ್ಞಾನ ಜ್ಯೋತಿ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಪುಷ್ಪರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್ ಉಪಾಧ್ಯಕ್ಷ ವೆಂಕಟರಮಣ ಶೇಟ್, ಟ್ರಸ್ಟ್ ಖಜಾಂಚಿ ರಾಬರ್ಟ್ ಡಿಸೋಜಾ ಮಾತನಾಡಿದರು.
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿಯೇ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಮೂಲಕ ಕೀರ್ತಿ ತಂದಿರುವ ವಿದ್ಯಾರ್ಥಿನಿ ಎಚ್.ವಾಣಿ ಮತ್ತು ಪೋಷಕರನ್ನು ಸನ್ಮಾನಿಸಿ ೫೦ ಸಾವಿರ ನಗದು, ಬೆಳ್ಳಿ ನಾಣ್ಯ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. 
    ಅತಿಹೆಚ್ಚು ಅಂಕ ಪಡೆದು ಉತ್ತೀರ್ಣರಾದ ೬೮ ವಿದ್ಯಾರ್ಥಿಳಿಗೆ ಮತ್ತು ಅವರ ಪೋಷಕರಿಗೆ ಬೆಳ್ಳಿ ನಾಣ್ಯ ಮತ್ತು ಪ್ರಶಸ್ತಿ ಪತ್ರ ನೀಡಿ ಶಾಲು ಹೊದಿಸಿ ಸನ್ಮಾನಿಸಲಾಯಿತು. ಆರಂಭದಲ್ಲಿ ತೆರೇಸಾ ಡೆಲ್ಸಿ ಸ್ವಾಗತ ನೃತ್ಯ ಪ್ರದರ್ಶಿಸಿದರೆ, ಆದಿತಿ ಲೋಕೇಶ್, ಆರ್.ಪಿ.ವರ್ಷ ಪ್ರಾರ್ಥಿಸಿದರು. ಡಿ.ವರ್ಷ ಸ್ವಾಗತಿಸಿ, ವಸಂತ್ ಅತಿಥಿಗಳ ಪರಿಚಯಿಸಿದರು, ಬಿ.ಬಿ ಲಕ್ಷ್ಮಿಶ್ರೀ ವಂದಿಸಿದರೆ, ಆನಂ ನಶ್ರ, ಸುಹಾ ಕಮಲ್ ನಿರೂಪಿಸಿದರು.

No comments:

Post a Comment